tag:blogger.com,1999:blog-3901985173139732142.post6585378815113888327..comments2024-03-10T23:03:15.504+05:30Comments on ಸಂಪಾದಕೀಯ: ಮಾಧ್ಯಮ ವೃತ್ತಿ ತೊರೆಯಲು ಹೊರಟ ಹುಡುಗನ ಅಂತರಾಳದ ಮಾತುಗಳು...sampadakeeyahttp://www.blogger.com/profile/10834139994439066030noreply@blogger.comBlogger29125tag:blogger.com,1999:blog-3901985173139732142.post-42718527881719971002011-12-28T13:28:38.721+05:302011-12-28T13:28:38.721+05:30ನಿಜ ಇಷಾದ ನೀವು ಹೇಳಿದ್ದು 100% ನಿಜ. ನಾನು ಸಹ ಕಳೆದ 4 ಸಂ...ನಿಜ ಇಷಾದ ನೀವು ಹೇಳಿದ್ದು 100% ನಿಜ. ನಾನು ಸಹ ಕಳೆದ 4 ಸಂವತ್ಸರಗಳಿಂದ ಪತ್ರಿಕೋದ್ಯಮ ( ಪತ್ರಿಕಾರಂಗ ಈಗಿಲ್ಲ)ದಲ್ಲಿದ್ದೇನೆ. ರಾಜ್ಯ ಮಟ್ಟದ ದೊಡ್ಡ ಪತ್ರಿಕೆಯಲ್ಲಿ ಸಣ್ಣ ವರದಿಗಾರನಾಗಿದ್ದ ನನಗೂ ಒಂದು ಜಿಲ್ಲೆಯ ಜವಾಬ್ದಾರಿ ನೀಡಲಾಗಿತ್ತು. ಅಲ್ಲಿ ನಾನು ಮಾಡಿದ ದೊಡ್ಡ ತಪ್ಪು ಅತಿನಿಷ್ಠೆಯಿಂದ ಇದ್ದದ್ದು. ಇದು ನಮ್ಮ ಆಡಳಿತ ಮಂಡಳಿಗೆ ಹಿಡಿಸಲಿಲ್ಲ ಅದಕ್ಕೆ ನನಗೆ ಕೊಟ್ಟ ಉಡಗೊರೆ ಏನು ಗೊತ್ತಾ ಕೆಲಸದಿಂದ ವಜಾಗೊಳಿಸಿದ್ದು. ಅವರು ಹೇಳಿದ ಹಾಗೆ ಲಕ್ಷಾಂತರ ರೂ ಸಂಪಾದನೆಗೆ ತೊಡಗಿಕೊಂಡಿದ್ದರೆ ಜೊತೆಗೆ ಅವರಿಗೂ ಪಾಲು ನೀಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ಇಲ್ಲಿ ನಾನು ಕಲಿತಿರುವ ಒಂದು ಪಾಠವೆಂದರೆ ಯಾವುದೇ ಕಾರಣಕ್ಕೂ ಪಲಾಯನ ಮಾಡದೆ ಅವರ ಮುಂದೆಯೇ ಸೆಟೆದು ನಿಲ್ಲುವುದು. ಕಾರಣ ತಾವು ಸಹ ಎಲ್ಲಿಯೂ ಹೋಗದೆ ವೃತ್ತಿಯನ್ನು ಮುಂದುವರೆಸಿ ನಾವು ನಿಮ್ಮಜೊತೆಗಿದ್ದೇವೆ.ಪ್ರಶಾಂತ ರಾಜ ರಾಜ ಗುರು https://www.blogger.com/profile/05057494401832444457noreply@blogger.comtag:blogger.com,1999:blog-3901985173139732142.post-18301318924809073602011-12-01T08:36:48.878+05:302011-12-01T08:36:48.878+05:30ಹತ್ತರಲ್ಲಿ ಹನ್ನೊಂದು ಆಗುವ ಸಂದರ್ಭ ಬಂದರೆ ಎಲ್ಲದರಿಂದ ದೂರ...ಹತ್ತರಲ್ಲಿ ಹನ್ನೊಂದು ಆಗುವ ಸಂದರ್ಭ ಬಂದರೆ ಎಲ್ಲದರಿಂದ ದೂರ ಇದ್ದು ಕ್ಯಾಮರಾ ಹಿಡಿದು ಬದುಕು ಸಾಗಿಸುವ ನಿರ್ಧಾರಕ್ಕೆ ಬಂದಿದ್ಡೇನೆ. - ಈ ವಾಕ್ಯ ನನ್ನ ಆಕರ್ಷಿಸಿತು. ನಿಜ. ಎಲ್ಲ ಕ್ಷೇತ್ರಗಳು ಬಹುಮಟ್ಟಿಗೆ ಗಬ್ಬೆದ್ದು ಹೋಗಿವೆ. ನಿಮಗೆ ಪತ್ರಿಕೋದ್ಯಮ ವೈರಾಗ್ಯ ತರಿಸಿದೆ. ನನಗೆ ಶಿಕ್ಷಣ ಕ್ಷೇತ್ರ ಅಸಹ್ಯ ಹುಟ್ಟಿಸಿದೆ. ಇಬ್ಬರದೂ ಒಂದೇ ರೀತಿಯ ಅನುಭವ. ನಿಮ್ಮದು ಪತ್ರಿಕೋದ್ಯಮ ಕ್ಷೇತ್ರ... ನನ್ನದು ಶಿಕ್ಷಣ ಕ್ಷೇತ್ರ....<br /><br /> ನಿಮ್ಮ ಬ್ಲಾಗ್ ಹೆಸರನ್ನು ನನ್ನ ಬ್ಲಾಗ್ನಲ್ಲಿ ಸೇರಿಸ್ತೀನಿ. ಅಷ್ಟರ ಮಟ್ಟಿಗೆ ನಿಮ್ಮ ಬ್ಲಾಗ್ ಇಷ್ಟವಾಯಿತು. ಈ ಗುಣಮಟ್ಟ ಹೀಗೆ ಕಾಯ್ದುಕೊಂಡು ಹೋಗಿ.<br />www.jnanamukhi.blogspot.comGuruprasad S Hattigoudarhttp://sampadakeeya.blogspot.com/2011/11/blog-post_04.htmlnoreply@blogger.comtag:blogger.com,1999:blog-3901985173139732142.post-43909147404861417502011-11-21T00:23:13.640+05:302011-11-21T00:23:13.640+05:30ಇಂದು ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ ಹಲವರು(ಎಲ್ಲರೂ!) ಅ...ಇಂದು ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ ಹಲವರು(ಎಲ್ಲರೂ!) ಅಕಸ್ಮಾತ್ ಆಗಿ ಪತ್ರಿಕೋದ್ಯಮಕ್ಕೆ ಬಂದು ಸಿಲುಕಿದವರು! ಬಹುಷಃ ಯಾರೂ ನಾನು ಪತ್ರಕರ್ತ ಆಗಬೇಕು ಅಂತ ಬಯಸಿ ಬಂದವರಲ್ಲ.<br /><br />ಆದರೆ ಅದೃಷ್ಟವಶಾತ್ ಈಗಿನ ಪೀಳಿಗೆಗೆ ಪತ್ರಿಕೋದ್ಯಮವನ್ನು ಓದೋ ಅವಕಾಶವಿದೆ. ಹಾಗಾಗಿ ಇದೊಂದು ಸ್ವಯಂಕೃತ ಅಪರಾಧ ಆಗಿಬಿಡುತ್ತೆ!<br /><br />ನನಗೆ ಯಾವಾಗಲೂ ಮಿಲಿಟರಿ ಸೇರಬೇಕೆಂದು ಆಸೆ ಇತ್ತು. ಆದರೆ ದೇಶಕ್ಕಾಗಿ ಸಾಯೋದಕ್ಕೂ ಅರ್ಹತೆ ಬೇಕು, ಎದೆ ಅಳತೆ ಇಷ್ಟೆ ಇರಬೇಕು ಅಂತ ಗೊತ್ತಾಗಿ ತೆಪ್ಪಗೆ ಕೂರಬೇಕಾಯಿತು. <br />ಆದರೆ ಯಾವಾಗ ಜಾಲಹಳ್ಳಿಯ ಏರ್ ಫೋರ್ಸ್ ತರಬೇತಿ ಕೇಂದ್ರದಲ್ಲಿ ತರಬೇತಿಗೆ ಸೇರಿದ್ದ ಹುಡುಗರಲ್ಲಿ ಉಫ್ ಎಂದು ಊದಿದರೆ ಬೀಳುವ ಕ್ಯಾಂಡಿದೇಟ್ ಗಳೂ ಇದ್ದುದನ್ನು ನೋಡಿ, ಅಯ್ಯೋ 'ಅಲ್ಲೂ' 'ಅದು' ನಡೆಯುತ್ತದೆಯೇ! ಎಂದು ಆಶ್ಚರ್ಯ ಪಟ್ಟದ್ದು ಸುಳ್ಳಲ್ಲ!<br /><br />ಯಾವ ಕೆಲಸದಲ್ಲೂ 100% ಪ್ರಾಮಾಣಿಕತೆ, ಆದರ್ಶ ಇರುವುದಿಲ್ಲ. ಇರುವ ವಾತಾವರಣದಲ್ಲಿಯೇ ಸಮಾಜಕ್ಕೇನಾದರೂ ಹಿಂತಿರುಗಿಸಿದಲ್ಲಿ ಅದೇ ದೊಡ್ಡ ಸಾಧನೆ!<br /><br />ಇತರ ಎಲ್ಲಾ ಉದ್ಯಮಗಳ ಹಾಗೆ ಪತ್ರಿಕೋದ್ಯಮವೂ ಒಂದು ಟೀಮ್ ವರ್ಕ್! ನಾನೊಬ್ಬನೇ ಎಲ್ಲವನ್ನೂ ಮಾಡುತ್ತೇನೆ ಅನ್ನೋದು ಅಲ್ಲಿಯೂ ಸಲ್ಲುವುದಿಲ್ಲ.<br /><br />ಇಲ್ಲಿಂದ 'ಎಸ್ಕೇಪ್' ಆಗಿ ಬೇರೆಲ್ಲೋ ಹೋದರೆ 'ಬಾಣಲೆಯಿಂದ ಬೆಂಕಿಗೆ' ಬೀಳೋ ಸಾಧ್ಯತೆಗಳೆ ಹೆಚ್ಚು!ಸಂದೀಪ್ ಕಾಮತ್http://kadalateera.blogspot.comnoreply@blogger.comtag:blogger.com,1999:blog-3901985173139732142.post-21974703554103142022011-11-16T12:45:52.798+05:302011-11-16T12:45:52.798+05:30ಪತ್ರಕರ್ತರ ವೃತ್ತಿ ಅಭದ್ರತೆ ಬಗ್ಗೆ ಓದುತ್ತಿದ್ದೆ. ಇಂದು ಮ...ಪತ್ರಕರ್ತರ ವೃತ್ತಿ ಅಭದ್ರತೆ ಬಗ್ಗೆ ಓದುತ್ತಿದ್ದೆ. ಇಂದು ಮಾಧ್ಯಮ ಉಧ್ಯಮವಾಗಿದೆ. ಹಾಗೆಯೇ ಪತ್ರಿಕಾ ಸೇವೆಯೂ ಸರಕಾಗಿ ಹೋಗಿದೆ. ಮಿತಿಗಳ ನಡುವೆಯೂ ಇಲ್ಲಿ ಜನಪರವಾಗಿ ತುಡಿಯುವವರಿಗೆ ಸಾಧ್ಯತೆಗಳುಂಟು. ಜನಪರ ತುಡಿತ ಎಂದರೆ ನಿಸ್ವಾರ್ಥದಿಂದ ತನ್ನ ಬದುಕು ಸಾಗಿಸುವ ಕಲೆ. ಬರಹ, ಬದುಕು ಮತ್ತು ನಮ್ಮ ನೋಟದಲ್ಲಿ ಈ ಜನಪರತೆ ಮೂಡಿದಲ್ಲಿ ಅದು ನಿಜಕ್ಕೂ ಇನ್ನೊಬ್ಬರಿಗೆ ಪ್ರೇರಣೆ ನೀಡುತ್ತದೆ. ಇದರ ಬಗ್ಗೆ ಯೋಚಿಸೋಣ. ನಮ್ಮ ಈ ತುಡಿತ ಒಬ್ಬನ ಮನ ಗೆದ್ದರೆ ಅದು ಮಾಧ್ಯಮ ಧರ್ಮಕ್ಕೆ ದೊರೆತ ಜಯ ಅಲ್ಲವೇ?NAGARAJU L Mhttps://www.blogger.com/profile/00030571722451445530noreply@blogger.comtag:blogger.com,1999:blog-3901985173139732142.post-66454601416067259942011-11-11T17:51:48.747+05:302011-11-11T17:51:48.747+05:30ಮುಖ್ಯ ವಾಹಿನಿಯ ಮಾಧ್ಯಮಗಳಿಗೆ ಪರ್ಯಾಯವಾಗಿ ಮುಂಬರುವ ದಿನಗಳ...ಮುಖ್ಯ ವಾಹಿನಿಯ ಮಾಧ್ಯಮಗಳಿಗೆ ಪರ್ಯಾಯವಾಗಿ ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಮಾಧ್ಯಮವು ಮಹತ್ವ ಪಡೆದುಕೊಳ್ಳಲಿದೆ. ಇದರಿಂದ ಜಾಹೀರಾತುದಾರರ, ಮಾಲಕರ, ಬಂಡವಾಳಗಾರರ ಹಿತಾಸಕ್ತಿಗಳಿಂದಾಗಿ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗದ ಮುಖ್ಯ ವಾಹಿನಿಯ ಪತ್ರಿಕೆ, ಟಿವಿ ಮಾಧ್ಯಮಗಳಿಗೆ ಪರ್ಯಾಯವೊಂದು ರೂಪುಗೊಳ್ಳುವ ಎಲ್ಲ ಸಾಧ್ಯತೆಗಳು ಕಂಡುಬರುತ್ತವೆ. ಇಂಟರ್ನೆಟ್ ಸಾಕ್ಷರರ ಹಾಗೂ ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ಹಾಗೂ ಇಂಟರ್ನೆಟ್ ದರಗಳು ಅಗ್ಗವಾದಂತೆ ಇಂಟರ್ನೆಟ್ ಪತ್ರಿಕೆಗಳು/ಬ್ಲಾಗುಗಳು /ವೆಬ್ ಸೈಟುಗಳು ಕಡಿಮೆ ವೆಚ್ಚದಲ್ಲಿ ಪ್ರಪಂಚದ ಮೂಲೆ ಮೂಲೆಗಳಿಗೂ ತಲುಪುವ ವೈಶಿಷ್ಟ್ಯ ಹೊಂದಿವೆ. ಇವುಗಳಿಗೆ ಜಾಹೀರಾತುದಾರರ, ಬಂಡವಾಳಗಾರರ, ರಾಜಕಾರಣಿಗಳ ಹಂಗಿಲ್ಲ. ಇದೀಗ ಕಡಿಮೆ ವೆಚ್ಚದ ಟ್ಯಾಬ್ಲೆಟ್ ಕಂಪ್ಯೂಟರ್ಗಳು (ಡಾಟಾ ವಿಂಡ್ ೩೦೦೦ ರೂಪಾಯಿಗಳಿಗೆ ಇವುಗಳನ್ನು ಮಾರುಕಟ್ಟೆಗೆ ನವೆಂಬೆರ್ ಅಂತ್ಯದಿಂದ ಬಿಡಲಿದೆ) ಬರಲಿದ್ದು ಇವು ಇಂಟರ್ನೆಟ್ ಅನ್ನು ಜನಸಾಮಾನ್ಯರಿಗೆ ತಲುಪಿಸಲು ಮಹತ್ವದ ಪಾತ್ರ ವಹಿಸಲಿವೆ. ಹೀಗಾದಾಗ ಮೊಬೈಲ್ ಫೋನುಗಳಂತೆ ಇವುಗಳು ಜನಸಾಮಾನ್ಯರನ್ನು ತಲುಪಲಿವೆ. ಇಂಟರ್ನೆಟ್ ಬಳಕೆ ಹೆಚ್ಚಿದಂತೆ ಅದರ ದರಗಳು ಮೊಬೈಲ್ ದರಗಳಂತೆ ಅಗ್ಗವಾಗಲಿವೆ. ವಯರ್ಲೆಸ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಸೌಲಭ್ಯ ಮುಂಬರುವ ದಿನಗಳಲ್ಲಿ ದೇಶದಲ್ಲಿ ಹೆಚ್ಚಲಿದ್ದು ಇದರಿಂದ ಜನಸಾಮಾನ್ಯರು ಇಂಟರ್ನೆಟ್ ಬಳಸಲು ಅನುಕೂಲವಾಗಲಿದೆ. ಇದು ಇಂದಿನ ಮಾಧ್ಯಮ ಲೋಕದ ಯಜಮಾನರುಗಳ, ಜಾಹೀರಾತುದಾರರ ಏಕಸ್ವಾಮ್ಯವನ್ನು ಮುರಿಯಲಿರುವುದು ಖಚಿತ. ಇಂಟರ್ನೆಟ್ ಪತ್ರಿಕೆ, ವೆಬ್ ಸೈಟ್, ಬ್ಲಾಗ್ ಗಳಿಗೆ ಪತ್ರಿಕೆಗಳಂತೆ ಮುದ್ರಣ ವೆಚ್ಹ, ಮುದ್ರಣ ಕಾಗದದ ವೆಚ್ಚ, ಸಾಗಣೆ ವೆಚ್ಚ, ಏಜೆಂಟರ ಕಮಿಷನ್, ಪತ್ರಿಕೆ ಹಾಕುವ ಹುಡುಗರ ವೆಚ್ಚ ಇವ್ಯಾವುದೂ ಇರದಿರುವುದರಿಂದ ಇವುಗಳನ್ನು ನಡೆಸಲು ಹೆಚ್ಚಿನ ವೆಚ್ಚ ಬೀಳಲಾರದು. ಟಿವಿ ಮಾಧ್ಯಮದಂತಲ್ಲದೆ ಇಂಟರ್ನೆಟ್ ಮಾಧ್ಯಮದಲ್ಲಿ ಓದುಗರು ತಮ್ಮ ಅಭಿಪ್ರಾಯಗಳನ್ನು ತಕ್ಷಣವೇ ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇರುವುದರಿಂದ ಇದು ಜನಾಭಿಪ್ರಾಯ ರೂಪಿಸಲು ಮುಂಬರುವ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಬಹುದಾಗಿದೆ.- ಆನಂದ ಪ್ರಸಾದ್Anonymousnoreply@blogger.comtag:blogger.com,1999:blog-3901985173139732142.post-12824231204901627562011-11-08T18:16:40.553+05:302011-11-08T18:16:40.553+05:30ಈ ಚರ್ಚೆಗಳನ್ನೆಲ್ಲ ನೋಡಿದರೆ ಇಂಥದ್ದೇ ಮನಸ್ಥಿತಿ ಹೊಂದಿದ್ದ...ಈ ಚರ್ಚೆಗಳನ್ನೆಲ್ಲ ನೋಡಿದರೆ ಇಂಥದ್ದೇ ಮನಸ್ಥಿತಿ ಹೊಂದಿದ್ದ ನನ್ನ ಸಹಪಾಠಿಯ ನೆನಪಾಯಿತು. "ಇಲ್ಲಿ ಎಷ್ಟು ಅಗೆದ್ರೂ ಅಷ್ಟೆ... ಮಣ್ಣೂ ಸಿಗೊಲ್ಲ... ಕತ್ತೆ ಲದ್ದಿನೇ ಸಿಗೋದು" ಅಂತ ಅರ್ಧದಲ್ಲೇ ಪತ್ರಿಕೋದ್ಯಮ ಬಿಟ್ಟು ಪೊಲೀಸ್ ಡಿಪಾರ್ಟ್ ಮೆಂಟ್ ಸೇರಿದ್ದ. ಆದರೆ "ಇಲ್ಲಿ ಸಲ್ಲದವ ಎಲ್ಲೂ ಸಲ್ಲುವುದಿಲ್ಲ" ಎನ್ನುವಂತೆ ಕೆಲವೇ ದಿನಗಳಲ್ಲಿ ಭ್ರಮನಿರಸನಗೊಂಡ. ಮೊನ್ನೆ ತಾನೆ ಎಲ್ಲಿಂದಲೋ ನಂಬರ್ ಕಲೆಕ್ಟ್ ಮಾಡಿ ನನಗೆ ಫೋನ್ ಮಾಡಿದ್ದ. ತುಂಬಾ ನೊಂದವನಂತೆ ಮಾತನಾಡಿದ... "ಇಲ್ಲಿ ಬಕೆಟ್ ಹಿಡಿಯೋರಿಗಷ್ಟೇ ಉಳಿವು... ಇದೊಂತರಾ ತಿಪ್ಪೆ ಗುಂಡಿ ಇದ್ದಂಗೆ... ಎಲ್ರೂ ಹೇಸಿಗೆಗೆ ಕಾಯ್ಕಂಡಿರ್ತಾರೆ... ಇನ್ನೂ ಸ್ವಲ್ಪ ದಿನ ಇಲ್ಲೇ ಇದ್ರೆ ಹುಚ್ಚ ಆಗ್ತಿನಿ... ಪ್ಲೀಜ್ ನೀವೆಲ್ಲ ಹೆಲ್ಪ್ ಮಾಡಿ... ಹಳೇ ನೋಟ್ಸ್ ಗಳನ್ನೆಲ್ಲ ಕೊಡಿ, ಮತ್ತೆ ಎಕ್ಸಾಮ್ ಕಟ್ಟಿ ಪಾಸ್ ಮಾಡ್ಕೊತಿನಿ... ನನಗೂ ನಿಮ್ ತರಾ ಅದೇ ಫೀಲ್ಡ್ ಗೆ ಬರಬೇಕೂ ಅಂತಾಸೆ... ಅಟ್ ಲಿಸ್ಟ್ ಅಲ್ಲಿ ಮನುಷ್ಯನಾಗಿ ಬದುಕಬಹುದು" ಅಂತ ಮಾತನಾಡಿದ. ನನಗೆ ಅವ್ನ ದನಿ ಕೇಳಿ ನಿಜಕ್ಕೂ ಬೇಸರ ಆಯ್ತು.... ಕಾಲೇಜಲ್ಲಿ ಹಸಿದ ಹೆಬ್ಬುಲಿಯಂಗೆ ಯಾವತ್ತೂ ಜಗಳಕ್ಕೆ ಕಾಯ್ಕಂಡಿರ್ತಿದ್ದ. ನನ್ನ ಜೊತೆ ಅಂತೂ ಒಂದೇ ಸೆಮ್ ನಲ್ಲಿ ನಾಲ್ಕಾರು ಬಾರಿ ಜಗಳ ಮಾಡಿದ್ದ. "ನನ್ನ ಹತ್ರ ಇರೋ ಎಲ್ಲಾ ನೋಟ್ಸ್ ಕೊಡ್ತೀನಿ ಆದ್ರೂ ಮತ್ತೊಮ್ಮೆ ಯೋಚ್ನೆ ಮಾಡು. ಯಾಕಂದ್ರೆ. ಯಾವ ಫೀಲ್ಡ್ ಆದ್ರೂ ಅಷ್ಟೆ, ನಮ್ಮನ್ನ ಕರೆದು ಮಣೆ ಹಾಕ್ಲಿ, ನಮ್ಮ ಪ್ರತಿಭೆಯನ್ನು ತಾವೇ ಗುರುತಿಸಿ ನಮಗೊಂದು ಸ್ಪೇಸ್ ಕೊಡ್ಲಿ ಅಂತಾ ಕಾಯೋದು ಮೂರ್ಖತನ, ನಮ್ಮ ಕೆಲಸ ನಾವು ಮಾಡಿಕೊಂಡು ಹೋಗ್ತಾ ಇರಬೇಕಷ್ಟೆ... ನಿಯತ್ತು ಇದ್ರೆ ಇವತ್ತಲ್ಲ ನಾಳೆ ನಮಗೂ ಒಂದ್ ಕಾಲ ಬರತ್ತೆ. ಅದಕ್ಕೆ ಕಾಯ್ಬೇಕು" ಅಂತ ಹೇಳಿದೆ. <br />ಯಾರೋ ಬಕೇಟ್ ಹಿಡಿತಾರೆ ಅಂತ ನಾವು ಎದ್ದು ಓಡೋಕಾಗುತ್ತಾ? ಹಾಗೆ ಓಡೋದಾದ್ರೆ ಎಲ್ಲಿಗೆ ಓಡೋದು? ಎಲ್ಲಾ ಕಡೆ ಅಂಥವರು ಇದ್ದೇ ಇರ್ತಾರಲ್ಲ!!!!!!!!!!susheelanoreply@blogger.comtag:blogger.com,1999:blog-3901985173139732142.post-9852692107398732342011-11-08T17:56:07.579+05:302011-11-08T17:56:07.579+05:30badukinalli ella anubhavisida ritiya hatashe eeke?...badukinalli ella anubhavisida ritiya hatashe eeke? yaava kxstra pavitra aagi ulidide ?. olleyadu kettaddu edde eruttade. entha nerashe ellarallu eddiddare swatantrave baruttiralilla. anyway bhavanegala abivyakti, charche olleya bhasheyalli nadeyali.Dinesh Patwardhanhttps://www.blogger.com/profile/09000865369796388311noreply@blogger.comtag:blogger.com,1999:blog-3901985173139732142.post-91012810906096419452011-11-08T17:32:22.496+05:302011-11-08T17:32:22.496+05:30ಪ್ರೀತಿಯ ಕಿರಣ್ ಅವರೇ, ನಿಮ್ಮ ಪರ್ಯಾಯ ಯೋಚನೆ ನಿಜಕ್ಕೂ ಉತ್...ಪ್ರೀತಿಯ ಕಿರಣ್ ಅವರೇ, ನಿಮ್ಮ ಪರ್ಯಾಯ ಯೋಚನೆ ನಿಜಕ್ಕೂ ಉತ್ತಮವಾದುದು. ನೀವು ಕೇಳಿದ ಪ್ರಶ್ನೆಗೆ ಪತ್ರಕರ್ತರು ಉತ್ತರಿಸಲು ಸ್ವಲ್ಪ ಕಷ್ಟವೇ. ಪತ್ರಿಕೆ ಆದಾಯ ತರುವ ಕೆಲಸದಲ್ಲಿ ಪತ್ರಕರ್ತರ ಪಾಲಿರಬಹುದು. ಆದರೆ ಅದು ಅವರ ಕೆಲಸವಲ್ಲ. ಅದಕ್ಕಾಗಿ ಬೇರೆಯೇ ವಿಭಾಗಗಳಿವೆ. ಅವರನ್ನು ಕೇಳಿದರೆ, ಜಾಹೀರಾತುಗಳನ್ನು ಹೊರತು ಪಡಿಸಿದರೆ ಪತ್ರಿಕೆಯನ್ನು ನಡೆಸುವುದೇ ಕಷ್ಟ. ಯಾಕೆಂದರೆ 16 ಪುಟಗಳಿರುವ ಒಂದು ಪತ್ರಿಕೆಯನ್ನು ತರಬೇಕಾದರೆ ಅದಕ್ಕೆ 12ರಿಂದ 15 ರೂ. ಖರ್ಚು ಬೀಳುತ್ತದೆ. ಆದರೆ ಓದುಗರಿಗೆ ಪತ್ರಿಕೆ 3 ಅಥವಾ 3.50 ರೂ.ಗೆ ಸಿಗುತ್ತದೆ. ಪತ್ರಿಕೆಗೆ ಅಷ್ಟು ಖರ್ಚು ಬರುತ್ತದೆ ಅಂತ ಆ ಖರ್ಚನ್ನು ಓದುಗರ ಮೇಲೆ ಹೊರಿಸಲು ಸಾಧ್ಯವಿಲ್ಲ. 3 ರೂಗೆ ಪತ್ರಿಕೆ ಸಿಗುವಾಗಲೇ ಓದುಗರ ಕೊರತೆಯಿದೆ. ಇನ್ನು ಬೆಲೆಯನ್ನು ದುಪ್ಪಟ್ಟು ಮಾಡಿದರೆ ಪತ್ರಿಕೆ ಕೇವಲ ಅಂಗಡಿಗಳಲ್ಲಿ ಪ್ರದರ್ಶನವಾಗುತ್ತಿರುತ್ತದೆ ಅಷ್ಟೆ. ಅದನ್ನು ಸರಿದೂಗಿಸಬೇಕಾದರೆ ಜಾಹೀರಾತು ಅಗತ್ಯ. ಜಾಹೀರಾತು ಮಾತ್ರವಲ್ಲ. ಕೆಲ ಸುದ್ದಿಗಳನ್ನು ಜಾಹೀರಾತು ಬೆಲೆಯನ್ನೇ ತೆತ್ತು ಪ್ರಕಟಿಸುತ್ತಾರೆ. ಅದು ಪೈಯ್ಡ್ ನ್ಯೂಸ್ ಆಗುತ್ತದೆ. ಇದಕ್ಕೂ ಬುದ್ದಿ ಜೀವಿಗಳ ವಿರೋಧ ಬರುತ್ತದೆ. ಪೈಯ್ಡ್ ನ್ಯೂಸ್ ಎಂದರೆ ಅದೆಲ್ಲವೂ ನೆಗೆಟಿವ್ ಆಗಿರಬೇಕಿಲ್ಲ. ಆದರೂ ಪೇಯ್ಡ್ ನ್ಯೂಸ್ ಜಾಹೀರಾತುಗಳಿಗಿಂತಲೂ ಹೆಚ್ಚಾಗಿ ವಿರೋಧಗಳಿವೆ. ಕೆಲವೊಂದು ಸಂದರ್ಭಗಳಲ್ಲಿ ಅದನ್ನು ದುರುಪಯೋಗ ಪಡಿಸುವ ಸಾಧ್ಯತೆಗಳಿವೆ. <br /><br />ಗೆಳೆಯಾ, ನಾನು ಇದನ್ನು ತೀರಾ ವೈಯಕ್ತಿಕವಾಗಿ ಹೇಳುತ್ತಿದ್ದೇನೆ.... ನನಗೆ ಇರ್ಷಾದ್ ಬಗೆಗೆಗಾಗಲೀ ಇನ್ಯಾರದೇ ಬಗೆಗೆಗಾಗಲಿ ದ್ವೇಷ ಅಸೂಯೆಗಳಿಲ್ಲ. ಆದರೆ ಅಜ್ಜಿ ಕೋಳಿಯಿಂದಲೇ ಬೆಳಗಾಗುತ್ತದೆ ಎಂದು ಕೆಲವರು ಭಾವಿಸುತ್ತಾರಲ್ಲ ಅದಕ್ಕೆ ನನ್ನ ತೀವ್ರ ವಿರೋಧವಿದೆ. ತಾನೇ ದೊಡ್ಡದು, ಮಿಕ್ಕಿದ್ದೆಲ್ಲಾ ಹಾಳು ಎಂದು ಬಿಂಬಿಸುವವರನ್ನು, ಸಾರ್ವಜನಿಕವಾಗಿ ತಮ್ಮನ್ನು ತಾವು ಅತಿಯಾಗಿ ಹೊಗಳಿಕೊಳ್ಳುವವರನ್ನು ಕಂಡರೆ ನನಗಾಗುವುದಿಲ್ಲ. ಅದನ್ನೂ ನಾನು ವಿರೋಧಿಸುತ್ತೇನೆ. ಒಬ್ಬ ವ್ಯಕ್ತಿಗೆ ನ್ಯಾಯವಾಗಿ ಸಲ್ಲುವ ಗೌರವ ಅಗತ್ಯವಾಗಿ ಸಲ್ಲಬೇಕು. ಅದಕ್ಕಿಂತ ಹೆಚ್ಚಾಗಿ ಅಪೇಕ್ಷೆ ಪಡುವುದು ಸರಿಯಲ್ಲ. ಸಿಂಪತಿ ಗಿಟ್ಟಿಸಿಕೊಳ್ಳುವುದೂ ಒಳ್ಳೆಯದಲ್ಲ.<br />ತರಗತಿಯಲ್ಲಿ ಪತ್ರಿಕೋದ್ಯಮ ಅಂತ ಏನು ಹೇಳಿಕೊಡುತ್ತಾರೋ ಅದೆಲ್ಲವೂ ವರ್ಷಾಂತ್ಯದ ಪರೀಕ್ಷೆಗೆ ಮಾತ್ರ ಸೀಮಿತ. ಪತ್ರಿಕೋದ್ಯಮ ನಾವು ಅಂದು ಕೊಂಡಷ್ಟು ಸುಲಭದ ವ್ಯಾಪ್ತಿಗೆ ದಕ್ಕುವುದಿಲ್ಲ. .5 ಶೇಕಡವಾದರೂ ಅದನ್ನು ತಿಳಿದುಕೊಳ್ಳುತ್ತೇವೆ ಎಂದಾದರೆ ೋದಿನ ಜೊತೆಗೆ ಒಂದು ಬಾರಿಯಾದರೂ ಇಂಟರ್ನಶಿಪ್ ಮಾಡಲೇ ಬೇಕು. ಆಗ ಕನಿಷ್ಠ ಪಕ್ಷ ಅದೇನು ಅಲ್ಲಿ ಹೇಗಿರಬೇಕು ಎನ್ನುವುದು ಅನುಭವಕ್ಕೆ ಬರುತ್ತದೆ. <br />ಧನ್ಯವಾದnavyajyothihttps://www.blogger.com/profile/06753864704435301850noreply@blogger.comtag:blogger.com,1999:blog-3901985173139732142.post-13491477588731920272011-11-08T11:49:28.672+05:302011-11-08T11:49:28.672+05:30ಇಲ್ಲಿರುವ ಎಲ್ಲ ಪತ್ರಿಕೋದ್ಯಮದವರಿಗೆ ಒಂದು ಪ್ರಶ್ನೆ... ಒ...ಇಲ್ಲಿರುವ ಎಲ್ಲ ಪತ್ರಿಕೋದ್ಯಮದವರಿಗೆ ಒಂದು ಪ್ರಶ್ನೆ... ಒಂದು ಪರ್ಯಾಯ ಯೋಚನೆ.... ಜಾಹೀರಾತುಗಲ್ಲನ್ನ ಬಿಟ್ಟು.. ಬೇರೆ, ಆದರೆ ನ್ಯಾಯವಾದ.. ಆದಾಯದ ಮೂಲಗಳು ಯಾವು.. ? ಇದಾವಾ ? ಇದ್ದರೆ ಎಸ್ಟು ಪ್ರ್ಯಾಕ್ಟಿಕಲ್ ? - <br /><br />ಓ ಯಾವ್ದೂ ಇಲ್ಲ್ಲ ಅಂತ .. ಉದಾಸೀನ ಮಾಡ ಬೇಡಿ.. . ಯೋಚಿಸಿ ಉತ್ತರಿಸಿದರೆ .. ತುಂಬಾ ಸಂತೋಷ.... :)Kiranhttps://www.blogger.com/profile/05716461407092605456noreply@blogger.comtag:blogger.com,1999:blog-3901985173139732142.post-36078183078309079962011-11-08T11:04:18.548+05:302011-11-08T11:04:18.548+05:30ಪತ್ರಕರ್ತರಿಗೆ ನೋಟು ಹಂಚಿದ್ದು ಕ. ಪ್ರಭದ ಒಳಪುಟದಲ್ಲಿ ಪ್ರ...ಪತ್ರಕರ್ತರಿಗೆ ನೋಟು ಹಂಚಿದ್ದು ಕ. ಪ್ರಭದ ಒಳಪುಟದಲ್ಲಿ ಪ್ರಕಟವಾಗಿತ್ತು. ಭಾಷ್ಹೆಯಲ್ಲಿ ಸೌಜನ್ಯ ಇರಲಿ.ಪ್ರಶಾಂತnoreply@blogger.comtag:blogger.com,1999:blog-3901985173139732142.post-90083626422567886162011-11-08T08:05:49.842+05:302011-11-08T08:05:49.842+05:30ಗೆಳತಿ ನವ್ಯಜ್ಯೋತಿ ನೀವು ತೀರಾ ವೈಯಕ್ತಿಕ ವಿಷಯಗಳತ್ತ ಹೋದದ...ಗೆಳತಿ ನವ್ಯಜ್ಯೋತಿ ನೀವು ತೀರಾ ವೈಯಕ್ತಿಕ ವಿಷಯಗಳತ್ತ ಹೋದದ್ದು ಸರಿ ಕಾಣಲಿಲ್ಲ . ಖಂಡಿತ ನೀವು ತುಂಬ ಒಳ್ಳೆಯ ವರದಿಗಾರರೆ ಅದರಲ್ಲಿ ಎರಡು ಮಾತಿಲ್ಲ. ನಿಮಗೆ ಮತ್ತು ಇಷಾ೯ದ್ ಗೆ ಪತ್ರಿಕೋದ್ಯಮದ ಬಗ್ಗೆ ಇರುವ ಆಸಕ್ತಿಯ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಸಂಪಾದಕೀಯದಂತಹ ಬ್ಲಾಗ್ಗಳಲ್ಲಿ ಆರೋಗ್ಯಪೂರ್ಣ ಚಚೆ೯ಯಾಗಬೇಕೇ ಹೊರತು ವೈಯಕ್ತಿಕ ಕಾರಣಗಳಿಗೋಸ್ಕರ ಬಳಕೆಯಾಗುವುದು ಸರಿಯಲ್ಲ...<br /> ಪತ್ರಿಕೋದ್ಯಮದ ಬಗ್ಗೆ ಇರುವ ಅಭಿಪ್ರಾಯಗಳನ್ನು ಇಗೋ ಎನ್ನಲಾಗದು. ನೀವು ಒಬ್ಬ ಪತ್ರಕತೆ೯ಯಾಗಿ ಇನ್ನೊಬ್ಬ ಪತ್ರಕರ್ತನ ಅದರಲ್ಲು ನಿಮ್ಮ ಗೆಳೆಯನ ಬಗ್ಗೆ ಹೀಯಾಳಿಕೆ ಅನಿಸುವ ರೀತಿಯಲ್ಲಿ ಮಾತನಾಡಿದ್ದು ಸರಿ ಕಾಣಲಿಲ್ಲ.....ಒಬ್ಬರ ಬಗ್ಗೆ ಈ ರೀತಿಯ ಅಭಿಪ್ರಾಯ ಇರುವುದರಿಂದಲೇ ಪತ್ರಕರ್ತರ ನಡುವೆ ಒಡಕು ಮೂಡುತ್ತದೆ. ಕ್ರಮೇಣ ಇದು ಹೆಚ್ಚಾದಾದಲ್ಲಿ ಪತ್ರಿಕೋದ್ಯಮದಿಂದ ದೂರವಾಗುವ ಸನ್ನಿವೇಶ ಬರುತ್ತದೆ. <br /><br />ಇನ್ನು ಇಂದಿನ ಮಾಧ್ಯಮವು ಕೆಲವು ರಾಜಕಾರಣಿಗಳ ಕೆಲವು ಪಕ್ಷಗಳ ಕೈಗೊಂಬೆಯಾಗುವುದು ಹೆಚ್ಚುತ್ತಿದೆ, ಮಾಧ್ಯಮದ ಬಗ್ಗೆ ಕನಸುಗಳನ್ನು ಹೊತ್ತು ಬರುತ್ತಿರುವ ಯುವಕ ಯುವತಿಯರನ್ನು ತನ್ನ ಬಲಿಪಶು ಮಾಡುತ್ತಿದೆ. ಕ್ಯಾಮರ ಎದುರು ಬರುವಾಗ, ಲೇಖನಗಳಲ್ಲಿ ಪತ್ರಕರ್ತರು ಸುಖಿಗಳು ಎಂದು ಕಂಡು ಬಂದರು ತಮ್ಮ ಪತ್ರಿಕೆ,ಚಾನೆಲ್ ಗಳಿಂದಲೇ ಕೆಲವು ಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲವೂ ಗೊತ್ತಿದೆ ಎನ್ನುವ ರೀತಿಯವರಿಂದ ಕಿರುಕುಳಗಳನ್ನು ಯುವ ಪತ್ರಕರ್ತರು ಅನುಭವಿಸುತ್ತಿದ್ದಾರೆ. ಯುವ ಪತ್ರಕರ್ತರು ಗ್ಲಾಮರ್ಗೋಸ್ಕರ ಪತ್ರಿಕೋದ್ಯಮಕ್ಕೆ ಬರುತ್ತಿಲ್ಲ. ತಮ್ಮಲ್ಲೂ ಸೃಜನಶೀಲತೆಗಳು.....ಉತ್ತಮ ಆಕಾಂಕ್ಷೆ ಇಟ್ಟು ಬರುತ್ತಾರೆ. ಅದಕ್ಕೆ ಸರಿಯಾದ ವೇದಿಕೆ ಸಿಗದೆ...ಪತ್ರಿಕೋದ್ಯಮದಿಂದ ದೂರವಾಗುತ್ತಿದ್ದಾರೆ. ಮಾಧ್ಯಮವು ಉದ್ಯಮವಾಗುತ್ತಿದೆ ಸರಿ ಆದರೆ ಅದನ್ನೇ ಮುಖ್ಯವಾಗಿಟ್ಟು ಕೊಂಡು ನಾವು ನೀಡಿದ್ದೇ ಅಂತಿಮ ಎನ್ನುವ ಮಾಧ್ಯಮ ನಿಲುವು ತಪ್ಪು...<br /> `ಮಾಧ್ಯಮ ಸಮಾಜವನ್ನು, ವ್ಯಕ್ತಿಗಳನ್ನು ಒಂದು ಮಾಡಬೇಕೇ ಹೊರತು ದೂರ ಮಾಡುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ'<br /> <br /> ಯಶೋಧರ.ವಿ.ಬ೦ಗೇರBIDIREhttps://www.blogger.com/profile/13065863767067491234noreply@blogger.comtag:blogger.com,1999:blog-3901985173139732142.post-58509516318980782282011-11-08T00:17:27.514+05:302011-11-08T00:17:27.514+05:30ಬಶೀರ್ ಮಾತುಗಳನ್ನೇ ಪುರುಚ್ಛರಿಸಬಯಸುತ್ತೇನೆ....ಬಶೀರ್ ಮಾತುಗಳನ್ನೇ ಪುರುಚ್ಛರಿಸಬಯಸುತ್ತೇನೆ....ಕುಮಾರ್ ಬುರಡಿಕಟ್ಟಿhttps://www.blogger.com/profile/07393173650650532674noreply@blogger.comtag:blogger.com,1999:blog-3901985173139732142.post-29916753618327410192011-11-06T16:17:04.196+05:302011-11-06T16:17:04.196+05:30ಇರ್ಶಾದ್ ಮಾತಲ್ಲಿ ಎಳಸುತನ ಇದೆ. ಹಾಗೆ ವಯಸ್ಸಿಗೆ ಸಹಜವಾದ ...ಇರ್ಶಾದ್ ಮಾತಲ್ಲಿ ಎಳಸುತನ ಇದೆ. ಹಾಗೆ ವಯಸ್ಸಿಗೆ ಸಹಜವಾದ ಉದ್ವೇಗ...ಎಲ್ಲವು ಕೆಡುತ್ತಿರುವಾಗ ಮಾಧ್ಯಮ ಮಾತ್ರ ಸಾಚ ಇರಬೇಕು ಎಂದು ಬಯಸೋದು ಮುಗ್ಧತೆಯ ಒಂದು ಭಾಗ ಅಷ್ಟೇ. ಹಾಗೆಯೇ ಮಾಧ್ಯಮ ಕೆಟ್ಟಿರುದು ಹೊಸಸುದ್ದಿಯೂ ಅಲ್ಲ. ಇರ್ಶಾದ್ ಓದೋದು, ಕಾಣೋದು ಇನ್ನಷ್ಟು ಇದೆ. ಓದುತ್ತ, ಕಾಣುತ್ತ ಈ ಮಾಧ್ಯಮದಲ್ಲಿ ಬೆಳೆಯುವ ತಾಳ್ಮೆ ಇದ್ದರೆ ಇನ್ನಷ್ಟು ಗಟ್ಟಿಯಾಗಿ, ಎಲ್ಲದರ ಮಧ್ಯೆಯೂ ಒಂದು ದಾರಿ ತೆರೆದೇ ತೆರೆದು ಕೊಳ್ಳುತ್ತದೆ. ಇದು ಮಾಧ್ಯಮಕ್ಕೆ ಸಂಬಂಧಿಸಿ ಮಾತ್ರವಲ್ಲ ಎಲ್ಲ ಕ್ಷೇತ್ರಕ್ಕೂ ಸಂಬಂಧ ಪಡುತ್ತದೆ. ನೀರಿನ ಆಳವೇ ನಿಮಗೆ ಈಜನ್ನು ಕಲಿಸಿ ಕೊಡುತ್ತೆ. ಗುಡ್ ಲಕ್!B.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3901985173139732142.post-9052742053913851892011-11-05T23:41:51.211+05:302011-11-05T23:41:51.211+05:30ಪ್ರೀತಿ ಮಾಡಿರೋ ಹುಡುಗಿ ಕೈಕೊಟ್ಟಾಗ, ಜೀವಕ್ಕಿಂತ ಹೆಚ್ಚಾಗಿ...ಪ್ರೀತಿ ಮಾಡಿರೋ ಹುಡುಗಿ ಕೈಕೊಟ್ಟಾಗ, ಜೀವಕ್ಕಿಂತ ಹೆಚ್ಚಾಗಿ ಇಷ್ಟಪಡುವ ಕ್ಷೇತ್ರ(ಕನಸು)ಕಣ್ಣೆದುರು ಸುಳ್ಳು ಎನಿಸಿದಾಗ ಮನಸಿಗೆ ಖೇದ, ನೋವು ಆಗೋದು ಸಾಮಾನ್ಯ. ಹೀಗಂತ ನೀವು ಕ್ಷೇತ್ರವನ್ನೇ ಬಿಡುವ ನಿರ್ಧಾರವೇನೂ ಬೇಕಾಗಿರಲಿಲ್ಲ. ಕಾರಣ, ಪರಿಸ್ಥಿತಿಯ ವಿರುದ್ಧ ಸಿಡಿದೆದ್ದು ನಿಂತು ಅದನ್ನು ಎದುರಿಸುವದೇ ಚಾತುರ್ಯ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗಂದ ಮಾತ್ರಕ್ಕೆ ನೀವು ನಿಮ್ಮ ಸಾಕ್ಷಿಪ್ರಜ್ಷೆಯನ್ನು ಬೇರೆಯವರಿಗೆ ಒತ್ತೆಯಾಗಿಡಿ ಎಂದೂ ಹೇಳುತ್ತಿಲ್ಲ. ಇನ್ನೇನು ಫೀಲ್ಡ್ ಗೆ ಎಂಟ್ರಿ ಹೊಡೆದ ತಕ್ಷಣ ನಾಣು ಹಾಗೆ ಮಾಡಬೇಕು, ಹೀಗೆ ಮಾಡಬೇಕು ಅನ್ನೋ ಕನಸು ಸಾಮಾನ್ಯ ಅದನ್ನು ಮಾಡಲಾಗುತ್ತಿಲ್ಲವೆಂಬ ಹತಾಷೆಯೂ ಅಷ್ಟೇ ಸಾಮಾನ್ಯ. ಹೀಗಾಗಿ ನೀವು ನಿಮ್ಮನ್ನು ಪತ್ರಿಕೋದ್ಯಮದಲ್ಲಿ ಗುರುತಿಸಿಕೊಳ್ಳುವವರೆಗೂ ಪರಿಸ್ಥಿತಿಯನ್ನು ಬದಲಾಯಿಸಬಲ್ಲೇ ಎಂಬುದು ಮುಂಜಾಣೆಯ ಕನಸಷ್ಟೆ ಹೀಗಾಘಿ ಲೆಟ್ಸ್ ಎದ್ದೇಳಿ.. ಸಾಧನೆಯ ಮೆಟ್ಟಿಲು ನಿಮ್ಮನ್ನು ಕಾಯ್ತಾ ಇವೆ... ನಿರ್ಧಾರ ನಿಮ್ಮದು...<br />ನಿಮ್ಮ ಹಿತೈಷಿ.Aatish Bhavishattuhttps://www.blogger.com/profile/16563297367492053652noreply@blogger.comtag:blogger.com,1999:blog-3901985173139732142.post-44679877384480062602011-11-05T17:14:19.221+05:302011-11-05T17:14:19.221+05:30ಪ್ರೀತಿಯ ಇರ್ಷಾದ್,
'ಸಂಪಾದಕೀಯ'ದಲ್ಲಿ ನಿಮ್ಮ ಬರಹ...ಪ್ರೀತಿಯ ಇರ್ಷಾದ್,<br />'ಸಂಪಾದಕೀಯ'ದಲ್ಲಿ ನಿಮ್ಮ ಬರಹ ಓದಿ ಮನಸ್ಸಿಗೆ ಯಾಕೋ ನೋವಾಯ್ತು. <br />ಬದುಕಿನಲ್ಲಿ ಇಟ್ಟುಕೊಂಡ ಗುರಿ, ಕಂಡ ಕನಸುಗಳು ಈಡೇರದಿದ್ದಾಗ ಅಥವಾ ಈಡೇರದು ಎಂದು ತಿಳಿದುಹೋದಾಗ ಯಾರಿಗೇ ಆಗಲಿ ಖನ್ನತೆ ಆವರಿಸುವುದು ಸಹಜ. ಬಹುಶಃ ಅದು ನಿಮಗೂ ಆಗಿದೆ ಎಂದು ಭಾವಿಸುತ್ತೇನೆ. <br />ಆದರೆ ಇರ್ಷಾದ್, ನೀವು ಅಂದುಕೊಂಡಂತೆ ಕೇವಲ ಒಂದು ಶಿಕ್ಷಣ ಸಂಸ್ಥೆಯ ಹುಳುಕಾಗಲೀ, ಸ್ಟೂಡೆಂಟ್ ರಿಪೋರ್ಟರ್ ತರಬೇತಿಯಾಗಲೀ, ನೀವೆಂದ ಓಟಿಗಾಗಿ ನೋಟಿನಂತಹ ಸುದ್ದಿಗಳಾಗಲೀ ಪತ್ರಿಕೋದ್ಯಮವಲ್ಲ. ಪತ್ರಿಕೋದ್ಯಮ ೆನ್ನುವುದು ಅಷ್ಟೆಲ್ಲಾ ಸುಲಭದಲ್ಲಿ ವ್ಯಾಪ್ತಿಗೆ ದಕ್ಕುವ ಸಂಗತಿಯೂ ಅಲ್ಲ. ಬಹುಶಃ ಕುರುಡರು ಆನೆಯನ್ನು ಮುಟ್ಟಿ ನೋಡಿ ಗಾತ್ರ ಹೇಳಿದಂತಾದೀತು.<br />ನೀವೆಂದಂತೆ ಬರೀ ಕಚ್ಡಾಗಳ ಕ್ಷೇತ್ರ ಇದಾಗಿದ್ದರೆ, ಇಂದು ಮಾಧ್ಯಮ ಎನ್ನುವುದಕ್ಕೆ ಗೌರವವಾಗಲೀ, ಘನತೆಯಾಗಲೀ ಉಳಿದಿರುತ್ತಿರಲಿಲ್ಲ. ಎಲ್ಲೋ ಬೆರಳೆಣಿಕೆಯಷ್ಟು ಮಂದಿಯನ್ನು ಕಂಡು ಇಡೀ ಪತ್ರಿಕೋದ್ಯಮವೇ 'ಕಚ್ಡಾ' ಎಂದು ಆರೋಪಿಸುವುದು ತಪ್ಪಾದೀತು. <br />ನೀವೆಂದಂತೆ ಸೈನ್ಸ್ ತೆಗೆದುಕೊಳ್ಳುವ ಅರ್ಹತೆಯಿದ್ದರೂ ಆರ್ಟ್ಸ್ ತೆಗೆದುಕೊಂಡು ಪತ್ರಿಕೋದ್ಯಮವೇ ಬದುಕಿನ ಗುರಿಯಾಗಿಸಿದ ನೀವು, ಒಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಓರ್ವ ಪತ್ರಕರ್ತರನ್ನು (ನೀವು ಇಂಟರ್ನಶಿಪ್ ಮಾಡುವಾಗಿನ ನಿಮ್ಮ ಚೀಫ್)ರನ್ನು ಏಕ ವಚನದಲ್ಲಿ ಕರೆದಿರುವುದು ನೋಡಿ ಬೇಸರವಾಯಿತು.<br />ಇರಲೀ, ಪತ್ರಿಕೋದ್ಯಮದ ಮೇಲೆ ನಿಮಗಷ್ಟೂ ಹೇವರಿಕೆಯಿದ್ಯಾದರೆ ನಿಮ್ಮ ಮನಕ್ಕೊಪ್ಪುವ ಕ್ಷೇತ್ರವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಿಮಗಿದೆಯಷ್ಟೇ.<br />ಅದು ಬಿಟ್ಟು ಸಂವಿಧಾನದ ನಾಲ್ಕನೇ ಅಂಗ ಎಂದೇ ಗುರುತಿಸಿಕೊಳ್ವಾಳುವ ಮಾಧ್ಯಮವನ್ನು 'ಕಚ್ಡಾ' ಎಂದು ಕರೆಯುವುದು ನಿಮ್ಮಂಥ ಯುವಕರಿಗೆ ಶೋಭೆ ತರುವ ಸಂಗತಿಯಲ್ಲ. ಮೌನಕ್ಕೆ ಶರಣಾಗುತ್ತೇನೆ ಎಂದಿದ್ದೀರಿ. ಆದರೂ ಹೇಳಬೇಕೆನಿಸಿತು, ಹೇಳಿದ್ದೇನೆ.<br />ಪ್ರೀತಿ ಇರಲಿ,<br />ಓರ್ವ ಪತ್ರಕರ್ತAnonymousnoreply@blogger.comtag:blogger.com,1999:blog-3901985173139732142.post-67425866384840884412011-11-05T15:08:25.048+05:302011-11-05T15:08:25.048+05:30ಮುಖ್ಯ ವಾಹಿನಿಯ ಮಾಧ್ಯಮ ಕ್ಷೇತ್ರದಲ್ಲಿ ಆತ್ಮಸಾಕ್ಷಿಗೆ ಅನು...ಮುಖ್ಯ ವಾಹಿನಿಯ ಮಾಧ್ಯಮ ಕ್ಷೇತ್ರದಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲು ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಿಲ್ಲ. ಹೊಟ್ಟೆಪಾಡಿಗೆ ಆ ಕೆಲಸ ಮಾಡಬಹುದೇ ಹೊರತು ಅದನ್ನು ಒಂದು ಬದಲಾವಣೆಯ ಮಾಧ್ಯಮವಾಗಿ ತೆಗೆದುಕೊಂಡು ಕೆಲಸ ಮಾಡಲಾರದ ಸ್ಥಿತಿ ಇಂದು ಮಾಧ್ಯಮ ಕ್ಷೇತ್ರದಲ್ಲಿದೆ. ಹೀಗಾಗಿ ಮಾಧ್ಯಮ ಕ್ಷೇತ್ರದ ಕೆಲಸ ಎಂಬುದು ಯುವಕರಿಗೆ ಇಂದು ಆದ್ಯತೆಯ ಕೆಲಸ ಆಗಲಾರದು ಎಂಬ ವಿವೇಕ ಇದ್ದರೆ ಒಳ್ಳೆಯದು.<br /><br />ಅದ್ವಾನಿಯವರ ರಥ ಯಾತ್ರೆಯ ಸಂದರ್ಭದಲ್ಲಿ ಪತ್ರಕರ್ತರಿಗೆ ನೋಟು ಹಂಚಿದ ವಿಷಯ ಎಲ್ಲ ಪತ್ರಿಕೆಗಳಲ್ಲೂ ಮುಖ ಪುಟದಲ್ಲಿ ಪ್ರಧಾನ ಸುದ್ದಿಯಾಗಿ ಬರಬೇಕಾಗಿತ್ತು ಏಕೆಂದರೆ ಇದು ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಹೊರಟವರ ಉದ್ಧೇಶಕ್ಕೆ ತೀರ ವಿರುದ್ಧವಾದ್ದು. ಹೀಗಾಗಿ ಇದನ್ನು ಮುಚ್ಚಿಹಾಕಲು ಮಾಧ್ಯಮ ಪ್ರಯತ್ನಿಸಿದ್ದು ಮಾಧ್ಯಮ ಕ್ಷೇತ್ರಕ್ಕೆ ನಾಚಿಕೆಗೇಡಿನ ವಿಷಯ. ಕರ್ನಾಟಕದ ಮಾಧ್ಯಮ ಕ್ಷೇತ್ರ ತನ್ನ ಅತ್ಮಸಾಕ್ಷಿಯನ್ನೇ ಕಳೆದುಕೊಂಡಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.-ಆನಂದ ಪ್ರಸಾದ್Anonymousnoreply@blogger.comtag:blogger.com,1999:blog-3901985173139732142.post-53569453153203726182011-11-05T13:44:16.672+05:302011-11-05T13:44:16.672+05:30ಇಗೋ'ಗೆ ಪೆಟ್ಟಾಯಿತಾ? ನಾನು ಅನುಭವದಲ್ಲಿ ಚಿಕ್ಕವಳೇ ಇರ...ಇಗೋ'ಗೆ ಪೆಟ್ಟಾಯಿತಾ? ನಾನು ಅನುಭವದಲ್ಲಿ ಚಿಕ್ಕವಳೇ ಇರಬಹುದು. ಆದರೆ ನನ್ನನ್ನು ಆಯ್ಕೆ ಮಾಡಿಕೊಂಡ ನನ್ನ ಪತ್ರಿಕೆಯವರು ಅನುಭವದಿಂದ ನಾನು ಆ ಜವಾಬ್ದಾರಿಯನ್ನು ನಿರ್ವಹಿಸಬಲ್ಲೆ ಎಂದು ನನ್ನ ಆಯ್ಕೆ ಮಾಡಿದ್ದಾರೆ. ಇಲ್ಲಿಯ ವರೆಗೆ ನಾನು ತಪ್ಪಿ ವರದಿ ಮಾಡಿಲ್ಲ. ತಪ್ಪುಗಳೂ ಆಗಿಲ್ಲ. ನನಗೆ ಗೊತ್ತಿರದ ವಿಷಯ ಒಬ್ಬ ಭಿಕ್ಷುಕನಿಂದ ಸಿಕ್ಕರೂ ನಾನು ಅದನ್ನು ವಿಧೇಯಳಾಗಿ ಸ್ವೀಕರಿಸುತ್ತೇನೆ. ಅವರನ್ನು ಗುರು ಎಂದು ಸ್ವೀಕರಿಸುತ್ತೇನೆ. ಆದರೆ ಕಲಿತ ಶಾಲೆಗಾಗಲಿ, ಕಾಲೇಜಿಗಾಗಲಿ ಅಲ್ಲಿ ಅವಕಾಶ ಕೊಟ್ಟ ಮುಖ್ಯಸ್ಥರೇ ಆಗಲೀ ಯಾರಿಗೂ ಬೈಯಲ್ಲ. ಬೇರೆಯವರಿಂದ ಕಲಿತು ಅದು ನಾನೇ ಕಲಿತದ್ದು ಎಂದು ಹೇಳಲ್ಲ. ಯಾವ ವಿಚಾರವನ್ನೂ ತಿಳಿಯದ ನಾನು ಸುದ್ದಿ ಮಾಡಲ್ಲ, ಆ ಬಗ್ಗೆ ಮಾತೂ ಆಡಲ್ಲ. ನಾನು ಆರಕ್ಕೇರಿದರೆ ಹಿಗ್ಗಲ್ಲ, ಮೂರಕ್ಕಿಳಿದರೆ ಕುಗ್ಗಲ್ಲ. ಮೊದಲು ನಿಮ್ಮ ದುರಂಹಕಾರ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಅಷ್ಟೇ ಎಲ್ಲವೂ ಸರಿಯಾಗುತ್ತದೆ.navyajyothihttps://www.blogger.com/profile/06753864704435301850noreply@blogger.comtag:blogger.com,1999:blog-3901985173139732142.post-39398508946566748392011-11-05T11:29:24.881+05:302011-11-05T11:29:24.881+05:30ಇರ್ಷಾದ್ ನಿನ್ನ ನಿರ್ಧಾರದ ಸರಿಯಾಗಿಯೇ ಇದೆ. ಇಷ್ಟ ಇಲ್ಲದಿದ...ಇರ್ಷಾದ್ ನಿನ್ನ ನಿರ್ಧಾರದ ಸರಿಯಾಗಿಯೇ ಇದೆ. ಇಷ್ಟ ಇಲ್ಲದಿದ್ರೆ ಅಲ್ಲಿಂದ ಹೊರಗೆ ಬರೋದೇ ಒಳ್ಳೇದು. ಆದರೆ ನೀನು ಯಾವ ಕ್ಷೇತ್ರವನ್ನು ಕಚ್ಡಾ ಎಂದು ಕರೆಯುತ್ತಿಯೋ ಅದೇ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಾವಿರಾರು ಜನ ಇನ್ನೂ ಇದ್ದಾರೆ.ಯಾರಿಗೂ ಕೂಡಾ ಭ್ರಮ ನಿರಸನ ಆಗಿಲ್ಲ. ನೀನು ಹೇಳುವ ರೀತಿ ಎಲ್ಲವೂ ಕೆಟ್ಟು ಹೋಗಿಲ್ಲ. ಹಾಗಂತ ಎಲ್ಲಾನು ಸರಿ ಇದೆ ಅಂತಾನೂ ಇಲ್ಲ. ಬಕೇಟ್ಹಿ ಹಿಡಿಯುವವರು ಎಲ್ಲಿ ಹೋದರು ಇದ್ದೇ ಇರುತ್ತಾರೆ. ಆದರೆ ಹಿಡಿದವರಾರು ನಾನು ಬಕೇಟು ಹಿಡಿಯುತ್ತೇನೆ ಅಂತ ಹೇಳೊದಿಲ್ಲ. ಬಕೇಟು ಹಿಡಿಯದಿದ್ದರೆ ಎಲ್ಲಿಯೂ ಹೆಸರು ಮಾಡಲು ಆಗುವುದಿಲ್ಲ. ಹಾಗೇ ನೋಡಿದರೆ ಉಜಿರೆ ಕಾಲೇಜಿನಲ್ಲಿ ನಿನಗೆ ಸಾಕಷ್ಟು ಅವಕಾಶಗಳು ಸಿಕ್ಕಿವೆ.ಕಾಲೇಜಿನಲ್ಲಿ ಅಷ್ಟು ಜನರಿದ್ದಾಗ್ಯೂ ನಿನಗೆ ಸುವರ್ಣದ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಯಿತು. ಅಭಿಪ್ರಾಯ ಹೇಳಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಅದೇ ರೀತಿಯಲ್ಲಿ ನವ್ಯಜ್ಯೋತಿಯವರು ನಿಮ್ಮ ಬಗ್ಗೆ ಅವರಿಗನ್ನಿಸಿದ್ದನ್ನು ಹೇಳಿದ್ದಾರೆ ಅಷ್ಟೇ ಅದಕ್ಕೆ ಯಾಕೆ ಅಷ್ಟು ಗರಂ ಆಗೋದು. ಹೊಗಳಿಕೆ, ತೆಗಳಿಕೆ ಎಲ್ಲವನ್ನು ಸಮಾನವಾಗಿಯೇ ಸ್ವೀಕರಿಸಬೇಕಲ್ಲ. ಆ ಮನಸ್ಥಿತಿ ಇಲ್ಲದಿದ್ದರೆ ಅಭಿಪ್ರಾಯಗಳನ್ನು ಒಳಗೆ ಇಟ್ಟುಕೊಳ್ಳಬೇಕು.<br />ಸದ್ಯದ ಪರಿಸ್ಥಿತಿ ಅರ್ಥ ಮಾಡಿಕೊಂಡರೆ ನೀನು ಈ ಅಭಿಪ್ರಾಯ ಬರೆಯುತ್ತಿರಲಿಲ್ಲ.ಯಾವ ಕ್ಷೇತ್ರವೂ ಸರಿಯಾಗಿಲ್ಲ.ಅದೇ ರೀತಿಯಲ್ಲಿ ಯಾವ ವ್ಯಕ್ತಿಗಳೂ ಕೂಡಾ ಸಾಚಾ ಆಗಿ ಉಳಿದಿಲ್ಲ. ಹೇಳುವುದು ಒಂದಾದರೆ ಮಾಡುವುದು ಇನ್ನೊಂದು. ಆದರೆ ನಾನು ಸಾಚಾ ಎಂದು ಗೋಮುಖ ವ್ಯಾಗ್ರನಂತೆ ಪೋಸು ಕೊಡುತ್ತಾರೆ ಅಷ್ಟೇ. ಕೇವಲ ಸಿಂಪತಿ ಗಿಟ್ಟಿಸಿಕೊಳ್ಳುವುದಷ್ಟೇ ಮುಖ್ಯವಲ್ಲ.ಏನಾದರೊಂದು ರಿಯಾಲಿಟಿ ಇರಲೇ ಬೇಕಲ್ಲ.ಏನೇ ಆದರೂ ಎಲ್ಲರೂ ಮುಖವಾಡ ಕಳಚಬೇಕಾದ ಅಗತ್ಯವಿದೆ ಅಷ್ಟೇ.ತಿಪ್ಪೇಸ್ವಾಮಿ ನಾಕೀಕೆರೆhttps://www.blogger.com/profile/00626165031173027389noreply@blogger.comtag:blogger.com,1999:blog-3901985173139732142.post-14295178692096172082011-11-05T08:05:10.028+05:302011-11-05T08:05:10.028+05:30ನಾನು ಹತಾಶನಾಗಿಲ್ಲ. ಆದರೂ ಕೆಲವೊಮ್ಮೆ ನನ್ನನ್ನು ಕಾಡುತ್ತಿ...ನಾನು ಹತಾಶನಾಗಿಲ್ಲ. ಆದರೂ ಕೆಲವೊಮ್ಮೆ ನನ್ನನ್ನು ಕಾಡುತ್ತಿರುವ ನನ್ನ ಮನದಾಳದ ಭಾವನೆಗಳನ್ನು ಬರೆದಿದ್ದೇನೆ ಅಷ್ಟೆ. ಆದರೂ ಒಂದು ಬೇಸರ ಇದೆ. ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಯಾರೂ ಮಾತಾಡದೆ ವೈಯುಕ್ತಿಕ ಟೀಕೆ ಟಿಪ್ಪಣಿಗಳಲ್ಲೆ ತೊಡಗಿರುವುದು ಕಂಡು ಬರುತ್ತಿದೆ. ನಾನು ಏನೂಂತ ನನಗಿಂತ ಹೆಚ್ಚು ಇನ್ಯಾರಿಗೂ ಗೊತ್ತಿರದು ಅಷ್ಟೆ. ನಾನು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುತ್ತೇನೆ. ಜೊತೆಗೆ ಒಂದಿಷ್ಟು ಬದಲಾವಣೆಯನ್ನೂ ಮಾಡುತ್ತೇನೆ.<br />@ ಆ ಮಾತುಗಳು ಬರುವುದಕ್ಕೆ ಮೇಲಿನ ಮಾತುಗಲೇ ಕಾರಣ ಶಶಿಕಿರಣ್ ಶೆಟ್ಟಿಯವರೇ. ಸುಮ್ ಸುಮ್ನೆ ಏನೆಲ್ಲ ಹೇಳಿದಾಗ ಮನಸ್ಸಿಗೆ ಬೇಜಾರಾಗುತ್ತೆ ಸರ್. ಅಷ್ಟೆ. ಒಂದು ಒಳ್ಳೆಯ ಚರ್ಚೆಯಾಗಬಹುದು ಎಂದ್ದಿದ್ದ ವಿಚಾರ ಮತ್ತೆ ಇನ್ನೆಲ್ಲಿಗೋ ಹೊರಳುತ್ತಿದೆ. ನನಗದು ಇಷ್ಟ ಇಲ್ಲ. ಮೌನಕ್ಕೆ ಶರಣಗುತ್ತಿದ್ದೇನೆ. ಬೇಕಿದ್ದವರು ನನ್ನ ಬ್ಲಾಗಿನಲ್ಲಿರುವ ಪೂರಕ ಮಾಹಿತಿ ಉತ್ತರವನ್ನು ಓದಿಕೊಳ್ಳಲಿ.ಇಂಚರhttps://www.blogger.com/profile/12084915630874985589noreply@blogger.comtag:blogger.com,1999:blog-3901985173139732142.post-51864605254105624522011-11-05T07:59:07.424+05:302011-11-05T07:59:07.424+05:30sorry boss patrike, Media yavdu yenu madakee agall...sorry boss patrike, Media yavdu yenu madakee agalla, adu torsoke matra yaradru hogli goripalyada volage gottagutte namma kanunu yeshtu balavagide anta.<br />-Prashiva PrasadAnonymousnoreply@blogger.comtag:blogger.com,1999:blog-3901985173139732142.post-77051469453325591242011-11-05T07:58:46.202+05:302011-11-05T07:58:46.202+05:30Yelaru hege ne maadyama,cinema,politics...sabyaru ...Yelaru hege ne maadyama,cinema,politics...sabyaru kelsa mado jaga ala,adu kolethu hoge ero hannu athva vasi madoke agde ero hunnu...antha dhushusthane hodre elle vasthavage kelsa mado avru adru yaru???namge edun yela solve madoke bere obba leader yak beku....!??elle ero yelaru leader's yee...badalavane ega agathya...aa badlavane tharthene,tharthene antha heltha baronu bare reader agthane...vasthavage badlavane tharoavnu mathra nijavada leader agthane...ondu thunder tharthane...!!<br />-Ashwini Awesum AshuAnonymousnoreply@blogger.comtag:blogger.com,1999:blog-3901985173139732142.post-21021198474804107182011-11-05T07:58:16.021+05:302011-11-05T07:58:16.021+05:30ಪತ್ರಿಕೋದ್ಯಮ ಎಂಬ ರಂಗನತಿಟ್ಟಿನ ತುಂಬಾ ಇಂದು ಧೂಳು ತುಂಬಿ ...ಪತ್ರಿಕೋದ್ಯಮ ಎಂಬ ರಂಗನತಿಟ್ಟಿನ ತುಂಬಾ ಇಂದು ಧೂಳು ತುಂಬಿ ಕೆಸರುಮಯ, ನಾರುತಿಹುದು ಮಾಧ್ಯಮ ರಂಗ, ಈ ಕೀವಿಗೆ ಇದೆಯೆ ಪರಿಹಾರ? ಇಡಬಹುದೇ ಆಶಯ..<br />-Srinivasa PejathayaAnonymousnoreply@blogger.comtag:blogger.com,1999:blog-3901985173139732142.post-34054838926305211212011-11-05T07:57:57.968+05:302011-11-05T07:57:57.968+05:30Yake gelaya Aa mathugalu?
-Shashikiran ShettyYake gelaya Aa mathugalu?<br />-Shashikiran ShettyAnonymousnoreply@blogger.comtag:blogger.com,1999:blog-3901985173139732142.post-62474301080046580262011-11-04T22:09:24.076+05:302011-11-04T22:09:24.076+05:30ಇರ್ಷಾದ್ ಏನೂಂತ ಇನ್ಯಾರಿಂದ ತಿಳಿದುಕೊಳ್ಳುವ ಅಗತ್ಯ ಇಲ್ಲ. ...ಇರ್ಷಾದ್ ಏನೂಂತ ಇನ್ಯಾರಿಂದ ತಿಳಿದುಕೊಳ್ಳುವ ಅಗತ್ಯ ಇಲ್ಲ. ನನ್ನ ಬಗ್ಗೆ ನನಗೆ ಗೊತ್ತು. ನವ್ಯಜ್ಯೋತಿಯವರೇ ಮಾತು ಸ್ವಲ್ಪ ಸಾಫ್ಟ್ ಆಗಿ ಇರಲಿ. ಬಾಯಿಗೆ ಬಂದಂತೆ ಬರೆಯಬೇಡಿ. ನಾನು ಬರೆದದ್ದು ನನ್ನ ಅನುಭವ. ನನ್ನ ಮನದಾಳದ ತಳಮಳ. ಇನ್ನೊಬ್ಬರ ಬಗ್ಗೆ ಪರ್ಸನಲ್ ಕಮೆಂಟ್ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ. ನೀವು ಏನೂಂತ ಯೋಚಿಸಿ. ನಾನು ಕಚ್ಡಾ ಎಂದಿರುವುದು ಸುವರ್ಣ ನ್ಯೂಸ್ನ್ನು ಅಲ್ಲ. ಪ್ರಸ್ತುತ ಮಾಧ್ಯಮ ಕ್ಷೇತ್ರವನ್ನು. ಓದುವಾಗ ಅರ್ಥ ಮಾಡ್ಕೊಳ್ಳಿ. ನೀವು ಪ್ರತಿಷ್ಠಿತ ಪತ್ರಿಕೆಯ ವರದಿಗಾರ್ತಿಯಾಗಿ ವರದಿ ಮಾಡುವಾಗ ಮುಂದೆ ಈ ತಪ್ಪು ಮಾಡಿ ಪಶ್ಚಾತ್ತಾಪ ಪಡಬೇಡಿ. ಸ್ಟೂಡೆಂಟ್ ರಿಪೋರ್ಟರ್ನಲ್ಲಿ ಓವರ್ ಕಾನ್ಫಿಡೆನ್ಸ್ನಿಂದ ಕೊನೆಯವರೆಗೂ ಇದ್ದದ್ದಲ್ಲಾ ರೀ. ಎಂಟ್ರೆನ್ಸ್ ಟೆಸ್ಟ್ನಲ್ಲೇ ಟಾಪರ್ ಆಗಿ ನನ್ನ ಪ್ರತಿಭೆಯಿಂದ ಅಲ್ಲಿ ಗುರುತಿಸಿಕೊಂಡಿರುವವನು ನಾನು. ನಿಮ್ಮಲ್ಲಿ ಜಾಹಿರಾತು ತೆಗದುಕೊಳ್ಳಬೇಡಿ ಎಂದು ನಾನು ಹೇಳಿಲ್ಲ. ಆದರೆ ಸುದ್ಧಿ ಮುಚ್ಚಿ ಹಾಕುವ ಜಾಹಿರಾತು ಮಾತ್ರ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಿರುವುದು ಅಷ್ಟೇ. ಒಣ ಪ್ರತಿಷ್ಠೆ ಇಟ್ಟುಕೊಳ್ಳುವ ದಡ್ಡ ನಾನಲ್ಲ. ಹಿಡಿತ ಇರಲಿ.ಹಿಡಿತ....ಇಂಚರhttps://www.blogger.com/profile/12084915630874985589noreply@blogger.comtag:blogger.com,1999:blog-3901985173139732142.post-21044369904789328822011-11-04T20:52:02.437+05:302011-11-04T20:52:02.437+05:30ಇರ್ಷಾದ್, ಮುಖವಾಡ ಕೇವಲ ಪತ್ರಿಕೋದ್ಯಮದಲ್ಲಷ್ಟೇ ಅಲ್ಲ, ಎಲ್...ಇರ್ಷಾದ್, ಮುಖವಾಡ ಕೇವಲ ಪತ್ರಿಕೋದ್ಯಮದಲ್ಲಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಇದೆ. ಪ್ರಾಮಾಣಿಕವಾದ ಕೆಲಸ ಮಾಡುವ ಮನೋಭಾವ ಇರುವ ಕ್ಷೇತ್ರವಾದರೂ ಯಾವುದಿದೆ? ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಇಂದಿನ ದಿನಗಳಲ್ಲಿ ನೀವು ಈಗಲಾದರೂ ಸತ್ಯವನ್ನು ಬಿಚ್ಚಿಟ್ಟೀದ್ದೀರಿ. ಆದರೆ ನೀವು ಅಂದುಕೊಂಡಷ್ಟೇನೂ ಕೆಟ್ಟಿಲ್ಲವೆಂದು ನನ್ನ ಅನಿಸಿಕೆ. ಈಗ ಇರುವ ಕ್ಷೇತ್ರದಲ್ಲೇ ಸಾಧಿಸಿ ತೋರಬೇಕೆಂಬ ಛಲ ಇರಬೇಕೆ ಹೊರತು, ತೀರ ನಿರಾಸೆಯನ್ನು ಹೊಂದಿದರೆ ಯಾವುದೇ ಕ್ಷೇತ್ರದಲ್ಲೂ ಏನೂ ಮಾಡಲಾರಿರಿ. ಎಲ್ಲೆಡೆಯೂ ನೀವು ಹೇಡಿಯಾಗಿಯೇ ಮರಳಬೇಕಾಗುತ್ತದೆ. ಎದುರಿಸಿ, ಸಾಧಿಸಿ, ಸಾಧನೆ ಮಾಡಿ ತೋರಿಸಿ. ಪಾಠ ಮಾಡುವ ನೀವೇ ಹೀಗೆ ತಲೆ ಮೇಲೆ ಕೈಹೊತ್ತರೆ, ವಿದ್ಯಾರ್ಥಿಗಳು ಎತ್ತ ಹೋಗಬೇಕು ಸಾರ್? ಅವರೂ ಮನೆಗೆ ಓಡಿಹೋಗಬೇಕಾ?Anonymousnoreply@blogger.com