tag:blogger.com,1999:blog-3901985173139732142.post60412885727520006..comments2024-03-10T23:03:15.504+05:30Comments on ಸಂಪಾದಕೀಯ: ಹೋದಷ್ಟೇ ವೇಗವಾಗಿ ವಾಪಾಸು ಬಂದ ಮಾಳವಿಕಾ: ನಮ್ಮದೊಂದಿಷ್ಟು ಉದ್ರಿ ಸಲಹೆಗಳು...sampadakeeyahttp://www.blogger.com/profile/10834139994439066030noreply@blogger.comBlogger19125tag:blogger.com,1999:blog-3901985173139732142.post-88954442148930794402011-07-25T15:50:22.536+05:302011-07-25T15:50:22.536+05:30ಮಹಾನ್ ಪಂಡಿತರೂ ಮೇಧಾವಿಯೂ ಸ್ವತಹ ಕಾನೂನು ಪದವೀಧರರೂ ಆದ ಮಾ...ಮಹಾನ್ ಪಂಡಿತರೂ ಮೇಧಾವಿಯೂ ಸ್ವತಹ ಕಾನೂನು ಪದವೀಧರರೂ ಆದ ಮಾಳವಿಕ ಮೇಡಂಗೆ ನಮ್ಮದೂ ಒಂದು ಉಚಿತ ಉದ್ರಿ ಏನು ಅಂತಂದ್ರೆ, ಜೂಟ್ ಸಿನಿಮಾ ನಾಯಕಿಯಾದ ಮರಿಯಾ ಸೂಸೈರಾಜ್ ಅನ್ನು ಹಾಗೂ ಜೈಲಿನಲ್ಲಿರುವ ಅವಳ ಪ್ರಿಯತಮನನ್ನು ತಮ್ಮ ಜಟಕಾ ಬಂಡಿ ಕಾರ್ಯಕ್ರಮಕ್ಕೆ ಕರೆತಂದು ನೀರಜ್ ಗ್ರೋವರ್ನ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿಬಿಡಿ ಮೇಡಂ. ಮುಂಬೈ ಜನ ನಿಮ್ಮನ್ನೂ ಯಾವತ್ತೂ ಮರೆಯುವುದಿಲ್ಲ.Anonymousnoreply@blogger.comtag:blogger.com,1999:blog-3901985173139732142.post-14834517814430465542011-07-23T22:22:29.118+05:302011-07-23T22:22:29.118+05:30malavika eleksan genadru ninthkothidyenakka?malavika eleksan genadru ninthkothidyenakka?Anonymousnoreply@blogger.comtag:blogger.com,1999:blog-3901985173139732142.post-70684999303430801052011-07-21T11:42:15.763+05:302011-07-21T11:42:15.763+05:30zee kannada channelenavarige enaagideyo gottilla.....zee kannada channelenavarige enaagideyo gottilla..ellaroo asahya pado innondu latest news andre avru tamma dance india dance anno programmenalli maria susairaj anno kolegaduk natimaniyanna tandu kunisutta iddare..adar bharjari prachaar kooda eggillade saagide..idakke enannabeko..kannada kulkotiyanna aa devare kapaadabeku...Anonymousnoreply@blogger.comtag:blogger.com,1999:blog-3901985173139732142.post-26242653498298536802011-07-19T11:42:01.438+05:302011-07-19T11:42:01.438+05:30ನಿಮ್ಮ ಈ ಲೇಖನ ಓದಿ ನಕ್ಕು ನಕ್ಕು ಸಾಕಾಯಿತು. ಇನ್ನು ಮುಂದೆ...ನಿಮ್ಮ ಈ ಲೇಖನ ಓದಿ ನಕ್ಕು ನಕ್ಕು ಸಾಕಾಯಿತು. ಇನ್ನು ಮುಂದೆ ಹಾಸ್ಯಕ್ಕಾಗಿ ಬೇರೆಲ್ಲೂ ಹೋಗಬೇಕಾಗಿಲ್ಲ. ಸಂಪಾದಕೀಯ ಓದಿದರೆ ಸಾಕೆನಿಸಿತು.Anonymousnoreply@blogger.comtag:blogger.com,1999:blog-3901985173139732142.post-89987614447505035622011-07-14T15:59:38.331+05:302011-07-14T15:59:38.331+05:30Good one..Good one..narayananoreply@blogger.comtag:blogger.com,1999:blog-3901985173139732142.post-30352316115334610342011-07-14T14:14:34.182+05:302011-07-14T14:14:34.182+05:30this is expected..we all knew that malavika will c...this is expected..we all knew that malavika will come back again she is goin to continue this worst progrmme again..channel should stop this kind of programmes...Anonymousnoreply@blogger.comtag:blogger.com,1999:blog-3901985173139732142.post-65803112174558675052011-07-14T11:42:06.349+05:302011-07-14T11:42:06.349+05:30ಕುರಿಯಾಗುವವರು ಇರುವವರೆಗೆ ಕುರಿಮಾಡುವವರು ಇದ್ದೇ ಇರುತ್ತಾರ...ಕುರಿಯಾಗುವವರು ಇರುವವರೆಗೆ ಕುರಿಮಾಡುವವರು ಇದ್ದೇ ಇರುತ್ತಾರೆ.Girishnoreply@blogger.comtag:blogger.com,1999:blog-3901985173139732142.post-64503765858134851012011-07-14T11:19:23.663+05:302011-07-14T11:19:23.663+05:30ನನ್ನದೂ ಒಂದಿಷ್ಟು ಸಲಹೆಗಳಿವೆ. ಪರಾಂಬರಿಸಬೇಕಾಗಿ ವಿನಂತಿ: ...ನನ್ನದೂ ಒಂದಿಷ್ಟು ಸಲಹೆಗಳಿವೆ. ಪರಾಂಬರಿಸಬೇಕಾಗಿ ವಿನಂತಿ: <br />೧) ಪ್ರತಿಯೊಂದು ಕುಟುಂಬದ ನೋವನ್ನು ನೋಡುತ್ತಾ, ಕೇಳುತ್ತಾ ಕೂರುವ ಮಾಳವಿಕಾ ಅವರಿಗೆ ಆಗಾಗ ಮುಖ ಹಿಂಡಿದಂತೆ ಮಾಡಿ ತಮ್ಮೊಳಗಿನ ನೋವನ್ನೂ "ಅಭಿನಯಿಸಿ" ತೋರಿಸಬೇಕಾದ ಅವಶ್ಯಕತೆ ಇರುವುದರಿಂದ ದಯವಿಟ್ಟು ರೇಶ್ಮೆ ಸೀರೆ ಉಟ್ಟುಕೊಂಡು ಸುಮ್ಮನೇ ಕುಳಿತರೂ ಮುಖದ ಮೇಲೆ ನೋವು ಕಾಣುವಂತೆ ಮೇಕಪ್ ಮಾಡಿಸುವುದು. (ರಜನಿಕಾಂತ್ರ ಸಿನೆಮಾಗಳಿಗೆ ಮೇಕಪ್ ಮಾಡುವವರನ್ನೇ ಬಳಸಿಕೊಂಡರೆ ಚೆನ್ನ. ತುಸು ದುಬಾರಿಯಾದರೂ ಕಾರ್ಯಕ್ರಮದ ಟಿಆರ್ಪಿಗೆ ಹೋಲಿಸಿದರೆ ಅದು ಅಸಾಧ್ಯವೇನಲ್ಲ!) <br />೨) ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟಕ್ಕೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು. ಪ್ರತಿ ದಿನವೂ ಹೊಡೆದಾಡಿಕೊಳ್ಳುವ ಮತ್ತು ಹಾಗೆ ಮಾಡುವುದರ ಮೂಲಕ ರಾಜ್ಯದ ಮರ್ಯಾದೆಯನ್ನು ಹರಾಜಿಗಿಟ್ಟಿರುವ ಮಂತ್ರಿವರ್ಯರ ಹೊಡೆದಾಟ ಒಂದೇ ಕಾರ್ಯಕ್ರಮದಲ್ಲಿ, ಸಾಧ್ಯವಾದರೆ ಒಂದೇ ಕಂತಿನಲ್ಲಿ ಬಗೆ ಹರಿದರೆ ಕನ್ನಡದ ಜನತೆ ಮಾಳವಿಕಾ ಅವರಿಗೆ ಚಿರಋಣಿಯಾಗಿರುತ್ತಾರೆ. <br />೩) ಕಾರ್ಯಕ್ರಮಗಳಿಗೆ ಪಾಲ್ಗೊಳ್ಳುವವರಿಗೆ ಒಂದು ದಿವಸ ಮುಂಚಿತವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಹೊಡೆದಾಟದ ತರಬೇತಿ ನೀಡುವುದು. ಜೀವನದ ಜಂಜಾಟದಲ್ಲಿ ನೊಂದ ಆ ಜನತೆಗೂ ತಮ್ಮೊಳಗಿನ ಆಕ್ರೋಶವನ್ನು ಹೊರ ಹಾಕಲು ಒಂದು "ವೀರೋಚಿತ" ಮಾರ್ಗ ದೊರೆತಂತಾಗುತ್ತದೆ ಮಾತ್ರವಲ್ಲ ಕಣ್ಣೀರನ್ನೇ ನೆಚ್ಚಿಕೊಂಡ ಕಾರ್ಯಕ್ರಮಕ್ಕೂ ಒಂದು ಬಗೆಯ ಕ್ಷಾತ್ರೀಯ ತೇಜಸ್ಸು ಲಭಿಸುತ್ತದೆ. <br />೪) ಕೇವಲ ಮುಖ ಹಿಂಡುವುದು, ವಾಕ್ ಮಾಡುವುದು ಎಷ್ಟು ದಿನ ನಡೆದೀತು? ಆದ್ದರಿಂದ ಈಗಾಗಲೇ ಜನಮನಗೆದ್ದ ಮಾಳವಿಕಾ ಅವರು ಕೆಲವೊಮ್ಮೆ, ಸಂದರ್ಭಾನುಸಾರವಾಗಿ ಸಾರ್ವಜನಿಕವಾಗಿ ಕಣ್ಣೀರು ಸುರಿಸುವುದೂ ಟಿಆರ್ಪಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದಕ್ಕೆ ಬೇಕಾದರೆ ಮುಖ್ಯಮಂತ್ರಿಗಳಿಂದ ತರಬೇತಿ ಪಡೆಯಬಹುದು. <br />- ಅರುಣ್ ಕಾಸರಗುಪ್ಪೆAnonymousnoreply@blogger.comtag:blogger.com,1999:blog-3901985173139732142.post-82440389036405514442011-07-14T10:06:36.053+05:302011-07-14T10:06:36.053+05:30These are all gimmicks for TRP. You are also foole...These are all gimmicks for TRP. You are also fooled by them.PRASANNA KUMARhttps://www.blogger.com/profile/12409385990354120355noreply@blogger.comtag:blogger.com,1999:blog-3901985173139732142.post-66265166246701247042011-07-14T06:54:17.853+05:302011-07-14T06:54:17.853+05:30ನ್ಯಾಯಾಧೀಶರಿಗೆ ಕೆಂಪು ದೀವದ ಕಾರು,ಅಂಗರಕ್ಷಕರಾಗಿ ಬ್ಲಾಕ್ ...ನ್ಯಾಯಾಧೀಶರಿಗೆ ಕೆಂಪು ದೀವದ ಕಾರು,ಅಂಗರಕ್ಷಕರಾಗಿ ಬ್ಲಾಕ್ ಕ್ಯಾಟ್ ಗಳ ದಂಡು, ಛತ್ರ, ಚಾಮರ ಪರಾಕು ಹೇಳುವುದಕ್ಕೆ ಒಂದಷ್ಟು ವಂದಿಮಾಗಧರನ್ನು ಒದಗಿಸಿದರೆ ನೋಡುವುದಕ್ಕೆ ಶೋಭಾಯಮಾನವಾಗಿರುತ್ತೆ.Anonymousnoreply@blogger.comtag:blogger.com,1999:blog-3901985173139732142.post-35127267870668375632011-07-13T22:56:51.454+05:302011-07-13T22:56:51.454+05:30ha ha>>keep it upha ha>>keep it upAnonymousnoreply@blogger.comtag:blogger.com,1999:blog-3901985173139732142.post-86727204366123563502011-07-13T21:35:44.899+05:302011-07-13T21:35:44.899+05:30ಇಡೀ ಕರ್ನಾಟಕ ಜನತೆ ಮಾಳವೀಕ ನಮ್ಮ ಮನೆ ಮಗಳು ಎಂಬಂತೆ ಭಾವಿಸ...ಇಡೀ ಕರ್ನಾಟಕ ಜನತೆ ಮಾಳವೀಕ ನಮ್ಮ ಮನೆ ಮಗಳು ಎಂಬಂತೆ ಭಾವಿಸಿದ್ದರು. ಅಭಿಮಾನ ತೋರುತ್ತಿದ್ದರು. ಆದರೆ ಕೇವಲ ಬಂಡವಾಳಕ್ಕಾಗಿ ನಡೆಯುತ್ತಿರುವ ಬದುಕು ಜಟಕಾ ಬಂಡಿ ಕಾರ್ಯಕ್ರಮದ ನಡೆಸಿಕೊಡಲು ಮುಂದಾದ ನಂತರ ಮಾಳವೀಕ ಮೇಲೆ ಇದ್ದ ಭಾವನೆ ಹಾಗೂ ಅಭಿಮಾನ ಎರಡೂ ಕಡಿಮೆಯಾಗಿದೆ. ಟಿ.ವಿಯಲ್ಲಿ ಆಕೆಯ ಮುಖವನ್ನು ಕಂಡರೆ ಆಪ್ತತೆ ಬದಲಿಗೆ ವಾಕರಿಗೆಯಾಗುತ್ತಿದೆ. ನಮ್ಮ ಮನೆ ಮಗಳು ಎಂದು ಭಾವಿಸಿದ್ದು ಇದೇ ಮಾಳವೀಕನಾ ಎಂಬ ಅನುಮಾನವೇಳುತ್ತದೆ. ಅಥವಾ ಈ ಕಲಾವಿದರೆಲ್ಲಾ ಇಷ್ಟೇನಾ ದುಡ್ಡೊಂದು ಕೊಟ್ಟರೆ ಎಲ್ಲವನ್ನೂ ಮರೆತುಬಿಡುವ ಸ್ಥಿತಿಗೆ ತಲುಪಿದ್ದಾರಾ? ಎಲ್ಲಾ ಕ್ಷೇತ್ರಗಳು ಕಮರ್ಷಿಯಲ್ ಆದಂತೆ ಕಲೆಯ ಮಹತ್ವವನ್ನು ಮರೆತು ಕಲಾವಿದರೂ ಕೂಡ ಕೇವಲ ಕಮರ್ಷಿಯಲ್ ಆಗುತ್ತಿದ್ದಾರಾ? <br />ಮಾಳವೀಕ ನಮ್ಮ ಮನೆ ಹುಡುಗಿ ಎಂದು ಇಲ್ಲಿಯವರೆಗೆ ಪ್ರೀತಿ ತೋರಿದ ತಪ್ಪಿಗೆ ಮಾಳವೀಕ ಕೊಡುತ್ತಿರುವ ಕೊಡುಗೆ ಬದುಕು ಜಟಕಾ ಬಂಡಿ. ಬಡವರ ಬದುಕನ್ನು ಬೀದಿಯಲ್ಲಿ ಬಿಕರಿಗಿಟ್ಟಿರುವ ಜಿ.ಕನ್ನಡ ವಾಹಿನಿ ಹಾಗೂ ಮಾಳವೀಕಾಗೆ ಧಿಕ್ಕಾರವಿರಲಿ. <br />ಮಾಳವೀಕಾ ನಿನಗೊಂದು ಉದ್ರಿ ಸಲಹೆ: ಮಾಳವೀಕ ದಯವಿಟ್ಟು ನಿನ್ನ ಕುಟುಂಬದ ಕಲಹಗಳೇನಾದರೂ ಇದ್ದರೇ ಅವುಗಳನ್ನೂ ಕೂಡ ಬದುಕು ಜಟಕಾ ಬಂಡಿ ಕಟಕಟೆಗೆ ತೆಗೆದುಕೊಂಡು ಬಾ. ಆಗ ನೀನು ಯಾವ ರೀತಿ ನ್ಯಾಯದಾನ ಮಾಡುತ್ತೀಯ ಎಂದು ನೋಡುವ ಕುತೂಹಲ ಕನ್ನಡಿಗರದ್ದಾಗಿದೆ. ಜೊತೆಗೆ ಹೊಡೆದಾಟ ಬಡಿದಾಟಗಳಿದ್ದರೆ ಮೊದಲೇ ಹೇಳಿಬಿಡು. ನಿನ್ನ ಕಟಕಟೆಯಲ್ಲಿ ಕೇವಲ ಬಡವರ ಬದುಕಿನ ಬಡಿದಾಟಗಳನ್ನು ನೋಡಿ ಬೇಜಾರಾಗಿರುವ ಜನಕ್ಕೆ ಇದರಿಂದ ಅನುಕೂಲವಾಗಲಿದೆ. ನಿನ್ನಂತಹ ಸ್ಥಿತಿವಂತರ ಮನೆಯಲ್ಲೂ ಬೀದಿ ಜಗಳಗಳು ನಡೆಯುತ್ತವೆ. ಬಡವನಿರಲಿ ಬಲ್ಲಿದನಿರಲಿ ಬದುಕಿನ ಬಂಡಿಯಲ್ಲಿ ಜಂಜಾಟ, ಹೊಡೆದಾಟ, ಬಡಿದಾಟ ಎಲ್ಲವೂ ಸಾಮಾನ್ಯ. ಅವುಗಳನ್ನು ಮೀರಿ ಸಾಗಿದಾಗ ಮಾತ್ರ ಜೀವನ ಸುಗಮವಾಗಿರುತ್ತದೆ. ಅದನ್ನು ಬಿಟ್ಟು ಬದುಕು ಜಟಕಾ ಬಂಡಿಯ ಕಟಕಟೆಯೇರಿದರೆ ಬದುಕು ಬೀದಿಪಾಲಾಗುತ್ತದೆ <br />ಎಂಬುದು ಜನಕ್ಕೆ ಅರ್ಥವಾಗುತ್ತದೆ. ದಯವಿಟ್ಟು ಮೊದಲು ಆ ಕೆಲಸ ಮಾಡಿ.vasanthhttps://www.blogger.com/profile/06037908314484617451noreply@blogger.comtag:blogger.com,1999:blog-3901985173139732142.post-58624065083689287742011-07-13T21:11:07.804+05:302011-07-13T21:11:07.804+05:30Eega Udaya Music chanel allo haadugala madye prema...Eega Udaya Music chanel allo haadugala madye prema prakaranagaLige counseling shuru aagide ...Anonymousnoreply@blogger.comtag:blogger.com,1999:blog-3901985173139732142.post-17520444709130738752011-07-13T20:28:17.364+05:302011-07-13T20:28:17.364+05:30ಬಡವರ ಬದುಕೆ ಇವರಿಗೆ ಬಂಡವಾಳ. ಅಮಾಯಕ ಜನ ಏನೋ ನಮ್ಮ ಸಮಸ್ಯೆ...ಬಡವರ ಬದುಕೆ ಇವರಿಗೆ ಬಂಡವಾಳ. ಅಮಾಯಕ ಜನ ಏನೋ ನಮ್ಮ ಸಮಸ್ಯೆಗಳು ಬಗೆಹರಿಯಬಹುದು ಎಂದು ನೂರು ಆಸೆಗಳನ್ನು ಕಟ್ಟಿಕೊಂಡು ಟಿವಿ ಕಟಕಟೆಗೆ ಬರುತ್ತಾರೆ. ಆದರೆ ಟಿವಿ ರಿಯಾಲಿಟಿ ಶೋಗಳು ಮಾಡುವುದೇ ಬೇರೆ. ಕಾರ್ಯಕ್ರಮಗಳಿಗೆ ಬರುವವರನ್ನು ಉದ್ರೇಕಿಸುತ್ತಾರೆ. ಅವರು ಜಗಳವಾಡಲಿ ಎಂದು ಕಾಯುತ್ತಿರುತ್ತಾರೆ. ತಮಗೆ ಬೇಕಾದಂತೆ ಚಿತ್ರಿಸಿಕೊಂಡು, ಬೇಕಾದ ದೃಶ್ಯಗಳನ್ನು ತೋರಿಸುತ್ತಾರೆ. ತಮ್ಮ ಟಿಆರ್ಪಿ ಹಾಗೂ ಬಂಡವಾಳ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇವೆಲ್ಲಾ ತಿಳಿಯದ ಅಮಾಯಕ ಜನ ಹಿಂಗು ತಿಂದ ಮಂಗನಂತಾಗುತ್ತಾರೆ. ತಮಗೆ ಗೊತ್ತಿಲ್ಲದೆಯೇ ಮನೆಯ ಗುಟ್ಟನ್ನು ರಟ್ಟು ಮಾಡಿಕೊಂಡು ಬೀದಿಪಾಲಾಗುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಥೆ ಅಲ್ಲ ಜೀವನ, ಜೀ ಟಿ.ವಿಯ ಬದುಕು ಜಟಕಾ ಬಂಡಿ ಈ ಕಾರ್ಯಕ್ರಮಗಳಿಂದ ಸಂಸಾರಗಳು ಹಾಳಾಗುತ್ತಿವೆಯೇ ಹೊರತು, ಜನತೆಗೆ ಎಳ್ಳಷ್ಟೂ ಒಳಿತಾಗುತ್ತಿಲ್ಲ. ಜನ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬಾರದು.Anonymousnoreply@blogger.comtag:blogger.com,1999:blog-3901985173139732142.post-77318232493162158102011-07-13T19:14:54.527+05:302011-07-13T19:14:54.527+05:30ಧರ್ಮದರ್ಶಿಗಳು, ಈ ಬೃಹತ್ ಬ್ರಹ್ಮಾಂಡದ ಪ್ರಕಾಂಡ ಪಂಡಿತರೂ ಆ...ಧರ್ಮದರ್ಶಿಗಳು, ಈ ಬೃಹತ್ ಬ್ರಹ್ಮಾಂಡದ ಪ್ರಕಾಂಡ ಪಂಡಿತರೂ ಆದ ನರೇಂದ್ರ ಶರ್ಮ ಮತ್ತು ನಮ್ಮ ಕರ್ನಾಟಕದ ಬಿಡದಿಯನ್ನು ರಾತ್ರೋ ರಾತ್ರಿ (ಕು)ಖ್ಯಾತಿಯ ಉತ್ತುಂಗಕ್ಕೆ ಏರಿಸಿದ ನಿತ್ಯಾನಂದ ಸ್ವಾಮಿಗಳು ಈಗಾಗಲೇ ಈ ಕಾರ್ಯಕ್ರಮದಲ್ಲಿ ದರ್ಶನ ನೀಡಿ ಕನ್ನಡ ಕುಲಕೋಟಿಯನ್ನು ಆಶೀರ್ವದಿಸಿದ್ದಾರೆ. ಮಾಳವಿಕಾ ಮೇಡಮ್ ಅವರು ತಮ್ಮ ಪ್ರಭಾವವನ್ನು ಬಳಸಿ ಆ ಮಹಾನುಭಾವರನ್ನು ಆಗಾಗ ಕಾರ್ಯಕ್ರಮಕ್ಕೆ ಆಹ್ವಾನಿಸಿ ಕನ್ನಡಿಗರನ್ನು ಉದ್ಧರಿಸಬೇಕು.Kadasiddeshwar Karaguppihttps://www.blogger.com/profile/11242671956433739218noreply@blogger.comtag:blogger.com,1999:blog-3901985173139732142.post-31758381930038628492011-07-13T18:12:12.146+05:302011-07-13T18:12:12.146+05:30ಹೋದೆಯಾ ಸನಿ(ಸಂಕಟ ನಿವಾರಕಿಯ ಸಂಕ್ಷಿಪ್ತ ರೂಪ)ಅಂದ್ರೆ, ಬಂದ...ಹೋದೆಯಾ ಸನಿ(ಸಂಕಟ ನಿವಾರಕಿಯ ಸಂಕ್ಷಿಪ್ತ ರೂಪ)ಅಂದ್ರೆ, ಬಂದೆ ನೆಕ್ಸ್ಟ್ ಎಪಿಸೋಡಲ್ಲಿ ಅಂತ ಬಂದೇ ಬಿಡ್ತಲ್ಲ ಈಯಮ್ಮ..Anonymousnoreply@blogger.comtag:blogger.com,1999:blog-3901985173139732142.post-66070157991726741452011-07-13T17:50:14.636+05:302011-07-13T17:50:14.636+05:30ಬದುಕು ಜಟಕಾಬಂಡಿ ಕಾರ್ಯಕ್ರಮ ಪ್ರಸಾರವಾಗುವಾಗ ಟಿವಿಯನ್ನೇ ಚ...ಬದುಕು ಜಟಕಾಬಂಡಿ ಕಾರ್ಯಕ್ರಮ ಪ್ರಸಾರವಾಗುವಾಗ ಟಿವಿಯನ್ನೇ ಚಚ್ಚಿ ಬಿಸಾಡುವಷ್ಟು ನಮ್ಮ ಸೈರಣೆ ಮುಗಿದಿರುತ್ತದೆ. ಕೈಯಲ್ಲಿ ಟಿವಿ ಚಚ್ಚಲು ಹೋಗಿ ನಮಗೇ ವಿದ್ಯುದಾಘಾತವಾಗುವುದರಿಂದ ಮಾನ್ಯ ರಾಜ್ಯ ಸರ್ಕಾರವು ಟಿವಿ ಇರುವ ಪ್ರತಿ ಮನೆಗೆ ಒಂದು ಲೋಡು ಇಟ್ಟಿಗೆಗಳನ್ನು ಪೂರೈಸಬೇಕು, ಟಿವಿಯನ್ನು ಇಟ್ಟಿಗೆಗಳನ್ನು ಎಸೆದು ಕುಟ್ಟಿ ಪುಡಿ ಮಾಡಿದ ನಂತರ ಉಳಿಯುವ ಇಟ್ಟಿಗೆಗಳನ್ನು ಜಟಕಾಬಂಡಿಯ ಮಾರಾಮಾರಿ ಕುಟುಂಬಗಳಿಗೆ ಫ್ಯಾಮಿಲಿಗಿಷ್ಟು ಎಂಬಂತೆ ಸರಾಗವಾಗಿ ಹೊಡೆದಾಡಿಕೊಳ್ಳಲು ಅನುಕೂಲವಾಗುವಂತೆ ತಲೆಗಿಷ್ಟು ಎಂಬ ಲೆಕ್ಕದಲ್ಲಿ ವಿಲೇವಾರಿ ಮಾಡಬಹುದು. ನ್ಯಾಯಾಲಯದ ನೋಟಿಸುಗಳಿಗೆ ಉತ್ತರಿಸದೆ ಕದ್ದು ಮುಚ್ಚಿ ತಿರುಗಾಡುತ್ತಿರುವ ಜಟಕಾಬಂಡಿ ಚಾಲಕರಿಗೆ ವೇಷ ಮರೆಸಿಕೊಳ್ಳಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ "ವಿಶೇಷ ಬುರ್ಖಾ" ವಿತರಿಸಬೇಕು. ಪಲ್ಲಂಗೇಶ್ವರ ನಿತ್ಯಾನಂದೂದೂ ಒಂದು ಎಪಿಸೋಡು ಆದರೆ ಚೆನ್ನ. ಪಾಪ ಇತ್ತಾಗೆ ಪೋಲೀಸರು, ಅತ್ತಾಗೆ ನ್ಯಾಯಾಲಯ ಮತ್ತೊಂದೆಡೆ ಮೀಡಿಯಾದ ಜಲ್ಲಿಕಲ್ಲುಗಳ ಏಟು ತಿಂದು, ಕಡೆಗೂ ಕುದುರೆ ಕೈಲೂ ಒದೆಸಿಕೊಂಡು, ವಿರಹವೇದನೆಯಲ್ಲಿ ಎದೆ ಹಿಡಿದುಕೊಂಡು ಬಿಡದಿಯ ಸುತ್ತಲೂ ಹಗಲು ಮೋಹಿನಿಯಂತೆ ಸುತ್ತುವ ನಿತ್ಯಾನಂದೂರ ಕಷ್ಟಗಳೂ ಜಟಕಾಬಂಡಿಯೊಳಗೆ ಬಗೆಹರಿಯಲಿ, ಎಲ್ಲಕ್ಕಿಂತ ಮೊದಲು ಮಾಳವಿಕಾ ಮೇಡಂರಿಗೆ ಒಂದು ಸೆಲ್ಫ್ ಲೋಡಿಂಗ್ ರೈಫಲ್ ಕೊಟ್ಟರೆ ಚೆನ್ನ.. ಮಾರಾಮಾರಿದಾರರು ಯಾವ ಟೈಮಿನಲ್ಲಿ ಜಡ್ಜುಗಳತ್ತ ನುಗ್ಗುತ್ತಾರೋ ಹೇಳಲು ಬರುವುದಿಲ್ಲ, ಆತ್ಮರಕ್ಷಣೆ ಮಾಡಿಕೊಳ್ಳಲು ಕಾರ್ಯಕ್ರಮದ ಜಡ್ಜುಗಳಿಗೆ ಅವಕಾಶ ನೀಡಬೇಕು. ಅಗತ್ಯ ಬಿದ್ದಾಗ ಸರಕ್ಕನೆ ವಾಕೌಟ್ ಮಾಡಲು ಅನುಕೂಲವಾಗುವಂತೆ ಒಂದು ಕುದುರೆಯನ್ನು ಸ್ಟುಡಿಯೋದ ಬಾಗಿಲ ಬಳಿಯೇ ನಿಲ್ಲಿಸತಕ್ಕದ್ದು (ಟೈಮಿಗೆ ಸರಿಯಾಗಿ ಆಟೋನೂ ಸಿಗಲ್ಲ ನೋಡಿ) ಟಿ.ಕೆ. ದಯಾನಂದAnonymousnoreply@blogger.comtag:blogger.com,1999:blog-3901985173139732142.post-61137668588854152582011-07-13T17:48:40.924+05:302011-07-13T17:48:40.924+05:30ಸಲಹೆಗಳು ತುಂಬಾ ಚೆನ್ನಾಗಿವೆ.ಸಲಹೆಗಳು ತುಂಬಾ ಚೆನ್ನಾಗಿವೆ.ಸುಘೋಷ್ ಎಸ್. ನಿಗಳೆhttp://www.cautiousmind.wordpress.comnoreply@blogger.comtag:blogger.com,1999:blog-3901985173139732142.post-66641133441704888612011-07-13T17:48:33.404+05:302011-07-13T17:48:33.404+05:30ha ha ha, bahala chennagide sirha ha ha, bahala chennagide sirBasav Yaligarhttps://www.blogger.com/profile/10674504436057896118noreply@blogger.com