tag:blogger.com,1999:blog-3901985173139732142.post747383030736339518..comments2024-03-10T23:03:15.504+05:30Comments on ಸಂಪಾದಕೀಯ: ಭಟ್ಟರೇಕೆ ವೈರಾಗ್ಯದ ಮಾತುಗಳನ್ನು ಆಡುತ್ತಿದ್ದಾರೆ? ವಿದಾಯದ ಮುನ್ಸೂಚನೆಯೇ?sampadakeeyahttp://www.blogger.com/profile/10834139994439066030noreply@blogger.comBlogger10125tag:blogger.com,1999:blog-3901985173139732142.post-994091275968516362011-07-26T15:09:26.724+05:302011-07-26T15:09:26.724+05:30ಶರಶಯ್ಯೆಗೂ ಹಿಂದಣ ರಾತ್ರಿ, ಯುದ್ಧ ಶಿಬಿರದಲ್ಲಿ ಮಲಗಿ ಕನವ...ಶರಶಯ್ಯೆಗೂ ಹಿಂದಣ ರಾತ್ರಿ, ಯುದ್ಧ ಶಿಬಿರದಲ್ಲಿ ಮಲಗಿ ಕನವರಿಸುತ್ತಿರುವ ಭೀಷ್ಮನ ಆತ್ಮ ನೇವರಿಕೆಯ ಸ್ವಗತದಂತಿದೆ ಈ ಮಾತುಗಳು. ತೀರ ವಿಪರೀತ ಹೋಲಿಕೆಯೆನಿಸಿದರೂ,ಒಂದು ಕಾಲಘಟ್ಟದ ದಾರುಣತೆ....ಅಸಹಾಯಕವಾಗಿ ಮಲಗಿರುವ ಸಾಕ್ಷಿಪ್ರಜ್ಞೆಯನ್ನು ಚುಚ್ಚುತ್ತಿರುವ ಈ ನಿರ್ದಯ ಚಿತ್ರಕ್ಕೆ ಬೇರ್ಯಾವ ಹೋಲಿಕೆಗಳೂ ಈ ಕ್ಷಣಕ್ಕೆ ಹೊಳೆಯುತ್ತಿಲ್ಲ ನನಗೆ.<br /><br /> ಹೌದು, ಚಳವಳಿಗಳು ಸಮಾಜದ ಜೀವಂತಿಕೆಯನ್ನು ಸೂಚಿಸುತ್ತವೆ. ವ್ಯಕ್ತಿಸಮುದಾಯವನ್ನು ಹೆಚ್ಚು ಚಲನಶೀಲವನ್ನಾಗಿಸುತ್ತವೆ. ಆ ಸಂದರ್ಭದಲ್ಲಿ ಹುಟ್ಟುವ ಸ್ವಸ್ಥ ಸಮಾಜಧರ್ಮವೊಂದರ ವಿಶಾಲ ಪ್ರತ್ಯುತ್ಪನ್ನದಂತಿರುತ್ತವೆ ಅಲ್ಲಿನ ಮನೋಧರ್ಮಗಳು . ಇತರ ಕ್ಷೇತ್ರಗಳಂತೆ ಮಾಧ್ಯಮ ರಂಗವೂ ಇದಕ್ಕೆ ಹೊರತಾಗಿಲ್ಲವಷ್ಟೆ.<br /><br /> ನಿಧಾನ......<br /> ಕಾಲದ ಮೂಸೆಯಲ್ಲಿ ಎಲ್ಲವೂ ಕೊಳೆತು ನಾರುತ್ತಿರುವಂತೆ....... ಇಲ್ಲೂ !<br /><br />ರೂಪರ್ಟ್ ಮುರ್ಡೋಕ್ ಹೆಣೆದ ಅನೈತಿಕ ಜಾಲದ ಮಾದರಿಯ ಬಗೆಗಿನ ಮಾತುಗಳು ಮಾಧ್ಯಮ ರಂಗದ ಒಂದು ಕೊನೆಯ ಮಾತಾದೀತು. ಆ ವಿವರಗಳನ್ನು ಸದ್ಯಕ್ಕಲ್ಲೇ ಬಿಟ್ಟು ಅದರ ಇನ್ನೊಂದು ಕೊನೆಯ ಬಗೆಗೆ ಚಿಂತಿಸೋಣ. ಕೊನೆಯೆಂದರೆ ಕೊನೆಯಲ್ಲ. ಒಂದರ್ಥದಲ್ಲಿ ಇದು ಮೂಲ.<br /><br />ಹಾಗೆ ನೋಡಿದರೆ ಯಾವ ಚಳವಳಿಯ ನಡುವಿನ ಉತ್ಪನ್ನವೂ ಅಲ್ಲದ- ಯಾವ ಮನುಷ್ಯಪರ ಕಳಕಳಿಯ ಭಾಗವೂ ಅಲ್ಲದ- ವಿಭಿನ್ನ ಓದಿಗೆ ತೆರೆದುಕೊಳ್ಳದ - ಕೇವಲ ತಾಂತ್ರಿಕವಾಗಿಯಷ್ಟೇ ತರಬೇತುಗೊಳಿಸಲ್ಪಟ್ಟ ಒಬ್ಬಾತನಿಗೆ, ಇದ್ದಕ್ಕಿದ್ದಂತೆ ಸಮಾಜದ ಸಾಕ್ಷಿಪ್ರಜ್ಞೆಯ ಸ್ಥಾನ ತುಂಬುವ ಅವಕಾಶ ದೊರೆತಾಗ ಒಮ್ಮೆಲೆ ಉಂಟಾಗುವ ಮೈಮರೆವು- ಈ ವಿಪರೀತಗಳ ಸರಮಾಲೆಯ ಆರಂಭ! ಪತ್ರಕರ್ತನಾಗಿ ಎಳೆತನದ ಹಂತದಲ್ಲಿರುವ ಆ ಅವಸ್ಥೆ , ಮುಂದೆ ಏನೂ ಆಗಬಹುದಾದ ಮುಕ್ತತೆಯನ್ನು ಹೊಂದಿರುತ್ತದಲ್ಲವೇ? ದುರಂತವೆಂದರೆ, ಆತ ಹೊಂದಿರುವ ಸ್ಥಾನ ಆತನನ್ನು ಯಾವ ಸ್ವರೂಪದಲ್ಲಿ ನೋಡಲಿಚ್ಚಿಸುತ್ತದೆಯೋ, ಆತ ಅದರಂತೆ ಬೆಳೆಯದೆ ಇನ್ಯಾವುದೋ ರೀತಿಯಲ್ಲಿ ಅಡ್ಡಾದಿಡ್ಡಿ ಬೆಳೆಯುವುದು! ಒಂದು "ವಿಷನ್" ಇಲ್ಲದ ಬೆಳವಣಿಗೆ, ಅದು ಬೆಳವಣಿಗೆಯಾಗಿರುವುದಿಲ್ಲ.<br /><br />ಭಟ್ಟರು ಹೇಳುವ ಅಷ್ಟೂ ಮಾತುಗಳು ಈ ಎಲ್ಲದರ ನಿರ್ದಿಷ್ಟ ವಿವರಗಳೇ! ಮಾಧ್ಯಮ ಹಿಡಿದಿರುವ ಹೊರಳು ದಾರಿಯ ಕಣ್ಣು ಚುಚ್ಚುವ ಬಿಂಬಗಳೇ! ಸಂಘರ್ಷದ ಡೇರೆಯೊಳಗಿನ ನೋವಿನ ಸ್ವಗತಗಳೇ!<br /><br />ಇಲ್ಲಿ "ಆತ್ಮಾವಲೋಕನ"ವೆಂಬ ಕ್ಲೀಷೆ ಸದಾ ಅಣಕಿಸುತ್ತಿರುತ್ತದೆ! <br /><br /> --ದಿನೇಶ್ ಕುಕ್ಕುಜಡ್ಕ--ದಿನೇಶ್ ಕುಕ್ಕುಜಡ್ಕnoreply@blogger.comtag:blogger.com,1999:blog-3901985173139732142.post-34467135519729469942011-07-26T14:14:47.989+05:302011-07-26T14:14:47.989+05:30ದಿ ಹಿಂದೂ ಪತ್ರಿಕೆ ಬೇರೆ ಪತ್ರಿಕೆಗಳಲ್ಲಿನ ತಪ್ಪುಗಳನ್ನು ಪ...ದಿ ಹಿಂದೂ ಪತ್ರಿಕೆ ಬೇರೆ ಪತ್ರಿಕೆಗಳಲ್ಲಿನ ತಪ್ಪುಗಳನ್ನು ಪ್ರಕಟಿಸುವುದಕ್ಕಿಂತ ಮೊದಲೇ ವಾರ್ತಾ ಭಾರತಿ ಮತ್ತು ಕರಾವಳಿ ಅಲೆ ಪತ್ರಿಕೆಗಳು ಈ ಕೆಲಸವನ್ನು ಮಾಡಿದ್ದವು. ಕರಾವಳಿ ಪ್ರದೇಶದಲ್ಲಿ ಉದಯವಾಣಿ ಮತ್ತು ವಿಜಯ ಕರ್ನಾಟಕ, ಸಂಜೆ ಅಲೆಯಂತಹ ಕೋಮುಭಾವನೆ ಪ್ರಚೋದಿಸುವ ಪತ್ರಿಕೆಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದವು. ಅವು ಅಲ್ಪಸಂಖ್ಯಾತರ ಬಗೆಗಿನ ಸುದ್ದಿಗಳು. ಆಗ ವಾರ್ತಾಭಾರತಿ ಸತ್ಯವರದಿಯನ್ನು ಪ್ರಕಟಿಸಿದ್ದಲ್ಲದೆ, ವಿಜಯ ಕರ್ನಾಟಕದಲ್ಲಿ ಬಂದ ಸುಳ್ಳುಸುದ್ದಿ ಏನು ಎಂಬುದನ್ನು ತಿಳಿಸಿತ್ತು. ಆದರೆ ವಾರ್ತಾ ಭಾರತಿ ಮತ್ತು ಕರಾವಳಿ ಅಲೆ ಪತ್ರಿಕೆಗಳ ಪ್ರಸಾರ ಸಂಖ್ಯೆ ಕಡಿಮೆ ಇರುವುದರಿಂದ ಮತ್ತು ತಾವು ಇದನ್ನು ಗಮನಿಸದೆ ಇರುವುದರಿಂದ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ತಮ್ಮ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ. ಸಿದ್ದಾರ್ಥAnonymousnoreply@blogger.comtag:blogger.com,1999:blog-3901985173139732142.post-33014400557806228112011-07-25T15:19:12.117+05:302011-07-25T15:19:12.117+05:30ಪ್ರೀತಿಯ ಶಶಿಧರ್ ಭಟ್ ರವರೇ
ಸಂಪಾದಕೀಯ ತಾಣದಲ್ಲಿ ತಾವು ಸ...ಪ್ರೀತಿಯ ಶಶಿಧರ್ ಭಟ್ ರವರೇ <br /><br />ಸಂಪಾದಕೀಯ ತಾಣದಲ್ಲಿ ತಾವು ಸಮಯ ವಾಹಿನಿ ಬಿಡುತ್ತಿರುವ ಕುರಿತು ಲೇಖನ ಓದಿದೆ ಅಲ್ಲದೆ ತಾವು ತಮ್ಮ ಬ್ಲಾಗ್ ನಲ್ಲಿ ಇಂದಿನ ಪತ್ರಿಕೋದ್ಯಮದ ಕುರಿತು ಬರೆದಿರುವ ನಿಷ್ಟುರ (ವಾಸ್ತವ) ಸತ್ಯಗಳನ್ನು ಓದಿದೆ ತಾವು ದಯವಿಟ್ಟು ಸಮಯ ವಾಹಿನಿಯನ್ನು ಬಿದಬೀಡಿ ಏಕೆಂದರೆ ನೀವೇ ಒಂದು ಕಡೆ ಹೇಳಿರುವಂತೆ ನಿವೆಲ್ಲ ತುರ್ತು ಪರಿಸ್ಥಿತಿಯ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಅಲ್ಲದೆ ಚಳುವಳಿಯ ಹಿನ್ನಲೆಯಲ್ಲಿ ಇ ರಂಗವನ್ನು ಅಯ್ಕೆಮದಿಕೊಂಡು ವೃತಿ ಜೀವನ ಆರಂಬಿಸಿದವರು ಅದ್ದರಿಂದ ನಿಮ್ಮಂಥ ವ್ಯಕ್ತಿಗಳ ಮಾರ್ಗದರ್ಶನ ಹಲವರು ಯುವಕರಿಗೆ ಬೇಕಾಗಿದೆ ನೀವು ಹೇಳಬಹುದು ಈಗಿನ ಯುವಕರು ಜಾಗತೀಕರಣದ ಹಿನ್ನೆಲೆಯಿಂದ ಬದುಕನ್ನು, ಮಾಡುವ ಕೆಲಸವನ್ನು ಗುರುತಿಸುತ್ತಿದ್ದಾರೆ ಎಂದು. ಆದರೆ ಎಲ್ಲರು ಹಾಗಿಲ್ಲ ಪತ್ರಿಕೋದ್ಯಮಕ್ಕೆ ಹೋಗಬೇಕು ಅಲ್ಲಿ ನನ್ನ ಆಲೋಚನೆಯ ಮೊಲಕ ಹಲವರು ಬದಲಾವಣೆ ತರಬೇಕು ಎಂದು ಕನಸುಕಾಣುವ ಹಲವರು ಯುವಕರು ನನ್ನ ಸುತ್ತ ಇದ್ದಾರೆ ಅವರಿಗೆಲ್ಲ ನಿಮ್ಮಂಥ ಕೆಲವರೇ ಮಾರ್ಗದರ್ಶಕರು ನನ್ನ ಅನುಭವದಲ್ಲ ಒಂದು ಮಾತು ಹೇಳುತ್ತೇನೆ ಸರ್ ಪ್ರತಿ ವರ್ಷ ನಮ್ಮ ವಿ.ವಿ ಗೆ ಬರುವ ನೂರಾರು ವಿದ್ಯಾರ್ಥಿಗಳು ಬರುತ್ತಾರೆ ಹೋಗುತ್ತಾರೆ ಹಾಗಂತ ಉಪನ್ಯಾಸಕ ಅವರನ್ನೆಲ್ಲ ಎ ಇವರೆಲ್ಲ ಪ್ರತಿ ವರ್ಷ ಬರುವ ವಿದ್ಯಾರ್ಥಿಗಳೇ ಎಂದುಕೊಂಡರೆ ಅವನಾಥ ಮೂರ್ಖ ಮತ್ತೊಬ್ಬನಿಲ್ಲ ಪ್ರತಿವರ್ಷ ಬರುವ ವಿದ್ಯಾರ್ಥಿ ಸಮೂಹದಲ್ಲಿ ಒಬ್ಬನಾದರೂ ಹೊಸ ಆಲೋಚನೆಯ ವ್ಯಕ್ತಿ ಇರಬಹುದು ಅವನನ್ನು ಗುರುತಿಸಿ ಪ್ರೋತ್ಸಾಹಿಸುವುದು ಉಪನ್ಯಾಸಕ ಕೆಲಸವನ್ನು ರೋಮಂಚಕವಗಿಸುತ್ತದೆ. ನಮ್ಮ ಗುರಿ ಕನಸುಗಳಿಲ್ಲದ ಯಂತ್ರಿಕ ಬದುಕಿನ ದೃಷ್ಟಿಯ ನೂರು ವಿದ್ಯಾರ್ಥಿಗಳ ಬದಲಾಗಿ ಹೊಸ ಕನಸು ಕನವರಿಕೆ ಹೊಂದಿರುವ ಒಬ್ಬ/ಇಬ್ಬರು ವಿದ್ಯಾರ್ಥಿ ಆಗಿರಬೇಕು ಅಂತೆಯೇ ಪತ್ರಿಕೋದ್ಯಮಕ್ಕೆ ಬರುವ ಸಾವಿರ ಸಾವಿರ ಜೊಳ್ಳು ಕಾಲುಗಳ ಮದ್ಯೆ ಸಿಗುವ ಗತ್ತಿತಿಕಾಳುಗಳನ್ನು ಒಟ್ಟಾಗಿಸಿ ಯಾರಿಗೆ ಗೊತ್ತು ಇಂದು ನೀವು ಲಂಕೇಶ್ , ಖಾದ್ರಿ ಶಾಮಣ್ಣ, ಅವರನ್ನು ನೆನೆಯುವಂತೆ ನಿಮ್ಮನ್ನು ನೆನೆಯುವ ಹೊಸ ಆಲೋಚನೆಗಳ ಒಂದು ಸದೃಡ ಯುವ ಪಡೆ ಬೆಳೆಯಬಹುದು ಲೆಟ್ಸ್ ಕೀಪ್ ಹೋಪ್ಸ್ ಆಲ್ ದಿ ಬೆಸ್ಟ್ <br /><br /><br />Dr. Kiran.M Gajanur, <br />R.T.A.In Political Science, <br />Directorate of Distance EducationKiran.m Gajanurhttps://www.blogger.com/profile/04813151391809171421noreply@blogger.comtag:blogger.com,1999:blog-3901985173139732142.post-72608673864451153362011-07-25T14:10:50.102+05:302011-07-25T14:10:50.102+05:30Want to see Shashidhar bhatt, Ranganath HR, anant...Want to see Shashidhar bhatt, Ranganath HR, ananth chinivar, and ravi belagere, working together in one single news channel.(Is it possible?!) Atleast these people can bring quality to the product they deliver. they have ethics, knowledge, intelligence and responsibility. and more over they are good readers.<br />vandana IthalAnonymousnoreply@blogger.comtag:blogger.com,1999:blog-3901985173139732142.post-65778250102669934042011-07-25T11:44:17.370+05:302011-07-25T11:44:17.370+05:30ಶಶಿಧರ ಭಟ್ಟರ ಮಾತುಗಳಲ್ಲಿ ಸತ್ಯವಿದೆ. ಪತ್ರಿಕೋಧ್ಯಮದಲ್ಲಿ ...ಶಶಿಧರ ಭಟ್ಟರ ಮಾತುಗಳಲ್ಲಿ ಸತ್ಯವಿದೆ. ಪತ್ರಿಕೋಧ್ಯಮದಲ್ಲಿ Critical Insider ಆಗಿ ಗುರುತಿಸಿಕೊಂಡ ಶಶಿಧರ ಭಟ್ಟರದ ಮಾತುಗಳಲ್ಲಿರುವ ವಿಷಾದ ಹಾಗೂ ಭರವಸೆ ಎರಡೂ ಪ್ರಾಮಾಣಿಕ ಎಂದು ನಂಬಲು ನಾನು ಇಷ್ಟಪಡುತ್ತೇನೆ. ನಾವು ಈಗಿರುವ ಕಾಲದ ಮಹಿಮೆ ಹೇಗಿದೆಯೆಂದರೆ ಇಂಥದ್ದೊಂದು ಸ್ವವಿಮರ್ಶೆ ಸಾಧ್ಯವಾಗುವುದೇ ಅತಿ ದೊಡ್ಡ ಪವಾಡ. ಕ್ರಿಯೆಯ ಮಾತು ನಂತರದ್ದು. ಟಿಆರ್ಪಿ ಯನ್ನು ನೆಚ್ಚಿಕೊಂಡೇ ತಮ್ಮೆಲ್ಲಾ ಪತ್ರಿಕೋಧ್ಯಮವನ್ನೂ ಜಾರಿಯಲ್ಲಿಡುವ ಜನರ ನಡುವೆ ನಿಂತು ಶಶಿಧರ ಭಟ್ಟರು ಮಾತನಾಡುತ್ತಿದ್ದಾರೆ. ಮುಂದಿನ ಹತ್ತುವರ್ಷಗಳಲ್ಲಿ ಹೀಗೆ ಮಾತನಾಡುವುದೂ ಅಸಾಧ್ಯವಾದೀತು. <br /><br />ಅರುಣ್ ಕಾಸರಗುಪ್ಪೆAnonymousnoreply@blogger.comtag:blogger.com,1999:blog-3901985173139732142.post-88201474156666747472011-07-24T19:32:47.654+05:302011-07-24T19:32:47.654+05:30What he has achieved by joining samaya? One should...What he has achieved by joining samaya? One should not forget the debackle of Kaveri and suvarnaAnonymousnoreply@blogger.comtag:blogger.com,1999:blog-3901985173139732142.post-7951760401056600052011-07-24T11:46:33.293+05:302011-07-24T11:46:33.293+05:30ಲಾಭದ ದೃಷ್ಟಿಕೋನ ಹೊಂದಿರದ, ದೇಶದ ಹಿತ ಹಾಗೂ ಜನಪರ, ಪ್ರಗತ...ಲಾಭದ ದೃಷ್ಟಿಕೋನ ಹೊಂದಿರದ, ದೇಶದ ಹಿತ ಹಾಗೂ ಜನಪರ, ಪ್ರಗತಿಪರ ಧೋರಣೆಗಳನ್ನು ಹೊಂದಿರುವ ಪರ್ಯಾಯ ಮಾಧ್ಯಮವನ್ನು ಹುಟ್ಟು ಹಾಕುವ ಅನಿವಾರ್ಯತೆ ಇಂದು ಇದೆ. ಈ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರು ಚಿಂತನಶೀಲ ಪತ್ರಕರ್ತರು ಏಕೆ ಯೋಚಿಸುತ್ತಿಲ್ಲ? ಜೀವನೋಪಾಯಕ್ಕಾಗಿ ಬೇರೆ ದೃಢವಾದ ಆಧಾರ ಹೊಂದಿರುವವರು ಈ ಬಗ್ಗೆ ಯೋಚಿಸಬೇಕಾದ ಅಗತ್ಯ ಇದೆ. ಹೀಗಿದ್ದಾಗ ಯಾವುದೇ ಮುಲಾಜಿಲ್ಲದೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪರ್ಯಾಯ ಮಾಧ್ಯಮವನ್ನು ಹುಟ್ಟು ಹಾಕದೆ ಹೋದರೆ ದೇಶದ ಹಾಗೂ ಜನಪರ ಹಿತಗಳ ಪರ ಕೆಲಸ ಮಾಡಲಾಗದ ಸ್ಥಿತಿ ಮುಂದಿನ ದಿನಗಳಲ್ಲಿ ಬರಲಿರುವುದು ಖಚಿತ.Anonymousnoreply@blogger.comtag:blogger.com,1999:blog-3901985173139732142.post-31321135660925307882011-07-24T10:42:02.413+05:302011-07-24T10:42:02.413+05:30ಸಮಯ ಟಿವಿ ಮೊದಲು ಜಾರಕಿಹೊಳಿ ಗಳಿಗೆ ಸೇರಿತ್ತು..ಈಗ ಆ ಚಾನೆ...ಸಮಯ ಟಿವಿ ಮೊದಲು ಜಾರಕಿಹೊಳಿ ಗಳಿಗೆ ಸೇರಿತ್ತು..ಈಗ ಆ ಚಾನೆಲ್ ಯಾರ ಒಡೆತನ ಕ್ಕೆ ಬಂದಿದೆ...? <br />ಜನಶ್ರೀ ಲಾಸ ದಲ್ಲಿ ನಡೆತಿತೆ ಅದನ್ನು ರೆಡ್ಡಿ ಬ್ರ. ಮಾರುವರಿದ್ದರೆ ಎಂಬ ಸುದ್ದಿ ಇತ್ತು ಅದು ಏನಾಯಿತು ..?<br />ರವಿ ಹಾಗು ವಿಶ್ವೇಶ್ವರ್ ನಡುವೆ ಕಂಪ್ರಮೈಸೆ..ಸುದ್ದಿ ಬರುತ್ತಿದೆ..ಇದು ನಿಜವೇ..?<br /><br />ವಿಠಲ್ ರಾವ್ ಕುಲಕರ್ಣಿ ಮಲಖೇಡ್Anonymousnoreply@blogger.comtag:blogger.com,1999:blog-3901985173139732142.post-58581166161797594882011-07-23T19:21:31.743+05:302011-07-23T19:21:31.743+05:30ಮಾಧ್ಯಮ ಲೋಕ ಈಗ ಬಹಳಷ್ಟು ಬದಲಾಗಿದೆ. ಇಲ್ಲಿ ಕೂಡಾ ಭ್ರಷ್ಟಾ...ಮಾಧ್ಯಮ ಲೋಕ ಈಗ ಬಹಳಷ್ಟು ಬದಲಾಗಿದೆ. ಇಲ್ಲಿ ಕೂಡಾ ಭ್ರಷ್ಟಾಚಾರ, ಅನಿಷ್ಠ ಜಾತಿ ಪದ್ಧತಿಯ ಅಂಟು ರೋಗ ಮೊದಲಿಗಿಂತ ವ್ಯವಸ್ಥಿತ ಕಾಯಱಚರಣೆ ನಡೆಸಿದೆ. ಜತೆಗೆ, ಇಲ್ಲಿ ಹಣವೇ ಪ್ರದಾನವಾಗಿದೆ. ಹೀಗಾಗಿ, ಪ್ರಮಾಣಿಕರಿಗೆ, ಜನಪರ ಕಾಳಜಿ ಹೊಂದಿರುವವರಿಗೆ ಮತ್ತು ಇನ್ನೂ ಬದ್ಧತೆ ಉಳಿಸಿಕೊಂಡ ವ್ಯಕ್ತಿಗಳಿಗೆ ಇಲ್ಲಿ ಉಸಿರುಗಟ್ಟುವ ವಾತಾವರಣವಿದೆ.Anonymousnoreply@blogger.comtag:blogger.com,1999:blog-3901985173139732142.post-36738475262688810552011-07-23T18:03:28.421+05:302011-07-23T18:03:28.421+05:30bhattara baraha, abhipraya sariyagi edebhattara baraha, abhipraya sariyagi edeDinesh Patwardhanhttps://www.blogger.com/profile/09000865369796388311noreply@blogger.com