tag:blogger.com,1999:blog-39019851731397321422024-03-10T23:03:17.938+05:30ಸಂಪಾದಕೀಯsampadakeeyahttp://www.blogger.com/profile/10834139994439066030noreply@blogger.comBlogger281125tag:blogger.com,1999:blog-3901985173139732142.post-56034964563859152532012-03-30T11:07:00.002+05:302012-03-30T11:07:44.427+05:30ಕಟ್ಟೆಚ್ಚರ: ನ್ಯೂಸ್ ಚಾನಲ್ಗಳಲ್ಲಿ ಈಗ ಸೆಕ್ಸ್ ವಿಡಿಯೋಗಳು ಪ್ರಸಾರವಾಗುತ್ತವೆ...<div dir="ltr" style="text-align: left;" trbidi="on">
<br />
<b>ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ</b><br />
<br />
ನಮಸ್ಕಾರ,<br />
<br />
<a href="https://blogger.googleusercontent.com/img/b/R29vZ2xl/AVvXsEiY0o6npsHGtsIvq1R8rvkzo6fNvBMrxmequiFVFEWbP99kfxzRrL18tVFwkXA7y7a4JV9oHHK0oGP_GOHDbkYF2jie1wBL02RiIEG1Jmm1ESSfIqZxeL7iF1gMwkzU-EtZ-YVeAz86skLj/s1600/Vishweshwara-Bhat.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="182" src="https://blogger.googleusercontent.com/img/b/R29vZ2xl/AVvXsEiY0o6npsHGtsIvq1R8rvkzo6fNvBMrxmequiFVFEWbP99kfxzRrL18tVFwkXA7y7a4JV9oHHK0oGP_GOHDbkYF2jie1wBL02RiIEG1Jmm1ESSfIqZxeL7iF1gMwkzU-EtZ-YVeAz86skLj/s320/Vishweshwara-Bhat.jpg" width="320" /></a>ಮೊದಲಿಗೆ ಒಂದು ಪತ್ರಿಕೆ ಹಾಗೂ ಟಿವಿವಾಹಿನಿಯೊಂದರ ಸಂಪಾದಕ ಎರಡೂ ಆಗಿರುವ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಇಷ್ಟು ದಿವಸ ಅಶ್ಲೀಲ ಚಿತ್ರಗಳೆಂದರೆ ನಗರಪ್ರದೇಶಗಳ ಹೊರವಲಯದ ಮತ್ತು ಸಣ್ಣಪುಟ್ಟ ಊರುಗಳ ಟೆಂಟುಗಳಲ್ಲಿ ಬೆಳಗಿನ ಪ್ರದರ್ಶನ ಕಾಣುತ್ತಿದ್ದ ಹಸಿಬಿಸಿ ಮಲಯಾಳಂ ಚಿತ್ರಗಳೆಂದೇ ಪ್ರಚಲಿತದಲ್ಲಿತ್ತು. ಆದರೀಗ ಅಶ್ಲೀಲ ಚಿತ್ರಗಳನ್ನು ನೋಡಬೇಕೆಂದರೆ ಅಷ್ಟುದೂರ ಮುಖಮರೆಸಿಕೊಂಡು ಹೋಗುವ ಅಗತ್ಯವಿಲ್ಲ ಸುವರ್ಣನ್ಯೂಸ್ ಚಾನೆಲ್ ನೋಡಿದರೆ ಸಾಕು ಎಂಬ ಧೈರ್ಯವನ್ನು ರಾಜ್ಯದ ಜನರಿಗೆ ರವಾನಿಸಿದ್ದಕ್ಕಾಗಿ ನಿಮ್ಮನ್ನು ನಿಜಕ್ಕೂ ಅಭಿನಂದಿಸಬೇಕು.<br />
<br />
ಎರಡನೆಯದಾಗಿ ಮಾಧ್ಯಮರಂಗದ ಆಳ ಅಗಲಗಳು ಮತ್ತು ಮಾಧ್ಯಮಲೋಕದಲ್ಲಿ ಯಾವುದು ಸರಿ ಯಾವುದು ಸರಿಯಲ್ಲ, ನೈತಿಕತೆ ಮತ್ತು ಅನೈತಿಕತೆಯ ನಡುವಿನ ತೆಳುಗೆರೆಗಳನ್ನು ಪುಂಖಾನುಪುಂಖವಾಗಿ ಬರೆದಿದ್ದೀರಿ, ಬರೆಯುತ್ತಲೂ ಇದ್ದೀರಿ. ಅವುಗಳೆಲ್ಲವನ್ನೂ ನಾವುಗಳೂ ಓದಿದ್ದೇವೆ. ಈಗ ಒಂದು ಪ್ರಶ್ನೆಯೆದ್ದಿದ್ದೆ. ಇಷ್ಟೆಲ್ಲವನ್ನೂ ಬರೆಯುವ ತಾವು, ಇಷ್ಟೆಲ್ಲ ಜಗತ್ತಿನ ವಿವಿಧ ಪತ್ರಿಕೋದ್ಯಮಿಗಳು ಮತ್ತು ಸಾಹಸಿಗ ಪತ್ರಕರ್ತರ ಬಗ್ಗೆ ದಿವೀನಾಗಿ ಬರೆದುಕೊಳ್ಳುವ ನೈತಿಕತೆ ಇವತ್ತು ಸಂತೆಯಲ್ಲಿ ಅರೆಬೆತ್ತಲಾಗಿ ನಿಂತುಕೊಂಡಿದೆ. ಇದೇ ಮಾರ್ಚ್ ೨೯ರ ರಾತ್ರಿ ೧೦ ಗಂಟೆಗೆ ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ತಾವು ಇಲ್ಲಿಯವರೆಗೂ ಹೇಳಿಕೊಂಡು ಬಂದ ಮಾಧ್ಯಮ ನೈತಿಕತೆ ಮತ್ತು ಸಂಹಿತೆಗಳೆರಡರ ಮುಖಕ್ಕೂ ಡಾಂಬರು ಬಳಿಯುವಂತಹ ಒಂದು ಕಂತು ಪ್ರಸಾರವಾಯಿತು.<br />
<br />
ಶಿವಮೊಗ್ಗದ ಕಾಲೇಜು ಯುವತಿಯೊಬ್ಬಳು ತನ್ನ ಪ್ರಿಯಕರನೊಡನೆ ರತಿಕ್ರೀಡೆಯಲ್ಲಿ ತೊಡಗಿದ್ದ ಅಸಹ್ಯ ಹುಟ್ಟಿಸುವ ವಿಡಿಯೋದೃಶ್ಯಗಳು ಯಾವ ಎಡಿಟಿಂಗೂ ಇಲ್ಲದಂತೆ ಹಸಿಹಸಿಯಾಗಿಯೇ ಪ್ರಸಾರವಾಯಿತು. (ವಿಡಿಯೋ ಮಬ್ಬಾಗಿದ್ದರೂ ಆ ಕ್ರಿಯೆಯ ಎಲ್ಲ ಹಂತಗಳೂ ಸುಸ್ಪಷ್ಟವಾಗಿ ಕಾಣಿಸುತ್ತಿದ್ದುದು ನೋಡಿದ ಜನರಿಗೆ ಗೊತ್ತು) ಈ ವಿಡಿಯೋ ತುಣುಕುಗಳು ಶಿವಮೊಗ್ಗೆಯ ಪಡ್ಡೆಹುಡುಗರ ಮೊಬೈಲುಗಳಲ್ಲಿ ಹರಿದಾಡುವುದನ್ನು ನೋಡಿದ ನಿಮ್ಮ ಶಿವಮೊಗ್ಗ ಜಿಲ್ಲಾ ವರದಿಗಾರ ಆ ವಿಡಿಯೋ ಸಂಪಾದಿಸಿ ಅದನ್ನು ಇರುವ ಹಾಗೆಯೇ ಸುವರ್ಣನ್ಯೂಸ್ ಕಚೇರಿಗೆ ತಲುಪಿಸಿದ್ದಾರೆ. ಪ್ರೇಮಸಲ್ಲಾಪದ ವಿಡಿಯೋ ಸೋರಿಕೆಯಾಗಿ ಊರಿನವರ ಮೊಬೈಲಿನಲ್ಲಿ ಹರಿದಾಡುತ್ತಿರುವುದು ಯುವತಿಯ ಗಮನಕ್ಕೂ ಬಂದು ಮಾನಕ್ಕೆ ಅಂಜಿದ ಆಕೆ ಆತ್ಮಹತ್ಯೆಗೆ ಯತ್ನಿಸಿ ಪರವೂರಿನ ಆಸ್ಪತ್ರೆಯೊಂದರಲ್ಲಿ ಸಾವುಬದುಕಿನ ನಡುವೆ ಹೋರಾಡಿ ಜೀವವುಳಿಸಿಕೊಂಡಿದ್ದಾಳೆ. ಪ್ರಸ್ತುತ ಬೆಂಗಳೂರಿನ ಆಕೆಯ ಸಂಬಂಧಿಯೊಬ್ಬರ ಮನೆಯಲ್ಲಿದ್ದಾಳೆ. ಇದು ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದ ಹೂರಣ.<br />
<br />
ಇಂತಹದ್ದೊಂದು ಸೂಕ್ಷ್ಮ ವಿಷಯವನ್ನು ಕಾರ್ಯಕ್ರಮವಾಗಿ ಬದಲಾಯಿಸುವಾಗ ಕಟ್ಟೆಚ್ಚರ ಕಾರ್ಯಕ್ರಮ ತಂಡ ಬಹಳಷ್ಟು ಎಡವಟ್ಟುಗಳನ್ನು ಮಾಡಿಕೊಂಡಿದೆ. ಅವಾಂತರಕ್ಕೆ ಮಾಡಿಕೊಂಡ ಯುವತಿಯ ಫೋಟೋವನ್ನು ಕಣ್ಣು ಮಾತ್ರ ಮರೆಮಾಡಿ ಪ್ರಸಾರವಾಯಿತು, ಆಕೆ ತನ್ನ ಪ್ರಿಯಕರನೊಡನೆ ನಡೆಸಿದ ಸಲ್ಲಾಪದ ಉದ್ರೇಕಕಾರಿ ತುಣುಕುಗಳು ಹೇಗಿವೆಯೋ ಹಾಗೆಯೇ ಪ್ರಸಾರವಾಯಿತು, ಜೊತೆಗೆ ಆಕೆ ಈಗ ಉಳಿದುಕೊಂಡಿರುವ ಬೆಂಗಳೂರಿನ ಸಂಬಂಧಿಗಳ ಮನೆಯ ವಿಳಾಸವನ್ನೂ ಪ್ರಸಾರ ಮಾಡಲಾಯಿತು. ಆಕೆಯ ಸಹಪಾಠಿಗಳನ್ನು ಸಂದರ್ಶನದ ಹೆಸರಿನಲ್ಲಿ ಮಾತನಾಡಿಸಲಾಯಿತು. (ಇವರ ಮುಖವೂ ಸಹ ಮಬ್ಬು ಮಾಡಲಾಗಿಲ್ಲ) ಇಷ್ಟೆಲ್ಲ ವಿವರಗಳನ್ನು ಸೂಕ್ಷ್ಮ ವಿಷಯವೊಂದರ ಮೇಲಿನ ಕಾರ್ಯಕ್ರಮದಲ್ಲಿ ಆಕೆಯ ವಿಳಾಸದ ಸಮೇತ ಹರಿದು ಹಂಚಲಾಯಿತು. ಒಟ್ಟು ಕಾರ್ಯಕ್ರಮವೇ ಆಕೆ ಮಾಡಿದ ಎಡವಟ್ಟಿಗೆ ಆಕೆಯ ಪೋಷಕರನ್ನು ನಡುರಸ್ತೆಯಲ್ಲಿ ಮಾನಕಳೆಯುವುದಕ್ಕಾಗಿಯೇ ರೂಪಿಸಿದಂತಿತ್ತು.<br />
<br />
ಸರಿ ಆಕೆ ಮಾಡಿದ್ದು ಕ್ಷಮೆಗೆ ಅರ್ಹವಲ್ಲದ್ದೇ ಇರಬಹುದು, ಆದರೆ ಆಕೆಯ ಹೆತ್ತವರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ನೆರೆಹೊರೆಯವರು, ಸಂಬಂಧಿಗಳು, ಸಹಪಾಠಿಗಳು ಇವರೆಲ್ಲರೂ ಕಟ್ಟೆಚ್ಚರ ಕಾರ್ಯಕ್ರಮದ ಕಾರಣಕ್ಕೆ, ಇಂಥಹ ಹುಡುಗಿಗೆ ಸಂಬಂಧಿಸಿದವರು ಎಂದು ಸಮಾಜ ಕೆಟ್ಟದಾಗಿ ಮಾತಾಡುವುದನ್ನು ಅದು ಹೇಗೆ ಇವರೆಲ್ಲ ಸಹಿಸಬೇಕು? ಪರೀಕ್ಷೆಯಲ್ಲಿ ಅಂಕ ಕಡಿಮೆ ಎಂದೋ, ರಂಗೋಲಿ ತುಳಿದದ್ದಕ್ಕೆ ಬೈದರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಇಂದಿನ ದಿನಗಳಲ್ಲಿ, ಇವರೆಲ್ಲರನ್ನು ಅಪರಾಧಿಗಳಂತೆ ಕಟಕಟೆಯೊಳಗೆ ತಂದು ನಿಲ್ಲಿಸಿರುವ ಸುವರ್ಣನ್ಯೂಸ್ ಇವರಿಗೆ ಮುಂದಿನ ದಿನಗಳಲ್ಲಿ ಸಮಾಜದಿಂದ ಎದುರಿಸಬೇಕಾದ ಪ್ರಶ್ನೆಗಳು ಮತ್ತು ಮೂದಲಿಕೆಗಳನ್ನು ತಡೆಯಲು ಸಾಧ್ಯವಿದೆಯೇ? ಆ ಸಂಸಾರ ಅವಮಾನವಾಯಿತೆಂದು, ತಲೆ ಎತ್ತಿ ಓಡಾಡಲು ಸಾಧ್ಯವಿಲ್ಲವೆಂದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಹೊಣೆ ಯಾರು?<br />
<br />
ಅದನ್ನು ಪಕ್ಕಕ್ಕಿಡೋಣ, ಉಳಿದೆಲ್ಲದಕಿಂತ ಮೊದಲು ಇದು ಮಾಧ್ಯಮದ ನೈತಿಕತೆಯ ಪ್ರಶ್ನೆ. ಅಶ್ಲೀಲ ಎಮ್ಮೆಮ್ಮೆಸ್ಗಳನ್ನು ಪ್ರಸಾರ ಮಾಡದೆ ಒಂದು ಟಿವಿ ಚಾನೆಲ್ ಬದುಕಲು ಸಾಧ್ಯವೇ ಇಲ್ಲವೇ, ಈ ಹಿಂದೆ ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ಶಾಸಕರ ದೃಶ್ಯಗಳನ್ನು ಪ್ರಸಾರ ಮಾಡಿದ್ದರ ಬಗ್ಗೆ ವಿರೋಧ ವ್ಯಕ್ತವಾದಾಗಲೂ ತಾವು ತೋರಿಸೋದು ತಪ್ಪಾ ಅಂತ ತಮ್ಮ ಅಶ್ಲೀಲ ದೃಶ್ಯ ಪ್ರಸಾರದ ಸಮರ್ಥನೆಗೆ ಅಂಟಿಕೊಂಡಿರಿ. ಬಸ್ ಸ್ಟಾಂಡುಗಳಲ್ಲಿ, ಬುಕ್ಸ್ಟೋರ್ಗಳಲ್ಲಿ ನೇತಾಡುವ ೧೦ ರೂಪಾಯಿಗೆ ಸಿಗುವ ಅಶ್ಲೀಲಚಿತ್ರಗಳ ಕಥೆಗಳ ಅಗ್ಗದ ಪುಸ್ತಕಗಳಿಗೂ ತಾವು ಪದೇಪದೇ ಪ್ರಸಾರಿಸುತ್ತಿರುವ ಅಶ್ಲೀಲ ಎಮ್ಮೆಮ್ಮೆಸ್ ಕಾರ್ಯಕ್ರಮಗಳಿಗೂ ಕಿಂಚಿತ್ತಾದರೂ ವ್ಯತ್ಯಾಸವಿದೆಯೇ? ಹಿಂದೊಮ್ಮೆ ಅಶ್ಲೀಲ ವಿಡಿಯೋಗಳನ್ನು ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವೆಬ್ಸೈಟ್ ಅಡ್ರೆಸ್ಗಳ ಮೂಲಕವೇ ಪ್ರಸಾರ ಮಾಡಿದವರು ನೀವು. ಡಿವಿಡಿ ಅಂಗಡಿಗಳಲ್ಲಿಯೂ ಅಶ್ಲೀಲ ಡಿವಿಡಿಗಳನ್ನು ಮುಜುಗರದಿಂದಲೋ, ಭಯದಿಂದಲೋ ಕದ್ದುಮುಚ್ಚಿ ವಿತರಿಸುವ ಪರಿಪಾಠವಿದೆ. ಅವರಿಗಿರುವ ಕನಿಷ್ಠಮಟ್ಟದ ಭಯವೂ ಸುವರ್ಣನ್ಯೂಸ್ ಸಂಪಾದಕರಾದ ತಮಗಿಲ್ಲ, ರಾಜಾರೋಷವಾಗಿ ಎಗ್ಗುಸಿಗ್ಗಿಲ್ಲದೆ ಬ್ಲೂಫಿಲ್ಮ್ಗಳನ್ನೇ ಪ್ರಸಾರ ಮಾಡಿಬಿಡುತ್ತೀರಿ, ತುಂಬು ಕುಟುಂಬವೊಂದರಲ್ಲಿ ಅಣ್ಣತಂಗಿ, ಅಪ್ಪಮಗಳು ಏನನ್ನೋ ನೋಡಲು ಹೋಗಿ ತಾವು ಪ್ರಸಾರಿಸುತ್ತಿರುವ ಸುಸಂಸ್ಕೃತ ಬ್ಲೂಫಿಲ್ಮ್ಗಳನ್ನೋ, ಅಶ್ಲೀಲ ಎಮ್ಮೆಮ್ಮೆಸ್ ತುಣುಗಳನ್ನೋ ಅಕಸ್ಮಾತ್ ನೋಡಿದರೂ ಆಗುವ ಮುಜುಗರ ಕಸಿವಿಸಿಯಿದೆಯಲ್ಲ.. ಬಹುಶಃ ಅದರ ಅನುಭವ ತಮಗೆ ಆದಂತಿಲ್ಲ. ಮಾನ ಮರ್ಯಾದೆಯಿರುವ ಜನಕ್ಕೆ ಮುಖಮುಚ್ಚಿಕೊಂಡು ಎದ್ದು ಹೋಗಬೇಕೆನಿಸುತ್ತದೆ.<br />
<br />
<a href="https://blogger.googleusercontent.com/img/b/R29vZ2xl/AVvXsEjbDYzSFBcaorItUKhfup8e44OJkzKNmh5j1BU2VAWPRDdvGOORjBgQmfS77zFSx-BbDAniH5_A5NHawmPriH5imzybCUgfb4Ez5SXJ0CPJ-pCMEswKwAhoveiFaarzz7ca1L3tbjmTmuAr/s1600/02.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="199" src="https://blogger.googleusercontent.com/img/b/R29vZ2xl/AVvXsEjbDYzSFBcaorItUKhfup8e44OJkzKNmh5j1BU2VAWPRDdvGOORjBgQmfS77zFSx-BbDAniH5_A5NHawmPriH5imzybCUgfb4Ez5SXJ0CPJ-pCMEswKwAhoveiFaarzz7ca1L3tbjmTmuAr/s320/02.jpg" width="320" /></a>ತಾವು ಕನ್ನಡಪ್ರಭ ಪತ್ರಿಕೆಗೂ ಸಂಪಾದಕರು. ಅದರಲ್ಲಿ ಬರೆಯುವ ಅಂಕಣಕಾರರೂ ಸೇರಿದಂತೆ ಹಲವಾರು ಬರಹಗಾರರಿಂದ ಭಾರತೀಯ ಸಂಸ್ಕೃತಿ ಪರಂಪರೆ ನೈತಿಕತೆಯ ಬಗ್ಗೆ ಬರೆಸುತ್ತೀರಿ. ಇನ್ನೊಂದು ಕಡೆಯಲ್ಲಿ ಈ ವಿಷಯಗಳಿಗೆ ತದ್ವಿರುದ್ಧವಾಗಿರುವ ಕಾಮಕೇಳಿಗಳನ್ನು ಯಾವ ಅಂಜಿಕೆಯೂ ಇಲ್ಲದೆ ಪ್ರಸಾರ ಮಾಡುತ್ತೀರಿ, ಜನ ನೋಡುತ್ತಾರೆ ಟಿಆರ್ಪಿ ಬರುತ್ತದೆ ಎಂದು ಕಂಡಕಂಡದ್ದನ್ನೆಲ್ಲ ಪ್ರಸಾರ ಮಾಡುವುದಾದರೆ ನೇರವಾಗಿ ಒಂದು ಅಶ್ಲೀಲ ಟಿವಿವಾಹಿನಿಯನ್ನೇ ತಾವು ಧೈರ್ಯವಾಗಿ ಪ್ರಾರಂಭಿಸುವುದು ಒಳ್ಳೆಯದು. ಅಂತರ್ಜಾಲದಲ್ಲಿ ಅಶ್ಲೀಲ ಎಮ್ಮೆಮ್ಮೆಸ್ಸುಗಳಿಗೇನೂ ಕೊರತೆಯಿಲ್ಲ, ತಮ್ಮ ಚಾನೆಲ್ನ ಟಿಆರ್ಪಿಗೂ ಜಾಹಿರಾತಿಗೂ ಈ ಎಮ್ಮೆಮ್ಮೆಸ್ಸುಗಳಿಂದ ಇನ್ನಷ್ಟು ಒಳ್ಳೆಯದಾಗುತ್ತದೆ. ಸುವರ್ಣನ್ಯೂಸ್ ಚಾನೆಲ್ ಸದ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರೀತಿ ಮತ್ತು ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಮೇಲೆ ತಮಗೆ ಹಿಡಿತವೇ ಇದ್ದಂತಿಲ್ಲ, ಅಥವಾ, ಆ ಅಧಿಕಾರವನ್ನು ಚಾನೆಲ್ ಮಾಲೀಕರು ತಮಗೆ ಕೊಟ್ಟೇ ಇಲ್ಲ, ಬದಲಾಗಿ ಡಮ್ಮಿ ಸಂಪಾದಕರಂತೆ ತಾವು ಕುರ್ಚಿಯಲ್ಲಿ ಕುಳಿತಿರಬಹುದೇ? ಎಂಬ ಅನುಮಾನಗಳು ಬರುತ್ತಿವೆ. ಏಕೆಂದರೆ ತಾವು ಕನ್ನಡಪ್ರಭದಲ್ಲಿ ಸುಸಂಸ್ಕೃತರಂತೆ ಆಡುವುದು ಒಂದು, ಸುವರ್ಣನ್ಯೂಸ್ನಲ್ಲಿ ಅಪಾಪೋಲಿಗಳಂತೆ ಮಾಡುತ್ತಿರುವುದು ಇನ್ನೊಂದು.<br />
<br />
ಪ್ರಸ್ತುತ ವಿಷಯಕ್ಕೆ ಮರುಳುವುದಾದರೆ ಆ ಯುವತಿಯ ಪೋಷಕರನ್ನು ನಡುಬೀದಿಯಲ್ಲಿ ನೀವು ಇವತ್ತು ತಂದು ನಿಲ್ಲಿಸಿರುವಂತೆಯೇ ತಾವೂ ಹಿಂದೊಮ್ಮೆ ಇದ್ದ ಕೆಲಸದಿಂದ ಹೊರದಬ್ಬಿಸಿಕೊಂಡು ನಡುಬೀದಿಯಲ್ಲೇ ನಿಂತಿದ್ದೀರಿ. ಆವತ್ತು ಇದೇ ಜಗತ್ತು ತಮ್ಮತ್ತ ತೂರಿದ ಕಲ್ಲುಗಳ ಸೈಜು ಎಂಥವು ಎಂಬುದು ತಮಗೂ ಗೊತ್ತು. ಅಂತಹ ಅವಮಾನವನ್ನು ಸಹಿಸಿದವರು ತಾವು. ಆ ನೆನಪಿನ ನೈತಿಕತೆ ತಮಗೆ ಇದ್ದಿದ್ದರೆ ಇವತ್ತು ಶಿವಮೊಗ್ಗದ ಒಂದು ಕುಟುಂಬವನ್ನು ಇವತ್ತು ಮೂರಾಬಟ್ಟೆಯಾಗುವಂತೆ ಮಾನ ಕಳೆಯುತ್ತಿರಲಿಲ್ಲ. ಕೈಯಿಟ್ಟಲ್ಲೆಲ್ಲ ಸುದ್ದಿ ಸಿಗುವ, ಸರ್ಕಾರಿ ಇಲಾಖೆಗಳ ಹಗರಣಗಳು ಕಾಲುಕಾಲಿಗೇ ತೊಡರುತ್ತಿರುವ ಈ ಸಮಯದಲ್ಲಿ ತಮ್ಮ ಹಾರ್ಡ್ಕೋರ್ ವರದಿಗಾರರು ಆ ಎಲ್ಲವನ್ನೂ ಬಿಟ್ಟು ಸುಲಭಕ್ಕೆ ಕೈಗೆ ಸಿಗುವ ಅಶ್ಲೀಲ ಎಮ್ಮೆಮ್ಮೆಸ್ಸುಗಳ ಹಿಂದೇಕೆ ಬೀಳುವಷ್ಟು ಸೋಮಾರಿಗಳಾಗಿದ್ದಾರೆ ಎಂಬುದು ತಮ್ಮ ಅರಿವಿಗೆ ಯಾಕೋ ಬರುತ್ತಲೇ ಇಲ್ಲ. ಈ ಎಮ್ಮೆಮ್ಮೆಸ್ಸುಗಳನ್ನು ನೋಡಿ ಯಾರಿಗೇನು ಆಗಬೇಕಿದೆ, ಇವನ್ನು ತೋರಿಸಿ ಯಾರಿಗೆ ಎಂಥಹ ಸಂದೇಶ ಕೊಡುವ ಘನಕಾರ್ಯ ಮಾಡುತ್ತಿದ್ದಿರೋ ನಮಗೆ ಗೊತ್ತಿಲ್ಲ. ಹೀಗೆಲ್ಲ ದುಡ್ಡು ದುಡಿಯಬೇಕೇ ವಿಶ್ವೇಶ್ವರ ಭಟ್ಟರೆ?<br />
<br />
ಕಟ್ಟೆಚ್ಚರ ಕಾರ್ಯಕ್ರಮದ ಅಧ್ವಾನಗಳಾದರೂ ಎಂಥವು, ಬೆಳಗ್ಗೆಹೊತ್ತು ಬ್ರೇಕ್ಫಾಸ್ಟ್ ನ್ಯೂಸ್ನಲ್ಲಿ ಕೈ ಮುಗಿಯಬೇಕೆನ್ನಿಸುವಷ್ಟು ಸಂಭಾವಿತರಾಗಿ ಕಾಣಿಸಿಕೊಳ್ಳುವ ಜಯಪ್ರಕಾಶಶೆಟ್ಟರು ರಾತ್ರಿಯಾದರೆ ಸಾಕು ಕಟ್ಟೆಚ್ಚರದೊಳಗೆ ಜಾತ್ರೆಯಲ್ಲಿ ಟೋಪಿ ಮಾರುವವರಂತೆ ಹಾಸ್ಯಾಸ್ಪದ ಪೋಷಾಕಿನಲ್ಲಿ ಕರೆಂಟು ಹೊಡೆಸಿಕೊಂಡವರಂತೆ ಮೈಕೈ ಬಳುಕಿಸುತ್ತ ಆಗಾಗ ಕೂಗಾಡುತ್ತ ಆಂಕರಿಂಗ್ ಮಾಡುತ್ತಿರುತ್ತಾರೆ. ಅವರ ಮಾತಿನ ಶೈಲಿ ಮತ್ತು ಐಟಂಸಾಂಗ್ ಶೈಲಿಯ ಅವರ ಆಂಕರಿಂಗ್ ನಗೆಪಾಟಲಲ್ಲದೆ ಇನ್ನೇನೂ ಅಲ್ಲ, ಶಿವಮೊಗ್ಗದ ಯುವತಿಯ ಎಪಿಸೋಡಿನ ಸ್ಕ್ರಿಪ್ಟನ್ನು ಸಹನಾಭಟ್ ಎಂಬ ಸ್ತ್ರೀ ಬರೆಯುತ್ತಾರೆ ಅಂದರೆ ವಾಕರಿಕೆ ಹುಟ್ಟುತ್ತದೆ. ಕೆಲಸಮರೆತ ಜಿಲ್ಲಾ ವರದಿಗಾರನೊಬ್ಬ ಎಂಥದೋ ಎಬಡೇಶಿ ಎಮ್ಮೆಮ್ಮೆಸ್ ಕಳಿಸಿದೆಂದ ಮಾತ್ರಕ್ಕೆ ಅದನ್ನು ಪ್ರಸಾರಿಸಬೇಕೇ ಬೇಡವೇ, ನೈತಿಕತೆಯೇ ಅನೈತಿಕತೆಯೇ ಎಂಬ ವಿವೇಚನೆಯೂ ಇಲ್ಲದಷ್ಟು ಒಬ್ಬ ಟಿವಿ ಚಾನೆಲ್ಲಿನ ಸಂಪಾದಕ ಎಮ್ಮೆಚರ್ಮದವರಾಗಿ ಹೋದರೆ ಏನೇನೆಲ್ಲ ಅನಾಹುತಗಳಾಬೇಕೋ ಅವೆಲ್ಲವೂ ಸುವರ್ಣನ್ಯೂಸಿನಲ್ಲಿ ಇವತ್ತು ಆಗುತ್ತಿವೆ. ಸುವರ್ಣನ್ಯೂಸಿನ ಬದಲು ಎಫ್ ಚಾನೆಲ್ ನೋಡುವುದು ಒಳಿತು ಎಂಬ ಮಟ್ಟಿಗೆ ಜೋಕುಗಳು ಹುಟ್ಟಿಕೊಂಡಿವೆ. ತಮಗೆ ತಮ್ಮ ಜನಪರ ನ್ಯೂಸುಗಳ ಪ್ರಸಾರದಿಂದ ಕರ್ನಾಟಕವನ್ನು ಉದ್ದಾರ ಮಾಡಿಬಿಡುವ ಸಾಹಸ ಬೇಡವಾಗಿದ್ದಾಗ ಮಾತ್ರ ಮದನಾರಿಯಂತಹ ಅಡ್ಡಕಸುಬಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಒಂದುಕಾಲದಲ್ಲಿ ಜನ ನೋಡುತ್ತಾರೆ ಅಂತ ಕೇರಳದ ಚಿತ್ರರಂಗದಲ್ಲಿ ತನ್ನ ಉಬ್ಬುತಗ್ಗುಗಳನ್ನು ತೋರಿಸಿಕೊಂಡು ಅಶ್ಲೀಲಚಿತ್ರಗಳಲ್ಲಿ ನಟಿಸಿದ ನಟಿಯೊಬ್ಬಳಿಗೂ... ಎಮ್ಮೆಮ್ಮೆಸ್ಸು, ಬ್ಲೂಫಿಲ್ಮ್, ಮದನಾರಿಗಳ ಹಿಂದೆ ಬಿದ್ದಿರುವ ತಮಗೂ ನಡುವೆ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಎರಡರಲ್ಲೂ ದುಡ್ಡೇ ಪ್ರಮುಖವಾಗಿದೆ.<br />
<br />
ಕೊನೆಗೆ ವಿಶ್ವೇಶ್ವರ ಭಟ್ಟರಲ್ಲಿ ಒಂದು ಮನವಿ, ನೀವು ಕನ್ನಡಪ್ರಭದ ಅಂಕಣಕಾರನ್ನು ಸುವರ್ಣನ್ಯೂಸ್ ಟಾಕ್ ಶೋಗಳ ಅತಿಥಿಗಳನ್ನಾಗಿಯೂ, ಈ ಚಾನೆಲ್ಲಿನ ಚಿಳ್ಳೆಪಿಳ್ಳೆ ವರದಿಗಾರರನ್ನು ಕನ್ನಡಪ್ರಭದ ಅಂಕಣಕಾರನ್ನಾದರೂ ಮಾಡಿಕೊಳ್ಳಿ. ಈ ಅಧ್ವಾನಗಳನ್ನು ಟಿವಿ ನೋಡುವ ಮಂದಿ ಹೇಗಾದರೂ ಸಹಿಸಬಲ್ಲರು, ಆದರೆ ಕಾಮ, ಸೆಕ್ಸು. ಹೆಂಗಸಿನ ಉಬ್ಬುತಗ್ಗುಗಳ ಮೇಲೆ ಬೀಳುವ ಚಿಲ್ಲರೆ ಕಾಸುಗಳನ್ನು ಆಯ್ದುಕೊಳ್ಳುತ್ತಿರುವ ಈ ನೀಚತನವಿದೆಯಲ್ಲ, ಅದನ್ನು ಮಾನವಂತರಾರೂ ಸಹಿಸುವುದಿಲ್ಲ. ಈಗಾಗಲೇ ತಮ್ಮ ಚಾನೆಲ್ಲಿನ ನಗೆಪಾಟಲು ಕಾರ್ಯಕ್ರಮವಾದ ಕಟ್ಟೆಚ್ಚರದಲ್ಲಿ ಶಿವಮೊಗ್ಗದ ಎಮ್ಮೆಮ್ಮೆಸ್ ಕಾರ್ಯಕ್ರಮದ ಬಗ್ಗೆ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್ಗೆ ಆನ್ಲೈನ್ ದೂರುಗಳು ಲೋಡುಗಟ್ಟಲೆ ತಲುಪುತ್ತಿವೆ. ೩೦ರ ಶನಿವಾರದಂದು ಕಾರ್ಯಕ್ರಮದ ೨ನೇ ಭಾಗದಲ್ಲಿ ಇನ್ನೆಷ್ಟು ಅಸಹ್ಯ ಎಮ್ಮೆಮ್ಮೆಸ್ ತುಣುಕುಗಳನ್ನು ಪ್ರಸಾರ ಮಾಡಲು ಸಿದ್ದವಿದ್ದೀರೋ ಗೊತ್ತಿಲ್ಲ. ದಯವಿಟ್ಟು ಈ ೨ನೇ ಕಂತನ್ನು ಪ್ರಸಾರಿಸದಿರಿ. ತಮ್ಮ ಕಾರ್ಯಕ್ರಮದ ವಿಡಿಯೋ ಅನ್ನು ಗೆಳೆಯರನೇಕರು ಮೊಬೈಲಿನಲ್ಲಿ ಶೂಟ್ ಮಾಡಿಟ್ಟುಕೊಂಡಿದ್ದಾರೆ. ಐಬಿಎಫ್ ನಿರ್ಬಂಧಿಸಿರುವ ಅಷ್ಟನ್ನೂ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ಉಲ್ಲಂಘಿಸಿದ್ದೀರಿ, ಅದಕ್ಕೆ ಸಾಕ್ಷಿಯೂ ಇದೆ. ಯಾವಾಗ ಬೇಕಾದರೂ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್ನಿಂದ ತಮ್ಮ ಕಛೇರಿಗೆ ನೊಟೀಸ್ ಬರಬಹುದು.<br />
<br />
ಪತ್ರಕರ್ತನೊಬ್ಬನಿಗೆ ಜನಪರವಾದ, ಜನೋಪಯೋಗಿ ಸುದ್ದಿಗಳನ್ನಷ್ಟೇ ಜನರಿಗೆ ತಲುಪಿಸುವ ಉತ್ಸಾಹವಿರಬೇಕೇ ಹೊರತು ಜನ ನೋಡುತ್ತಾರೆ ಎಂಬ ಧಾವಂತದಲ್ಲಿ ಸೆಕ್ಸ್ಬುಕ್ಕಿನ ರೇಂಜಿನ ಕಾರ್ಯಕ್ರಮಗಳನ್ನು ಬ್ಲೂಫಿಲ್ಮುಗಳನ್ನೂ, ಅಶ್ಲೀಲ ಎಮ್ಮೆಮ್ಮೆಸ್ಸುಗಳನ್ನೂ ಪ್ರಸಾರ ಮಾಡುವ ತಮ್ಮ ಕೊಳಕು ಅಭಿರುಚಿಯನ್ನು ಪ್ರದರ್ಶಿಸುವುದಲ್ಲ. ಏಕೆಂದರೆ ನೋಡುವ ಮಾನವಂತರು ವರದಿಗಾರನನ್ನು ವಿಮರ್ಶಿಸುವುದಕ್ಕಿಂತ ಹೆಚ್ಚಾಗಿ ಇಂಥದ್ದನ್ನ ಪ್ರಸಾರ ಮಾಡೋಕೆ ಅನುಮತಿ ಕೊಟ್ಟ ಎಡಿಟರ್ ಏನು ದನಾ ಮೇಯಿಸ್ತಾ ಇದ್ದನಾ ಅಂತ ಮುಲಾಜಿಲ್ಲದೇ ಬೈದುಬಿಡುತ್ತಾರೆ. ಇದಕ್ಕಾದರೂ ತಮ್ಮ ಅಭಿರುಚಿ ಉಬ್ಬುತಗ್ಗುಗಳ ಆಚೀಚೆಗೆ ವಿಸ್ತರಿಸಲೆಂಬ ಆಶಯ ಟಿವಿ ನೋಡುಗರದ್ದು. ಅರ್ಥ ಮಾಡಿಕೊಳ್ಳುತ್ತೀರೆಂಬ ನಂಬುಗೆಯೊಂದಿಗೆ.<br />
<br />
ಪ್ರೀತಿಯಿಂದ<br />
<br />
<b>-ಟಿ.ಕೆ. ದಯಾನಂದ</b><br />
</div>sampadakeeyahttp://www.blogger.com/profile/10834139994439066030noreply@blogger.com17tag:blogger.com,1999:blog-3901985173139732142.post-75283906688975247432012-03-05T18:36:00.001+05:302012-03-05T18:36:56.908+05:30ನಮ್ಮ ಮೀಡಿಯಾ ತೋರಿಸದ ಕೆಲವು ದೃಶ್ಯಗಳು ಇಲ್ಲಿವೆ ನೋಡಿ...<div dir="ltr" style="text-align: left;" trbidi="on">
<br />
<iframe allowfullscreen="" frameborder="0" height="390" src="http://www.youtube.com/embed/Afl63CVfXUg" width="580"></iframe><br />
ಕರ್ನಾಟಕದ ಇತಿಹಾಸದಲ್ಲಿ ಮಾರ್ಚ್ ೨ ಕರಾಳ ನೆನಪುಗಳನ್ನು ಉಳಿಸಿಹೋಗಿದೆ. ಮಾಧ್ಯಮದವರ ಮೇಲೆ ಕೆಲನ್ಯಾಯವಾದಿಗಳ ಗೂಂಡಾಗಿರಿ. ನಂತರ ನ್ಯಾಯವಾದಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಈಗ ಮುಗಿದುಹೋದ ಕಹಿ ಅಧ್ಯಾಯ. ಮಾಧ್ಯಮ ಮಂದಿಯ ಮೇಲೆ ನಡೆದ ಭೀಕರ ಹಲ್ಲೆಯ ದೃಶ್ಯಗಳನ್ನು ನಾವು ಎಲ್ಲ ನ್ಯೂಸ್ ಚಾನಲ್ ಗಳಲ್ಲೂ ನೂರಾರು ಬಾರಿ ನೋಡಿದ್ದೇವೆ, ಇನ್ನೂ ನೋಡುತ್ತಲೇ ಇದ್ದೇವೆ. ಆದರೆ ಎರಡನೇ ಹಂತದಲ್ಲಿ ನ್ಯಾಯವಾದಿಗಳ ಮೇಲೆ ನಡೆದ ದೌರ್ಜನ್ಯದ ದೃಶ್ಯಗಳನ್ನು ಎಲೆಕ್ಟ್ರಾನಿಕ್ ಮೀಡಿಯಾ ತೋರಿಸುವ ಧೈರ್ಯ ಪ್ರದರ್ಶಿಸಲಿಲ್ಲ. ಹೀಗಾಗಿ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವು ವಕೀಲರುಗಳು ತಮ್ಮ ಮೊಬೈಲುಗಳಲ್ಲಿ ಹಿಡಿದ ಚಿತ್ರಗಳನ್ನೇ ಸಂಗ್ರಹಿಸಿ ಅಡ್ವೊಕೇಟ್ ಬೆಂಗಳೂರು ಎಂಬ ಹೆಸರಿನಲ್ಲಿ ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ. ವಾಯ್ಸ್ ಓವರ್ ನಲ್ಲಿ ಹೇಳಲಾಗುವ ಮಾಹಿತಿಗಳಲ್ಲಿ ಉತ್ಪ್ರೇಕ್ಷೆ ಇದೆ ಎಂದು ನಿಮಗನ್ನಿಸಬಹುದು. ಆದರೆ ವಿಡಿಯೋ ನಿಜಕ್ಕೂ ಭಯಾನಕವಾಗಿದೆ, ಆಘಾತಕಾರಿಯಾಗಿದೆ. ಅದು ಎಲ್ಲದಕ್ಕೂ ಸಾಕ್ಷಿ ಹೇಳುತ್ತಿದೆ. ಇಷ್ಟಾಗಿಯೂ ಈ ದ್ವೇಷ, ರೊಚ್ಚು, ಸೇಡು ಎಲ್ಲ ಮುಗಿದುಹೋಗಲಿ, ದೌರ್ಜನ್ಯಕ್ಕೆ ಒಳಗಾದ ಪತ್ರಕರ್ತ, ನ್ಯಾಯವಾದಿ ಮತ್ತು ಪೊಲೀಸರಿಗೆ ನ್ಯಾಯ ದೊರಕಲಿ ಎಂದು ಆಶಿಸುವುದಷ್ಟೆ ನಮ್ಮ ಈ ಕ್ಷಣದ ವಿನಂತಿ.<br />
</div>sampadakeeyahttp://www.blogger.com/profile/10834139994439066030noreply@blogger.com13tag:blogger.com,1999:blog-3901985173139732142.post-90697596090490763542012-03-04T22:52:00.004+05:302012-03-04T22:52:54.768+05:30ಪತ್ರಕರ್ತರು, ವಕೀಲರು ಆಯಾ ಸಮುದಾಯವನ್ನಷ್ಟೇ ಪ್ರತಿನಿಧಿಸುವುದಿಲ್ಲ, ಅದು ವೃತ್ತಿಧರ್ಮವೂ ಅಲ್ಲ....<div dir="ltr" style="text-align: left;" trbidi="on">
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiCrizL_9aqRF2eeNJAjPDzs6UlPM-PacDYhJ82SmKFxxVkgkJ7M_B9P-pkHlDQBBnbKBBUjO4qEgs0MdwcBtVECWb7AIMb3y0WY6eJ4YxcSs4RroAo0O3Va-7EK427bVedTcNi07W89CTy/s1600/media.jpg" imageanchor="1" style="margin-left: 1em; margin-right: 1em;"><img border="0" height="328" src="https://blogger.googleusercontent.com/img/b/R29vZ2xl/AVvXsEiCrizL_9aqRF2eeNJAjPDzs6UlPM-PacDYhJ82SmKFxxVkgkJ7M_B9P-pkHlDQBBnbKBBUjO4qEgs0MdwcBtVECWb7AIMb3y0WY6eJ4YxcSs4RroAo0O3Va-7EK427bVedTcNi07W89CTy/s400/media.jpg" width="400" /></a></div>
ಯುದ್ಧ ಹೆಚ್ಚು ದೀರ್ಘವಾದಷ್ಟೂ ಉಭಯ ಪಂಗಡಗಳಿಗೂ ಸಾವು ನೋವು ಖಾತರಿ. ಹಾಗಾಗಿ ಯುದ್ಧವನ್ನು ಹೆಚ್ಚು ಕಾಲ ಮುಂದುವರೆಸಲಾಗುವುದಿಲ್ಲ. ರಕ್ತ-ಗಾಯಗಳು ಕಾಣಿಸಿದ ಮೇಲೆ ಯುದ್ಧಪೂರ್ವದ ತೇಜಸ್ಸೂ, ಆವೇಶವೂ ಹಾಗೇ ಉಳಿದಿರುವುದಿಲ್ಲ. ವಕೀಲರು-ಪತ್ರಕರ್ತರ ಸಂಘರ್ಷದಲ್ಲಿ ಮರೆತ ಮಾನವೀಯತೆಯನ್ನು ಹುಡುಕಿಕೊಳ್ಳಲೇಬೇಕು. ಎಲ್ಲಾದರೂ ಈ ಅಸಹನೀಯ ದ್ವೇಷದ ವಾತಾವರಣವನ್ನು ತಿಳಿಗೊಳಿಸುವ ಕಾರ್ಯ ಯಾರಿಂದಾದರೂ ನಡೆಯಲೇಬೇಕು. ಅದು ಆರಂಭವಾಗಿದೆ. ನಾಳೆ ವಕೀಲರ ಪ್ರತಿಭಟನೆ. ಅದು ಮತ್ತೆ ಈ ಸಂಘರ್ಷವನ್ನು ತಾರಕಕ್ಕೆ ತೆಗೆದುಕೊಂಡು ಹೋಗುತ್ತದಾ? ಅಥವಾ ಆ ಕಡೆಯಿಂದನೂ ಬಿಳಿ ಪಾರಿವಾಳಗಳು ಹಾರಬಹುದಾ? ಕಾದು ನೋಡಬೇಕು. ನಾಳೆ ಪತ್ರಕರ್ತರ ದೊಡ್ಡಮಟ್ಟದ ಪ್ರತಿಭಟನೆಯೂ ನಡೆಯಲಿದೆ. ಅಲ್ಲಿ ಹಿರಿಯ ಪತ್ರಕರ್ತರು ಒಂದಷ್ಟು ವಿವೇಕದ ಮಾತನಾಡಬಹುದಾ? ಕಾದುನೋಡಬೇಕು.<br />
<br />
ಇದಕ್ಕೂ ಮುನ್ನವೇ ತಿಳಿಗೊಳಿಸುವ ಪ್ರಯತ್ನವನ್ನು ಮೊದಲು ಆರಂಭಿಸಿದ್ದು ಸಮಯ ಟಿವಿ. ಇತರ ಚಾನಲ್ಲುಗಳು ರೋಷಾವೇಶದಲ್ಲಿ ಕುದಿಯುತ್ತಿದ್ದಾಗಲೇ ಸಮಯ ಟಿವಿ ಯಾಕೆ ಹಿಂಗಾಯ್ತು ಎಂಬ ಚರ್ಚೆ ನಡೆಸಿ ಆತ್ಮಶೋಧನೆಗೆ ದಾರಿ ಮಾಡಿಕೊಟ್ಟಿತು. ಮೂವರು ವಕೀಲರು, ಇಬ್ಬರು ಪತ್ರಕರ್ತರು ಮತ್ತು ಓರ್ವ ಮಾಜಿ ಪೊಲೀಸ್ ಅಧಿಕಾರಿಯ ಜತೆ ಸಮಯದ ನಿರ್ದೇಶಕ ಶಿವಪ್ರಸಾದ್ ಚರ್ಚೆ ನಡೆಸಿದರು.<br />
<br />
ಒಂದು ಬಹುಮುಖ್ಯ ವಿಷಯವೆಂದರೆ ನೀವು ನನ್ನ ಪ್ರಶ್ನೆಗಷ್ಟೇ ಉತ್ತರ ಕೊಡಬೇಕು, ಉತ್ತರ ಕೊಡುವಾಗಲೂ ನನಗೆ ಅಹಿತವೆನಿಸಿದ್ದನ್ನು ಹೇಳಕೂಡದು, ನನಗೆ ಬೇಡದ ಉತ್ತರ ಬಂದರೆ ನಿಮಗೆ ಮಾತನಾಡಲು ಬಿಡುವುದಿಲ್ಲ ಎಂಬ ಕೆಲವು ಟಿಪಿಕಲ್ ನಿರೂಪಕರ ಹಾಗೆ ಅವರು ಚರ್ಚೆ ನಡೆಸಲಿಲ್ಲ. ಎಲ್ಲರಿಗೂ ಅವರ ಪಾಡಿಗೆ ಅವರು ಮಾತನಾಡಲು ಬಿಟ್ಟರು. ಹಿರಿಯ ವಕೀಲ ದೊರೆರಾಜು ಸ್ವಲ್ಪ ಭಾವುಕರಾದಂತೆ ಕಂಡರೂ ತಮಗೆ ಹೇಳಬೇಕೆನಿಸಿದ್ದನ್ನು ಎಗ್ಗಿಲ್ಲದೆ ಹೇಳಿದರು. ಡಾ. ಸಿ.ಎಸ್.ದ್ವಾರಕಾನಾಥ್ ಸಹ ಘಟನೆಯ ಎಲ್ಲ ಮಗ್ಗುಲುಗಳನ್ನು ವಿವರಿಸಿದರು. ಪತ್ರಕರ್ತರ ಮೇಲೆ ದಾಳಿ ನಡೆಸಿದವರನ್ನು ನೇಣು ಹಾಕಿ, ನಮ್ಮ ಅಭ್ಯಂತರವಿಲ್ಲ. ಆದರೆ ಇಡೀ ವಕೀಲ ಸಮುದಾಯವನ್ನು ಗೂಂಡಾಗಳೆಂದು ಕರೆಯಬೇಡಿ ಎಂದು ಅವರು ಹೇಳಿದರು.<br />
<br />
ಕೋರ್ಟ್ ಒಳಗೆ ಪೊಲೀಸರು ವಕೀಲರ ಮೇಲೆ ನಡೆಸಿದ ದೌರ್ಜನ್ಯವನ್ನು ಕವರ್ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಒಳಗೆ ಮೀಡಿಯಾ ಕ್ಯಾಮೆರಾಗಳು ಇಲ್ಲದೇ ಇದ್ದಿದ್ದು ಎಂದು ಪತ್ರಕರ್ತ ರಾಜಾ ಶೈಲೇಶ್ ಚಂದ್ರ ಗುಪ್ತ ಬಾಲಿಷ ಸಮರ್ಥನೆ ನೀಡಿದಾಗ ದ್ವಾರಕಾನಾಥ್ ನೀಡಿದ ಉತ್ತರ: ಸುದ್ದಿ ಮಾಡುವುದಕ್ಕೆ ಕ್ಯಾಮೆರಾ ಬೇಕು ಎಂದೇನೂ ಇಲ್ಲ. ಕಣ್ಣು ಇರಬೇಕು, ಹೃದಯ ಇರಬೇಕು, ಮನಸ್ಸು ಇರಬೇಕು...<br />
<br />
ಇದಾದ ತರುವಾಯ ಎಲ್ಲ ಚಾನಲ್ಗಳಲ್ಲೂ ಒರಟಾಟದ ಧ್ವನಿ ಗಣನೀಯವಾಗಿ ತಗ್ಗಿದ್ದನ್ನು ಗಮನಿಸಬಹುದು. ಭಾಷೆಯಲ್ಲಿ ಸ್ವಲ್ಪ ಸೌಮ್ಯತೆ ಕಾಣಿಸಿತು. ಗಲಭೆಯ ದಿನ ಸೈನಿಕರನ್ನು ಹುರಿದುಂಬಿಸುವ ಸೇನಾಧಿಪತಿಯಂತೆ ಮಾತನಾಡುತ್ತಿದ್ದ ಪಬ್ಲಿಕ್ ಟಿವಿಯ ರಂಗಣ್ಣನ ಧ್ವನಿಯಲ್ಲೂ ಒಂಚೂರು ಸೌಮ್ಯತೆ ಕಾಣಿಸಿದ್ದನ್ನು ನೀವು ಗಮನಿಸಿರಬಹುದು. ಪೊಲೀಸರು ಬಿಡುಗಡೆ ಮಾಡಿದ ಆರೋಪಿಗಳ ಪಟ್ಟಿಯನ್ನು ಅಪರಾಧಿಗಳ ಪಟ್ಟಿ ಎಂಬಂತೆಯೇ ಘೋಷಿಸುತ್ತಿದ್ದ ಸುವರ್ಣನ್ಯೂಸ್ನಲ್ಲೂ ಕೊಂಚ ಅಬ್ಬರದ ಧ್ವನಿ ತಗ್ಗಿದಂತಿತ್ತು.<br />
<br />
ಉದಯವಾಣಿ ಪತ್ರಿಕೆ ಇವತ್ತು ಘಟನೆಗೆ ಇರುವ ಮೂರು ಆಯಾಮಗಳನ್ನು ವಿವರಿಸಿ ತನ್ನ ಅಗ್ರ ಸುದ್ದಿ ಪ್ರಕಟಿಸಿತು. ಅದೂ ಕೂಡ ರಣಭೂಮಿಯಲ್ಲಿ ಒಂದು ಹೆಜ್ಜೆ ಹಿಂದಿಟ್ಟ ಸೇನಾಪಾಳಯದ ಲಕ್ಷಣ. ಹೊತ್ತಿರುವ ಬೆಂಕಿಯನ್ನು ಆರಿಸುವುದು ಹೇಗೆ ಎಂಬುದು ಮೊದಲ ಆದ್ಯತೆ ಎಂದು ರವಿ ಹೆಗಡೆ ಬರೆದು ಪತ್ರಿಕೆಯ ನಿಲುವನ್ನು ಜಾಹೀರುಪಡಿಸಿದರು.<br />
<br />
ವಾರ್ತಾಭಾರತಿ ಸಂಪಾದಕ ಬಿ.ಎಂ.ಬಷೀರ್ ತಮ್ಮ ಫೇಸ್ ಬುಕ್ನಲ್ಲಿ ಬರೆಯುತ್ತ ಮಾನವ ಹಕ್ಕಿನ ಮೇಲೆ ದಾಳಿಯಾದಾಗ ಸಂತ್ರಸ್ತರಿಗೆ ಬೆಂಗಾವಲಾಗಿ ನಿಂತು, ಗುದ್ದಾಡಿದ, ಒದ್ದಾಡಿದ, ಪ್ರಾಣವನ್ನೇ ಕಳೆದುಕೊಂಡ ಅದೆಷ್ಟೋ ವಕೀಲರು ನಮ್ಮ ನಡುವೆ ಇರುವಾಗ, ವಕೀಲ ವೃತ್ತಿಯ ಘನತೆಯನ್ನು ತಿಳಿಯ ಹೊಸ ತಲೆಮಾರು, ಯಾವುದೋ ಹಿತಾಸಕ್ತಿಗೆ ಬಲಿಯಾಗಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದಾಕ್ಷಣ ನಾವು ಇಡೀ ವಕೀಲರ ಮೇಲೆ ಆರೋಪ ಮಾಡುವುದು ನಿಜವಾದ ಲಾಯರ್ಗಳಿಗೆ ಮಾಡುವ ಅವಮಾನ. ಈ ನಾಡಿನ ಅದೆಷ್ಟೋ ರಾಜಕಾರಣಿಗಳು ಒಂದು ಕಾಲದಲ್ಲಿ ವಕೀಲರಾಗಿ ದುಡಿದವರು. ಪೊಲೀಸ್ ವ್ಯವಸ್ಥೆ ನಿರಂಕುಶವಾಗಿ ವರ್ತಿಸಿದಾಗ ಪತ್ರಕರ್ತರನ್ನೂ ಸೇರಿದಂತೆ ಈ ನಾಡಿನ ಜನತೆಯನ್ನು ಮುಂದೆ ನಿಂತು ರಕ್ಷಿಸಿದವರು ವಕೀಲರು. ಇಂದು ನಾವು ವಕೀಲರ ಮೇಲೆ ಸಾರಾಸಗಟಾಗಿ ಆರೋಪ ಮಾಡುವಾಗ, ಆ ಕುರಿತ ಪ್ರಜ್ಞೆ ನಮ್ಮಲ್ಲಿರಬೇಕಾಗುತ್ತದೆ ಎಂದು ಹೇಳಿದ್ದಾರೆ.<br />
<br />
ಪತ್ರಕರ್ತ ಕೇವಲ ಪತ್ರಕರ್ತ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಆತ ಇಡೀ ಸಮಾಜದ ಗಂಟಲು. ಧರ್ಮ, ಜಾತಿ, ಮತ, ಪಂಥ, ಭಾಷೆಗಳ ಭೇದವಿಲ್ಲದಂತೆ ಎಲ್ಲರ ಅಭಿವ್ಯಕ್ತಿಗಳಿಗೂ ಅವನು ಕಣ್ಣಾಗಬೇಕು, ಕಿವಿಯಾಗಬೇಕು. ನಾನು ಪತ್ರಕರ್ತರನ್ನಷ್ಟೆ ಪ್ರತಿನಿಧಿಸುತ್ತೇನೆ ಎಂದು ಚೌಕಟ್ಟು ಹಾಕಿಕೊಂಡು ಕುಳಿತ ತಕ್ಷಣ ಅವನೊಳಿಗೆ ಪತ್ರಕರ್ತ ಸತ್ತ ಎಂದೇ ಅರ್ಥ. ಇಂಥವರು ಕೇವಲ ಸಂಬಳಕ್ಕಾಗಿ ವೃತ್ತಿ ಮಾಡುವವರು. ಪತ್ರಕರ್ತರು ಸಮಾಜದ ಪ್ರತಿಯೊಬ್ಬನ, ಕಟ್ಟಕಡೆಯ ಮನುಷ್ಯನನ್ನೂ ಪ್ರತಿನಿಧಿಸಬೇಕು, ಅವನ ಧ್ವನಿಯನ್ನು ದಾಖಲಿಸಬೇಕು. ವಕೀಲರ ನೋವನ್ನು, ಅವರ ಮೇಲೆ ನಡೆದ ದೌರ್ಜನ್ಯವನ್ನು ನಾವು ಪ್ರಕಟಿಸುವುದಿಲ್ಲ, ಪ್ರಸಾರಿಸುವುದಿಲ್ಲ ಎಂಬ ನಿಲುವು ವೃತ್ತಿಧರ್ಮವಲ್ಲ. ವಕೀಲರ ಕೊಲೆ ಕೇಸು ಆರೋಪಿಗೂ ಒಬ್ಬ ವಕೀಲನಿರುತ್ತಾನೆ, ವಕೀಲರಿಲ್ಲದೆ ಕೇಸು ನಡೆಯುವುದಿಲ್ಲ, ಯಾರೋ ಒಬ್ಬರು ವಕಾಲತು ಮಾಡಲೇಬೇಕು, ಅದು ವಕೀಲರ ವೃತ್ತಿಧರ್ಮ. ಹಾಗೆಯೇ ಪತ್ರಕರ್ತರು ಮೊನ್ನೆಯ ಘಟನೆಯಲ್ಲಿ ತಾವು ಒಂದು ಪಕ್ಷವಾಗಿದ್ದರೂ ಸಹ, ಎದುರು ಪಕ್ಷದವರ ಮಾತನ್ನೂ ಪ್ರಕಟಿಸಬೇಕು, ಪ್ರಸಾರಿಸಬೇಕು. ಆ ಕೆಲಸ ಈಗ ಆಗುತ್ತಿದೆ.<br />
<br />
ದಾಳಿಕೋರ ವಕೀಲರನ್ನು ವಕೀಲ ಸಮುದಾಯದಿಂದ ಪ್ರತ್ಯೇಕಿಸಿ ಮಾತನಾಡದ ಹೊರತು, ಹಲ್ಲೆಗೊಳಗಾದ ಪತ್ರಕರ್ತರಿಗೆ ನ್ಯಾಯ ದೊರೆಯುವುದೂ ಅನುಮಾನ. ಯಾಕೆಂದರೆ ಇಡೀ ಸಮುದಾಯವನ್ನು ನಿಂದಿಸುತ್ತಲೇ ಇದ್ದರೆ ಆ ಸಮುದಾಯ ಒಟ್ಟಾಗಿ ನಿಲ್ಲುತ್ತದೆ, ದಾಳಿಕೋರರಿಗೆ ರಕ್ಷಣೆಯೂ ದೊರೆಯುತ್ತದೆ.<br />
<br />
ಇದೆಲ್ಲವನ್ನೂ ವಕೀಲ ಸಮುದಾಯವೂ ಗಮನಿಸಿರಬಹುದು, ಗಮನಿಸಬಹುದು. ಮಾಧ್ಯಮದಲ್ಲಿ ಇರುವವರೆಲ್ಲ ಭ್ರಷ್ಟರಲ್ಲ, ದುಷ್ಟರಲ್ಲ ಎಂಬುದು ಅವರಿಗೂ ಗೊತ್ತಿದೆ. ವಕೀಲರ ಜತೆಗೆ ಅನುಚಿತವಾಗಿ ವರ್ತಿಸಿರಬಹುದಾದ ಪತ್ರಕರ್ತರು ಬೆರಳೆಣಿಕೆಯಷ್ಟು ಜನರು, ಎಲ್ಲರೂ ಹಾಗಿರಲು ಸಾಧ್ಯವಿಲ್ಲ ಎಂಬುದೂ ಅವರಿಗೆ ಅರಿವಾಗಬೇಕು. ಮಿಕ್ಕಂತೆ ಪ್ರಚೋದಿತ ವರದಿಗಳು, ಏಕಮುಖ ವರದಿಗಳಿಗೆ ಆ ಕ್ಷಣದ ರೋಷಾವೇಶಗಳು ಕಾರಣವಾಗಿರುತ್ತವೆ ಎಂದೂ ಸಹ ಅವರು ಅರಿತುಕೊಳ್ಳಬೇಕು.<br />
<br />
ಒಂದು ಕಡೆಯಿಂದ ಸೌಹಾರ್ದತೆಯ ಮಾತುಗಳು ಕೇಳಿಬಂದಿದೆ, ಮತ್ತೊಂದು ಕಡೆಯಿಂದಲೂ ಅದು ಬರುವಂತಾಗಲಿ. ಇದು ನಮ್ಮ ಆಶಯ.<br />
</div>sampadakeeyahttp://www.blogger.com/profile/10834139994439066030noreply@blogger.com6tag:blogger.com,1999:blog-3901985173139732142.post-89888626569755109632012-03-04T13:43:00.000+05:302012-03-04T13:46:06.835+05:30ವಕೀಲರು v/s ಮಾಧ್ಯಮಗಳು - ಪ್ರಜಾಪ್ರಭುತ್ವಕ್ಕೆ ಮತ್ತೊಂದು ಸೋಲು.<div dir="ltr" style="text-align: left;" trbidi="on">
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhDz7r6zjKH0UwxEeMjbpO9kHEug8wxxHxb4mBlDuhr3u4KzoCVkq_8pI53QVKUa5ovNtSXOz0zAHgg-1XTmhuPIrRCmDjcrrEpjcmobpsAL5A30sq1y0lPi7urc7Al4UVMb2fRRROnZmfd/s1600/banglore_media_attack_nw.jpg" imageanchor="1" style="margin-left: 1em; margin-right: 1em;"><img border="0" height="266" src="https://blogger.googleusercontent.com/img/b/R29vZ2xl/AVvXsEhDz7r6zjKH0UwxEeMjbpO9kHEug8wxxHxb4mBlDuhr3u4KzoCVkq_8pI53QVKUa5ovNtSXOz0zAHgg-1XTmhuPIrRCmDjcrrEpjcmobpsAL5A30sq1y0lPi7urc7Al4UVMb2fRRROnZmfd/s400/banglore_media_attack_nw.jpg" width="400" /></a></div>
ಯಾವೆರಡು ಅಂಗಗಳು ಸೇರಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕ್ರಿಯೆಯಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ತೊಡಗಿರಬೇಕಿತ್ತೋ ಅವೆರಡೂ ಪರಸ್ಪರ ಗುದುಮುರುಗಿಯಲ್ಲಿ ಬಿದ್ದಿವೆ. ಮೊನ್ನೆ ಬೆಂಗಳೂರನ ಸಿವಿಲ್ ಕೋರ್ಟಿನ ಆವರಣ ಮತ್ತು ಕೋರ್ಟಿನ ಒಳಗೆ ನಡೆದಿರುವ ಘಟನೆಗಳು ರಾಜ್ಯದ ಮಟ್ಟಿಗೆ ಅತ್ಯಂತ ಕೆಟ್ಟ ಬೆಳವಣಿಗೆಗಳು. ಅದೂ ಕೆಟ್ಟ ಆಡಳಿತವೊಂದನ್ನು ಜನರು ನೋಡುತ್ತಿರುವ ಸಂದರ್ಭದಲ್ಲಿ ಈಗಾಗಿರುವ ಬೆಳವಳಿಗೆ ಮತ್ತೂ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.<br />
<br />
ನಿಜಕ್ಕೂ ಇಂತಹ ಕೆಟ್ಟಕಾಲದಲ್ಲಿ ಇರುವ ನಮ್ಮಷ್ಟು ದುರಾದೃಷ್ಟವಂತರು ಯಾರೂ ಇಲ್ಲವೇನೋ. ಒಂದೆಡೆ ಭ್ರಷ್ಟತೆಯ ಕೂಪದಲ್ಲಿ ನಾಡು ಮುಳುಗಿ ಏಳುತ್ತಿದ್ದರೆ ಈಗ ಹಲ್ಲೆ, ಗೂಂಡಾಗಿರಿಗಳು ತಾಂಡವವಾಡುತ್ತಿವೆ. ಅದರಲ್ಲೂ ಕಲಿತ ವರ್ಗಗಳೇ ಅರಾಜಕತೆಯಲ್ಲಿ ಮುಳುಗಿರುವಾಗ ಇನ್ಯಾರು ಈ ನಾಡನ್ನು ರಕ್ಷಿಸಲು ಸಾಧ್ಯ ಹೇಳಿ?<br />
<br />
ಕೆಲವು ಗೂಂಡಾ ಪ್ರವೃತ್ತಿಯ, ಅವಿವೇಕಿ ವಕೀಲರು ಅಂದು ನಡೆದುಕೊಂಡಿರುವ ವರ್ತನೆ ನಿಜಕ್ಕೂ ಬೆಚ್ಚಿ ಬೀಳಿಸುವಂತಾದ್ದು. ಬಡಪಾಯಿ ಹೊಟ್ಟಿಪಾಡಿನ ಮಾಧ್ಯಮ ವರದಿಗಾರರ ಮೇಲೆ ಕೈಮಾಡಿದ ಅವರ ಅಪರಾಧ ಅಕ್ಷಮ್ಯ. ಇಂತಹ ದುರಾಂಧರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು.<br />
<br />
ಪತ್ರಕರ್ತರ ಪಾಲಿಗೆ ಇಂದು ಬಹಳ ಕೆಟ್ಟ ದಿನಗಳು. ಮೊನ್ನೆ ಮಧ್ಯಪ್ರದೇಶದಲ್ಲಿ ಬಿಜೆಪಿಯ ಕುಮ್ಮಕ್ಕಿನಿಂದ ಗೂಂಡಾಗಳು ಒಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಆತನ ಇಡೀ ಕುಟುಂಬದ ಸಮೇತ ಕಗ್ಗೊಲೆ ನಡೆಸಿದ್ದಾರೆ. ಇಂದು ದೇಶದಲ್ಲಿ ಹಲವಾರು ಕಡೆಗಳಲ್ಲಿ ಅತ್ಯಂತ ಅಪಾಯದ ಸ್ಥಿತಿಯಲ್ಲಿರುವವರೆಂದರೆ ಸತ್ಯವನ್ನು ಭೇಧಿಸುತ್ತೇವೆ ಎಂದು ಹೊರಡುವ ಪತ್ರಕರ್ತರು ಮತ್ತು ಭ್ರಷ್ಟರ ಕುರಿತ ಮಾಹಿತಿಯನ್ನು ಹೊರಗೆಳೆಯುತ್ತೇವೆ ಎಂದು ಹೊರಡುವ ಮಾಹಿತಿ ಹಕ್ಕು ಕಾರ್ಯಕರ್ತರು.<br />
<br />
ಇಂತಹ ಒಂದು ಸಂದಿಗ್ಧ ಸಂದರ್ಭವನ್ನು ನ್ಯಾಯವಾದಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಮಾಧ್ಯಮಗಳೊಂದಿಗೆ ಸಂಘರ್ಷವಾಗುವ ಸಂದರ್ಭದಲ್ಲಿ ಕೊಂಚ ವಿವೇಕಿಗಳಾಗಿರಬೇಕಿತ್ತು. ಮಾಧ್ಯಮದವರು, ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ವಕೀಲರು ಈ ಮೂರೂ ಜನರ ಉತ್ತಮ ಸಂಯೋಜನೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಉಳಿಗಾಲ. ಆದರೆ ಇಲ್ಲಿ ಇತ್ತೀಚಿನ ಬೆಳವಣಿಗೆಗಳು ವಿರುದ್ಧಗತಿಯಲ್ಲಿ ಹೊರಟಿರುವುದು ಮಾತ್ರ ವಿಷಾಧನೀಯ.<br />
ಇದು ಇಡೀ ಸಮಸ್ಯೆಯ ಒಂದು ಮುಖ. ಈಗ ಸೃಷ್ಟಿಯಾಗಿರುವ ಸಂದರ್ಭಕ್ಕೆ ಮತ್ತೊಂದು ಮುಖ ಇದೆ. ಇದು ಮಾಧ್ಯಮಗಳ ಅದರಲ್ಲೂ ದೃಶ್ಯವಾಹಿನಿಗಳ ಟಿಆರ್ಪಿ ಹುಚ್ಚು ಹಾಗೂ ಪ್ರತಿಯೊಂದನ್ನೂ ವೈಭವೀಕರಿಸಿ, ಅತಿರಂಜಿಸುವಲ್ಲಿನ ಹಾಳು ಪೈಪೋಟಿಯಿಂದಾದ ಅನಾಹುತ. ಅಗತ್ಯ ಇರುವುದು, ಇಲ್ಲದಿರುವುದು, ಏನೊಂದೂ ನೋಡದೇ ಪ್ರತಿಯೊಂದನ್ನೂ ಲೈವ್ ತೋರಿಸಬೇಕು ಎನ್ನುವ ಹಪಹಪಿಕೆ. ಇದರ ಪರಿಣಾಮವಾಗಿಯೇ ಒತ್ತಡದಲ್ಲಿ ಸಿಲುಕುವ ವರದಿಗಾರರು ಹಲ್ಲೆಗೆ, ನಿಂದನೆಗೆ ಒಳಗಾಗುವುದು.<br />
<br />
ಮೊನ್ನೆ ಘಟನೆಯನ್ನೇ ನೋಡೋಣ. ನ್ಯಾಯಾಲಯ ಎಂದರೆ ಅದಕ್ಕೆ ಒಂದು ಘನತೆ ಇದೆಯಲ್ಲವೇ? ಆವರಣದಲ್ಲಿ ಒಂದು ಮೊಬೈಲ್ ರಿಂಗ್ ಆದರೂ ದಂಡವಿಧಿಸಲಾಗುತ್ತದೆ. ಹೀಗಿರುವಾಗ ಜನಾರ್ಧನ ರೆಡ್ಡಿಯ ಕಲಾಪಗಳನ್ನು ಕೋರ್ಟು ಆವರಣದ ಒಳಗಿನಿಂದಲೂ ಲೈವ್ ತೋರಿಸುವ ಅಗತ್ಯ ಯಾರಿಗಿತ್ತು? ನ್ಯಾಯಾಲಯದ ನಡೆಗಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಕೋರ್ಟಿನೊಳಗೆ ಮಾಧ್ಯಮಗಳನ್ನು ಬಿಡಲಾಗುವುದಿಲ್ಲ ಎಂದು ನ್ಯಾಯವಾದಿಗಳು ಮಾಧ್ಯಮದವರಿಗೆ ತಾಕೀತು ಮಾಡಿದ್ದರಲ್ಲಿ ತಪ್ಪೇನಿತ್ತು? ಆದರೆ ತಾವು ಹೋಗುವುದೇ ಸೈ ಎಂದು ಪೊಲೀಸರನ್ನೂ ಬಳಸಿಕೊಂಡು ತಾವು ಸೆನ್ಷೇಶನ್ ನ್ಯೂಸ್ ಕೊಡುವುದೇ ಸೈ ಎಂದು ವಕೀಲರೊಂದಿಗೆ ವಾಗ್ವಾದಕ್ಕಿಳಿದ ಮಾಧ್ಯಮದ ವರದಿಗಾರರಿಗೆ ಪ್ರಜ್ಞೆ ಇತ್ತೇ? ಅದರಲ್ಲೂ ಕೆಲ ದಿನಗಳ ಹಿಂದೆಯಷ್ಟೇ ಮಾಧ್ಯಮದವರಿಗೂ, ವಕೀಲರಿಗೂ ನಡುವೆ ಕಹಿ ಸಂಬಂಧ ಏರ್ಪಟ್ಟಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿತ್ತು. ನ್ಯಾಯವಾದಿಗಳನ್ನು ಲಾಕಪ್ನಲ್ಲಿ ಚಚ್ಚಿದ್ದ ಪೊಲೀಸರ ವಿರುದ್ಧ ವಕೀಲರು ಪ್ರತಿಭಟನೆಗಿಳಿದಾಗ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಪಂದಿಸದಿದ್ದರಿಂದಾಗಿ ಗಂಟೆಗಟ್ಟಲೆ ರಸ್ತೆ ಜಾಮ್ ಆಗುವ ಸಂದರ್ಭ ಬಂದೊದಗಿತ್ತು. ಅಂದು ಮಾನ್ಯ ಮಿರ್ಜಿಯವರು ಕೂಡಲೇ ಸ್ಪಂದಿಸಿದ್ದರೆ ಅಷ್ಟೊಂದು ಸಮಸ್ಯೆಯೇನೂ ಆಗುತ್ತಿರಲಿಲ್ಲ. ಆದರೆ ವಾಹಿನಿಯವರಿಗೆ ಸಮಸ್ಯೆ ಅಷ್ಟು ಸಲಭವಾಗಿ ಸಮಸ್ಯೆ ಬಗೆಹರಿದಿದ್ದರೆ ಅದು ಒಳ್ಳೆದಿನವಲ್ಲ. ಕೊನೆಗೆ ಅವರಿಚ್ಛೆಯಂತೆಯೇ ಆಗಿತ್ತು. ಹೀಗೆ ಅಂದು ಮಾಧ್ಯಮಗಳಿಂದ ಸಾರ್ವಜನಿಕವಾಗಿ ತೀರಾ ಅವಮಾನಕ್ಕೊಳಗಾಗಿದ್ದ ವಕೀಲರು ಯಾವ ಮನಸ್ಥಿತಿಯಲ್ಲಿದ್ದರು ಎಂದು ಗ್ರಹಿಸುವುದು ಟೀವಿಗಳ ಮುಖ್ಯಸ್ಥರಿಗೆ ಅರಿವಿರಲಿಲ್ಲವೇ? ಆದರೂ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ಮೊನ್ನೆ ವಕೀಲರೊಂದಿಗೆ ಜಗಳಕ್ಕಿಳಿಯುವ ಅಗತ್ಯವಿತ್ತೇ? ಪರಿಸ್ಥಿತಿಯ ಗಭೀರತೆಯನ್ನು ಗ್ರಹಿಸಿ ತಮ್ಮ ವರದಿಗಾರಿಗೆ ಕಿವಿಮಾತು ಹೇಳಿರಲಿಲ್ಲವೇಕೆ?<br />
<br />
ವಕೀಲರು ವರದಿಗಾರರಿಗೆ ಹೊಡೆದರು. ಒಬಿ ವ್ಯಾನ್ಗಳ ಮೇಲೆ ಬಲವಾದ ಕಲ್ಲುಗಳನ್ನು ಎತ್ತಿಹಾಕಿದರು. ಇಷ್ಟೊತ್ತಿಗೆ ಅಂದು ಪರಿಸ್ಥಿತಿ ಹೀಗಾಗಲಿರುವನ್ನು ಸರಿಯಾಗಿಯೇ ಗ್ರಹಿಸಿದ್ದ ಪೊಲೀಸರು ಎಲ್ಲಾ ಬಗೆಯಿಂದಲೂ ಸಜ್ಜಿತವಾಗಿಯೇ ಬಂದಿದ್ದರು. ಬಾಕ್ಸ್ಗಳಲ್ಲಿ ಕಲ್ಲುಗಳನ್ನು ತಂದಿದ್ದರು. (ಕಲ್ಲುಗಳನ್ನು ತಂದಿದ್ದು ವಕೀಲರು ಎಂದು ಟಿವಿಗಳು ತಪ್ಪಾಗಿ ವರದಿ ಮಾಡಿದವು). ಅವರು ತಪ್ಪಿತ್ಥಸ್ಥರನ್ನು ಬಂಧಿಸುವ ಗೋಜಿಗೇ ಹೋಗಲಿಲ್ಲ. ಸಿಕ್ಕಿದ್ದೇ ಛಾನ್ಸು ಎಂದು ಪೊಲೀಸರು ಸಾವಿರ ಸಾವಿರ ಸಂಖ್ಯೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ನುಗ್ಗಿದರು. ನಂತರ ಆವರಣದಲ್ಲಿ ಸಿಕ್ಕ ಸಿಕ್ಕ ವಕೀಲರನ್ನು ಚಚ್ಚಿದರು. ಈ ಹೊತ್ತಿಗೆ ಪೊಲೀಸರು ಹೊಡೆದ ಒಂದು ಕಲ್ಲನ್ನು ತಿರುಗಿಸಿ ವಕೀಲನೊಬ್ಬ ಹೊಡೆದ ಪೆಟ್ಟಿಗೆ ಪೇದೆಯೊಬ್ಬರಿಗೆ ಗಂಭೀರವಾಗಿ ಗಾಯವಾಯ್ತು. ಕೊನೆಗೆ ಮಿರ್ಜಿ ಲಾಠಿಚಾರ್ಜ್ಗೆ ಆದೇಶ ನೀಡಿದರು. ಕೂಡಲೇ ತಮ್ಮ ಸಿಟ್ಟನ್ನು ವಿಚಿತ್ರ ರೀತಿಯಲ್ಲಿ ತೀರಿಸಿಕೊಂಡದ್ದು ಪೊಲೀಸರು. ಹೀಗೆ ವಕೀಲರನ್ನು ಥಳಿಸತೊಡಗಿದಂತೆಯೇ ವಕೀಲಲ್ಲಿ ಯಾವನೋ ತಲೆಕೆಟ್ಟ ಒಬ್ಬ ವಕೀಲ ಮೊದಲ ಮಹಡಿಯಿಂದ ಒಂದು ಕುರ್ಚಿ ಎತ್ತಿಹಾಕಿದ. (ಈ ಕುರ್ಚಿಯಿಂದ ಯಾರಿಗೂ ಪೆಟ್ಟಾಗಿಲ್ಲ. ಯಾಕೆಂದರೆ ಅದು ತೀರಾ ಹಗುರವಾಗಿತ್ತು). ಆದರೆ ಮಾಧ್ಯಮಗಳು ಈ ಕುರ್ಚಿಯ ಏಟಿನಿಂದಲೇ ಪೊಲೀಸ್ ಪೇದೆ ಮಹದೇವಯ್ಯ ಸತ್ತುಹೋದ ಎಂದು ನಿಮಿಷ ನಿಮಿಷಕ್ಕೂ ಭಿತ್ತರಿಸಿ ರಾಜ್ಯದಾದ್ಯಂತ ಸೆನ್ಷೇಷನ್ ಸೃಷ್ಟಿಸಿದರು. ಅಲ್ಲಿಗೆ ಪೊಲೀಸರು ಸಕ್ಸೆಸ್ ಆಗಿದ್ದರು.<br />
<br />
<table cellpadding="0" cellspacing="0" class="tr-caption-container" style="float: right; margin-left: 1em; text-align: right;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEgcJl3_oRGGLvWTuKketzvFQfD27G__THLGzzZaKcuSPnlODEI5oryO9hdfRgzxikXfJwdY8hFfBwIkaDi831xEgz-r1QHuPbI5_2JYM8m5tpjnBsn2NXpWrr_Ef_RzrRhGrTxooWuIz0ki/s1600/Advocate-1-300x225.jpg" imageanchor="1" style="clear: right; margin-bottom: 1em; margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEgcJl3_oRGGLvWTuKketzvFQfD27G__THLGzzZaKcuSPnlODEI5oryO9hdfRgzxikXfJwdY8hFfBwIkaDi831xEgz-r1QHuPbI5_2JYM8m5tpjnBsn2NXpWrr_Ef_RzrRhGrTxooWuIz0ki/s1600/Advocate-1-300x225.jpg" /></a></td></tr>
<tr><td class="tr-caption" style="text-align: center;"><br /></td></tr>
</tbody></table>
<br />
ಗಾಳಿಗೆ ಗುಂಡು ಹಾರಿಸುತ್ತ, ಟಿಯರ್ ಗ್ಯಾಸ್ ಸಿಡಿಸುತ್ತ ನೂರಾರು ಸಂಖ್ಯೆಯಲ್ಲಿ ಶಸ್ತ್ರಸಜ್ಜ್ಜಿತರಾಗಿ, ಫೈಬರ್ ಲಾಟಿಗಳನ್ನು, ಕಲ್ಲುಗಳನ್ನು ಹಿಡಿದು ನ್ಯಾಯಾಲಯದ ಒಳಗೆ ನುಗ್ಗಿದ ಪೊಲೀಸರು ವಿಚಿತ್ರವಾಗಿ ವರ್ತಿಸಿದರು. ನೂರಾರು ವಕೀಲರ ಮೇಲೆ (ಇವರಲ್ಲಿ ಬಹುತೇಕರು ಅಮಾಯಕರು) ಮನಸೋಯಿಚ್ಛೇ ಥಳಿಸಿದರು. ೩೦- ೪೦ ವಕೀಲರಿಗೆ ಗಂಭೀರ ಗಾಯಗಳಾದವು. ನ್ಯಾಯಾಲದ ಅಸೋಷಿಯೇಷನ್ ಒಳಗೆ ನುಗ್ಗಿ ಸುಮ್ಮನೇ ಕುಳಿತಿದ್ದವರನ್ನೆಲ್ಲಾ ಥಳಿಸಿದರು. ಲೇಡೀಸ್ ಅಸೋಷಿಯೇಷನ್ಗೆ ನುಗ್ಗಲು ಯತ್ನಿಸಿದರು. ಆದರೆ ಕೂಡಲೇ ಅದರ ಬಾಗಿಲು ಹಾಕಾಯಿತು. ನ್ಯಾಯಾಧೀಶರನ್ನೂ ಬಿಡದೇ ಬಡಿದರು. ನ್ಯಾಯಾದೀಶ ಬೂದಿಹಾಳ್ ಅವರಿಗೆ ತೀವ್ರ ಏಟು ಬಿದ್ದಿತು. ಕೋರ್ಟ್ ಆವರಣದಲ್ಲಿದ್ದ ವಕೀಲರ ಹತ್ತಾರು ಕಾರುಗಳಿಗೆ ಪೊಲೀಸರು ಬೆಂಕಿ ಹಚ್ಚಿದರು. ಗಾಜುಗಳನ್ನು ಪುಡಿಪುಡಿ ಮಾಡಿದರು. ಮಿರ್ಜಿ ಸಾಹೇಬರು ವಕೀಲರೇ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಹೇಳುತ್ತಾರೆ. ತಾವೆ ತಮ್ಮ ವಾಹನಗಳಿಗೆ ಬೆಂಕಿ ಹಚ್ಚಲು ಸಾಧ್ಯವೇ?<br />
<br />
ಅತ್ತ ಟೀವಿಗಳಲ್ಲಿ ಮಾತ್ರ ಇದೆಲ್ಲದರರ ಬಗ್ಗೆ ಒಂದೇ ಒಂದು ಸೊಲೂ ಇರಲಿಲ್ಲ.<br />
<br />
ನಿಜ ಹೇಳಬೇಕೆಂದಿದ್ದರೆ ಇಷ್ಟು ಹೊತ್ತಿಗೆ ಮಾಧ್ಯಮದವರೂ ಏಟು ತಿಂದು ಸೋತಿದ್ದರು. ವಕೀಲರೂ ಏಟು ತಿಂದು ಸೋತಿದ್ದರು. ಆದರೆ ಪೊಲೀಸರು ಗೆದ್ದಿದ್ದರು. ಅದೂ ಮಾಧ್ಯಮದವರ ಸಂಪೂರ್ಣ ಬೆಂಬಲದಿಂದ. ವಕೀಲರು ಹಾಗೂ ಮಾಧ್ಯಮದವರು ಇಬ್ಬರ ಕಾಟ ತಡೆಯಲಾರದೇ ಒಳಗೊಳಗೇ ಕುದಿಯುತ್ತಿದ್ದ ರಾಜಕಾರಣಿಗಳು, ಸಚಿವರು ಈಗ ಇಬ್ಬರ ಹೊಡೆದಾಟ ನೋಡಿ ಒಳಗೊಳಗೇ ಮುಸಿಮುಸಿ ನಗುತ್ತಿದ್ದರು. ಈ ಖುಷಿಯಲ್ಲಿ ಮೊದಮೊದಲಿಗೆ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಏನು ಹೇಳುವುದೇ ತೋಚದಾಗಿ ಏನೇನೋ ಹೇಳಿಕೆ ನೀಡತೊಡಗಿದ್ದರು. ಮಾಧ್ಯಮಗಳ ಒತ್ತಡ ಹೆಚ್ಚಿದಾಗಲಷ್ಟೇ ಅವರು ಮಾಧ್ಯಮದ ಪರವಾಗಿ ನಿಂತದ್ದು.<br />
<br />
ನಂತರದಲ್ಲಿ ಇಡೀ ರಾಜ್ಯದ ಮಾಧ್ಯಮಗಳು ಒಂದಾದವು. ಪ್ರತಿಭಟಿಸಿದವು, ಸರ್ಕಾರವನ್ನು ಮಣಿಸಿದವು. ಹೋರಾಟ ನಡೆಸಿದವು. ಅಪರಾಧವೆಸಗಿದ, ಎಸಗದ, ಹಲ್ಲೆಗೆ ಒಳಗಾದ ಅಮಾಯಕ, ಪ್ರಾಮಾಣಿಕ, ಎಲ್ಲಾ ವಕೀಲರನ್ನೂ ಯಾರಿಗೂ ಕೊಂಚವೂ ಮಾರ್ಜಿನ್ ಕೊಡದೇ ’ಗೂಂಡಾ ವಕೀಲರು’ ’ತಾಲಿಬಾನ್ಗಳು’, ಇತ್ಯಾದಿಯಾಗಿ ಜರಿದು ತಮ್ಮ ಮಾಧ್ಯಮ ಪ್ರಭಾವದಿಂದ ಎಲ್ಲಾ ವಕೀಲರನ್ನು ವಿಲನ್ಗಳಾಗಿ ಮಾಡಿಬಿಟ್ಟರು. ಇಡೀ ಪ್ರಕರಣದಲ್ಲಿ ವೃತ್ತಿಧರ್ಮಕ್ಕೆ ನಿಷ್ಟರಾಗಿ ನಿಷ್ಪಕ್ಷಪಾತವಾಗಿ ವರದಿ ಮಾಡಿದ್ದೆಂದರೆ ’ದ ಹಿಂದೂ’ ಮತ್ತು ಇತರ ಕೆಲವೇ ಪತ್ರಿಕೆಗಳು.<br />
<br />
ಆದರೆ ಪಬ್ಲಿಕ್ ಮೆಮೊರಿ ತುಂಬಾ ಶಾರ್ಟ್. ಮತ್ತೆ ದಿನರಾತ್ರಿ ಟೀವಿಗಳು ನಡೆಸುವ ರಿಯಾಲಿಟಿ ಶೋಗಳ, ಬ್ರೇಕಿಂಗ್ ನ್ಯೂಸ್ಗಳ ಭರಾಟೆಯಲ್ಲಿ ಜನರು ಈ ಎರಡು ದಿನ ನಡೆದಿದ್ದೆಲ್ಲವನ್ನೂ ಮರೆತೇ ಬಿಡುತ್ತಾರೆ. ಈಗ ನಿಜಕ್ಕೂ ಮತ್ತೆ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವುದು ಪತ್ರಕರ್ತರೇ. <br />
<br />
ಈಗ ವಕೀಲರು ಸುಮ್ಮನೇ ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಭೆಗಳ ಮೇಲೆ ಸಭೆಗಳಾಗುತ್ತಿವೆ. ವಕೀಲರ ಸಂಘವೇ ನಿರ್ಣಯಗಳನ್ನು ತೆಗೆದುಕೊಂಡಿದೆ. ಮಾಧ್ಯಮದ ಪಕ್ಷಪಾತದ ವಿರುದ್ಧ ಅವರು ರೊಚ್ಚಿಗೆದ್ದಿದ್ದಾರೆ. ಪತ್ರಕರ್ತರ ಯಾವ ಕೇಸುಗಳನ್ನೂ ನಡೆಸಬಾರದು, ತಮ್ಮ ಬಗ್ಗೆ ಅವಾಚ್ಯವಾಗಿ ರೌಡಿಗಳು, ರೌಡಿ ವಕೀಲರು ಎಂದೆಲ್ಲಾ ದಿನವಿಡೀ ಕೂಗುತ್ತಿದ್ದ ಟಿವಿ ಚಾನಲ್ಗಳ ನಿರೂಪಕಿಯರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬೇಕು, ಪತ್ರಕರ್ತರ ಕುರಿತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೇಸು ಜಡಿಯಬೇಕು ಎಂದೆಲ್ಲಾ ಚರ್ಚೆಗಳಾಗುತ್ತಿವೆ. ಇನ್ನು ರಾಜಕಾರಣಿಗಳ, ಭ್ರಷ್ಟರ ವಿರುದ್ಧ ಪತ್ರಕರ್ತರು ಬರೆದಾಗ ಕೇಸು ಹಾಕಿಸಿಕೊಂಡ ಪತ್ರಕರ್ತರು ವಕೀಲರನ್ನು ನೇಮಿಸಿಕೊಳ್ಳಬೇಕಾದಾಗ ಇದೇ ’ಗೂಂಡಾ’ ವಕೀಲರಿಗೇ ಕೈಕಾಲು ಹಿಡಿದು ದುಂಬಾಲು ಬೀಳಬೇಕಾದ ದುಸ್ಥಿತಿ ಬಂದೊದಗುವುದು ಎಷ್ಟು ಶೋಚನೀಯವಲ್ಲವೇ? ಇನ್ನು ರಾಜಕಾರಣಿಗಳು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆ ಅವರ ಪರವಾಗಿ ಹೋಗುವ ಒಬ್ಬ ವಕೀಲ ಸಿಗುವುದೂ ದುಸ್ತರ. ಇಡೀ ಪ್ರಕರಣವನ್ನು ಏಕಮುಖವಾಗಿ ಹೇಳ ಹೊರಡುವ ಮುನ್ನ ಮಾಧ್ಯಮ ಮುಖ್ಯಸ್ಥರು ಕೊಂಚ ಆಲೋಚಿಸಬೇಕಿತ್ತಲ್ಲವೇ?<br />
<br />
ಈಗ ಮಾಧ್ಯಮದವರನ್ನು ಬಳಸಿಕೊಂಡು ತಮ್ಮ ಬೇಳೆಕಾಳು ಬೇಯಿಸಕೊಂಡಿರುವ ಪೊಲೀಸರು ಮತ್ತು ರಾಜಕಾರಣಿಗಳು ಆಗ ಪತ್ರಕರ್ತರ ಬೆಂಬಲಕ್ಕೆ ನಿಲ್ಲುವ ಯಾವ ಸಾಧ್ಯತೆಯೂ ಇಲ್ಲ.<br />
<br />
<b>ಕೊನೆಗೊಂದು ಪ್ರಶ್ನೆ: ನೇರವಾಗಿ ಈ ಹಿಂದೆ ಸುವರ್ಣ ಸುದ್ದಿವಾಹಿನಿಯ ಮುಖ್ಯಸ್ಥರಾಗಿದ್ದವರಿಗೆ: </b><br />
ಈಗ ಟೀವಿ ವರದಿಗಾರರ ಮೇಲೆ ಹಲ್ಲೆಯಾಗಿದ್ದನ್ನು ಭಯಂಕರವಾಗಿ ವಿಶ್ಲೇಷಣೆಗೆ ತೊಡಗಿರುವ ನೀವು ಈ ಹಿಂದೆ ಬಳ್ಳಾರಿಯ ಗಣಿಕಳ್ಳರ ಗೂಂಡಾಗಳಿಂತ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರಾಮಾಣಿಕ ವರದಿಗಾರ ಕುಮಾರ ರೈತರಿಗೆ ಆಸ್ಪತ್ರೆ ಖರ್ಚಿಗೆ ಹಣಕಾಸು ಬೆಂಬಲ ನೀಡುವುದಿರಲಿ ಕನಿಷ್ಟ ನೈತಿಕ ಸ್ಥೈರ್ಯವನ್ನೂ ಹೇಳದೇ ಕೊನೆಗೆ ಅವರ ಮೇಲೇ ಗೂಬೆ ಕೂರಿಸಿ ಅವರು ರಾಜಿನಾಮೆ ಕೊಡುವ ಪರಿಸ್ಥಿತಿ ಉಂಟು ಮಾಡಿದಿರಲ್ಲಾ ಆವಾಗ ನಿಮ್ಮ ವೃತ್ತಿಪ್ರೇಮ ಎಲ್ಲಿಹೋಗಿತ್ತು ಸ್ವಾಮಿ?<br />
<div>
<br /></div>
</div>sampadakeeyahttp://www.blogger.com/profile/10834139994439066030noreply@blogger.com10tag:blogger.com,1999:blog-3901985173139732142.post-58258942321626501872012-02-21T12:18:00.001+05:302012-02-21T12:26:20.822+05:30ನಂಬುವುದಾದರೆ ನಂಬಿ, ಪೈರಸಿ ಈಗ ಹೊಸ ಧರ್ಮ!<div dir="ltr" style="text-align: left;" trbidi="on">
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgYRvLqwgScz1SzikMz4xEvUhcNkxqNE83zYAK3KD_yrGcRG1L7pVmHflypGnxjadO_xHHsI8ph-JiigcYuwhHZx1jTksVvoTqVRdKy4mFu-IgDF-JKOuIwmMnx6_KOYKBW5piY-R7ceHC_/s1600/kopimism-logo.jpg" imageanchor="1" style="margin-left: 1em; margin-right: 1em;"><img border="0" height="218" src="https://blogger.googleusercontent.com/img/b/R29vZ2xl/AVvXsEgYRvLqwgScz1SzikMz4xEvUhcNkxqNE83zYAK3KD_yrGcRG1L7pVmHflypGnxjadO_xHHsI8ph-JiigcYuwhHZx1jTksVvoTqVRdKy4mFu-IgDF-JKOuIwmMnx6_KOYKBW5piY-R7ceHC_/s400/kopimism-logo.jpg" width="400" /></a></div>
ಹೊಸ ಧರ್ಮವೊಂದು ಇದೀಗ ಅಸ್ತಿತ್ವ ಪಡೆದಿದೆ. ಸ್ವೀಡನ್ ದೇಶದ ಸರ್ಕಾರವು ಅದಕ್ಕೀಗ ಅಧಿಕೃತ ಮಾನ್ಯತೆಯನ್ನೂ ನೀಡಿದೆ. ೨೦೧೨ರ ಜನವರಿ ೫ ನೇ ತಾರೀಖಿನಂದು ಸ್ವೀಡನ್ ಸರ್ಕಾರವು ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಆವಿರ್ಭವಿಸಿರುವ ಈ ಹೊಸ ಧರ್ಮವನ್ನು ಸಂವಿಧಾನಬದ್ಧಗೊಳಿಸಿದೆ. ಇದೀಗ ಈ ಹೊಸಧರ್ಮವನ್ನು ಪ್ರಚಾರಗೊಳಿಸುವ ದೃಷ್ಟಿಯಿಂದ ಒಂದು ಮಿಷನರಿ ಚರ್ಚ್ ಕೂಡಾ ಅಸ್ತಿತ್ವ ಪಡೆದಿದೆ. ಅಂದಹಾಗೆ ಈ ಹೊಸ ಧರ್ಮದ ಹೆಸರು ಕಾಪಿಮಿಸಂ ಅಥವಾ ಕಾಪಿಮಿ ಧರ್ಮ ಎಂದು.<br />
<br />
ಈ ಕಾಪಿಮಿಸಂ ತತ್ವ ೨೦೧೦ರಲ್ಲೇ ಅಸ್ತಿತ್ವವನ್ನು ಪಡೆದಿತ್ತು. ಇದರ ಸಂಸ್ಥಾಪಕ ೧೯ ವರ್ಷದ ತತ್ವಶಾಸ್ತ್ರ ವಿದ್ಯಾರ್ಥಿ ಐಸಾಕ್ ಗೆರ್ಸನ್. ಈತ ಹಾಗೂ ಈ ಧರ್ಮದ ಇನ್ನಿತರ ಒಂದು ಸಾವಿರ ಸದಸ್ಯರು ಕಾಪಿಮಿ ಧರ್ಮವನ್ನು ಸಂವಿಧಾನಬದ್ಧಗೊಳಿಸಲು ಸತತವಾಗಿ ಪ್ರಯತ್ನಿಸಿದ್ದರೂ ಎರಡು ಸಲ ವಿಫಲವಾಗಿ ಅಂತಿಮವಾಗಿ ಈಗ ಯಶಸ್ವಿಯಾಗಿದ್ದಾರೆ. ಸ್ವೀಡನ್ನ ಸರ್ಕಾರಿ ಸಂಸ್ಥೆ ಕಮ್ಮಾರ್ ಕೊಲಿಜಿಯೆಟ್ ಈಗ ಕಾಪಿಮಿ ಎಂದು ಧರ್ಮ ಎಂದು ಮಾನ್ಯತೆ ನೀಡಿದೆ. ಈಗ ಈ ಧರ್ಮದ ಅಧಿಕೃತ ಸದಸ್ಯರು ಮೂರು ಸಾವಿರ.<br />
<br />
ಧರ್ಮ ಎಂದಾಕ್ಷಣ ದೇವರು, ದಿಂಡಿರು, ಪ್ರಾರ್ಥನೆ, ಭಜನೆ ಮುಂತಾದವು ನಿಮ್ಮ ತಲೆಯಲ್ಲಿ ಬಂದಿದ್ದರೆ ಕ್ಷಮಿಸಿ. ಈ ಕಾಪಿಮಿ ಧರ್ಮವಾಗಲೀ ಅದರ ಮಿಷನರಿ ಚರ್ಚ್ ಆಗಲೀ ಇಂತಹ ಯಾವುದನ್ನೂ ಬೋಧಿಸುವುದಿಲ್ಲ, ಪ್ರತಿಪಾದಿಸುವುದೂ ಇಲ್ಲ. ಈ ಕಾಪಿಮಿ ಧರ್ಮದ ಸರಳ ತತ್ವಗಳು ಹೀಗಿವೆ.<br />
<br />
*<span class="Apple-tab-span" style="white-space: pre;"> </span>ಪ್ರತಿಯೊಬ್ಬರೂ ಜ್ಞಾನವಂತರಾಗಬೇಕು<br />
*<span class="Apple-tab-span" style="white-space: pre;"> </span>ಜ್ಞಾನಕ್ಕಾಗಿನ ಹುಡುಕಾಟ ಪವಿತ್ರವಾದದ್ದು<br />
*<span class="Apple-tab-span" style="white-space: pre;"> </span>ಒಬ್ಬರಿಂದ ಒಬ್ಬರಿಗೆ ಜ್ಞಾನದ ಪ್ರಸರಣ ಪವಿತ್ರ ಕಾರ್ಯ<br />
*<span class="Apple-tab-span" style="white-space: pre;"> </span>ಕಾಪಿ ಮಾಡುವ ಕ್ರಿಯೆ ಪವಿತ್ರವಾದದ್ದು<br />
*<span class="Apple-tab-span" style="white-space: pre;"> </span>ಮಾಹಿತಿ ಹಾಗೂ ಜ್ಞಾನದ ಸಂವಹನ ಪರಮ ಪವಿತ್ರವಾದದ್ದು.<br />
<br />
ಈ ಹಿನ್ನೆಲೆಯಲ್ಲಿ ಕಾಪಿಮಿಸ್ಟ್ ಎಂದು ಕರೆಯಲ್ಪಡುವ ಈ ಮತಾನುಯಾಯಿಯು ಕೆಲವು ನಂಬಿಕೆಗಳನ್ನು ಹೊಂದಿರುತ್ತಾನೆ. ಅವೆಂದರೆ,<br />
*<span class="Apple-tab-span" style="white-space: pre;"> </span>ಯಾವುದೇ ಮಾಹಿತಿಯನ್ನು ಕಾಪಿ ಮಾಡುವುದು ನೈತಿಕವಾಗಿ ಸರಿಯಾದದ್ದು.<br />
*<span class="Apple-tab-span" style="white-space: pre;"> </span>ಯಾವುದೇ ಮಾಹಿತಿಯ ಪ್ರಸರಣವು ನೈತಿಕವಾಗಿ ಸರಿಯಾದ್ದು.<br />
*<span class="Apple-tab-span" style="white-space: pre;"> </span>ಕಾಪಿ ಮಾಡುವುದು ಅದನ್ನು ಹಂಚುವ (ಶೇರಿಂಗ್) ಕ್ರಿಯೆಗಳು ಉದಾತ್ತ ಕ್ರಿಯೆಗಳು.<br />
*<span class="Apple-tab-span" style="white-space: pre;"> </span>ಕಾಪಿಮಿಕ್ಸಿಂಗ್ ಎನ್ನುವುದು ಕಾಪಿ ಮಾಡುವುದರಲ್ಲೇ ಒಂದು ಪವಿತ್ರ ಕಾರ್ಯ. ಏಕೆಂದರೆ ಇದು ಮಾಹಿತಿಯ ಸಂಪತ್ತನ್ನು ವಿಸ್ತಾರಗೊಳಿಸುತ್ತದೆ.<br />
*<span class="Apple-tab-span" style="white-space: pre;"> </span>ಒಬ್ಬ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ಕಾಪಿ ಮಾಡುವುದು ಅಥವಾ ರಿಮಿಕ್ಸ್ ಮಾಡುವುದನ್ನು ಅತ್ಯಂತ ಗೌರವಪೂರಕವಾದ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದು ಕಾಪಿಮಿ ನಂಬಿಕೆಗೆ ಸಹಮತವನ್ನು ವ್ಯಕ್ತಪಡಿಸುವುದೆಂದು ಪರಿಗಣಿಸಲಾಗುತ್ತದೆ.<br />
*<span class="Apple-tab-span" style="white-space: pre;"> </span>ಅಂತರ್ಜಾಲವು ಪವಿತ್ರಕ್ಷೇತ್ರ.<br />
<br />
<br />
ಹಾಗೆಯೇ ಈ ಕಾಪಿಮಿ ಚರ್ಚ್ನ ಧಾರ್ಮಿಕ ಚಿನ್ಹೆ ಕಂಟ್ರೋಲ್ ಪ್ಲಸ್ ಸಿ ಮತ್ತು ಕಂಟ್ರೋಲ್ ಪ್ಲಸ್ ವಿ ((CTRL+C ಮತ್ತು CTRL+V) . ಒಂದು ಕಾಪಿ ಮಾಡುವುದನ್ನು ಸೂಚಿಸಿದರೆ ಮತ್ತೊಂದು ಪೇಸ್ಟ್ ಮಾಡುವುದು! ಚರ್ಚ್ ಆಫ್ ಕಾಪಿಮಿಸಂ ಪ್ರಕಾರ ಮಾಹಿತಿ ಪವಿತ್ರ, ಮಾಹಿತಿಯನ್ನು ಕಾಪಿ ಮಾಡುವುದು ಒಂದು ಪವಿತ್ರ ಸಂಸ್ಕಾರ, ಮಾಹಿತಿಯು ತನ್ನಷ್ಟಕ್ಕೆ ತನ್ನೊಳಗೆ ಒಂದು ಮೌಲ್ಯವನ್ನು ಹೊಂದಿರುತ್ತದೆ. ಕಾಪಿ ಮಾಡುವ ಮೌಲಕ ಆ ಮೌಲ್ಯವು ದ್ವಿಗುಣಗೊಳ್ಳುತ್ತದೆ. ಹೀಗಾಗಿ ಈ ಚರ್ಚ್ನ ಸಂಸ್ಥೆಗೆ ಮತ್ತು ಸದಸ್ಯರಿಗೆ ಕಾಪಿ ಮಾಡುವುದೇ ಕೇಂದ್ರವಾಗಿರುತ್ತದೆ ಎಂದು ಐಸಾಕ್ ಗೆರ್ಸನ್ ಹೇಳಿಕೆ ನೀಡಿದ್ದಾನೆ. ಈಗ ಸ್ವೀಡನ್ನಲ್ಲಿ ಕಾಪಿಮಿ ಚರ್ಚ್ನ ಪಾದ್ರಿಯಾದವನಿಗೆ ಇತರ ಚರ್ಚ್ಗಳ ರೀತಿಯಲ್ಲಿಯೇ ಗೌಪ್ಯವನ್ನು ಕಾಪಾಡಿಕೊಳ್ಳುವ ಎಲ್ಲಾ ಸಾಂವಿಧಾನಿಕ ಹಕ್ಕುಗಳೂ ಇವೆ.<br />
<br />
ಇಡೀ ಜಗತ್ತಿನಲ್ಲಿ ತಂತ್ರಜ್ಞಾನದ ಮೂಲಕ ನಡೆಯುತ್ತಿರುವ ಪೈರಸಿ ಬಗ್ಗೆ ಹಿತಾಸಕ್ತ ಗುಂಪುಗಳು ಬೊಬ್ಬೆಹೊಡೆಯುತ್ತಿರುವ ಸಂದರ್ಭದಲ್ಲಿಯೇ ಹೀಗೊಂದು ಕಾಪಿಮಿ ಧರ್ಮವು ಅಧಿಕೃತವಾಗಿ ಅಸ್ತಿತ್ವ ಪಡೆದಿರುವುದು ಕುತೂಹಲಕಾರಿಯಾಗಿದೆ. ಅಮೆರಿಕವು ಇತ್ತೀಚೆಗೆ ಪೈರಸಿಯನ್ನು ತಡೆಗಟ್ಟಲು ಸೋಪಾ ಎನ್ನುವ ಕಾಯ್ದೆಯನ್ನು ಜಾರಿ ಮಾಡಿದೆ. ಹಲವಾರು ಸರ್ಕಾರಗಳು ಸಹ ಇಂತದೇ ಕಾನೂನುಗಳನ್ನು ತಂದು ಪೈರಸಿ ಮಾಡುವವರನ್ನು ಹತ್ತಿಕ್ಕುವ ಕಾರ್ಯ ರಭಸವಾಗಿ ನಡೆಯುತ್ತಿದೆ. ಅಂತರ್ಜಾಲವು ಕರುಣಿಸಿದ ಅವಕಾಶಗಳ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಪೈರಸಿ ಎನ್ನುವುದು ತಡೆರಹಿತವಾಗಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳು ಈ ಪೈರಸಿಯಿಂದ ಘಾಸಿಗೊಂಡಿದ್ದರಲ್ಲದೇ ಸರ್ಕಾರಗಳ ಮೇಲೆ ಒತ್ತಡ ತಂದು ಪೈರಸಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ್ದರು. ಈ ಬಗೆಯ ಪೈರಸಿಯಿಂದಾಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಹೊಂದುವ ಕೃತಿಸ್ವಾಮ್ಯಕ್ಕೆ (ಕಾಪಿರೈಟ್) ಧಕ್ಕೆಯಾಗುತ್ತದಲ್ಲದೆ ಯಾವುದೇ ಉತ್ಪನ್ನದ ತಯಾರಿಕರಿಗೆ ಅದರಿಂದ ಬರುವ ಲಾಭದ ಅವಕಾಶ ಕಡಿಮೆಯಾಗುತ್ತದೆ. ಹಾಗೆಯೇ ಇಂತಹ ಪೈರಸಿ ಯಾವುದೇ ಉತ್ಪನ್ನವನ್ನು ಕಂಡು ಹಿಡಿದವರ ಪ್ರತಿಭೆಯನ್ನು ಗೌಣಗೊಳಿಸುತ್ತದೆ ಎನ್ನುವುದು ಪೈರಸಿ ವಿರೋಧಿಗಳ ವಾದ.<br />
<br />
ಈ ಮೇಲಿನ ವಾದದ ಬಗ್ಗೆ ಜಾಗತಿಕ ಮಟ್ಟದಲ್ಲಿ ಹಲವಾರು ಚರ್ಚೆಗಳು ನಡೆದಿವೆ. ಕಾಪಿರೈಟ್ ತತ್ವಕ್ಕೆ ವಿರುದ್ಧವಾಗಿ ಕಾಪಿಲೆಫ್ಟ್ ತತ್ವವೂ ಜಾರಿಯಲ್ಲಿದೆ. ಅಂತರ್ಜಾಲದಲ್ಲಿ ಏಕಸ್ವಾಮ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಈ ಕಾಪಿಲೆಫ್ಟ್ ತತ್ವಾನುಯಾಯಿಗಳು ಕೆಲವಾರು ಉಚಿತ ಸಾಫ್ಟ್ವೇರ್ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದೊಂದು ಬಗೆಯ ಆಂದೋಲನವಾಗಿಯೇ ಇದೆ.<br />
<br />
ಇಂತಹ ಜಾಗತಿಕ ಮಟ್ಟದ ಆಂದೋಲನಕ್ಕೆ ಈಗ ಹೊಸ ಸೇರ್ಪಡೆಯಾಗಿರುವುದು ಕಾಪಿಮಿ ಮತ. ಈ ಕಾಪಿಮಿ ಮತಾನುಯಾಯಿಗಳು ತಮ್ಮ ಮತದ ಸಮರ್ಥನೆಗೆ ಬೈಬಲ್ನಲ್ಲಿನ ಒಂದು ಪದಪುಂಜವನ್ನು ಬಳಸಿಕೊಳ್ಳುತ್ತಿದ್ದಾರೆ. ಅದು ಹೀಗಿದೆ.<br />
<br />
ನಾನು ಏಸುವನ್ನು ಹೇಗೆ ಕಾಪಿ ಮಾಡುತ್ತೇನೋ ಹಾಗೆಯೇ ನನ್ನನ್ನು ಕಾಪಿ ಮಾಡಿ, ನನ್ನ ಸಹೋದರರೇ(Copy me, my brothers, just as I copy Christ himself — 1 Corinthians 11:1) ಜಗತ್ತಿನ ಯಾವುದೇ ಮಾಹಿತಿಯನ್ನು ಯಾರೂ ಸಹ ನಿರ್ಬಂಧಿಸುವುದು ಸರಿಯಲ್ಲ; ಎಲ್ಲಾ ಮಾಹಿತಿಯೂ ತಡೆರಹಿತವಾಗಿ, ಮುಕ್ತವಾಗಿ ಪ್ರಸಾರ ಹೊಂದಬೇಕು ಎನ್ನುವುದು ಕಾಪಿಮಿ ತತ್ವದ ಸಾರಾಂಶ. ಅದು ಯಾವುದೇ ಸ್ವರೂಪದಲ್ಲಿರಲಿ ಜ್ಞಾನದ ಖಾಸಗೀಕರಣವನ್ನು, ಏಕಸ್ವಾಮ್ಯವನ್ನು ಕಾಪಿಮಿ ವಿರೋಧಿಸುತ್ತದೆ. ಹೀಗಾಗಿಯೇ ಅದು ಸಂಗೀತ, ಸಿನಿಮಾ, ಟಿವಿ ಷೋ, ಸಾಫ್ಟ್ವೇರ್ ಇನ್ನಿತರೆ ಯಾವುದೇ ಮಾಧ್ಯಮದ ಪೈರಸಿಯನ್ನು ಕಾಪಿಮಿ ಪ್ರೇರೇಪಿಸುತ್ತದೆ. ನಾವು ಕಾಪಿರೈಟ್ನಲ್ಲಿ ನಂಬಿಕೆಯಿಟ್ಟವರಿಗೆ ಸವಾಲೊಡ್ಡಲಿದ್ದೇವೆ, ಇಂದು ಈ ಕಾಪಿರೈಟ್ ಬೆಂಬಲಿಗರು ರಾಜಕೀಯದಲ್ಲಿ ಬಹಳ ಪ್ರಭಾವವುಳ್ಳವರಾಗಿದ್ದಾರಲ್ಲದೇ, ಅವರು ಜನರ ಬದುಕು ಮತ್ತು ಸ್ವಾತಂತ್ರ್ಯಗಳನ್ನು ನಿರ್ಬಂಧಿಸುವ ಮೂಲಕವೇ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡಿದ್ದಾರೆ. ಅವರೆಲ್ಲಾ ಜ್ಞಾನವನ್ನು ಸೀಮಿತಗೊಳಿಸಲು ಹೊರಟಿದ್ದಾರೆ. ಅಂತವರ ದ್ವೇಷ ಮತ್ತು ಆಕ್ರಮಣಗಳನ್ನು ನಾವು ಎದುರಿಸಬೇಕಾಗಿದೆ. ಕಾಪಿ, ಡೌನ್ಲೋಡ್, ಅಪ್ಲೋಡ್!, ಎಲ್ಲರಿಗೂ ಎಲ್ಲಾ ಜ್ಞಾನ ಲಭಿಸಲಿ! ಮಾಹಿತಿ ತಂತ್ರಜ್ಞಾನವಿರುವುದು ಕಾನೂನಿನಿಂದ ನಿರ್ಬಂಧಿಸಲು ಅಲ್ಲ ಎಂದು ಈಗ ಕಾಪಿಮಿಸ್ಟ್ಗಳು ಘಂಟಾಘೋಷವಾಗಿ ಸಾರುತ್ತಿದ್ದಾರೆ.<br />
<br />
ಮನುಷ್ಯನ ಜ್ಞಾನದ ಮೇಲೆ ಹಕ್ಕು ಚಲಾಯಿಸಲು ಹೊರಟಿದ್ದಾಗಲೀ, ಕಾಪಿರೈಟ್ನಂತಹ ಪರಿಕಲ್ಪನೆಗಳು ಬಂದಿದ್ದೇ ಕೈಗಾರಿಕಾ ಕ್ರಾಂತಿಯ ನಂತರದಲ್ಲಿ. ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡಲು ಶುರುವಾದದ್ದೇ ಜ್ಞಾನವನ್ನೂ ಲಾಭಕ್ಕಾಗಿ ಬಳಸಿಕೊಳ್ಳಲಾಯಿತು. ಇಂದು ನಾವು ಯಾವುದೇ ಜ್ಞಾನವನ್ನು ತೆಗೆದುಕೊಂಡರೂ ಅದು ಒಬ್ಬ ವ್ಯಕ್ತಿಯಿಂದ ಬಂದಿರುವುದಾಗಿರುವುದಿಲ್ಲ. ಒಬ್ಬ ವ್ಯಕ್ತಿಯೂ ಪ್ರತಿಭೆಯೂ ಕೂಡಾ ಸಮಾಜದ ಕೊಡುಗೆಯೇ ಅಗಿದೆ. ಪ್ರಪಂಚದ ಎಲ್ಲಾ ಜ್ಞಾನವೂ ಸಾಮೂಹಿಕ ಸೃಷ್ಟಿಯೇ ಅಲ್ಲವೇ? ಯಾವುದೇ ಒಂದು ಸಾಧನೆಯಲ್ಲಿ ಒಬ್ಬ ವ್ಯಕ್ತಿಯ ವಿಶೇಷ ಪ್ರಯತ್ನಗಳು ಖಂಡಿತಾ ಇರುತ್ತದೆ. ಆದರೆ ಹಾಗಂತ ಆ ವ್ಯಕ್ತಿ ತನಗಿರುವ ಪ್ರತಿಭೆಯನ್ನೆಲ್ಲಾ ತನ್ನದೇ ಸ್ವತ್ತು ಎಂದು ಹೇಳುವುದು ಆತನಿಗಿರುವ ಸ್ವಾರ್ಥ ಭಾವನೆಯಿಂದ ಮಾತ್ರ. ಜಗತ್ತಿನ ಎಲ್ಲಾ ಮಾಹಿತಿ, ಜ್ಞಾನ ಪ್ರತಿಭೆಗಳೂ ಸಹ ಮನುಕುಲದ ಸಾಮೂಹಿಕ ಶ್ರಮದ ಉತ್ಪನ್ನಗಳು ಎಂದು ಪರಿಣಿಸಿದಾಗ ಕಾಪಿರೈಟ್ ಎನ್ನುವುದು ಕೆಲವೇ ಜನರ ಲಾಭಕ್ಕಾಗಿ ಹುಟ್ಟಿಕೊಂಡ ತತ್ವ ಎಂದು ತೋರುತ್ತದೆ. ಈ ನಿಟ್ಟಿನಲ್ಲಿ ವಾದಿಸುವ ಕಾಪಿಮಿ ಅತ್ಯಂತ ಕ್ರಾಂತಿಕಾರಿಯಾಗಿ ಕಾಣುತ್ತದೆ.<br />
<br />
ಜಗತ್ತಿನ ಚರಿತ್ರೆಯಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಅಥವಾ ಗುಂಪಿನ ಮೇಲೆ ದಿಗ್ಭಂಧನ, ದಮನಗಳು ಹೆಚ್ಚಿದಾಗ ಆ ಗುಂಪು ಧರ್ಮದ ಆಸರೆ ಪಡೆದಿರುವುದನ್ನು ಕಾಣುತ್ತೇವೆ. ಅಂತರ್ಜಾಲದಲ್ಲಿ ಪೈರಸಿಯನ್ನು ಪ್ರಚೋದಿಸುವವರ ಮೇಲೆ ಸರ್ಕಾರಗಳು ಈಗಾಗಲೇ ದಮನವನ್ನಾರಂಭಿಸಿದ್ದೇ ಅಲ್ಲದೆ ಅಂತವರನ್ನು ಜೈಲಿಗಟ್ಟುವ ಕ್ರಿಯೆಯೂ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಅಂತಹ ದಮನಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಈಗ ಸ್ವೀಡನ್ನ ಯುವಕರು ಈಗ ತಮ್ಮ ಕೃತ್ಯಗಳಿಗೆ ತತ್ವಶಾಸ್ತ್ರದ ಆಸರೆ ಪಡೆದು ಅದನ್ನೊಂದು ಪ್ರತ್ಯೇಕ ಧರ್ಮವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಕಾಪಿಮಿಸ್ಟರು ತಮ್ಮ ಧರ್ಮವು ಕಾನೂನು ಬಾಹಿರ ಕೃತ್ಯಗಳನ್ನು ಬೆಂಲಿಸುವುದಿಲ್ಲ ಎಂದೂ ಹೇಳಿದ್ದಾರೆ.<br />
<br />
ಅಂತರ್ಜಾಲದ ದೆಸೆಯಿಂದ ಪೈರಸಿ ಎನ್ನುವುದು ಜಗತ್ವ್ಯಾಪಿಯಾಗಿರುವ ಹಿನ್ನೆಲೆಯಲ್ಲಿ ಈ ತತ್ವಕ್ಕೆ ಮುಂದಿನ ದಿನಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿ ಇತರೆ ದೇಶಗಳಲ್ಲಿಯೂ ಇಂತಹುದೇ ಧರ್ಮಗಳು ಸ್ಥಾಪನೆಯಾದರೂ ಅಚ್ಚರಿಯಿಲ್ಲ.<br />
<br />
<b>-ಶಿವಪುತ್ರ.ಪಿ.ಆರ್.</b></div>sampadakeeyahttp://www.blogger.com/profile/10834139994439066030noreply@blogger.com5tag:blogger.com,1999:blog-3901985173139732142.post-68064130641241740312012-02-18T15:51:00.002+05:302012-02-18T15:51:41.732+05:30ಸೆಕ್ಸ್ ವಿಡಿಯೋ ವೀಕ್ಷಣೆ; ನಿಷ್ಪಕ್ಷಪಾತ ವರದಿ ಬರಬಹುದೇ?<div dir="ltr" style="text-align: left;" trbidi="on">
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEipvA0hidF0xNeOCr4ctfkNm77ZocaZh5-VmZZjZjwlrGEyTYRlqSJknjj2eY-MgqeazR5BJiDFAHYz2nx7Z5vipswdssWIgkDEofcEQfutPGRqIyMrnINyq5dL7ceDpamScTUaa2CIy8B2/s1600/vidhanasoudha33.jpg" imageanchor="1" style="margin-left: 1em; margin-right: 1em;"><img border="0" height="300" src="https://blogger.googleusercontent.com/img/b/R29vZ2xl/AVvXsEipvA0hidF0xNeOCr4ctfkNm77ZocaZh5-VmZZjZjwlrGEyTYRlqSJknjj2eY-MgqeazR5BJiDFAHYz2nx7Z5vipswdssWIgkDEofcEQfutPGRqIyMrnINyq5dL7ceDpamScTUaa2CIy8B2/s400/vidhanasoudha33.jpg" width="400" /></a></div>
<b>ಅಶ್ಲೀಲ ಚಿತ್ರ ವೀಕ್ಷಿಸಿದ ಮೂವರು ಮಾಜಿ ಸಚಿವರುಗಳ ಕುರಿತಂತೆ ಸದನ ಸಮಿತಿ ನೇಮಕವಾಗಿದೆ. ಬಿಜೆಪಿಯ ಹಿರಿಯ ಮುಖಂಡರ ಹೇಳಿಕೆಗಳನ್ನು ಗಮನಿಸಿದರೆ, ಸಮಿತಿಯ ವರದಿಯ ಏನಾಗಿರಬಹುದು ಎಂಬುದು ಈಗಲೇ ಗೊತ್ತಾಗುತ್ತಿದೆ. ಅಶ್ಲೀಲ ಚಿತ್ರ ವೀಕ್ಷಣೆಯ ಘಟನೆಗಿಂತ ಅದರ ಕುರಿತು ತೀರ್ಮಾನವೇ ಘೋರವಾಗಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ <a href="http://mounakanive.blogspot.in/2012/02/blog-post_18.html">ಮೌನಕಣಿವೆ</a> ಬ್ಲಾಗ್ನ ಉಷಾ ಕಟ್ಟೆಮನೆ ಬರೆದಿರುವ ಪ್ರತಿಭಟನೆಯ ಲೇಖನ ಇಲ್ಲಿದೆ. ಜನರ ಆತ್ಮಸಾಕ್ಷಿಯನ್ನೇ ನಡುಬೀದಿಯಲ್ಲಿ ಹರಾಜು ಹಾಕುವಂಥದ್ದು ನಡೆಯಕೂಡದು ಎಂಬ ಆಶಯ ಅವರ ಲೇಖನದಲ್ಲಿದೆ. ಸಂಪಾದಕೀಯದ ಓದುಗರಿಗಾಗಿ ಈ ಬರೆಹ ಇಲ್ಲಿದೆ.</b><br />
<b>-ಸಂಪಾದಕೀಯ</b><br />
<br />
‘ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಈ ಕೃತ್ಯ ಎಸಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ವಿಧಾನಸಭೆಯಲ್ಲಿ ಬ್ಲೂಫಿಲ್ಮ್ ವೀಕ್ಷಿಸಿದವರು ಸದನಕ್ಕೆ ಬಂದರೆ ನಾನು ಒಂದು ಕ್ಷಣವೂ ಸ್ಪೀಕರ್ ಕುರ್ಚಿಯ ಮೇಲೆ ಕೂರುವುದಿಲ್ಲ. ಯಾರನ್ನು ಬೇಕಾದರೂ ಕೂರಿಸಿಕೊಳ್ಳಿ, ರಾಜಿನಾಮೆ ಕೊಟ್ಟು ಇಲ್ಲಿಂದಲೇ ಹೊರಟೆ ಹೀಗೆಂದು ಸರ್ಕಾರದ ಪ್ರಮುಖರಿಗೆ ಫೆ.೯ರಂದು ಎಚ್ಚರಿಕೆಯನ್ನು ಕೊಟ್ಟಿದ್ದರು ಕೊಡಗಿನ ವೀರಪುತ್ರ ಸ್ಪೀಕರ್ ಕೆ.ಜಿ. ಬೋಪಯ್ಯನವರು.<br />
ಅವರಿಗೆ ಒತ್ತಡ ಹೇರಲು ಪ್ರಯತ್ನಿಸಿದವರು ಹಾಲಿ ಸಿಎಂ ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿಯ ರಾಜ್ಯಧ್ಯಕ್ಷ ಈಶ್ವರಪ್ಪ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ ಕುಮಾರ್.<br />
<br />
ಸ್ಪೀಕರ್ ಹೀಗೆ ಹೇಳಲು ಕಾರಣವಾಗಿದ್ದು ಫೆ. ೭ರಂದು ವಿಧಾನ ಸಭೆಯಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಸಹಕಾರ ಸಚಿವರಾಗಿದ್ದ ಲಕ್ಷಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಿ.ಸಿ. ಪಾಟೀಲ್ ತಮ್ಮ ಮೊಬೈಲ್ಗಳಲ್ಲಿ ಸೆಕ್ಸ್ ವಿಡಿಯೋವನ್ನು ನೋಡಿ ಎಂಜಾಯ್ ಮಾಡುತ್ತಿದ್ದದ್ದು.. ಮತ್ತು ಆ ವಿಡಿಯೋವನ್ನು ಅವರ ಮೊಬೈಲ್ಗೆ ಎಂಎಂಎಸ್ ಮಾಡಿದ ಕೃಷ್ಣ ಪಾಲೆಮಾರ್ ಅವರ ನಡವಳಿಕೆಗಳು. ಅಂತಹ ಸಚಿವರ ಬಗ್ಗೆ ಮೃದು ಧೋರಣೆಯನ್ನು ತಳೆಯುವಂತೆ ಒತ್ತಾಯಿಸಲು ಸ್ಪೀಕರ್ ಬೋಪಯ್ಯನವರ ಬಳಿಗೆ ಈ ಮಹನೀಯರು ತೆರಳಿದ್ದರು. ಅದಕ್ಕವರು ಮೇಲಿನಂತೆ ಪ್ರತಿಕ್ರಿಯಿಸಿದ್ದರು.<br />
<br />
ಅವರ ರಾಜಿನಾಮೆ ಬೆದರಿಕೆಯ ಪ್ರತಿಕ್ರಿಯೆಗೆ ತೂಕವಿಲ್ಲವೆಂಬುದು ಎಲ್ಲರಿಗೂ ಗೊತ್ತಿದೆ. ಯಾಕೆಂದರೆ ಹಿಂದೆ ಐದು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಸ್ಪೀಕರಿಗೆ ಛೀಮಾರಿ ಹಾಕಿ ಆ ಶಾಸಕರನ್ನು ಅರ್ಹರೆಂದು-ಸ್ಪೀಕರ್ ತೀರ್ಪಿಗೆ ವಿರುದ್ಧವಾಗಿ- ತೀರ್ಪು ನೀಡಿತ್ತು. ಆ ಸಂದರ್ಭದಲ್ಲಿ ಆತ್ಮಸಾಕ್ಷಿ ಉಳ್ಳ ಯಾರೇ ಆಗಿದ್ದರೂ ರಾಜಿನಾಮೆ ಕೊಡುತ್ತಿದ್ದರು. ಆದರೆ ಅವರು ಹಾಗೆ ಮಾಡಿರಲಿಲ್ಲ.<br />
<br />
ನಿಜ, ವಿಧಾನಸಭೆಯೆಂಬುದು ಸ್ಪೀಕರ್ ಕಾರ್ಯಕ್ಷೇತ್ರ. ಅಲ್ಲಿ ಅವರೇ ಸರ್ವೋಚ್ಛ. ಅವರು ನ್ಯಾಯಾಧೀಶರಿದ್ದಂತೆ. ಅವರು ಕೈಗೊಳ್ಳುವ ತೀರ್ಮಾನಗಳು ನ್ಯಾಯಾಧೀಶರು ನೀಡುವ ತೀರ್ಪುಗಳಿದ್ದಂತೆ. ಅಲ್ಲಿ ಸದನದ ಘನತೆಗೆ ಕುಂದು ತರುವಂತಹ ಅನ್ ಪಾರ್ಲಿಮೆಂಟರಿ ಪದಗಳನ್ನು ಬಳಸುವಂತಿಲ್ಲ. ಒಂದು ವೇಳೆ ಅಕಸ್ಮತ್ತಾಗಿ ಬಳಸಿದರೆ, ಬಳಸಿದವರು ಅದಕ್ಕಾಗಿ ಕ್ಷಮೆ ಯಾಚಿಸಿ ಅಂತಹ ಪದಗಳನ್ನು ಕಡತದಿಂದ ತೆಗೆದು ಹಾಕುವುದು ಅಲ್ಲಿಯ ನಿಯಮ. ಈಗ ಪದದ ಜಾಗದಲ್ಲಿ ಘಟನೆ ನಡೆದಿದೆ. ಈಗ ಏನು ಮಾಡಬೇಕು.?<br />
<br />
ವಿಧಾನಸಭೆಯ ಆವರಣದೊಳಗೆ ಪೋಲಿಸರಿಗೂ ಪ್ರವೇಶವಿಲ್ಲ. ಪೋಲಿಸರು ಮಾಡುವ ಕೆಲಸವನ್ನು ಅಲ್ಲಿ ಬಿಳಿ ಸಮವಸ್ತ್ರವನ್ನು ತೊಟ್ಟ ಮಾರ್ಶಲ್ ಮತ್ತು ಅವರ ಸಿಬ್ಬಂದಿಗಳು ಮಾಡುತ್ತಾರೆ. ಮೊನ್ನೆ ಫೆ.೩ರಂದು ಸ್ಪೀಕರ್ ವಿರುದ್ಧ ಪ್ರತಿಭಟನೆ ಮಾಡಿದ ಗೂಳಿ ಹಟ್ಟಿ ಶೇಖರ್ ಅವರನ್ನು ಸದನದಿಂದ ಮಾರ್ಷಲ್ಗಳು ಹೊರಗೆ ಕರೆದುಕೊಂಡು ಹೋದ ದೃಶ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ.<br />
<br />
ವಕೀಲ ಧರ್ಮಪಾಲ ಗೌಡರೆಂಬವರು ಈ ಮೂವರು ಕಳಂಕಿತ ಮಾಜಿ ಸಚಿವರ ವಿರುದ್ಧ ಖಾಸಗಿ ದೂರನ್ನು ಕೊಟ್ಟಾಗ ವಿಚಾರಣೆಗೆ ಮುಂದಾದ ೮ನೇ ಎಸಿಎಂಎಂ ನ್ಯಾಯಾಲಯದೆದುರು ಪೋಲಿಸರು ಹೇಳಿದ್ದು ಇದನ್ನೇ ಸದನದ ಒಳಗೆ ಪೋಲಿಸರಿಗೆ ಪ್ರವೇಶ ನಿಷಿದ್ಧ. ಸ್ಪೀಕರ್ ಅನುಮತಿ ಇಲ್ಲದೆ ಸಚಿವರನ್ನು ನಾವು ಪ್ರಶ್ನಿಸುವಂತಿಲ್ಲ ಹಾಗಾಗಿ ಮಾಜಿ ಸಚಿವರ ಮೇಲೆ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲು ಪೋಲಿಸರಿಗೆ ಸಾಧ್ಯವಾಗಿಲ್ಲ.<br />
<br />
ಸ್ಪೀಕರ್ ಮನಸ್ಸು ಮಾಡಿದ್ದರೆ ತಮ್ಮ ವಿವೇಚನೆಯನ್ನು ಬಳಸಿ ಸದನದ ಘನತೆ ಗೌರವಗಳನ್ನು ಮಣ್ಣು ಪಾಲು ಮಾಡಿದ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನವನ್ನು ಹರಾಜು ಹಾಕಿದ, ಮೇಲ್ನೋಟಕ್ಕೆ ತಪ್ಪಿತಸ್ಥರೆಂದು ಕಂಡ ಆ ಮೂವರು ಕಳಂಕಿತ ಶಾಸಕರ ಶಾಸಕತ್ವವನ್ನು ರದ್ದುಗೊಳಿಸಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಆ ಸಚಿವರೇನೂ ಶಾಸನ ಸಭೆಗೆ ಹೊಸತಾಗಿ ಚುನಾಯಿತರಾದವರಲ್ಲ. ಆ ಸ್ಥಾನದ ಪಾವಿತ್ರ್ಯತೆಯನ್ನು ಅರಿತವರೇ ಆಗಿದ್ದಾರೆ. ಹಾಗಿರುವಾಗ ಅವರ ಬಗ್ಗೆ ಮೃದು ಧೋರಣೆ ತಳೆದದ್ದು ಎಷ್ಟರ ಮಟ್ಟಿಗೆ ಸರಿ?<br />
<br />
ಇಂಥ ಜವಾಬ್ದಾರಿಯುತ, ಪವಿತ್ರ ಸ್ಥಾನದಲ್ಲಿ ಎಂತೆಂಥ ಮಹನೀಯರು, ಘನತೆವೆತ್ತವರು ಕುಳಿತಿದ್ದರು ಎಂಬುದನ್ನೊಮ್ಮೆ ಜ್ಞಾಪಿಸಿಕೊಳ್ಳಿ; ವೈಕುಂಠ ಬಾಳಿಗಾ, ಕೆ.ಎಚ್. ರಂಗನಾಥ್, ರಮೇಶ್ ಕುಮಾರ್ ಅಂತವರ ಜೊತೆ ಯಡಿಯೂರಪ್ಪನವರ ಲೌಡ್ ಸ್ಪೀಕರ್ ಎಂಬ ಆರೋಪ ಹೊತ್ತಿರುವ ಬೋಪಯ್ಯನವರನ್ನು ಹೋಲಿಸಿ ನೋಡಿ.<br />
<br />
ಆಗ ಗೊತ್ತಾಗುತ್ತದೆ ಈ ಕೊಡಗಿನ ಕಲಿಯ ಮಾತಿನಲ್ಲಿ ತೂಕವಿದೆಯೇ ಎಂದು. ಅವರ ಗುಡುಗು ಟುಸ್ ಎಂಬುದು ಸದನ ಸಮಿತಿಯ ರಚನೆಯಲ್ಲೇ ಬಹಿರಂಗಗೊಂಡಿದೆ.<br />
<br />
ಸದನದಲ್ಲಿ ಸೆಕ್ಸ್ ಸಿಡಿ ವೀಕ್ಷಣೆ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಅವರು ರಚಿಸಿದ ಸದನ ಸಮಿತಿಯನ್ನು ನೋಡಿ; ಅಧ್ಯಕ್ಷರು ಬಿಜೆಪಿಯ ಶ್ರೀಶೈಲಪ್ಪ ವಿರೂಪಾಕ್ಷಪ್ಪ ಬಿದನೂರು. ಸದಸ್ಯರು, ಬಿಜೆಪಿಯ ಎಸ್.ಆರ್.ವಿಸ್ವನಾಥ್, ಬಿ.ಸುರೇಶ್ ಗೌಡ, ನೆಹರೂ ಓಲೆಕಾರ್ ಮತ್ತು ಕಾಂಗ್ರೆಸ್ನ ಅಮರೇಗೌಡ ಬಯ್ಯಾಪುರ, ಡಾ.ಎಚ್.ಸಿ ಮಹಾದೇವಪ್ಪ ಮತ್ತು ಜೆಡಿಎಸ್ನ ದಿನಕರ್ ಶೆಟ್ಟಿ.<br />
<br />
ಅಧ್ಯಕ್ಷರಾದ ಶ್ರೀ ಶೈಲಪ್ಪ ಬಿದನೂರು ಅವರು ಎಂದೂ ಸದನದಲ್ಲಿ ಮಾತಾಡಿದವರೇ ಅಲ್ಲ. ಈ ಪ್ರಕರಣದಲ್ಲಿ ಅವರ ಸ್ಟ್ಯಾಂಡ್ ಏನಿದ್ದರೂ ಅದು ಬಸ್ ಸ್ಟ್ಯಾಂಡೇ ಇದ್ದೀತು. ಸುರೇಶ ಗೌಡರಂತೂ ಬಿಜೆಪಿ ಅಸ್ಥಾನದ ಹೊಗಳುಭಟ. ನೆಹರು ಓಲೆಕಾರ ಮತ್ತು ಎಸ್.ಅರ್.ವಿಶ್ವನಾಥರ ಬಗ್ಗೆ ಲೋಕಕ್ಕೇ ತಿಳಿದಿದೆ. ಇನ್ನು ಜೆಡಿಎಸ್ನ ದಿವಾಕರ ಶೆಟ್ಟಿ ಪಾಪದವರು. ಕಾಂಗ್ರೆಸ್ನ ಎಚ್.ಸಿ ಮಹಾದೇವಪ್ಪ ಇದೇ ಕೆಟಗೆರಿಗೆ ಸೇರಿದವರು. ಒಳ್ಳೆತನ ನಿಷ್ಠುರ ತನಿಖೆಗೆ ಸಹಾಯಕವಾಗಲಾರದು. ಹಾಗಾಗಿ ಸದನ ಸಮಿತಿ ತನಿಖೆ ಹಳ್ಳ ಹಿಡಿಯುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ನಡುವೆ ಕಾಂಗ್ರೆಸಿನ ಎಚ್.ಸಿ ಮಹಾದೇವಪ್ಪ ಮತ್ತು ಅಮರೇ ಗೌಡ ಬೈಯ್ಯಾಪುರ ಅವರು ತಾವು ಸದನ ಸಮಿತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.<br />
<br />
ಬಹುಶಃ ವಿರೋಧ ಪಕ್ಷಗಳಿಂದ ಇಂಥ ಅಸಹಕಾರವನ್ನು ಸ್ಪೀಕರ್ ಮೊದಲೇ ನಿರೀಕ್ಷಿಸಿರಬೇಕು. ಇಲ್ಲವಾದರೆ ಏಳು ಮಂದಿ ಇರುವ ಸದನ ಸಮಿತಿಯಲ್ಲಿ ಆಡಳಿತ ಪಕ್ಷದ ನಾಲ್ಕು ಮಂದಿ ಸದಸ್ಯರಿರುವಾಗ ವಿರೋಧ ಪಕ್ಷದ ಸಮರ್ಥ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನು ಮಾಡಬೇಕಾಗಿತ್ತು. ಅವರು ಹಾಗೆ ಮಾಡಲಿಲ್ಲ. ಘಟನೆ ನಡೆದ ಫೆ.೭ರಿಂದ ಸಮಿತಿ ನೇಮಿಸಿದ ಫೆ.೧೬ ರ ನಡುವೆ ಬೋಪಯ್ಯನವರ ಹುಟ್ಟಿದೂರಿನ ಕಾವೇರಿನದಿಯಿಂದ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದೆ.<br />
<br />
ಇಂಥ ಸಮಿತಿ ಎಂಥ ವರದಿ ನೀಡಬಹುದು? ರಾಜಕಾರಣಿಗಳಿಗೀಗ ಮಾಧ್ಯಮ ತಮ್ಮ ಪರಮ ವೈರಿಯಂತೆ ಕಾಣಿಸುತ್ತಿದೆ. ಹಾಗಾಗಿ ಎಲ್ಲರೂ ಸೇರಿ ಮಾಧ್ಯಮದ ವರದಿಗಾರಿಕೆಯ ಮೇಲೆ ನಿಯಂತ್ರಣ ಹೇರುವ ಬಗ್ಗೆ ಷಡ್ಯಂತರ ರೂಪಿಸಿ ನೀತಿ ನಿಯಾಮಾವಳಿಗಳ ಪಟ್ಟಿಯನ್ನು ನೀಡಬಹುದೇ ಹೊರತು ಮಾಜಿ ಸಚಿವರ ಬಗ್ಗೆ ಕ್ರಮ ಕೈಗೊಳ್ಳುವ ಸೂಚನೆಯಂತೂ ಸದ್ಯದ ಪರಿಸ್ಥಿಯಲ್ಲಿ ಕಾಣುತ್ತಿಲ್ಲ. ಇದಕ್ಕೆ ಬಲವಾದ ಸಾಕ್ಷಿ ಎಂದರೆ ಮೊನ್ನೆ ಚಿಕ್ಕಮಗಳೂರಿನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ ಮಾತುಗಳು; ಅಲ್ಲಿ ಅವರು; ವಿಧಾನ ಮಂಡಲ ಕಲಾಪಗಳನ್ನು ಖಾಸಗಿ ವಾಹಿನಿಗಳು ನೇರವಾಗಿ ಸೆರೆ ಹಿಡಿದು ಪ್ರಸಾರ ಮಾಡುವುದನ್ನು ನಿರ್ಬಂಧಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಹೇಳಿದ್ದು.<br />
<br />
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ ಕಳಂಕಿತರನ್ನು ಸಮರ್ಥಿಸಿಕೊಂಡ ಪರಿ ನೋಡಿ; ಲಕ್ಷಣ ಸವದಿ ಮತ್ತು ಸಿ.ಸಿ ಪಾಟೀಲ್ ಅತ್ಯುತ್ತಮ ಸಚಿವರಾಗಿದ್ದರು. ಕೃಷ್ಣ ಪಾಲೇಮಾರ್ ಸಹ ಒಳ್ಳೆಯ ಕೆಲಸ ಮಾಡಿದ್ದರು. ತಿಂಗಳಲ್ಲಿ ಸತ್ಯ ಹೊರ ಬೀಳಲಿದೆ. ಈ ಘಟನೆ ಮಾಧ್ಯಮಗಳ ಸೃಷ್ಟಿ. ನಿಜವಾದ ಅಪರಾಧಿ ಯಾರು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಮೂವರು ಮಾಜಿ ಸಚಿವರಿಗೂ ಅವರ ಕ್ಷೇತ್ರದಲ್ಲಿ ಯಾವ ತೊಂದರೆಯೂ ಆಗುವುದಿಲ್ಲ. ಅವರ ಗ್ರಹಚಾರ ಸರಿ ಇರಲಿಲ್ಲ. ಕೆಟ್ಟ ಕಾಲ ಅಷ್ಟೇ ಎಂದು ಅವರು ಮಂಗಳೂರಿನಲ್ಲಿ ಹೇಳಿದ್ದಾರೆ.<br />
<br />
ಇನ್ನು ಪಕ್ಷದ ಅಧ್ಯಕ್ಷ ಈಶ್ವರಪ್ಪನವರ ಆತ್ಮ ವಿಶ್ವಾಸವನ್ನು ನೋಡಿ; ಸದನದಲ್ಲಿ ನೀಲಿಚಿತ್ರ ವೀಕ್ಷಣೆ ಆರೋಪಕ್ಕೆ ಗುರಿಯಾಗಿರುವ ಮೂವರು ಮಾಜಿ ಸಚಿವರ ವಿರುದ್ಧ ಪಕ್ಷ ತಕ್ಷಣ ಕ್ರಮ ಕೈಗೊಳ್ಳುವುದಿಲ್ಲ. ಸದನ ಸಮಿತಿ ವರದಿಯೇ ಅಂತಿಮ. ಹೀಗಾಗಿ ಈ ಮೂವರೂ ಶಾಸಕರೂ ಕಳಂಕತ್ವದಿಂದ ಹೊರ ಬರುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ ಈ ಮೂವರ ಹೇಳಿಕೆಗಳು ಅಧಿಕೃತ, ಯಾಕೆಂದರೆ ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.<br />
<br />
ಇದಕ್ಕೆಲ್ಲಾ ಸಂವಿಧಾನವನ್ನು ನಂಬಿರುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟಿರುವ ನಮ್ಮಂಥ ಪಾಮರರು ಏನು ಹೇಳಲು ಸಾಧ್ಯ?<br />
<br />
ಬಹುಶಃ ಇದನ್ನೆಲ್ಲಾ ನೋಡಿ ಪ್ರತಿಭಟಿಸಲಾಗದೆ, ತಮ್ಮ ಪಕ್ಷ ನೈತಿಕವಾಗಿ ಕುಸಿಯುತ್ತಿರುವುದನ್ನು ಕಂಡು ಒಳಗೊಳಗೆ ಸಂಕಟಪಟ್ಟ ಮೃದು ಮಾತಿನ, ಸುಸಂಸ್ಕೃತ, ಸಜ್ಜನ ರಾಜಕಾರಣಿ ವಿ.ಎಸ್. ಆಚಾರ್ಯ ಅವರು ಎದೆಯೊಡೆದು ಇಹಲೋಕ ತ್ಯಜಿಸಿದರೇನೋ?!<br />
<br />
ಶೌರ್ಯಕ್ಕೆ, ಕೆಚ್ಚಿಗೆ, ಹೋರಾಟಕ್ಕೆ ನಮಗೆ ನೆನಪಾಗುವುದು ಕೊಡಗರು, ನಮ್ಮ ಸೇನೆಯ ಮೊದಲ ಜನರಲ್ ಮೇಜರ್ ಪೀಲ್ಡ್ ಮಾರ್ಷಲ್ ಕರಿಯಪ್ಪ ಅವರು. ಸೇನೆಯಲ್ಲಿ ಗೂರ್ಖಾ ರೆಜಿಮೆಂಟ್ ಇದ್ದ ಹಾಗೆ ಕೂರ್ಗ್ ರೆಜಿಮೆಂಟ್ ಇದೆ. ಇಂಥ ಮಣ್ಣಿನಲ್ಲಿ ಹುಟ್ಟಿದ ಬೋಪಯ್ಯನವರು ಹಾಗೆ ವರ್ತಿಸುತ್ತಿದ್ದಾರಲ್ಲಾ..? ಹುಟ್ಟಿದ ಮಗು ಶೌರ್ಯವಂತನಾಗಿ ಬೆಳೆಯಲಿ ಎಂದು ಹುಲಿ ಹಾಲನ್ನು ತಂದು ಕುಡಿಸುವ ಪರಂಪರೆ ಆ ಮಣ್ಣಿನದು. ಈಗ ಆ ಪರಂಪರೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅ ಜಿಲ್ಲೆಯ ಪಕ್ಕದ ಜಿಲ್ಲೆ ನಮ್ಮದು. ನಮ್ಮಲ್ಲಿ ಈಗಲೂ ಗಂಡು ಮಗುವಿಗೆ ಹುಲಿ ತುಪ್ಪವನ್ನು ನೆಕ್ಕಿಸುವ ಪದ್ಧತಿಯಿದೆ. ನನ್ನ ಮಗನಿಗೆ ನೆಕ್ಕಿಸಿದ್ದಾರೆ..<br />
<br />
ನಾನು ಕಾಲೇಜಿನಲ್ಲಿದ್ದಾಗ ಪ್ರವಾಸ ಬಂದಾಗ ವಿಧಾನಸಭೆಯ ಕಲಾಪವನ್ನು ವೀಕ್ಷಿಸಲು ಕರೆದುಕೊಂಡು ಹೋಗಿದ್ದರು. ಆಗ ನಾವು ಒಂದು ಪೂಜಾಸ್ಥಾನದ ಒಳಗೆ ಪ್ರವೇಶಿಸುವಷ್ಟೇ ಭಯ ಭಕ್ತಿಯಿಂದ ಅದರೊಳಗೆ ಪ್ರವೇಶಿಸಿದ್ದೆವು. ಮಾತ್ರವಲ್ಲ ಆ ಸನ್ನಿದಾನಕ್ಕೆ ಅಗೌರವ ತೋರಬಾರದೆಂದು ನಮ್ಮನ್ನು ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದೆಂದು ನಮ್ಮ ಲೆಕ್ಚರರ್ ತಾಕೀತು ಮಾಡಿದ್ದರು. ಆ ಗೌರವದ ಭಾವನೆ ಇಂದಿಗೂ ನನ್ನ ಮನದಲ್ಲಿದೆ. ಆದರೆ ಮೊನ್ನೆ ಸದನದಲ್ಲಿ ನಡೆದ ಘಟನೆ ಈ ಸ್ಥಳದ ಪಾವಿತ್ರ್ಯತೆಯನ್ನು ಮಲಿನಗೊಳಿಸಿದೆ. ನಮ್ಮ ಎಳೆಯ ಮಕ್ಕಳ ಮೇಲೆ ಈ ಪ್ರಕರಣ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಯಾರೂ ಚಿಂತಿಸಿದಂತಿಲ್ಲ.<br />
<br />
ಸೆಕ್ಸ್ ಸೀಡಿ ವೀಕ್ಷಣೆ ಪ್ರಕರಣದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಸೇರಿದಂತೆ ಒಟ್ಟು ರಾಜಕಾರಣವೇ ನಾ ಹೊಡೆದ ಹಾಗೆ ಮಾಡುತ್ತೇನೆ, ನೀ ಅತ್ತ ಹಾಗೆ ಮಾಡು ಎಂಬ ರೀತಿಯಲ್ಲಿದೆ. ನಮ್ಮಲ್ಲಿ ಒಂದು ಮಹಿಳಾ ಆಯೋಗವಿದೆ. ಅದಕ್ಕೊಬ್ಬ ಅಧ್ಯಕ್ಷೆಯಿದ್ದಾರೆ. ಅವರು ಕನಿಷ್ಟ ಪಕ್ಷ ಒಂದು ಹೇಳಿಕೆಯನ್ನಾದರೂ ನೀಡಬಹುದಿತ್ತು.ಅದನ್ನೂ ಮಾಡಲಿಲ್ಲ. ಮಹಿಳಾ ಸಂಘಟನೆಗಳೂ ತುಟಿ ಬಿಚ್ಚಲಿಲ್ಲ. ಒಬ್ಬ ಮಹಿಳೆಯಾಗಿ ಪುರುಷ ಮನಸ್ಥಿತಿಯ ಈ ಕಳಂಕಿತ ಲಾಲಸೆಯನ್ನ ನಾನು ತೀವ್ರವಾಗಿ ಪ್ರತಿಭಟಿಸುತ್ತೇನೆ.<br />
<br />
-<b><a href="http://mounakanive.blogspot.in/">ಉಷಾ ಕಟ್ಟೆಮನೆ</a></b><br />
<div>
<br /></div>
</div>sampadakeeyahttp://www.blogger.com/profile/10834139994439066030noreply@blogger.com0tag:blogger.com,1999:blog-3901985173139732142.post-36679966283071957382012-02-17T11:07:00.000+05:302012-02-17T11:07:29.778+05:30ಸದನದಿಂದ ಮಾಧ್ಯಮಗಳನ್ನು ಹೊರಗಿಡುವುದು ಬುದ್ಧಿವಂತಿಕೆಯಲ್ಲ, ಬಡತನ<div dir="ltr" style="text-align: left;" trbidi="on">
<br />
<a href="https://blogger.googleusercontent.com/img/b/R29vZ2xl/AVvXsEh4M286eODV8KimlluSiHj6TU-g176w9qDeGh6Ov3QV2INgWH241EziIf9CBr_TpQPHlnVCF1BBQ4GqJTlodJGq3zHsnVyOqmtnL_6DB9GIqG2qGid9eJ3VJmrZsvsqR0FegWrxeOmIYHjp/s1600/11-blue-film.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEh4M286eODV8KimlluSiHj6TU-g176w9qDeGh6Ov3QV2INgWH241EziIf9CBr_TpQPHlnVCF1BBQ4GqJTlodJGq3zHsnVyOqmtnL_6DB9GIqG2qGid9eJ3VJmrZsvsqR0FegWrxeOmIYHjp/s1600/11-blue-film.jpg" /></a><br />
<b>-ಚಿದಂಬರ ಬೈಕಂಪಾಡಿ</b><br />
<br />
ಪ್ರಜಾಪ್ರಭುತ್ವದ ಕಾವಲುಗಾರ ಮಾಧ್ಯಮ ಎನ್ನುವ ಮಾತು ನಿಜ ಎನ್ನುವುದನ್ನು ರಾಜಕಾರಣಿಗಳು ಸಾರ್ವಜನಿಕ ಭಾಷಣಗಳಲ್ಲಿ ಹೇಳಿದರೂ ಆಂತರಿಕವಾಗಿ ಅವರು ಹಾಗೆ ಯೋಚಿಸುತ್ತಾರೆಂದು ಭಾವಿಸಬೇಕಾಗಿಲ್ಲ. ಯಾಕೆಂದರೆ ವಿಧಾನಸಭಾ ಕಲಾಪ ನಡೆಯುತ್ತಿದ್ದಾಗ ಅಶ್ಲೀಲ ವೀಡಿಯೋ ನೋಡಿದರೆಂಬುದು ಜಗಜಾಹೀರಾಗುತ್ತಿದ್ದಂತೆಯೇ ಇಡೀ ರಾಜಕೀಯ ಕ್ಷೇತ್ರದಲ್ಲಿ ತಲ್ಲಣಗಳು ಕಾಣಿಸಿಕೊಂಡವು.<br />
<br />
ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಂಡ ದೃಶ್ಯಗಳು ಮತ್ತೆ ಮತ್ತೆ ಕಣ್ಣೊರೆಸಿಕೊಂಡು ನೋಡುವಷ್ಟರ ಮಟ್ಟಕ್ಕೆ ದಿಗಿಲುಂಟು ಮಾಡಿದವು. ವಿಧಾನ ಸಭೆಯ ಇತಿಹಾಸದಲ್ಲಿ ಗದ್ದಲಗಳು ನಡೆದಿವೆ, ಕುರ್ಚಿ, ಮೈಕ್ ಬಿಸಾಡಿದ ಘಟನೆಗಳು ನಡೆದಿವೆ, ಅನೇಕ ಕಾರಣಗಳಿಗಾಗಿ ಅನೇಕ ರೀತಿಯ ರಂಪಾಟಗಳು ಘಟಿಸಿವೆ, ಸದನದೊಳಗೇ ರಾತ್ರಿಯೆಲ್ಲ ಧರಣಿ ನಡೆಸಿರುವುದು ಹೀಗೆ ಹತ್ತು ಹಲವು ಘಟನೆಗಳು ಈ ದೇವಮಂದಿರದೊಳಗೆ ನಡೆದಿವೆ. ಆದರೆ ಅಶ್ಲೀಲ ವೀಡಿಯೋ ನೋಡಿ ಸಿಕ್ಕಿಬಿದ್ದ ಮೊಟ್ಟಮೊದಲ ಘಟನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.<br />
<br />
ಅಶ್ಲೀಲ ಮಾತುಗಳನ್ನು ಅಥವಾ ಅನ್ಪಾರ್ಲಿಮೆಂಟರಿ ಪದಬಳಕೆ ಮಾಡುವುದೇ ತಪ್ಪು ಎನ್ನುವಷ್ಟರಮಟ್ಟಿಗೆ ಸದನಕ್ಕೆ ಘನತೆಯಿದೆ. ಈ ಕಾರಣಕ್ಕಾಗಿಯೇ ಅಂಥ ಪದಗಳನ್ನು ಆಡಿದವರು ಕ್ಷಮೆಯಾಚಿಸಿರುವುದು, ಅಂಥ ಪದಗಳನ್ನು ಕಡತದಿಂದ ಕಿತ್ತು ಹಾಕಿಸಿದಂಥ ನೂರಾರು ಉದಾಹರಣೆಗಳಿವೆ. ಆದರೆ ಅಶ್ಲೀಲ ವೀಡಿಯೋ ಪ್ರಕರಣದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು ಮತ್ತು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸನ್ನಡತೆಯನ್ನು ಸದನದೊಳಗಿರುವವರು ಪಾಲಿಸುವಂತೆ ಮಾಡುವುದು ಜವಾಬ್ದಾರಿಯುತವಾದ ಹಾಗೂ ಸುಧಾರಣೆಯ ಕ್ರಮ. ಅಶ್ಲೀಲ ವೀಡಿಯೋ ಪ್ರಕರಣದ ಅಂತಿಮ ತೀರ್ಪೇ ಹೊರಬಿದ್ದಿಲ್ಲ, ನಿಜಕ್ಕೂ ತಪ್ಪಾಗಿರುವುದು ಎಲ್ಲಿ? ಎನ್ನುವ ಶೋಧವೂ ಆಗಿಲ್ಲ. ಅತ್ಯಂತ ಆತುರವಾಗಿ ರಾಜಕಾರಣಿಗಳ ಮನಸ್ಸು (ಸಾಮೂಹಿಕವಾಗಿ ಅಲ್ಲ, ಕೆಲವೇ ಕೆಲವು) ಮಾಧ್ಯಮಗಳನ್ನು ಸದನದಿಂದ ಹೊರಗಿಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ನಿಜಕ್ಕೂ ಆಘಾತಕಾರಿ. ಅಶ್ಲೀಲ ವೀಡಿಯೋ ನೋಡಿದ ಅಪರಾಧಕ್ಕಿಂತಲೂ ಘೋರವಾದ ಅಪರಾಧವನ್ನು ಮಾಡಲು ಕರ್ನಾಟಕದಲ್ಲಿ ಸಂಚು ಹೆಣೆಯುತ್ತಿರುವುದು ನಿರೀಕ್ಷಿತವೂ ಹೌದು.<br />
<br />
ಸದನದೊಳಗೆ ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲು ತಮಗೆ ಅನುಕೂಲಕರವಾದ ಸೂತ್ರ ಹೆಣೆದು ಯಾರನ್ನು ಬಿಡಬೇಕು?, ಯಾರನ್ನು ಬಿಡಬಾರದು ಎನ್ನುವ ತೀರ್ಮಾನಕ್ಕೆ ಬರುವಂಥ ದಡ್ಡ ಕೆಲಸವನ್ನು ಬುದ್ಧಿವಂತರು ಮಾಡುತ್ತಿರುವುದು ಮೂರ್ಖತನ ಮತ್ತು ಅವಿವೇಕಿತನ ಕೂಡಾ. ಸರ್ಕಾರಿ ಕೃಪಾಪೋಷಿತ ಮಾಧ್ಯಮಗಳಿಗೆ ಸದನದೊಳಗೆ ಮಣೆಹಾಕಿ ಹುಳುಕನ್ನು ಎತ್ತಿತೋರಿಸುವ ಮಾಧ್ಯಮಗಳ ಕತ್ತುಹಿಚುಕುವ ದಡ್ಡತನ ಇದರ ಹಿಂದಿದೆ. ಬೆಳಕೇ ಇಲ್ಲದ ಸ್ಥಿತಿಯನ್ನು ನೆನಪಿಸಿಕೊಂಡಂತಾಗುತ್ತದೆ ಮಾಧ್ಯಮಗಳಿಲ್ಲದ ಸದನವನ್ನು ಊಹಿಸುವುದು ಎನ್ನುವ ಸಾಮಾನ್ಯ ಅರಿವೂ ಇಲ್ಲದಷ್ಟು ಬುದ್ಧಿ ಬಡತನವೇ ನಮ್ಮ ರಾಜಕಾರಣಿಗಳಿಗೇ?<br />
<br />
ಮಾಧ್ಯಮಗಳ ಕತ್ತು ಹಿಚುಕುವ, ತಮಗೆ ಬೇಕಾದಂತೆ ಕುಣಿಸುವ ತಂತ್ರಗಳನ್ನು ದಶಕಗಳ ಹಿಂದೆಯೂ ಅನೇಕರು ರೂಪಿಸಿದ್ದರು ಮತ್ತು ತಮ್ಮದೇ ಆದ ತಂತ್ರಗಾರಿಕೆಯಿಂದ ಕಾರ್ಯಗತ ಮಾಡುವ ದುಸ್ಸಾಹಸವನ್ನು ಮಾಡಿ ಇತಿಹಾಸದ ಪುಟ ಸೇರಿಕೊಂಡಿರುವ ದೊಡ್ಡ ರಾಜಕಾರಣಿಗಳನ್ನು ಈಗಿನವರು ನೆನಪು ಮಾಡಿಕೊಂಡರೆ ಅರ್ಥವಾಗಿ ಬಿಡುತ್ತದೆ ತಾವೇನು ಮಾಡಲು ಹೊರಟಿದ್ದೇವೆಂಬುದು. ನಿರ್ಮಲವಾಗಿದ್ದ ಮಾಧ್ಯಮ ಕ್ಷೇತ್ರವನ್ನು ಪೇಯ್ಡ್ ನ್ಯೂಸ್ ಮೂಲಕ ಕಲುಷಿತಗೊಳಿಸಿದವರು ಯಾರು?<br />
<br />
ಪತ್ರಕರ್ತನ ಹುದ್ದೆ ನಿರ್ವಹಿಸಿದರೆ ಹೊಟ್ಟೆಗೇನು ಗತಿ ? ಎನ್ನುವ ಕಾಲ ಬದಲಾಗಿದೆ, ರಾಜಕಾರಣಿಯ ಮನಸ್ಸಿನ ಹಿಂದೆ ಮಾಧ್ಯಮಗಳು ಮತ್ತು ಮಾಧ್ಯಮ ಮಂದಿಯ ಬುದ್ಧಿ ಕೆಲಸ ಮಾಡುವಂತಾಗಿರುವ ಸ್ಥಿತಿಗೆ ಹೊಣೆ ಯಾರು? ವೃತ್ತಿಘನತೆ ಎತ್ತಿಹಿಡಿಯುವುದೇ ಪರಮಧರ್ಮವೆಂದು ಬದುಕಿದ ಮಾಧ್ಯಮ ಮಂದಿಯ ನಿಜವಾದ ಬದುಕು ಹಿಂದೆ ಹೇಗಿತ್ತು ? ಈಗ ಹೇಗಿದೆ ? ಇಂಥ ಬದಲಾವಣೆಯ ಬಿರುಗಾಳಿಯ ಸುಳಿಯನ್ನು ಅರ್ಥಮಾಡಿಕೊಳ್ಳಿ.<br />
<br />
ಸದನದೊಳಗೆ ಪ್ರವೇಶಿಸುವುದೆಂದರೆ ದೇವಮಂದಿರಕ್ಕೆ ಪ್ರವೇಶಿಸಿದಂತೆ ಎನ್ನುವ ಕಲ್ಪನೆ ಜೀವಂತವಾಗಿದೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಸದನದೊಳಗಿನ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ, ಮೌಲ್ಯಗಳು ಇಳಿಮುಖವಾಗುತ್ತಿವೆ ಎನ್ನುವ ಸ್ವರವನ್ನು ಹಿರಿಯ ಪತ್ರಕರ್ತರು ಬಹಿರಂಗವಾಗಿ ಎತ್ತುತ್ತಿರುವುದು. ತಮ್ಮ ಅನೂಕೂಲಕ್ಕೆ ಮಾಧ್ಯಮಗಳನ್ನು ತೆಕ್ಕೆಯಲ್ಲಿಟ್ಟುಕೊಂಡು, ಮಾಧ್ಯಮ ಮಂದಿಯನ್ನು ಮಡಿಲಲ್ಲಿಟ್ಟುಕೊಂಡು ಮುದ್ದಾಡಿದವರು ಈಗ ಕೈಚೆಲ್ಲಿದರೆ ಹೇಗೆ ? ಎನ್ನುವುದು ಇಲ್ಲಿ ಪ್ರಶ್ನೆಯಲ್ಲ.<br />
<br />
ಒಬ್ಬ ಶಾಸಕನ ಸರಿಸಮಾನಕ್ಕೆ ಅಧಿಕಾರಿಗಳು ನಿಂತು ಮಾತನಾಡುವುದೇ ತಪ್ಪು ಎನ್ನುವ ದಿನಗಳಿದ್ದವು. ಮಂತ್ರಿಯ ಜೊತೆಯಲ್ಲಿ ವೇದಿಕೆ ಹತ್ತುವುದೇ ಸಲ್ಲದು ಎನ್ನುವ ನಿರ್ಬಂಧದ ದಿನಗಳಿದ್ದವು. ಈಗ ಅಧಿಕಾರಿಗಳೇ ರಾಜಕಾರಣಿಗಳ ಹೆಗಲಮೇಲೆ ಕೈ ಹಾಕಿಕೊಂಡು ನಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ ಅಂತಾದರೆ ಕಳೆದುಹೋಗಿರುವ ಮೌಲ್ಯಗಳನ್ನು ಎಲ್ಲಿ ಹುಡುಕುವಿರಿ? ಮಡೆಸ್ನಾನ, ಪಂಕ್ತಿಭೇದ ಭೋಜನ, ತಲೆಮೇಲೆ ಮಲಸುರಿದುಕೊಂಡು ಪ್ರತಿಭಟಿಸುವಂಥ ಘಟನೆಗಳು ನಿಮ್ಮ ಸುತ್ತಲೂ ನಡೆಯುತ್ತಿವೆಯಲ್ಲ ಅವುಗಳ ವಿರುದ್ಧ ತಾರ್ಕಿಕವಾದ ಹೋರಾಟ ಮಾಡಲು ಸಾಧ್ಯವಾಯಿತೇ? ಖಾಸಗೀಕರಣಕ್ಕೆ ಮುಚ್ಚಿದ್ದ ಬಾಗಿಲುಗಳನ್ನು ತೆರೆದು ಎಂಥ ಅನಾಹುತವಾಗುತ್ತಿದೆ ಎನ್ನುವ ಅರಿವಾದರೂ ಬೇಡವೇ?<br />
<br />
ದೇಹಕ್ಕೆ ಮುಪ್ಪು ಬಂದರೆ ಒಪ್ಪಿಕೊಳ್ಳಬಹುದು, ಬುದ್ಧಿಗೆ ಮುಪ್ಪು ಬರಬಾರದು. ಮಾಧ್ಯಮಗಳನ್ನು ಸದನದಿಂದ ದೂರವಿಡುವ ಪ್ರಯತ್ನವೆಂದರೆ ಬುದ್ಧಿಗೆ ಮುಪ್ಪು ಬಂದಿದೆ ಎಂದೇ ಅರ್ಥ. ಇಂಥ ತಪ್ಪು ಕೆಲಸವನ್ನು ಮಾಡಿದ ಅಪಕೀರ್ತಿಗೆ ಕರ್ನಾಟಕ ಒಳಗಾಗುವುದು ನಿಜಕ್ಕೂ ಆಘಾತಕಾರಿ. ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಕೆಡಿಪಿ ಸಭೆಗಳನ್ನು ನೋಡಿದರೆ ಸಾಕು ನಿದ್ದೆ ಗೊರಕೆ, ಆಕಳಿಕೆ, ಮೊಬೈಲ್ ನಲ್ಲಿ ಸರಸ-ಸಲ್ಲಾಪದ ಲೋಕವೇ ಅನಾವರಣಗೊಳ್ಳುತ್ತದೆ. ಅಲ್ಲೂ ಮಾಧ್ಯಮಗಳಿವೆ, ಆದರೆ ಎಚ್ಚೆತ್ತುಕೊಂಡಿಲ್ಲ, ಈಗ ವಿಧಾನಸಭೆಯ ಕಲಾಪದ ಹಿನ್ನೆಲೆಯಲ್ಲಿ ಮಾಧ್ಯಮಗಳು ಚುರುಕಾಗುವ ಕಾಲ ಸನ್ನಿಹಿತವಾಗಿದೆ.<br />
<br />
ವಿಧಾನಸಭೆಯ ಕಲಾಪದಿಂದ ಮಾಧ್ಯಮಗಳನ್ನು ಹೊರಗಿಡುವ ಪ್ರಯತ್ನ ಸಫಲವಾದರೆ ಅದು ಕೆಳಹಂತಕ್ಕೂ ಅನ್ವಯವಾಗುವ ಅಪಾಯವಿದೆ. ಸದನದ ಕಲಾಪ ಗೌಪ್ಯ ಅಲ್ಲ, ಅದನ್ನು ಸಾರ್ವಜನಿಕರು ಅರ್ಥಾತ್ ಪ್ರಜೆಗಳು ತಿಳಿದುಕೊಳ್ಳುವ ಮೂಲಭೂತ ಹಕ್ಕೂ ಕೂಡಾ. ಅಂತೆಯೇ ಮಾಧ್ಯಮಗಳು ಕೂಡಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದರಲ್ಲಿ ತಪ್ಪಿಲ್ಲ. ರಾಜಕಾರಣಿಗಳು ಅದರಲ್ಲೂ ಮಾಧ್ಯಮಗಳ ಬೆಳಕಲ್ಲೇ ಹೊಳಪುಕಂಡುಕೊಂಡವರು ಬುದ್ಧಿಗೆ ಕವಿದಿರುವ ಮುಸುಕನ್ನು ಸರಿಸಿಕೊಳ್ಳುವುದು ಒಳ್ಳೆಯದು. ಅವಿವೇಕತನ ಎಂದೂ ಬುದ್ಧಿವಂತಿಕೆಯೆನಿಸಿಕೊಳ್ಳುವುದಿಲ್ಲ, ಇಲ್ಲೂ ಹಾಗೆಯೇ.</div>sampadakeeyahttp://www.blogger.com/profile/10834139994439066030noreply@blogger.com1tag:blogger.com,1999:blog-3901985173139732142.post-73599457149891236862012-02-13T13:50:00.002+05:302012-02-13T13:50:56.040+05:30ರಂಗಣ್ಣನ ಪಬ್ಲಿಕ್ ಟಿವಿ ನೋಡಿದಿರಾ? ಏನನ್ನಿಸಿತು?<div dir="ltr" style="text-align: left;" trbidi="on">
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEha7JYJoXd0HKCwZlJ28-iG_IYy3w7nygho8MB-RFYhBmys77v3IrUVsf1GOSZc-EAbLDpZc6s3Q3Go73u2RegxMC3hOj6ru6YYgMFfjlYhyphenhyphenhe_H9S4m1umfSMl3p02JcuTPCZ9gGIqbzyc/s1600/dvs.jpg" imageanchor="1" style="margin-left: 1em; margin-right: 1em;"><img border="0" height="300" src="https://blogger.googleusercontent.com/img/b/R29vZ2xl/AVvXsEha7JYJoXd0HKCwZlJ28-iG_IYy3w7nygho8MB-RFYhBmys77v3IrUVsf1GOSZc-EAbLDpZc6s3Q3Go73u2RegxMC3hOj6ru6YYgMFfjlYhyphenhyphenhe_H9S4m1umfSMl3p02JcuTPCZ9gGIqbzyc/s400/dvs.jpg" width="400" /></a></div>
ಪತ್ರಕರ್ತನೇ ಚಾನಲ್ ಮಾಲೀಕನಾಗಿರುವ ಪಬ್ಲಿಕ್ ಟಿವಿ ನಿನ್ನೆ ಶುರುವಾಯಿತು. ಮೊನ್ನೆ ಪಬ್ಲಿಕ್ ಟಿವಿಯ ಮೂಲಕ ರಂಗಣ್ಣ ಆಕ್ಟಿವಿಸಂ ಮಾಡ್ತಾರಾ ಎಂಬ ಶೀರ್ಷಿಕೆಯ ಲೇಖನ ಪ್ರಕಟಿಸಿದ್ದನ್ನು ನೀವು ನೋಡಿದ್ದೀರಿ. ಕಾಕತಾಳೀಯ ಎಂಬಂತೆ ನಿನ್ನೆ ಚಾನಲ್ ಆರಂಭಗೊಂಡ ನಿಮಿಷದಲ್ಲೇ ರಂಗನಾಥ್ ಘೋಷಿಸಿದ್ದು ಇದು ಒಂದು ಟಿವಿಯಲ್ಲ, ಚಳವಳಿ ಎಂದು. ಇದು ಯಾರ ಆಸ್ತಿಯೂ ಅಲ್ಲ, ನಿಮ್ಮ ಟಿವಿ ಎಂಬ ಘೋಷವಾಕ್ಯಕ್ಕೆ ರಂಗನಾಥ್ ತುಸು ಹೆಚ್ಚೇ ಒತ್ತು ಕೊಟ್ಟು ಮಾತಾಡಿದ್ದು ಕಾಣಿಸಿತು. ನಾವು ಯಾರಿಗೂ ಜಗ್ಗಲ್ಲ, ಬಗ್ಗಲ್ಲ, ನಿಮಗೆ ಮಾತ್ರ ತಲೆಬಾಗುತ್ತೇವೆ ಎಂದು ರಂಗನಾಥ್ ಆರ್ಭಟಿಸಿದರು. ರಂಗನಾಥ್ ಪ್ರಾಸ್ತಾವನೆಯ ಮಾತುಗಳು ಅತಿ ಆತ್ಮವಿಶ್ವಾಸದಿಂದ ಕೂಡಿದ್ದವು ಅನ್ನುವುದಕ್ಕೆ ಅವರ ಬದಲಾದ ಬಾಡಿ ಲಾಂಗ್ವೇಜ್ ಸಾಕ್ಷಿಯಾಗಿತ್ತು. ಈ ಆತ್ಮವಿಶ್ವಾಸ ಅಹಂಕಾರವಾಗದೇ ಇದ್ದರೆ ಪಬ್ಲಿಕ್ ಟಿವಿಯ ಕನಸುಗಳು ನನಸಾಗಬಹುದೇನೋ?<br />
<br />
ನಿನ್ನೆಯ ಕಾರ್ಯಕ್ರಮಗಳನ್ನು ಗಮನಿಸಿದಾಗ ಚಾನಲ್ ಪೂರ್ತಾ ರಂಗಣ್ಣನೇ ತುಂಬಿಹೋದಂತೆ ಕಾಣಿಸಿತು. ಅತಿಥಿ ಗಣ್ಯರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರ ಬಾಯಲ್ಲೂ ರಂಗನಾಥ್ ಗುಣಗಾನವೇ ನಡೆಯಿತು. ತಮಗಿರುವ ಜನಪ್ರಿಯತೆಯನ್ನು ಚಾನಲ್ ಗೆ ಮೂಲಬಂಡವಾಳ ಮಾಡಿಕೊಳ್ಳುವ ಸ್ಪಷ್ಟ ಯತ್ನಕ್ಕೆ ರಂಗನಾಥ್ ಕೈ ಹಾಕಿದ್ದಾರೆ ಅನಿಸಿತು. ಅದರಲ್ಲಿ ಅಂಥ ದೋಷವೇನೂ ಇಲ್ಲ.<br />
<br />
ಪಬ್ಲಿಕ್ ಟಿವಿಯ ಬಗ್ಗೆ ಕೇಳಿಬಂದ ಊಹಾಪೋಹಗಳಿಗೆ ಉತ್ತರಿಸಲು ರಂಗನಾಥ್ ಒಂಚೂರು ಪ್ರಯತ್ನ ಮಾಡಿದಂತೆ ತೋರಿತು. ಪಬ್ಲಿಕ್ ಟಿವಿ ಜನರದ್ದು ಎಂದು ಹೇಳುವ ಭರಾಟೆಯಲ್ಲಿ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುವ ಪ್ರಯತ್ನಗಳು ನಡೆದವು. ಚಾನಲ್ ನ ಕಚೇರಿ, ಬಂಡವಾಳ, ಅಧಿಕಾರಿಗಳು, ಸಿಬ್ಬಂದಿಯ ಬಗ್ಗೆ ವಿವರಣೆಗಳು ಪಾರದರ್ಶಕತೆಯನ್ನು ಬಿಂಬಿಸುವ ಪ್ರಯತ್ನಗಳಾಗಿ ಕಾಣಿಸಿದವು.<br />
<br />
ಚಾನಲ್ ನ ಮೊದಲ ಸುದ್ದಿಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಂದ ಓದಿಸುವ ಪ್ರಯತ್ನ ನಡೆಯಿತು. ನಂತರ ಸಂತೋಷ್ ಹೆಗಡೆ ಸುದ್ದಿ ಓದಿದರು. ಇದನ್ನು ಲೈವ್ ಮಾಡಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು.<br />
<br />
ಪಬ್ಲಿಕ್ ಟಿವಿ ನೋಡುತ್ತಿದ್ದಂತೆ ಇದು ಹೊಸ ಟಿವಿ ಚಾನಲ್ ಅನಿಸಲಿಲ್ಲ. ಯಾಕೆಂದರೆ ಹಿಂದೆ ಕೇಳಿದ ಧ್ವನಿಗಳೇ ಕೇಳುತ್ತಿದ್ದವು, ಅದೇ ಮುಖಗಳು ಕಾಣಿಸಿಕೊಂಡವು. ಸುದ್ದಿಯ ಪ್ರಸ್ತುತಿಯಲ್ಲೂ ಅಂಥ ಭಿನ್ನತೆಯೇನೂ ಕಾಣಿಸಲಿಲ್ಲ. ರಂಗನಾಥ್ ಮಾತಿಗೆ ಕೂತರೆ ಯಥಾಪ್ರಕಾರ ಮಾತಿನ ಮಲ್ಲ. ಚೆಕ್ಕುಬಂದಿ ಕಾರ್ಯಕ್ರಮದ ಝಲಕ್ ನಿನ್ನೆ ಪ್ರಸಾರವಾಯಿತು. ಮೊದಲ ದಿನವಾದ್ದರಿಂದ ರಂಗನಾಥ್ ತುಸು ಅಂಡರ್ ಪ್ಲೇ ಮಾಡಲು ಯತ್ನಿಸಿದಂತಿತ್ತು. ಬಹುಶಃ ಗಂಭೀರವಾದ ರಾಜಕೀಯ ವಿಶ್ಲೇಷಣೆಗಳನ್ನು ಮುಂದಿನ ದಿನಗಳಲ್ಲಿ ಅವರಿಂದ ನಿರೀಕ್ಷಿಸಬಹುದು.<br />
<br />
ಪಬ್ಲಿಕ್ ಟಿವಿಯ ಕುರಿತು ಗಂಭೀರವಾದ ಆಕ್ಷೇಪಣೆಗಳೂ ಇವೆ. ತಪ್ಪಾದರೆ ತಿದ್ದಿ ಎಂದು ರಂಗನಾಥ್ ಮೊದಲ ದಿನವೇ ಹೇಳಿರುವುದರಿಂದ ತಪ್ಪುಗಳನ್ನು ಮುಂದಿಡುವುದು ನಮ್ಮ ಜವಾಬ್ದಾರಿಯೂ ಹೌದು. ಪಬ್ಲಿಕ್ ಟಿವಿಯೂ ಇತರ ಚಾನಲ್ ಗಳಂತೆ ಮನೆಹಾಳು ಜ್ಯೋತಿಷಿಗಳನ್ನು ಮೆರೆಸಲು ಆರಂಭಿಸಿರುವುದು ಅಸಹನೀಯ. ಜೋತಿಷ್ಯ ಸಂಬಂಧಿ ಕಾರ್ಯಕ್ರಮದ ಪ್ರೋಮೋ ಬಗ್ಗೆ ಸಂಪಾದಕೀಯದ ಓದುಗರೊಬ್ಬರು ಗಮನ ಸೆಳೆದಿದ್ದಾರೆ. ಮಕ್ಕಳಾಗಿಲ್ಲವೇ? ಮನೆಯಲ್ಲಿ ಸಮಸ್ಯೆಯೇ? ಹಾಗಿದ್ದರೆ ಈ ಕಾರ್ಯಕ್ರಮ ನೋಡಿ ಎಂಬ ಪ್ರೋಮೋ ಪ್ರಸಾರವಾಗುತ್ತಿದೆಯಂತೆ.<br />
<br />
ನಮ್ಮದು ನೇರಾನೇರ ಪ್ರಶ್ನೆ. ಮಕ್ಕಳಾಗದವರಿಗೆ ಮಕ್ಕಳು ಹುಟ್ಟಿಸಲು ಜೋತಿಷಿಗಳಿಗೆ ಶಕ್ತಿಯಿದೆಯೇ? ಅದನ್ನು ನೀವು ನಂಬುತ್ತೀರಾ? ನಂಬುವುದಾದರೆ ಟಿವಿ ಚಾನಲ್ ನಡೆಸುವ ಬದಲು ಜೋತಿಷಿಗಳನ್ನು ಗುಡ್ಡೆ ಹಾಕಿಕೊಂಡು ಮಕ್ಕಳನ್ನು ಹುಟ್ಟಿಸುವ ಸಂಸ್ಥೆಯನ್ನು ಕಟ್ಟಿಬಿಡಿ, ಸಾರ್ವಜನಿಕರಿಗೆ ಚಾನಲ್ನಿಂದ ಆಗುವ ಸೇವೆಗಿಂತ ಸಾವಿರ ಪಟ್ಟು ಅನುಕೂಲವಾಗುತ್ತದೆ.<br />
ಜೋತಿಷಿಗಳ ಈ ಬೊಗಳೆಯನ್ನು ನಂಬುವುದಿಲ್ಲವಾದರೆ ಈ ಆತ್ಮವಂಚನೆಯನ್ನು ಕೈಬಿಡಿ. ಭಾರತ ಸಂವಿಧಾನ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಕರ್ತವ್ಯವನ್ನು ಘೋಷಿಸಿದೆ. ಅಂಧಶ್ರದ್ಧೆಗಳನ್ನು ಹರಡುವುದು ಸಂವಿಧಾನ ವಿರೋಧಿ, ಜನವಿರೋಧಿ ಕ್ರಿಯೆ. ಜನರನ್ನು ಜೋತಿಷಿಗಳ ಗುಲಾಮರನ್ನಾಗಿಸುವ ಪ್ರಯತ್ನ ಬೇಡ. ಅದನ್ನು ಮಾಡಿದರೆ ಜನರಿಗಾಗಿ ನಮ್ಮ ಟಿವಿ ಎಂಬ ನಿಮ್ಮ ಘೋಷಣೆಯೇ ಹಸಿಹಸಿ ಸುಳ್ಳಾಗಿಹೋಗುತ್ತದೆ.<br />
<br />
ಮಿಕ್ಕಂತೆ ಪಬ್ಲಿಕ್ ಟಿವಿಗೆ ಇಂಗ್ಲಿಷ್ ಶೀರ್ಷಿಕೆಗಳ ಹುಚ್ಚು ಎಲ್ಲ ಚಾನಲ್ ಗಳಿಗಿಂತ ತುಸು ಹೆಚ್ಚೇ ಇರುವಂತಿದೆ. ಸುವರ್ಣ ನ್ಯೂಸ್ನವರು ನವೆಂಬರ್ ನಲ್ಲಿ ಮಾಡಿಕೊಂಡ ಬದಲಾವಣೆಗಳು ಚಾನಲ್ ಗೆ ಹೊಂದಿಕೊಂಡಿರುವುದನ್ನು ರಂಗಣ್ಣ ಗಮನಿಸಿಲ್ಲವೆನಿಸುತ್ತದೆ. ಪ್ರತಿ ಕಾರ್ಯಕ್ರಮಕ್ಕೂ ಇಂಗ್ಲಿಷ್ ಹೆಸರು ಬೇಕಿತ್ತಾ ಎಂಬ ಪ್ರಶ್ನೆಗೆ ರಂಗನಾಥ್ ಉತ್ತರ ಕೊಟ್ಟುಕೊಳ್ಳಬೇಕಿದೆ. ಇಲ್ಲದಿದ್ದರೆ ಚಾನಲ್ ಆರಂಭದ ಸಂದರ್ಭದಲ್ಲಿ ಕನ್ನಡ ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಹೋರಾಡುತ್ತೇವೆ ಎಂದು ರಂಗಣ್ಣ ಆಡಿದ ಮಾತುಗಳು ಆಷಾಡಭೂತಿಯದ್ದು ಎಂದು ಅನಿಸಿಬಿಡುತ್ತದೆ.<br />
<br />
ಏನೇ ಇರಲಿ, ಪಬ್ಲಿಕ್ ಟಿವಿ ಆರರ ಜತೆ ಏಳನೇ ಚಾನಲ್ ಆಗದೇ ಇರಲಿ. ಜನರಿಗೆ ನಿಜಕ್ಕೂ ಬೇಕಾಗಿರುವ, ಜನರನ್ನು ಜಾಗೃತಿಗೊಳಿಸುವ ಚಾನಲ್ ಇದಾಗಲಿ. ಇಷ್ಟೇ ನಮ್ಮ ಆಶಯ ಮತ್ತು ಹಾರೈಕೆ.<br />
</div>sampadakeeyahttp://www.blogger.com/profile/10834139994439066030noreply@blogger.com11tag:blogger.com,1999:blog-3901985173139732142.post-45945816627591253822012-02-11T13:47:00.001+05:302012-02-11T13:47:42.129+05:30ಪಬ್ಲಿಕ್ ಟಿವಿಯ ಮೂಲಕ ರಂಗಣ್ಣ ಆಕ್ಟಿವಿಸಂ ಮಾಡಲಿದ್ದಾರೆಯೇ?<div dir="ltr" style="text-align: left;" trbidi="on">
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjppmDaMqUf77qeGeBlwplE_rM1FVWpN5hgUMeHfefQB8_PVQRL7rm3f1VHu-EeaGIqw7-lmPr4yPKYaio1wDSCCMpRrjIji4exA0ScR_PqzjyLcmmoatGGIUN6ChLqFpVteo_gQBf2HFfS/s1600/ptvvvv.jpg" imageanchor="1" style="margin-left: 1em; margin-right: 1em;"><img border="0" height="297" src="https://blogger.googleusercontent.com/img/b/R29vZ2xl/AVvXsEjppmDaMqUf77qeGeBlwplE_rM1FVWpN5hgUMeHfefQB8_PVQRL7rm3f1VHu-EeaGIqw7-lmPr4yPKYaio1wDSCCMpRrjIji4exA0ScR_PqzjyLcmmoatGGIUN6ChLqFpVteo_gQBf2HFfS/s400/ptvvvv.jpg" width="400" /></a></div>
ಕನ್ನಡ ಮಾಧ್ಯಮ ರಂಗದಲ್ಲಿ ಈ ವರ್ಷ ನಿರೀಕ್ಷಿಸಲಾಗುತ್ತಿರುವ ಎರಡು ಮಹತ್ವದ ಬೆಳವಣಿಗೆಗಳಲ್ಲಿ ಒಂದರ ಮುಹೂರ್ತ ನಾಳೆಗೆ ನಿಗದಿಯಾಗಿದೆ. ವಿಜಯ ಸಂಕೇಶ್ವರರ ಬಹುನಿರೀಕ್ಷಿತ ವಿಜಯವಾಣಿ ಪತ್ರಿಕೆಯ ಆರಂಭ ಇನ್ನೇನು ಸದ್ಯದಲ್ಲೇ ಆಗಲಿದೆ. ಅದಕ್ಕೂ ಮುನ್ನ ನಾಳೆ (ಫೆಬ್ರವರಿ ೧೨) ಪತ್ರಕರ್ತ ಎಚ್.ಆರ್.ರಂಗನಾಥ್ ಅವರ ಪಬ್ಲಿಕ್ ಟಿವಿ ಆರಂಭಗೊಳ್ಳುತ್ತಿದೆ. ಕನ್ನಡ ಮಾಧ್ಯಮ ರಂಗಕ್ಕೆ ಇವೆರಡೂ ಹೊಸ ಸೇರ್ಪಡೆಗಳು. ಈ ಎರಡರ ಕುರಿತೂ ಮಾಧ್ಯಮ ರಂಗದಲ್ಲಿ ವಿಪರೀತ ನಿರೀಕ್ಷೆಗಳಿವೆ.<br />
<br />
ಎಚ್.ಆರ್.ರಂಗನಾಥ್ ಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಮಾತ್ರವಲ್ಲ, ಪಬ್ಲಿಕ್ ಟಿವಿಯನ್ನು ಆರಂಭಿಸುತ್ತಿರುವ ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗು ಅಧ್ಯಕ್ಷರೂ ಹೌದು. ಅರುಣ್ ಕುಮಾರ್ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ, ದಿವಾಕರ್ ಉಪಾಧ್ಯಕ್ಷರಾಗಿ ಈ ಸಂಸ್ಥೆಯ ಹೊಣೆ ಹೊತ್ತಿದ್ದಾರೆ.<br />
<br />
ಟಿವಿ ಚಾನಲ್ಗಳನ್ನು ಆರಂಭಿಸುವವರು ದೊಡ್ಡ ಪ್ರಮಾಣದ ಉದ್ಯಮಿಗಳೇ ಆಗಿರಬೇಕು ಎಂಬ ಮಾತಿದೆ. ಯಾಕೆಂದರೆ ಟಿವಿ ಚಾನಲ್ ಗಳದ್ದು ಬಕಾಸುರನ ಹೊಟ್ಟೆ. ಎಷ್ಟು ಹಣ ಸುರಿದರೂ ಅದು ತಿನ್ನುತ್ತದೆ. ಈ ಮಿಥ್ ಒಡೆಯುವ ಯತ್ನದಲ್ಲಿ ರಂಗನಾಥ್ ಇದ್ದಾರೆ. ಮೊದಲ ಬಾರಿಗೆ ಪತ್ರಕರ್ತನಾಗಿಯೇ ಈ ಸಾಹಸಕ್ಕೆ ಕೈಹಾಕಿದ್ದಾರೆ. ಚಾನಲ್ಗಳಿಗೆ ಹೂಡಲಾಗುವ ಬಂಡವಾಳ ಬೇಕಾಬಿಟ್ಟಿ ಸೋರಿಕೆಯಾಗುವುದೇ ಹೆಚ್ಚು. ಈ ದುಂದುವೆಚ್ಚವನ್ನು ತಡೆಗಟ್ಟಿದರೆ ದೊಡ್ಡ ಪ್ರಮಾಣದ ಬಂಡವಾಳ ಬೇಕಾಗಿಲ್ಲ ಎಂಬುದು ರಂಗನಾಥ್ ನಂಬುಗೆ. ಚಾನಲ್ ಕಟ್ಟುವ ಕೆಲಸದ ಜತೆಗೆ ರಂಗನಾಥ್ ಅದಕ್ಕೆ ಬೇಕಾದ ಬಂಡವಾಳವನ್ನೂ ಸಂಗ್ರಹಿಸಿ ಅಖಾಡಕ್ಕೆ ಇಳಿದಿದ್ದಾರೆ. ಇದು ಒಂದು ಬಗೆಯ ಸಾಹಸ. ಎಷ್ಟು ಪ್ರಮಾಣದಲ್ಲಿ ಯಶಸ್ಸು ಅವರಿಗೊಲಿಯುತ್ತದೆ ಎಂಬುದನ್ನು ಕಾದು ನೋಡಬೇಕು.<br />
<br />
ಎಚ್.ಆರ್.ರಂಗನಾಥ್ ಕನ್ನಡಪ್ರಭದ ಸಂಪಾದಕರಾಗಿದ್ದಾಗ ರಾಜಕೀಯ ವಿಶ್ಲೇಷಕರಾಗಿ ನ್ಯೂಸ್ ಚಾನಲ್ಗಳ ಪ್ಯಾನೆಲ್ನಲ್ಲಿ ಬಂದು ಕೂರುತ್ತಿದ್ದರು. ಟಿವಿ ಮೀಡಿಯಾಗೆ ಹೇಳಿ ಮಾಡಿಸಿದ ವ್ಯಕ್ತಿ ಎಂದು ಸಾಕಷ್ಟು ಮಂದಿಗೆ ಅನ್ನಿಸಿದ್ದು ಸುಳ್ಳಲ್ಲ. ರಂಗನಾಥ್ ಕಡೆಗೊಮ್ಮೆ ಸುವರ್ಣ ನ್ಯೂಸ್ ಮುಖ್ಯಸ್ಥರಾಗಿ ಬಂದರು. ಒಂದಷ್ಟು ಜನಪ್ರಿಯತೆಯನ್ನೂ ಪಡೆದರು. ಸುವರ್ಣದಲ್ಲಿ ಅವರು ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ಹೊರಬಂದ ನಂತರ ಅವರ ತಲೆಹೊಕ್ಕಿದ್ದು ಪಬ್ಲಿಕ್ ಟಿವಿಯ ಕನಸು.<br />
<br />
ಈಗಾಗಲೇ ಆರು ನ್ಯೂಸ್ ಚಾನಲ್ ಗಳು ಕನ್ನಡದಲ್ಲಿವೆ. ಟಿವಿ೯, ಉದಯ ನ್ಯೂಸ್, ಸುವರ್ಣ ನ್ಯೂಸ್, ಸಮಯ ನ್ಯೂಸ್, ಜನಶ್ರೀ ನ್ಯೂಸ್ ಹಾಗು ಕಸ್ತೂರಿ ನ್ಯೂಸ್ಗಳು ಚಾಲ್ತಿಯಲ್ಲಿವೆ. ಇವುಗಳ ನಡುವೆ ಏಳನೇ ಚಾನಲ್ ಆಗಿ ಪಬ್ಲಿಕ್ ಟಿವಿ ಬರುತ್ತಿದೆ. ಈ ಎಲ್ಲ ಚಾನಲ್ಗಳಿಗಿಂತ ಭಿನ್ನವಾಗಿ ಪಬ್ಲಿಕ್ ಟಿವಿ ಏನನ್ನಾದರೂ ಮಾಡಲು ಸಾಧ್ಯವೇ? ಟಿಆರ್ಪಿ ಕದನದಲ್ಲಿ ಪಬ್ಲಿಕ್ ಟಿವಿ ಗೆಲ್ಲಬಹುದೇ? ಕಾದು ನೋಡಬೇಕು.<br />
<br />
ಹಿಂದೆ ಸುವರ್ಣ ನ್ಯೂಸ್ ನಲ್ಲಿದ್ದಾಗ ಪಬ್ಲಿಕ್ ವಾಯ್ಸ್ ಎಂಬ ಕಾರ್ಯಕ್ರಮವೊಂದನ್ನು ಎಚ್.ಆರ್.ರಂಗನಾಥ್ ನಡೆಸುತ್ತಿದ್ದರು. ವರ್ತಮಾನದ ಬೆಳವಣಿಗೆಗಳ ಕುರಿತು ಸಾರ್ವಜನಿಕರ ಜತೆ ಸಂವಾದಿಸುವ ಕಾರ್ಯಕ್ರಮ ಅದು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ಲಭ್ಯವಾಗಿತ್ತು. ರಂಗನಾಥ್ ಸಾರ್ವಜನಿಕರೊಂದಿಗೆ ಸಂವಾದವನ್ನೂ ಕೌನ್ಸಿಲಿಂಗ್ ಧಾಟಿಯಲ್ಲಿ ನಡೆಸಿ ರಾಜಕಾರಣ, ಪ್ರಚಲಿತ ವಿದ್ಯಮಾನಗಳು ಹಾಗು ಸಾಮಾಜಿಕ ಸಮಸ್ಯೆಗಳನ್ನು ವೀಕ್ಷಕರಿಗೆ ಅರ್ಥ ಮಾಡಿಸಲು ಯತ್ನಿಸುತ್ತಿದ್ದರು.<br />
<br />
ಈಗ ರಂಗನಾಥ್ ಪಬ್ಲಿಕ್ ಟಿವಿಯ ಜತೆ ಬಂದಿದ್ದಾರೆ. ಆರಂಭದ ಜಾಹೀರಾತುಗಳನ್ನು ಗಮನಿಸಿದರೆ ತಮ್ಮ ಚಾನಲನ್ನು ಸಾರ್ವಜನಿಕರ ಟಿವಿಯನ್ನಾಗಿಸುವ ಉಮ್ಮೇದು ಅವರಿಗಿದ್ದಂತಿದೆ. ಇತರ ಚಾನಲ್ಗಳು ರಾಜಕಾರಣಿಗಳ ಚಾನಲ್ಗಳಾಗಿರುವುದನ್ನು ಅವರ ಜಾಹೀರಾತುಗಳು ಪರೋಕ್ಷವಾಗಿ ಲೇವಡಿ ಮಾಡುತ್ತವೆ. ತಮ್ಮ ಚಾನಲ್ ಯಾರ ಆಸ್ತಿಯೂ ಅಲ್ಲ, ಜನರದ್ದು ಎಂದು ಹೇಳುವ ಹಿನ್ನೆಲೆಯಲ್ಲಿ ತಮ್ಮದು ಸ್ವತಂತ್ರ ಕಾರ್ಯನಿರ್ವಹಣೆಯ ಚಾನಲ್ ಎಂದು ಹೇಳುವ ಉದ್ದೇಶವೂ ಇದ್ದಂತಿದೆ.<br />
<br />
ಎಲ್ಲ ಸರಿ, ಆದರೆ ಈ ಆಕ್ಟಿವಿಸಂ ವರ್ಕ್ ಔಟ್ ಆಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ. ಚಾನಲ್ ಸೊಗಸಾಗಿ ತರುವುದೊಂದೇ ಅದರ ಯಶಸ್ಸಿಗೆ ಮಾರ್ಗವಾಗುವುದಿಲ್ಲ. ಟಿವಿ ಚಾನಲ್ಗಳು ಕೇಬಲ್ ಆಪರೇಟರ್ಗಳನ್ನು ಒಲಿಸಿಕೊಳ್ಳಬೇಕು. ಅವರಿಗೆ ಕಾಲಕಾಲಕ್ಕೆ ದಕ್ಷಿಣೆ ನೀಡಬೇಕು. ಕೆಲವು ಕೇಬಲ್ ನೆಟ್ ವರ್ಕ್ಗಳು ನೇರವಾಗಿ ಎದುರಾಳಿ ಚಾನಲ್ಗಳ ಮಾಲೀಕರ ನಿಯಂತ್ರಣದಲ್ಲೇ ಇವೆ. ಹೀಗಾಗಿ ಪ್ರೈಮ್ ಬ್ಯಾಂಡ್ ನಲ್ಲಿ ಚಾನಲ್ ಪ್ರಸಾರವಾಗುವಂತೆ ನೋಡಿಕೊಳ್ಳುವುದು ಸುಲಭದ ವಿಷಯವಲ್ಲ. ಕನೆಕ್ಟಿವಿಟಿ ಇಲ್ಲದಿದ್ದರೆ ಚಾನಲ್ ಸಿಬ್ಬಂದಿ ಎಷ್ಟೇ ಹೆಣಗಾಡಿದರೂ ಟಿಆರ್ಪಿ ಗಿಟ್ಟುವುದಿಲ್ಲ. ಆರಂಭದಲ್ಲಿ ಸುವರ್ಣ ನ್ಯೂಸ್ ಈ ಸಮಸ್ಯೆಗೆ ಬಳಲಿ ಹೋಗಿತ್ತು, ಈಗ ಸಮಯ ಟಿವಿ ಇನ್ನೂ ಕನೆಕ್ಟಿವಿಟಿಯ ಸಮಸ್ಯೆಯಿಂದ ಹೊರಗೆ ಬಂದಿಲ್ಲ.<br />
<br />
ಎಲ್ಲ ಸರಿ ಮಾಡಿಕೊಂಡು ಚಾನಲ್ ಆರಂಭಿಸಿದರೂ, ಮಾಡಿದ ಕಾರ್ಯಕ್ರಮಗಳು ಜನರಿಗೆ ಇಷ್ಟವಾಗಬೇಕು. ಜನರ ಇಷ್ಟಗಳೆಲ್ಲವೂ ಒಳ್ಳೆಯ ಅಭಿರುಚಿಯದ್ದೇ ಆಗಿರಬೇಕಿಲ್ಲ. ಸ್ಪರ್ಧೆ ಮಾಡುವ ಚಾನಲ್ಗಳು ನಡೆಸುವ ಚೀಪ್ ಗಿಮಿಕ್ಗಳನ್ನು ಅನಿವಾರ್ಯವಾಗಿ ಅನುಸರಿಸುವ ಸಂದರ್ಭಗಳೂ ಬರಬಹುದು. ಇಲ್ಲಿ ಆದರ್ಶ, ಸಾಮಾಜಿಕ ಕಳಕಳಿ ಇಂಥವಕ್ಕೆ ಅರ್ಥಗಳು ಉಳಿದಿಲ್ಲ.<br />
<br />
ಪಬ್ಲಿಕ್ ಟಿವಿಯ ಹೆಸರಲ್ಲಿ ಬರುತ್ತಿರುವ ರಂಗಣ್ಣ ಎದುರಿಸಬೇಕಾದ ಸಮಸ್ಯೆಗಳು ಇವು. ಅವರಿಗೆ ಯಶಸ್ಸಾಗಲಿ. ನಿಜಕ್ಕೂ ಅದು ಜನರ ಟಿವಿಯಾಗಲಿ.<br />
</div>sampadakeeyahttp://www.blogger.com/profile/10834139994439066030noreply@blogger.com15tag:blogger.com,1999:blog-3901985173139732142.post-63509236006617846992012-02-09T13:08:00.001+05:302012-02-09T13:08:15.691+05:30ಒಬ್ಬ ಧೂರ್ತ ನೀಲಿಚಿತ್ರ ನೋಡಿದ, ನೀವು ಕೋಟ್ಯಂತರ ಜನರು ನೋಡುವಂತೆ ಮಾಡಿದಿರಿ...!<div dir="ltr" style="text-align: left;" trbidi="on">
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgEek743XzM9vj8PaDFn-aDwmitPhxVBiEcwVcvhd7MSc4TY6jp45jarLuTOsCaUeWkeQKHaIxJ8KA9PoaKTdW2DkgHM1pw_CbqjoCOcNYPYq7hqRjQymwT3mlhwFW_-5NeSHn06UXWqFpa/s1600/savadi.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEgEek743XzM9vj8PaDFn-aDwmitPhxVBiEcwVcvhd7MSc4TY6jp45jarLuTOsCaUeWkeQKHaIxJ8KA9PoaKTdW2DkgHM1pw_CbqjoCOcNYPYq7hqRjQymwT3mlhwFW_-5NeSHn06UXWqFpa/s1600/savadi.jpg" /></a></div>
ಒಟ್ಟು ಹನ್ನೆರಡು ನಿಮಿಷಗಳ ಟೇಪು ನಮ್ಮ ಬಳಿ ಇದೆ ಎಂದು ಚಾನಲ್ಗಳು ಹೇಳಿಕೊಳ್ಳುತ್ತಿವೆ. ಅದು ಸ್ಥಳೀಯ ಮತ್ತು ರಾಷ್ಟ್ರಮಟ್ಟದ ಚಾನಲ್ ಗಳಲ್ಲಿ ಪ್ರಸಾರವಾಗಿದ್ದು ಎಷ್ಟು ಗಂಟೆಗಳ ಕಾಲ? ಐಬಿಎನ್ ನಂಥ ಚಾನಲ್ ಗಳು ಮೊಬೈಲ್ ಪರದೆಯನ್ನು ಪೂರ್ತಿ ಮಸುಕು ಮಾಡಿ ಪ್ರಸಾರ ಮಾಡಿದವು. ಕನ್ನಡದ ಕೆಲ ಚಾನಲ್ಗಳು ಅರೆಬರೆ ಮಸುಕು ಮಾಡಿ ಗಂಟೆಗಟ್ಟಲೆ ಪ್ರಸಾರ ಮಾಡಿದವು. ಆರಂಭದಲ್ಲಂತೂ ಕೆಲ ಚಾನಲ್ಗಳು ಒಂಚೂರೂ ಮುಸುಕು ಮಾಡದೇ, ನೀಲಿಚಿತ್ರಗಳನ್ನು ಯಥಾವತ್ತಾಗಿ ಪ್ರಸಾರವನ್ನೇ ಮಾಡಿಬಿಟ್ಟವು.<br />
<br />
ಮುಠ್ಠಾಳ ಮಂತ್ರಿಯೊಬ್ಬ ವಿಧಾನಸಭೆಯಲ್ಲಿ ಕುಳಿತು ನೀಲಿಚಿತ್ರ ನೋಡಿದ. ಅದನ್ನು ಇನ್ನೊಬ್ಬ ಮಂತ್ರಿ ಇಣುಕಿದ. ತನ್ನ ಮೊಬೈಲನ್ನು ಕೊಟ್ಟು ಈ ಚಿತ್ರಗಳನ್ನು ನೋಡಿ ಎಂದವನು ಮತ್ತೊಬ್ಬ ಮಂತ್ರಿ. ಈ ನೀಚ ಕೆಲಸಕ್ಕೆ ಆ ಮೂವರೂ ಮಂತ್ರಿಪದವಿ ಕಳೆದುಕೊಂಡಿದ್ದಾರೆ. ಟಿವಿ ಚಾನಲ್ಗಳು ಸಾಹಸಕ್ಕೆ ಶಹಬ್ಬಾಸ್ ಅನ್ನೋಣ.<br />
<br />
ಆದರೆ ಇದೇ ಚಾನಲ್ ಗಳು ಇದೇ ಬ್ಲೂಫಿಲ್ಮ್ ನ ತುಣುಕುಗಳನ್ನು ಕೋಟ್ಯಂತರ ಜನರು ನೋಡುವಂತೆ ಮಾಡಿದರಲ್ಲ? ಬ್ಲೂಫಿಲ್ಮ್ ಏನೆಂದೇ ಅರಿಯದ ಲಕ್ಷಾಂತರ ಮುಗ್ಧರಿಗೂ ಅವುಗಳನ್ನು ತೋರಿಸಿದರಲ್ಲ? ಈ ಅಪರಾಧಕ್ಕೆ ಶಿಕ್ಷೆ ಕೊಡುವವರು ಯಾರು? ಸಚಿವತ್ರಯರ ನೀಲಿಚಿತ್ರ ವೀಕ್ಷಣೆಯನ್ನು ಹಲವು ಹಾಡುಗಳನ್ನು ಬಳಸಿ ತಮಾಶೆಯಾಗಿ ತೋರಿಸುವ ಪ್ರಯತ್ನವನ್ನೂ ಚಾನಲ್ಗಳು ಮಾಡಿದವು. ಜತೆಗೆ ಅಯ್ಯೋ ಅಮ್ಮಾ ಎನ್ನುವ ಹೆಣ್ಣು ಕಂಠದ ಕಾಮೋದ್ವೇಗದ ಆರ್ತನಾದವೂ ಕೇಳಿಬಂತು. ಮನೆಮಕ್ಕಳು, ಹೆಂಗಸರು, ಹಿರಿಯರು ಇದನ್ನು ನೋಡಲು ಸಾಧ್ಯವೇ ಎಂಬ ಕನಿಷ್ಠ ಸಾಮಾನ್ಯಪ್ರಜ್ಞೆಯನ್ನೂ ಚಾನಲ್ಗಳು ಮರೆತವು. ಅವರಿಗೆ ತತ್ ಕ್ಷಣದ ಟಿಆರ್ ಪಿ ಬೇಕಿತ್ತು. ಇತರ ಚಾನಲ್ ಗಳನ್ನು ಹಿಂದಿಕ್ಕುವುದು ಹೇಗೆ ಎಂಬುದೇ ಚಿಂತೆಯಾಗಿತ್ತು. ಹೀಗಾಗಿ ಒಂದಕ್ಕೊಂದು ಸ್ಪರ್ಧೆ ನಡೆಸುತ್ತಾ, ಲಕ್ಷಾಂತರ ಜನರಿಗೆ ನೀಲಿ ಚಿತ್ರಗಳನ್ನು ತೋರಿಸಿಯೇಬಿಟ್ಟವು, ಗಂಟೆಗಟ್ಟಲೆ, ದಿನಗಟ್ಟಲೆ...<br />
<br />
ಇಷ್ಟೆಲ್ಲ ಮಾಡುವ ಚಾನಲ್ ಗಳ ನಿರೂಪಕರು ಸಚಿವತ್ರಯರನ್ನು ಪೋಲಿಗಳು, ಕಾಮಾಂಧರು, ದರ್ಟಿ ಪಾಲಿಟಿಷಿಯನ್ಸ್ ಎಂದೆಲ್ಲಾ ನೇರಾನೇರ ಬೈಯುತ್ತಲೇ ಇದ್ದರು. ಜನರ ಆಕ್ರೋಶವನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಅವಕಾಶವನ್ನೂ ಯಾವ ನಿರೂಪಕನೂ ಬಿಡಲಿಲ್ಲ. ಆದರೆ ಅದೇ ಸಮಯಕ್ಕೆ ಸಚಿವತ್ರಯರು ಮಾಡಿದ ಅಪರಾಧಕ್ಕಿಂತ ಹೆಚ್ಚಿನ ಪ್ರಮಾದವನ್ನು ತಾವೇ ಮಡುತ್ತಿದ್ದೇವೆಂಬುದನ್ನು ಅವರು ಮರೆತರು.<br />
<br />
ಎಷ್ಟು ವಿಚಿತ್ರವೆಂದರೆ ಪ್ರತಿ ನ್ಯೂಸ್ ಚಾನಲ್ಗಳೂ ಸಚಿವರ ಬ್ಲೂಫಿಲ್ಮ್ ವೀಕ್ಷಣೆಯ ಸುದ್ದಿಯನ್ನು ಬ್ರೆಕ್ ಮಾಡಿದ್ದು ತಾವೇ ಮೊದಲು ಎಂದು ಹೇಳಿಕೊಂಡವು. ಕೆಲ ಚಾನಲ್ಗಳಂತೂ ತಮ್ಮ ಕ್ಯಾಮರಾಮೆನ್ಗಳ ಸಂದರ್ಶನವನ್ನೂ ಪ್ರಸಾರ ಮಾಡಿದವು. ಒಂದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದ ಸುದ್ದಿಯನ್ನು ಬಿತ್ತರಿಸುವ ಧಾವಂತಕ್ಕಿಂತ, ಈ ಸುದ್ದಿ ಹಿಡಿದುತಂದಿದ್ದು ನಾವೇ ಎಂಬ ಅಹಂ ಮತ್ತು ಅದರಿಂದ ಬರುವ ಲಾಭವೇ ಚಾನಲ್ ಗಳಿಗೆ ಮುಖ್ಯವಾದಂತೆ ಕಂಡುಬಂತು.<br />
<br />
ವಿಧಾನಸೌಧದಲ್ಲಿ ಕಲಾಪ ನಡೆಯುವಾಗಲೇ ಸಚಿವರುಗಳು ಬ್ಲೂಫಿಲ್ಮ್ ನೋಡಿದರು. ನೈತಿಕ ದೃಷ್ಟಿಯಿಂದ, ಕಾನೂನಿನ ದೃಷ್ಟಿಯಿಂದ ಇದು ಅಪರಾಧ. ಅದನ್ನು ಬಯಲು ಮಾಡಿದ್ದೂ ಕೂಡ ಶ್ಲಾಘನೀಯವೇ ಹೌದು. ಆದರೆ ಅದನ್ನು ಹೇಳುವ ಭರದಲ್ಲಿ ಚಾನಲ್ಗಳು ಹದ್ದುಮೀರಿ ಯಥಾವತ್ ದೃಶ್ಯಗಳನ್ನು ಪ್ರಸಾರ ಮಾಡಿದವು. ಅದು ಅನಿವಾರ್ಯವೇನೂ ಆಗಿರಲಿಲ್ಲ. ಅದಕ್ಕೆ ಹೊರತಾದ ಮಾರ್ಗವೂ ಇತ್ತು. ಚಾನಲ್ ಗಳ ಮುಖ್ಯಸ್ಥರ ಜಾಗದಲ್ಲಿ ಕುಳಿತವರು ಆತ್ಮವಂಚಕರಾದಾಗ ಹೀಗೆಲ್ಲಾ ಆಗಿಬಿಡುತ್ತದೆ.<br />
<br />
ಇಷ್ಟೆಲ್ಲ ಮಾಡಿದ ಚಾನಲ್ ಗಳು ಸ್ವತಃ ಲಕ್ಷ್ಣಣ ಸವದಿಯೇ ಪ್ರತಿಕ್ರಿಯೆ ನೀಡುತ್ತಿದ್ದಾಗ ಆತನನ್ನು ಸರಿಯಾದ ದಾರಿಯಲ್ಲಿ ಪ್ರಶ್ನಿಸಲು ವಿಫಲವಾದವು. ಲಕ್ಷ್ಮಣ ಸವದಿಯ ಪ್ರಕಾರ ಆತ ನೋಡಿದ್ದು ಬೇರೊಂದು ದೇಶದಲ್ಲಿ ನಡೆದ ನೈಜ ಘಟನೆಯೊಂದರ ವಿಡಿಯೋ. ಒಬ್ಬ ಹುಡುಗಿಯನ್ನು ನಾಲ್ವರು ಹುಡುಗರು ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಕೊಲ್ಲುತ್ತಾರೆ, ಆಕೆಯ ರುಂಡಮುಂಡಗಳನ್ನು ಬೇರ್ಪಡಿಸುತ್ತಾರೆ. ಪೊಲೀಸರು ನಾಲ್ವರನ್ನು ಬಂಧಿಸಿ ಸಾರ್ವಜನಿಕವಾಗಿ ನೇಣು ಹಾಕುತ್ತಾರೆ. ಇದು ಸವದಿ ನೋಡಿದ ವಿಡಿಯೋವಂತೆ.<br />
<br />
ನೀಲಿಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಟ ನಟಿಯರು ಸ್ವ ಇಚ್ಛೆಯಿಂದ ಲೈಂಗಿಕ ಕ್ರಿಯೆಗೆ ಒಳಗಾಗುತ್ತಾರೆ, ಅತ್ಯಾಚಾರ ಪ್ರಕರಣ ಹಾಗಲ್ಲ. ನೀಲಿ ಚಿತ್ರಗಳನ್ನು ನೋಡುವವರಿಗೂ ಅತ್ಯಾಚಾರ ದೃಶ್ಯಗಳನ್ನು ನೋಡುವ ಮನಸ್ಸಾಗುವ ಸಾಧ್ಯತೆ ಕಡಿಮೆ. ಈ ರೀತಿಯ ಸಾಮೂಹಿಕ ಅತ್ಯಾಚಾರ ದೃಶ್ಯವನ್ನು ನೋಡುವವರು ವಿಕೃತರೂ, ಕ್ರೂರ ಮನಸ್ಸಿನವರೂ ಸ್ಯಾಡಿಸ್ಟ್ ಗಳೂ ಆಗಿರಬೇಕು. ನೀವು ನೀಲಿ ಚಿತ್ರಗಳನ್ನು ನೋಡುವುದಕ್ಕಿಂತ ದೊಡ್ಡ ಅಪರಾಧ ಮಾಡಿದ್ದೀರಿ ಎಂದು ಚಾನಲ್ ನಿರೂಪಕರು ಕೇಳಬಹುದಿತ್ತು, ಕೇಳಲಿಲ್ಲ.<br />
<br />
ಇತ್ತೀಚಿಗೆ ನ್ಯೂಸ್ ಚಾನಲ್ ಗಳು ಬಾಲಿವುಡ್ ನ ಹಸಿಹಸಿ ಸೆಕ್ಸ್ ದೃಶ್ಯಗಳಿರುವ ಸಿನಿಮಾಗಳ ತುಣುಕುಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳನ್ನು ನೀಡುತ್ತ ಬಂದಿವೆ. ನೀಲಿ ಚಿತ್ರಗಳಿಗೆ ಕಡಿಮೆಯಿಲ್ಲದಂತೆ ಇರುವ ಹಲವು ಸಿನಿಮಾಗಳ ದೃಶ್ಯಗಳನ್ನು ಒಂದೆಡೆ ಸೇರಿಸಿ ಪ್ಯಾಕೇಜ್ ರೂಪದಲ್ಲಿ ಕೊಡುತ್ತ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತ ಬಂದಿವೆ. ಸಚಿವರುಗಳ ಸೆಕ್ಸ್ ದೃಶ್ಯ ವೀಕ್ಷಣೆಯನ್ನು ಖಂಡಿಸುವ ಜತೆಜತೆಗೆ ತಾವೇನು ಮಾಡುತ್ತಿದ್ದೇವೆಂಬುದನ್ನೂ ಈ ಚಾನಲ್ಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ.<br />
<br />
ಸಚಿವತ್ರಯರು ಕರ್ನಾಟಕದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದರು. ನಮ್ಮ ಚಾನಲ್ ಗಳು ಕರ್ನಾಟಕದ ಮನಸ್ಸುಗಳನ್ನೇ ಕೆಡಿಸುವ ಕೆಲಸ ಮಾಡಿದವು. ಯಾರ ಅಂಕೆಗೂ ಸಿಗದ ಚಾನಲ್ಗಳು ಇನ್ನೇನೇನು ಅನಾಹುತಗಳನ್ನು ಮಾಡುತ್ತವೆಯೋ ಕಾದು ನೋಡಬೇಕು.<br />
<div>
<br /></div>
</div>sampadakeeyahttp://www.blogger.com/profile/10834139994439066030noreply@blogger.com14tag:blogger.com,1999:blog-3901985173139732142.post-78454100489046079142012-02-02T10:39:00.000+05:302012-02-02T10:39:54.353+05:30ಆರ್ ಎಸ್ ಎಸ್ ಮತ್ತು ಭಾರತ ಒಕ್ಕೂಟ... ಮುಂದುವರೆದ ಚರ್ಚೆ<div dir="ltr" style="text-align: left;" trbidi="on"><br />
<br />
<b><a href="http://sampadakeeya.blogspot.in/2012/01/blog-post_30.html">ಆರ್ ಎಸ್ ಎಸ್ ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!</a> ಎಂಬ ಶೀರ್ಷಿಕೆಯ ಲೇಖನ ಓದಿದ್ದೀರಿ.<a href="http://enguru.blogspot.in/2012/01/rss-kannalli-bhaashaneeti-okkoota-mattu.html"> ಬನವಾಸಿ ಬಳಗ ಏನ್ ಗುರು ಬ್ಲಾಗ್ ನಲ್ಲಿ ಪ್ರಕಟಿಸಿದ ಲೇಖನ </a>ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಬಹುಮುಖ್ಯ ವಾಗ್ವಾದ ಇದು. ಆದರೆ ಆರ್ ಎಸ್ ಎಸ್ ನಿಲುವುಗಳನ್ನು ಸಮರ್ಥಿಸಿ ಬಂದ ಪ್ರತಿಕ್ರಿಯೆಗಳ ಠೊಳ್ಳುತನವನ್ನು ಬಹಿರಂಗಪಡಿಸುತ್ತಾ, ಮತ್ತಷ್ಟು ಪ್ರಶ್ನೆಗಳನ್ನು ಮುಂದಿಡುವ ಮತ್ತೊಂದು ಲೇಖನವನ್ನು <a href="http://enguru.blogspot.in/">ಏನ್ ಗುರು ಬ್ಲಾಗ್</a> <a href="http://enguru.blogspot.in/2012/02/chintanaganga-sanghada-siddhaamtave.html">`ಚಿಂತನಗಂಗಾ ಸಂಘದ ಸಿದ್ಧಾಂತವೇ?'</a> ಎಂಬ ಶೀರ್ಷಿಕೆಯಡಿಯಲ್ಲಿ ಮಂಡಿಸಿದೆ. ಇದರ ಪೂರ್ಣಪಾಠ ಇಲ್ಲಿದೆ.</b><br />
<b>-ಸಂಪಾದಕೀಯ</b><br />
<div><br />
</div><br />
<a href="https://blogger.googleusercontent.com/img/b/R29vZ2xl/AVvXsEitrKeweZBMw58ZTQuhlSzR39B9j6N82F8gZ07cqtze6B8VnKQ9aOBYvX6NFPe45mFDh6_2zO2bXYInYE_sH1C_DZJQNBO_CerHUsCEaCkQMxJBCO9nPKDBu5Cp1jsieaCYSUK1dh8z2Bdw/s1600/Enguru_book.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEitrKeweZBMw58ZTQuhlSzR39B9j6N82F8gZ07cqtze6B8VnKQ9aOBYvX6NFPe45mFDh6_2zO2bXYInYE_sH1C_DZJQNBO_CerHUsCEaCkQMxJBCO9nPKDBu5Cp1jsieaCYSUK1dh8z2Bdw/s320/Enguru_book.jpg" width="210" /></a>ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ ಚಿಂತನಗಂಗಾದಿಂದ ಆಯ್ದ ಕೆಲಭಾಗಗಳನ್ನು ಸಂಘದ ನಿಲುವುಗಳೆಂದು ಒಂದು ಬರಹವನ್ನು ಪ್ರಕಟಿಸಿ, ‘ಇಂತಹ ನಿಲುವಿನ ಸಂಘವನ್ನು ಬೆಳೆಸುವುದು ಕನ್ನಡಿಗರಿಗೆ ಮುಳುಗುನೀರು ತರುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿತ್ತು. ಈ ಬರಹಕ್ಕೆ ಸಂಘದ ಸದಸ್ಯರ, ಪದಾಧಿಕಾರಿಗಳ ಮತ್ತು ಬೆಂಬಲಿಗರ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಬರಹವನ್ನು ಸಂಘದ ‘ಶತ್ರುವಿನ ಸಂಚು ಎಂಬಂತೆ ಕಂಡ ಇವೆಲ್ಲಾ ಕಮೆಂಟುಗಳೇ ಸಂಘದ ಅನುಯಾಯಿಗಳಲ್ಲಿರುವ/ ಇಲ್ಲದಿರುವ ವೈಚಾರಿಕತೆ, ವಿಚಾರ ಸ್ವಾತಂತ್ರ ಮತ್ತು ಬೆಂಬಲಿಗರ ಮುಗ್ಧತೆಗಳನ್ನು ಬಿಂಬಿಸುವಂತಿವೆ. ಸಂಘ ಸಿದ್ಧಾಂತವಾದ ಚಿಂತನಗಂಗಾವನ್ನು ಓದದೆಯೇ ಸಂಘದ ಜೊತೆ ಕೈಗೂಡಿಸಿದ್ದವರಿದ್ದಾರೆ ಎನ್ನುವಂತೆ ಕೆಲವು ಪ್ರತಿಕ್ರಿಯೆಗಳಿದ್ದವು. ಸಂಘದ ನಿಲುವು ಇದೆಂದು ಒಪ್ಪಿಕೊಳ್ಳದಷ್ಟು ಮಾಯೆ ಮುಸುಕಿದವರೂ ಇದ್ದಾರೆ.<br />
<br />
<b>ಚಿಂತನಗಂಗಾ ಸಂಘದ ಸಿದ್ಧಾಂತವೇ?</b><br />
<br />
ಚಿಂತನಗಂಗಾ ಹೊತ್ತಗೆಯ ಮೊದಲಲ್ಲಿ ಹೀಗೆ ಬರೆಯಲಾಗಿದೆ:<br />
ಸಾವಿರಾರು, ಅಷ್ಟೇಕೆ ಲಕ್ಷಾಂತರ ಜನರು ಈ ಗ್ರಂಥದಲ್ಲಿನ ಜೀವಂತ ವಿಚಾರಗಳಿಂದ ಪ್ರೇರಣೆ ಪಡೆದಿದ್ದಾರೆ ಎನ್ನುವ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪ್ರಾ. ಎಂ.ಎ. ವೆಂಕಟರಾಯರು ತಮ್ಮ ಪ್ರವೇಶದಲ್ಲಿ ಹೇಳಿರುವಂತೆ ರಾಷ್ಟ್ರನಿರ್ಮಾಣಕ್ಕಾಗಿ ಸಂಘವು ಎಂತಹ ಪರಿಪೂರ್ಣವಾದ, ಗುಣಾತ್ಮಕವಾದ, ದೇಶಾಭಿಮಾನದಿಂದ ತುಂಬಿ ತುಳುಕುವ, ಕಾರ್ಯಸಾಧ್ಯವಾದ, ಆದರ್ಶಪೂರ್ಣವಾದ ತತ್ವಗಳನ್ನೂ, ವಿಧಾನಗಳನ್ನೂ ಅನುಸರಿಸುತ್ತಿದೆ ಎಂಬುದನ್ನು ಇಲ್ಲಿ ಕಾಣಬಹುದು...<br />
ಇನ್ನು ಅರಿಕೆಯಲ್ಲಿ ಪ್ರಕಾಶಕರು ಚಿಂತನಗಂಗಾ ಬಗ್ಗೆ ಹೀಗೆ ಬರೆದಿದ್ದಾರೆ:<br />
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಷಯ ಹೊಸದಾಗಿ ತಿಳಿಯ ಬಯಸುವವರಿಗೆ ಅದರಲ್ಲಿ ಅವರ ಬುದ್ಧಿ-ಹೃದಯಗಳನ್ನು ಬೆಳಗಲು ಸಾಕಷ್ಟು ಸಾಮಗ್ರಿ ಸಿಕ್ಕಿತು. ಸಂಘದ ವಿಷಯವಾಗಿ ಸಂದೇಹ- ಆಕ್ಷೇಪ ಇದ್ದವರಿಗೆ ಸಂಘದ ವಾಸ್ತವಿಕ ರೂಪ ಕಂಡು ಕಣ್ತೆರೆಯಿತು. ಸಮಾಧಾನ ಸಿಕ್ಕಿತು. ಸಂಘದ ಹೊರರೂಪ ಕಂಡಿದ್ದವರಿಗೆ ಅದರ ಆಂತರ್ಯದ ತಿರುಳು ತಿಳಿಯಿತು.<br />
ಹಲವಾರು ವರ್ಷಗಳಿಂದ ಸಂಘದ ಕೆಲಸವನ್ನು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಕಾರ್ಯಕರ್ತರಿಗೆ ಸಹ ಆ ಗ್ರಂಥವು ಕಾರ್ಯದ ಕೈದೀವಿಗೆಯಾಯಿತು.<br />
ಪ್ರತಿಕ್ರಿಯೆಯಲ್ಲಿ ಕೊನೆಕೊನೆಗೆ ಕೆಲವರಂತೂ ಇದು ಸಂಘದ ನಿಲುವೇ ಅಲ್ಲಾ, ಗುರೂಜಿಯವರ ಮಾತೇ ಅಲ್ಲ.. ಎನ್ನುವಂತಹ ಅರ್ಥದ ಮಾತುಗಳನ್ನೂ ಆಡಿದ್ದಾರೆ. ಇದನ್ನು ಬರೆದವರೇ ಬೇರೆ, ಇದನ್ನು ಗುರೂಜಿ ನಿಧನರಾದ ಮೇಲೆ ಬಂದಿದ್ದು ಇತ್ಯಾದಿ ಮಾತುಗಳನ್ನಾಡಿದ್ದಾರೆ. ಆದರೆ ಹೊತ್ತಗೆಯ ಮೊದಲಲ್ಲೇ ಬರೆದಿರುವಂತೆ ಬಂಚ್ ಆಫ್ ಥಾಟ್ಸ್ ಮೊದಲು ಪ್ರಕಟವಾದದ್ದು ೧೯೬೬ರಲ್ಲಿ. ಗುರೂಜಿಯವರ ೬೦ನೇ ವರ್ಷದ ಹುಟ್ಟುಹಬ್ಬದಂದು. ಇನ್ನಾದರೂ ಇದನ್ನು ಸಂಘದ ತತ್ವಸಿದ್ಧಾಂತದ ಪುಸ್ತಕ ಎನ್ನುವುದನ್ನು ಒಪ್ಪಬಹುದಲ್ಲವೇ? ಚಿಂತನಗಂಗಾ ಸಂಘದ ಸಿದ್ಧಾಂತವಲ್ಲದಿದ್ದರೆ ಸಮಸ್ಯೆಯೇ ಇಲ್ಲಾ... ಮತ್ಯಾವುದನ್ನು ಸಮಾಜ ಸಂಘ ಸಿದ್ಧಾಂತವೆಂದು ಅರಿತುಕೊಳ್ಳಬೇಕು ಎಂದು ತಿಳಿಸಿದರೆ ಸಾಕು!<br />
<br />
<b>ಸಂಘದ ಬಗ್ಗೆ ಯಾಕೆ ಬರೆದಿರಿ ಎಂದರೆ...!</b><br />
<br />
<br />
ಇಡೀ ಬರಹದಲ್ಲಿ ಬರೆಯಲಾಗಿರುವ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಸಿದವರು ತಮ್ಮ ಸಹಮತಿಯನ್ನು ಇದುವರೆಗೂ ಹೇಳಿಲ್ಲ ಅಥವಾ ಅದು ಹೀಗಿರುವುದು ತಪ್ಪು ಎಂದೂ ಕೂಡಾ ಹೇಳುತ್ತಿಲ್ಲ. ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ ಎನ್ನುವ ಪ್ರಶ್ನೆಗೆ ಇದು ಕಾರಣವಾಗಿದೆ. ನಾವು ಎತ್ತಿರುವ ಪ್ರಶ್ನೆಗೆ ಉತ್ತರಿಸುವ ಬದಲು, ಹೀಗೆ ಪ್ರಶ್ನೆ ಮಾಡಿದ್ದನ್ನೇ ಯಾಕೆ ಮಾಡಿದಿರಿ? ಎನ್ನುವ ಮಾತುಗಳು ಕೇಳಿಬಂದವು. ವಾಸ್ತವವಾಗಿ ನಾವು ಹೀಗೆ ಪ್ರಶ್ನಿಸಲು ಕಾರಣ, ಸಂಘ ತನ್ನ ಸೈದ್ಧಾಂತಿಕ ನಿಲುವುಗಳನ್ನು ತನ್ನ ಮುಖವಾಡವಾದ ಬಿಜೆಪಿ ಸರ್ಕಾರದ ಮೂಲಕ ಮಾಡಿಸುತ್ತಿರುವುದು ಮುಖಕ್ಕೆ ರಾಚುವಂತೆ ಕಾಣುತ್ತಿರುವುದು. ಇರುವ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕೃತ ವಿದ್ಯಾರ್ಥಿಗಳಿಗೆ ಕೊರತೆಯಿರುವಾಗ ಹೊಸದಾಗಿ ತೀವ್ರ ವಿರೋಧದ ನಡುವೆಯೂ ವಿಶ್ವವಿದ್ಯಾಲಯ ಸ್ಥಾಪಿಸಲು ಏನು ಕಾರಣ? ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲಾಗಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಎಷ್ಟೇ ವಿರೋಧವಿದ್ದರೂ ಪ್ರತಿಭಟನೆಯನ್ನು ಬಗ್ಗು ಬಡಿದು ಸ್ಥಾಪಿಸಿದ್ದೇಕೆ? ಇವೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಮಿದುಳಾದರೂ ಸಂಘ ಸಿದ್ಧಾಂತದ್ದಲ್ಲವೇ? ಇದಕ್ಕೆಲ್ಲಾ ಕಲಶವಿಟ್ಟಂತೆ ನಿನ್ನೆ ಮುಗಿದ ಸಂಘದ ಶಿಬಿರದಲ್ಲಿ ಆರುಕೋಟಿ ಜನರ ಪ್ರತಿನಿಧಿ/ ಮುಖಂಡರಾದ ಮುಖ್ಯಮಂತ್ರಿಗಳೇ ಹೋಗಿ ಪಾಲ್ಗೊಂಡಿದ್ದೂ, ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದ್ದಾಗೆಲ್ಲಾ ಸಂಘದ ಕೇಂದ್ರ ಕಛೇರಿಯ ಕರೆಗೆ ಓಗೊಟ್ಟು ಎಡತಾಕಿದ್ದು ಕಾಣುತ್ತಿರುವಾಗ ಸಂಘದ ಬಗ್ಗೆ ಬರೆಯದೆ ಇರಬೇಕಿತ್ತಾದರೂ ಹೇಗೆ?<br />
<br />
ಭಾಷಾವಾರು ಪ್ರಾಂತ್ಯ ಬೇಡ, ಚಿಕ್ಕ ರಾಜ್ಯಗಳಿರಲಿ ಎನ್ನುವ, ಮುಸ್ಲಿಮರು ಕ್ರೈಸ್ತರ ದೇಶದ ಬದ್ಧತೆಯನ್ನು ಪ್ರಶ್ನಿಸುವ ನಿಲುವಿನ ಸಂಘವು, ಸಾವಿರಾರು ಕನ್ನಡಿಗರನ್ನು ಸೇರಿಸಿ ಅವರ ತಲೆಯಲ್ಲಿ ತುಂಬುತ್ತಿರುವುದಾದರೂ ಏನನ್ನು? ಎಂಬ ಆತಂಕದ ಕಾರಣದಿಂದಲೇ ಆ ಬರಹವನ್ನು ಬರೆದದ್ದು! ಆರೆಸ್ಸೆಸ್ ಜೊತೆ ಕೈಗೂಡಿಸುವ ಕನ್ನಡಿಗನಿಗೆ, ಅದರ ಮೂಲತತ್ವವೇ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿರುವ, ರಾಜ್ಯಗಳ ಶಾಸನದ ಹಕ್ಕನ್ನೂ ನಿರಾಕರಿಸುವ ಸಿದ್ಧಾಂತ ಎಂದು ಎಚ್ಚರ ಮೂಡಿಸುವ ಕಾರಣದಿಂದಲೇ ಬರೆಯಲಾಗಿತ್ತು. ಇದು ನೇರಾನೇರ ಕನ್ನಡ ಕನ್ನಡಿಗ ಕರ್ನಾಟಕದ ಹಿತಕ್ಕೆ ಸಂಬಂಧಿಸಿದ್ದರಿಂದಲೇ ಬರೆದದ್ದು.<br />
<br />
ಸಮಾಜದಲ್ಲಿ ಒಡಕಿನ ವಿಷ ತುಂಬುವ ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ ಎನ್ನುವ ಮೂಲಕ ವಿಭಿನ್ನ ಧರ್ಮಗಳ ಕನ್ನಡಿಗರ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ಎನ್ನಿಸುತ್ತದೆ. ಸುಮ್ಮನೆ ಒಡಕಿನ ಸಿದ್ಧಾಂತ ಬೋಧಿಸಿ ಶಿಸ್ತಿನ ರೋಬೋಗಳನ್ನು ಸೃಷ್ಟಿಸಿ ಸಮಾಜದ ಒಳಗೆ ಬಿಟ್ಟು, ಅವುಗಳ ಕೆಲಸಕ್ಕೂ ಸಂಘಕ್ಕೂ ಸಂಬಂಧವಿಲ್ಲಾ ಎಂದು ನುಣುಚಿಕೊಳ್ಳುವ ಮನಸ್ಥಿತಿ ಸಂಘಕ್ಕಿಲ್ಲಾ ಎಂದೇ ಭಾವಿಸೋಣ. ಹಾಗಾಗಬೇಕಾದರೆ ಕಡೇಪಕ್ಷ ಸಂಘದವರು ಒಪ್ಪಬೇಕಾದ್ದು ತಮ್ಮ ಸಿದ್ಧಾಂತವು ಗುರೂಜಿಯವರ ಚಿಂತನಗಂಗಾದ ಬರಹಗಳಿಗೆ ಒಪ್ಪುತ್ತದೆ ಎನ್ನುವುದನ್ನು. ಇಲ್ಲವೇ ಗುರೂಜಿಯವರು ಹೇಳಿರುವ ಮುಸ್ಲಿಮ್, ಕ್ರೈಸ್ತರ ಬಗೆಗಿನ ಅನಿಸಿಕೆಗಳು ತಪ್ಪು, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಒಳ್ಳೆಯದು, ಮೀಸಲಾತಿಗೆ ಪರವಾಗಿದ್ದೇವೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ - ಇದು ಸಂಘದ ಸಿದ್ಧಾಂತ ಎಂದು ಘೋಷಿಸಲಿ ಸಾಕು. ಬಹಿರಂಗವಾಗಿ, ಚರ್ಚೆಗಳಲ್ಲಿ ಇಲ್ಲಾ.. ಇಲ್ಲಾ.. ಅಂತನ್ನೋ ಬದಲು ನಮ್ಮ ಸಿದ್ಧಾಂತವನ್ನು ಇಲ್ಲಿ ಬರೆಯಲಾಗಿದೆ ನೋಡಿ ಎಂದು ಒಂದು ಅಧಿಕೃತ ನಿಲುವಿನ ಮೂಲವನ್ನು ತೋರಿಸಿದ್ದರೆ ಸಾಕಿತ್ತು. ಆದರೆ ತಮಾಶೆಯೆಂದರೆ ಹಾಗೆ ತೋರಿಸಿದ ನಂತರ ಚಿಂತನಗಂಗಾ ಹೊತ್ತಗೆಯ ಬರಹಗಳ ಹಲವು ಅಂಶಗಳನ್ನು ಅವರೇ ಅಲ್ಲಗಳೆಯಬೇಕಾಗುತ್ತದೆ. ಒಟ್ಟಾರೆ ಸಂಘದ ಅಧಿಕೃತ ಸಿದ್ಧಾಂತ ಏನೆಂದು ತಿಳಿಸಿಕೊಟ್ಟರೆ ಸಾಕು.<br />
<br />
ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಮಾತ್ರಾ ಬೆಂಬಲಿಗರ/ ಪರಿವಾರದ ಮುಗ್ಧತೆ, ಕುರುಡು ಬದ್ಧತೆಗೆ ಕನ್ನಡಿ ಹಿಡಿದಂತಿದ್ದವು...<br />
<br />
<b>ಪ್ರತಿಕ್ರಿಯೆಗಳ ಸಾರ!</b><br />
ರಾಜಕೀಯ ಮಾಡ್ತಿದೀರಾ?... ನಿಮ್ಮ ಸಂಘಟನೆ ಹೆಸರು ಬದಲಾಯಿಸಿಕೊಳ್ಳಿ... ಮೊದಲು ಕನ್ನಡದ ಕೆಲಸ ಮಾಡಿ ತೋರಿಸಿ... ನೀವು ಕೆಂಪು ಬಣ್ಣದವರು... ದೇಶ ಒಡೆಯಬೇಡಿ... ದೇಶ, ಹಿಂದುತ್ವ, ಸಂಘದ ಬಗ್ಗೆ ಅಂಧತೆಯನ್ನು ಬೆಳೆಸಿಕೊಂಡು ಬಂದ ಕೆಂಬಣ್ಣದ ಭೂತ...ಲೇಖಕರಿಗೆ ಆಂಗ್ಲಭಾಷೆಯ ದಾಸ್ಯವು ನಮ್ಮದೇ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕಿಂತಾ ಮೇಲೆಂದು ತೋರುತ್ತದೆ...ಕೆಂಪು ಲೇಖಕರ ಹಿಡಿತದಿಂದ ನಲುಗದಿರಲಿ...RSS ಬಗ್ಗೆ ಬರೀತೀರಲ್ಲಾ KFD-PFI ಬಗ್ಗೆ ಬರೀತೀರಾ?...ಹಳದಿ ಕೆಂಪು ಈಗ ಚೀನಿಯರ ಸಂಕೇತವಾಗುತ್ತಿದೆ... <span class="Apple-style-span" style="color: #333333; font-family: arial; font-size: 13px; line-height: 18px;"> </span><span class="Apple-style-span" style="color: #333333; font-family: arial; font-size: 13px; line-height: 18px;">Do you have guts to question urdu primary mode of communication...</span><span class="Apple-style-span" style="color: #333333; font-family: arial; font-size: 13px; line-height: 18px;"> </span>ನೀವೇನು ಕನ್ನಡದ ಕೆಲಸಾ ಮಾಡಿದ್ದೀರಾ? ತಾಕತ್ತಿದ್ದರೆ ಒಂದು ಕನ್ನಡ ಶಾಲೆ ಮಾಡಿ...<br />
ಹೀಗೇ... ಕೆಲವು ಪ್ರತಿಕ್ರಿಯೆಗಳಂತೂ ಶತ್ರುಗಳನ್ನು ತೋರಿಸಿ ಒಗ್ಗಟ್ಟು ತರುವ ಪ್ರಯತ್ನದಂತೆ ಇವೆ.<br />
ನೀವು ಸಂಸ್ಕೃತ/ ಹಿಂದೀ ಒಪ್ಪದಿದ್ದರೆ ನಾಳೆ ಕನ್ನಡವೂ ಇರಲ್ಲ... ಇಂಗ್ಲೀಶ್ ಬಂದುಬಿಡುತ್ತದೆ ಎಂದು ಒಬ್ಬರೆಂದರೆ ಮತ್ತೊಬ್ಬರು ಈ ರಾಜ್ಯವನ್ನು ಮುಸ್ಲಿಮರು ಆಳಿದರೆ ನಾಳೆ ಕನ್ನಡವು ಧೂಳಿಪಟವಾಗುತ್ತದೆ <span class="Apple-style-span" style="color: #333333; font-family: arial; font-size: 13px; line-height: 18px;">(<span style="background-color: white; color: #333333; font-family: arial; font-size: 13px; line-height: 16px;">ondantoo satya. karnatakadalli muslimara adalita bandare, marane dinave kannada dhooli patavagtade.)</span></span><br />
ಎಂದಿದ್ದಾರೆ.<br />
<br />
ಇವೆಲ್ಲಾ ತೋರಿಸುವುದಾದರೂ ಏನನ್ನು? ಯಾವ ಚಿಂತನೆಗಳನ್ನು ಆರಿಸಿ ತೋರಿಸಲಾಗಿದೆಯೋ ಆ ಚಿಂತನೆಗಳು ಸರಿ - ಅದನ್ನು ನಾವು ಒಪ್ಪುತ್ತೇವೆ ಎನ್ನುವ ನೇರವಂತಿಕೆಯಾಗಲೀ, ಇಲ್ಲಾ, ಅದು ತಪ್ಪು.. ಗುರೂಜಿಯವರ ಈ ನಿಲುವನ್ನು ಸಂಘ ಒಪ್ಪದು ಎನ್ನುವ ದಿಟ್ಟತನ/ ವೈಚಾರಿಕ ಸ್ವಾತಂತ್ರವಾಗಲೀ ಇಲ್ಲದಿರುವಂತೆ ತೋರುತ್ತದೆ. ಹಾಗಾಗಿ ವಿಷಯಾಂತರ ಮಾಡೋ ಮೂಲಕ ಉತ್ತರಿಸುವ ಪ್ರಯತ್ನಗಳಂತೆ ಇವು ಕಾಣುತ್ತವೆ.<br />
<br />
<b>ಬರಹದ ಆಶಯ</b><br />
<br />
ನಿಜಕ್ಕೂ ಸಂಘ ಗುರೂಜಿಯವರ ಈ ಮಾತುಗಳನ್ನು/ ಸಿದ್ಧಾಂತವನ್ನು ಹೊಂದಿರುವುದಾದರೆ ಒಪ್ಪಿಕೊಳ್ಳಲಿ. ನಾವು ಪ್ರತಿಪಾದಿಸುವುದು ಇದನ್ನೇ... ಭಾರತದಲ್ಲಿ ಒಂದೇ ಶಾಸಕಾಂಗವಿರಲಿ, ಮುಸ್ಲಿಮರು/ ಕ್ರೈಸ್ತರ ದೇಶಪ್ರೇಮ ಪ್ರಶ್ನಾರ್ಹ, ಮೀಸಲಾತಿ ಕೆಟ್ಟ ಪದ್ದತಿ ಮತ್ತು ಹಿಂದೀ ಭಾರತದ ಸಂಪರ್ಕ ಭಾಷೆಯಾಗಲಿ ಎನ್ನುವುದನ್ನೇ ಎನ್ನಲಿ. ವಾಸ್ತವವಾಗಿ ನಾಲ್ಕನೆಯದನ್ನು ಈಗಾಗಲೇ ಹೇಳಿದ್ದಾರೆ. ಉಳಿದ ಮೂರನ್ನು ಅದು ಸತ್ಯವಾದರೆ ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಇನ್ಯಾವ ಸಿದ್ಧಾಂತ ಇವರನ್ನು ನಡೆಸುತ್ತಿದೆ ತಿಳಿಸಲಿ. ಈಗ ಜನರ ಮುಂದೆ ಇಂತಹ ನಿಲುವುಗಳನ್ನು ಇಟ್ಟುಕೊಂಡೇ ನೇರವಾಗಿ ರಾಜಕಾರಣಕ್ಕಿಳಿಯಲಿ ಎಂದದ್ದೂ ಕೂಡಾ... ‘ಬಿಜೆಪಿಯ ಮೂಲಕ ಹಿಂಬಾಗಿಲ ರಾಜಕಾರಣ ಮಾಡುವುದನ್ನು ಬಿಡಲಿ ಎನ್ನುವ ಕಾರಣದಿಂದಲೇ! ಅಥವಾ ಬಿಜೆಪಿಯೇ ತನ್ನ ಸಿದ್ಧಾಂತ ಸಂಘದ್ದು ಎಂದು ಹೇಳಿಕೊಂಡು ರಾಜಕಾರಣ ಮಾಡಲಿ. ಗುರೂಜಿಯವರ ಮಾತುಗಳ ಬಗ್ಗೆ ಸಮ್ಮತಿ ಅಥವಾ ತಿರಸ್ಕರಣೆಯನ್ನು ಸಾರ್ವಜನಿಕವಾಗಿ ಸಂಘವು ತಿಳಿಸುವುದು ಸಂಘದ ಬಗ್ಗೆ ಸಮಾಜಕ್ಕೆ ಇರುವ ಗೊಂದಲಗಳು ದೂರಾಗಲು ಖಂಡಿತಾ ನೆರವಾದೀತು! ಇಡೀ ರಾಷ್ಟ್ರಕ್ಕೇ ಬೆಳಕು ಕೊಡುತ್ತೇನೆನ್ನುವ, ಬಲಿಷ್ಠ ರಾಷ್ಟ್ರ ನಿರ್ಮಾಣವೇ ಪರಮಗುರಿಯೆನ್ನುವ ಸಂಘಕ್ಕೆ ಇಷ್ಟೂ ನೇರವಂತಿಕೆ ಇರದಿದ್ದರೆ ಹೇಗೆ?<br />
<div><br />
</div><div>ಕೃಪೆ: <a href="http://enguru.blogspot.in/">ಏನ್ ಗುರು</a> (<a href="http://www.banavasibalaga.org/">ಬನವಾಸಿ ಬಳಗ</a>ದ ಬ್ಲಾಗ್)</div></div>sampadakeeyahttp://www.blogger.com/profile/10834139994439066030noreply@blogger.com18tag:blogger.com,1999:blog-3901985173139732142.post-66652972719828146302012-01-30T13:29:00.000+05:302012-01-30T13:29:35.857+05:30ಆರ್ ಎಸ್ ಎಸ್ ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!<div dir="ltr" style="text-align: left;" trbidi="on"><br />
<b>ಕನ್ನಡವನ್ನೇ ಧ್ಯಾನಿಸುವ ನೂರಾರು ಟೆಕಿಗಳು ಕಟ್ಟಿಕೊಂಡ ಸಂಘಟನೆ <a href="http://www.banavasibalaga.org/">ಬನವಾಸಿ ಬಳಗ</a>. ಇದು ಈಗ ದೊಡ್ಡಮಟ್ಟದಲ್ಲಿ ಬೆಳೆದಿದೆ. ಕನ್ನಡ ಭಾಷೆ, ಸಂಸ್ಕೃತಿ ಕುರಿತಾಗಿ ಬಳಗ ಕೈಗೊಂಡಿರುವ ಜಾಗೃತಿ ಕಾರ್ಯಗಳು ಶ್ಲಾಘನೀಯ. ಬನವಾಸಿ ಬಳಗದ ಬ್ಲಾಗ್ <a href="http://www.enguru.blogspot.com/2012/01/rss-kannalli-bhaashaneeti-okkoota-mattu.html">ಏನ್ ಗುರು</a> ಕೂಡ ಕನ್ನಡದ ಜನಪ್ರಿಯ ಬ್ಲಾಗ್. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಗೆ ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿದೆ, ಹೇಗೆ ಇತರ ಧರ್ಮೀಯರ ಕುರಿತು ಅಸಹನೆ ಹೊಂದಿದೆ, ದೇಶೀಯ ಭಾಷೆಗಳ ಅಸ್ತಿತ್ವಕ್ಕೆ ಮುಳುವಾಗಿದೆ, ಸಾಮಾಜಿಕ ನ್ಯಾಯದ ವಿರೋಧವಾಗಿದೆ ಎಂಬ ಬಹುಮುಖ್ಯ ಅಂಶಗಳನ್ನು ಬ್ಲಾಗ್ ಆಧಾರ ಸಮೇತ ಮಂಡಿಸಿದೆ. ಪ್ರಾದೇಶಿಕ ಅಸ್ಮಿತೆಗಳನ್ನು ನಾಶಪಡಿಸುವ ಹುಸಿ ರಾಷ್ಟ್ರೀಯವಾದ ಎಷ್ಟು ಅಪಾಯಕಾರಿ ಎಂಬುದನ್ನು ಈ ಲೇಖನ ಸಮರ್ಪಕವಾಗಿ ವಿವರಿಸುತ್ತದೆ. ಸಂಪಾದಕೀಯದ ಓದುಗರಿಗೆ ಈ ಲೇಖನದ ಪೂರ್ಣ ಪಾಠ ಇಲ್ಲಿದೆ.</b><br />
<b>-ಸಂಪಾದಕೀಯ.</b><br />
<br />
<table cellpadding="0" cellspacing="0" class="tr-caption-container" style="float: right; margin-left: 1em; text-align: right;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEh9W-VQkU7znlgX7491pR_2AamQ2ZL7JLSXSIaQmCeBwg-8yx6DepAXXlLl48qdzrFlC3qeaEO7K2srXwsRvgN4f96S98FPlsd4R6P-9TlMzIAoJpW1Q0K0c32S-3R0Rktpr2MmwE6k6mgH/s1600/golwalkar.jpg" imageanchor="1" style="clear: right; margin-bottom: 1em; margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEh9W-VQkU7znlgX7491pR_2AamQ2ZL7JLSXSIaQmCeBwg-8yx6DepAXXlLl48qdzrFlC3qeaEO7K2srXwsRvgN4f96S98FPlsd4R6P-9TlMzIAoJpW1Q0K0c32S-3R0Rktpr2MmwE6k6mgH/s1600/golwalkar.jpg" /></a></td></tr>
<tr><td class="tr-caption" style="text-align: center;"><b><span class="Apple-style-span" style="font-size: small;">ಗೋಲ್ವಾಲ್ಕರ್</span></b></td></tr>
</tbody></table>ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಒಂದು ದೊಡ್ಡ ಶಿಬಿರ ಹುಬ್ಬಳ್ಳಿಯಲ್ಲಿ ನಡೀತಿದೆ. ಈ ಶಿಬಿರದಲ್ಲಿ ಸಾವಿರಾರು ಆರೆಸ್ಸೆಸ್ಸಿಗರು ಪಾಲ್ಗೊಂಡಿದ್ದಾರೆ. ಸಮವಸ್ತ್ರ ಧರಿಸಿ, ಶಿಸ್ತಿನ ಸಿಪಾಯಿಗಳಾಗಿ ನಿನ್ನೆ ಇವರು ನಡೆಸಿದ ಪಥಸಂಚಲನವಂತೂ ನೋಡಿದವರ ಮೆಚ್ಚುಗೆಗೆ ಕಾರಣವಾಗುವಂತಿತ್ತು. ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ನಾಯಕರು ಪಾಲ್ಗೊಂಡಿದ್ದಾರೆ. ರಾಜ್ಯ ರಾಜಕಾರಣ, ಭಾರತೀಯ ಜನತಾ ಪಕ್ಷದ ಆಂತರಿಕ ಶಿಸ್ತು, ಭ್ರಷ್ಟಾಚಾರಗಳ ಬಗ್ಗೆಯೆಲ್ಲಾ ಅಲ್ಲಿ ಮಾತುಕತೆಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದವು. ಕನ್ನಡ - ಕನ್ನಡಿಗ- ಕರ್ನಾಟಕಗಳ ಬಗ್ಗೆಯಾಗಲೀ, ಭಾರತದ ಸಂವಿಧಾನದ ಬಗ್ಗೆಯಾಗಲೀ, ಒಕ್ಕೂಟ ವ್ಯವಸ್ಥೆಯ ಬಗ್ಗೆಯಾಗಲೀ, ಜಾತ್ಯಾತೀತತೆಯ ಬಗ್ಗೆಯಾಗಲೀ ಆರೆಸ್ಸೆಸ್ಸಿಗೆ ಇರುವ ನಿಲುವುಗಳನ್ನು ಅರಿತಾಗ ಈ ಸಂಭ್ರಮ ಆತಂಕವಾಗಿ ಬದಲಾಗುವುದರಲ್ಲಿ ಅಚ್ಚರಿಯಿಲ್ಲ!<br />
<br />
<b>ಸಂಘದ ಹೊರಮುಖ!</b><br />
<br />
ಆರೆಸ್ಸೆಸ್ ಎನ್ನುವುದು ದೇಶದ ಅತ್ಯಂತ ಶಿಸ್ತುಬದ್ಧ ಸಾಮಾಜಿಕ ಸಂಘಟನೆ ಎಂದೇ ಗುರುತಾಗಿದೆ. ಇಲ್ಲಿನ ಕಾರ್ಯಕರ್ತರು ಸ್ವಾರ್ಥ ಮರೆತು ನೆರೆ ಬರ ಮೊದಲಾದ ಸಂದರ್ಭಗಳಲ್ಲಿ ಜನತೆಯ ರಕ್ಷಣೆಗೆ, ಸಹಾಯಕ್ಕೆ ಧಾವಿಸಿ ಬಂದದ್ದಿದೆ. ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಈ ಸಂಸ್ಥೆಯ ಒಳರಚನೆ ಹಾಗೂ ಹರವುಗಳು ಹೆಸರುವಾಸಿಯಾಗಿದೆ. ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ, ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಇದೆಂಬ ಹೆಸರೂ ಸಂಘಕ್ಕಿದೆ. ಮನೆ ಮಠ ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇದರಲ್ಲಿದೆ. ಸಂಘದ ಅನೇಕ ಕಾರ್ಯಕರ್ತರು ಅಕ್ಷರಶಃ ಸಂತರಂತೆ ತಮ್ಮದೆಲ್ಲವನ್ನೂ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವುದೂ ಕೂಡಾ ಸತ್ಯ. ಆದರೆ ವೈಯುಕ್ತಿಕ ಹಿರಿಮೆಗಳು, ಅನೇಕರ ನಿಸ್ವಾರ್ಥತೆ, ತ್ಯಾಗ, ಗಟ್ಟಿತನಗಳು ಬಳಕೆಯಾಗುತ್ತಿರುವ ಉದ್ದೇಶ ಮಾತ್ರಾ ದುರದೃಷ್ಟಕರವಾದುದ್ದಾಗಿದೆ.<br />
<br />
ಸಂಘದ ಬೋಧನೆಯನ್ನು ಪ್ರಶ್ನಾತೀತವಾಗಿ ಒಪ್ಪುವ ಕಾರ್ಯಕರ್ತರ ಸೈನ್ಯವನ್ನೇ ಹೊಂದಿರುವ ಸಂಘವು, ಮೂಲತಃ ತಾನು ನಂಬಿರುವ ಸಿದ್ಧಾಂತಗಳಲ್ಲೇ ಪ್ರಜಾಪ್ರಭುತ್ವ ವಿರೋಧಿ, ವೈವಿಧ್ಯತಾ ವಿರೋಧಿ ನಿಲುವುಗಳನ್ನು ಹೊಂದಿರುವ ಪುರಾವೆಗಳನ್ನು, ಸಂಸ್ಥೆಯ ಪೂಜನೀಯ ಆದರ್ಶವಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ಚಿಂತನಗಂಗಾ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧, ಪ್ರಕಾಶಕರು: ಸಾಹಿತ್ಯ ಸಂಗಮ ಪ್ರಕಾಶನ) ಪುಸ್ತಕದಲ್ಲಿ ಕಾಣಬಹುದಾಗಿದೆ. ಚಿಂತನಗಂಗಾ ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಪುಸ್ತಕದ ಮೊದಲಲ್ಲೇ ಬರೆಯಲಾಗಿರುವುದರಿಂದ ಇದನ್ನು ಸಂಘದ ಅಧಿಕೃತವಾದ ನಿಲುವು ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿಲುವಿನ ಸರಿತಪ್ಪುಗಳನ್ನು ವಿಶ್ಲೇಷಿಸದೆ, ರಾಷ್ಟ್ರೀಯ ಸ್ವಂಯಂಸೇವಕ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು!<br />
<br />
<b>ಭಾಷೆಗಳ ಬಗ್ಗೆ!</b><br />
<br />
ವೈವಿಧ್ಯತೆಯನ್ನು ಹಳಿಯಲಾಗದ, ಆದರೆ ಒಪ್ಪಲಾಗದ ಮನಸ್ಥಿತಿಯನ್ನು, ಇಂತಹ ವೈವಿಧ್ಯತೆ ಇರುವುದರಿಂದಾಗಿಯೇ ಚಡಪಡಿಕೆ ಹೊಂದಿರುವುದನ್ನೂ ಈ ಕೆಳಗಿನ ಮಾತುಗಳು ಧ್ವನಿಸುತ್ತಿವೆ.<br />
ನಮ್ಮ ರಾಷ್ಟ್ರೀಯ ಪರಂಪರೆಯ ವೈವಿಧ್ಯವು ಭಾಷೆಗಳ ಕ್ಷೇತ್ರಗಳಲ್ಲೂ ವ್ಯಕ್ತಗೊಂಡಿದೆ.. ಎಲ್ಲಾ ಭಾಷೆಗಳೂ ಮೂಲತಃ ಒಂದೇ. ವಾಸ್ತವವಾಗಿ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಸಂಸ್ಕೃತಿಯ ದಿವ್ಯ ಪರಿಮಳವನ್ನು ಹರಡುವ ನವವಿಕಸಿತ ಕುಸುಮಗಳಂತೆ. ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದರೆ ಭಾಷೆಗಳ ಆ ಸಾಮ್ರಾಜ್ಞಿ ದೇವವಾಣಿ ಸಂಸ್ಕೃತ. ಅದರ ಸಂಪನ್ನತೆ ಮತ್ತು ಪರಂಪರಾಗತ ಪಾವನ ಸಂಬಂಧಗಳಿಂದಾಗಿ ಅದೊಂದೇ ನಮ್ಮ ರಾಷ್ಟ್ರೀಯ ಏಕತೆಗೆ ಬಲನೀಡುತ್ತಿರುವ ಒಂದು ಮುಖ್ಯ ಅಂಶ. ಆದರೆ ದುರದೃಷ್ಟವಶಾತ್ ಅದು ಇಂದು ಸಾಮಾನ್ಯ ಬಳಕೆಯಲ್ಲಿಲ್ಲ. ಅದನ್ನು ಬಳಕೆಗೆ ತರುವ ನೈತಿಕ ಅಭಿಮಾನವಾಗಲೀ, ಕೆಚ್ಚೆದೆಯಾಗಲೀ ನಮ್ಮ ಇಂದಿನ ಆಡಳಿತಗಾರರಿಗಿಲ್ಲ.<br />
(ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು ಏಕೆ ತಲೆ ಎತ್ತುತ್ತಿವೆ ಗೊತ್ತಾಯ್ತಲ್ಲಾ?)<br />
<br />
ಇಂಗ್ಲೀಶ್ ನಮ್ಮ ಮೇಲೆ ಹೇರಲ್ಪಟ್ಟ ಕೃತಕ ಹೊರೆ. ಇದನ್ನು ಕಿತ್ತೆಸೆಯಬೇಕು. ಇಂಗ್ಲೀಶ್ ಮುಂದುವರಿಕೆ ಮಾನಸಿಕ ದಾಸ್ಯದ ಲಕ್ಷಣ. ಸಂಪರ್ಕ ಭಾಷೆಯ ಸಮಸ್ಯೆಗೆ ಪರಿಹಾರವೇನು? ಸಂಸ್ಕೃತವು ಆ ಸ್ಥಾನವನ್ನು ಪಡೆಯುವವರೆಗೆ ಅನುಕೂಲದ ದೃಷ್ಟಿಯಿಂದ ಹಿಂದಿಗೆ ಆದ್ಯತೆ ನೀಡಬೇಕು. ಯಾಕೆಂದರೆ ದೇಶದ ಬಹುಭಾಗದ ಜನರು ಬಳಸುವುದು ಹಿಂದಿಯನ್ನೇ. ಕಲಿಯುವುದಕ್ಕೆ ಮತ್ತು ಆಡುವುದಕ್ಕೆ ಅತ್ಯಂತ ಸುಲಭವಾದ ಭಾಷೆಯೂ ಅದೇ. ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಲು ಕುಂಭ ಅಥವಾ ಬೇರಾವುದಾದರೂ ಮೇಳಕ್ಕೆ ಕಾಶಿಗಾಗಲೀ, ಪ್ರಯಾಗಕ್ಕಾಗಲೀ ಹೋದರೆ, ದೂರದ ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳಿಂದ ಅಲ್ಲಿ ಕಿಕ್ಕಿರಿದು ನೆರೆಯುವ ಅಗಾಧ ಜನಸ್ತೋಮ ಹಿಂದಿಯನ್ನೇ, ಅದೆಷ್ಟೇ ಅಪಕ್ವವಾಗಿರಲೀ, ಬಳಸುವುದನ್ನು ಕಾಣುತ್ತೇವೆ.<br />
<br />
ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು. ವಾಸ್ತವವಾಗಿ ಬ್ರಿಟೀಷರ ಆಳ್ವಿಕೆಯಲ್ಲೂ ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಒಂದೇ ಭಾಷೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಇವೆಲ್ಲಾ ಭಾಷೆಗಳನ್ನೂ ನಾಶಮಾಡುವುದನ್ನು ಯಾವನೂ ಸಹಿಸಲಾರ. ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಶಂಕೆ, ಭೀತಿಗಳು ಕೇವಲ ಕಟ್ಟುಕತೆ, ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.<br />
<br />
ಒಟ್ಟು ಸಾರವೆಂದರೆ ಹಿಂದೀಯನ್ನು ನೀವೆಲ್ಲಾ ಒಪ್ಪಿ. ಬ್ರಿಟೀಷರು ಆಳುವಾಗಲೇ ಭಾರತೀಯ ಭಾಷೆಗಳು ಉದ್ಧಾರವಾಗಿದ್ದವು, ಹಿಂದೀಲಿ ಆಳಿದರೆ ಏನಾಗುತ್ತದೆ? ಎನ್ನುವ ನಿಲುವು ಕಾಣುತ್ತದೆ. ಇಂದು ಹಿಂದೀ ಬರದಿದ್ದರೆ ಕೆಲಸ ಕೊಡಲ್ಲಾ ಎಂದು ನಮ್ಮಲ್ಲಿ ಹುಟ್ಟಿಕೊಂಡಿರುವ ಪರಿಸ್ಥಿತಿ ಆಕ್ರಮಣವಲ್ಲವೇ? ಹಿಂದೀ ಯಜಮಾನಿಕೆಯಲ್ಲವೇ?<br />
<br />
<b>ಒಕ್ಕೂಟದ ಬಗ್ಗೆ!</b><br />
<br />
ಸ್ವಯಂನಿರ್ಣಯಾಧಿಕಾರದ ಘೋಷಣೆಯ ಈ ತಪ್ಪು ಅನ್ವಯವನ್ನು ಕಾಶ್ಮೀರಕ್ಕೆ ಮತ್ತು ಈಗ ಗೋವಾಕ್ಕೆ ವಿಸ್ತರಿಸಲಾಗಿದೆ. ಕಾಶ್ಮೀರಿಗಳೇ ತಮ್ಮ ಭವಿಷ್ಯವನ್ನು ತೀರ್ಮಾನಿಸಬೇಕು ಎಂದರೆ ದೇಶದ ಏಕತ್ವವನ್ನೂ ಭಾರತದ ಜನರ ಏಕತ್ವವನ್ನೂ ತಿರಸ್ಕರಿಸಿದಂತೆ.<br />
ಆನಂತರ ಬಂತು ನಮ್ಮ ಸಂವಿಧಾನ. ಇದು ನಮ್ಮ ದೇಶವನ್ನು ಸ್ವಲ್ಪ ಹೆಚ್ಚು ಕಡಿಮೆ ಪ್ರತ್ಯೇಕವೇ ಆದ ಘಟಕಗಳಾಗಿ ಒಡೆದು ಪ್ರತಿಯೊಂದಕ್ಕೂ ಒಂದು ರಾಜ್ಯವನ್ನು ಕೊಟ್ಟು ಎಲ್ಲವನ್ನೂ ಒಂದು ಒಕ್ಕೂಟವಾಗಿ ಸಂಯುಕ್ತಗೊಳಿಸಿತು. ಪ್ರತಿಭಾಷೆಯ ಗುಂಪು ಒಂದು ಜನಾಂಗವಾಗಿ ತನ್ನದೇ ಪ್ರತ್ಯೇಕ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿಸಮೃದ್ಧವಾಗಿ ಸ್ವಯಮಾಧಿಕಾರವನ್ನು ಪಡೆದ ರಾಜ್ಯಗಳ ಒಕ್ಕೂಟದ ಗೀಳು ನಮ್ಮ ನಾಯಕರ ಮನಸ್ಸನ್ನೂ ವಿಚಾರಶಕ್ತಿಯನ್ನೂ ಆಕ್ರಮಿಸಿಬಿಟ್ಟಿತ್ತು.<br />
ಇವು ನಿರಾಸೆಗೊಳಿಸುವ ಯೋಚನೆಗಳೇ. ಆದರೆ ನಾವು ನಿರಾಸೆಯಿಂದ ಕೈಕಾಲು ಸೋಲಬೇಕಾಗಿಲ್ಲ: ಏಕೆಂದರೆ ಇದಕ್ಕೆ ಒಂದು ಮದ್ದುಂಟು.<br />
ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೇ ಸ್ವಯಮಾಧಿಕಾರವುಳ್ಳ ಅಥವಾ ಭಾಗಶಃ ಸ್ವಯಮಾಧಿಕಾರವುಳ್ಳ ರಾಜ್ಯಗಳ ಅಸ್ತಿತ್ವವನ್ನೇ ಅಳಿಸಿಹಾಕಬೇಕು.<br />
<br />
<b>ಸಾಮಾಜಿಕ ಸಮಸ್ಯೆಯ ಸರಳೀಕರಣ!</b><br />
<br />
ಮೀಸಲಾತಿ ವ್ಯವಸ್ಥೆಯ ಬಗ್ಗೆ ಗುರೂಜಿಯವವರ ಅನಿಸಿಕೆ:<br />
ನಮ್ಮ ಜನರಲ್ಲಿ ವಿವಿಧ ವಿಭಾಗಗಳವರಿಗೆ ಹರಿಜನರು, ನಿಮ್ನ ಜಾತಿಯವರು, ನಿಮ್ನ ಬುಡಕಟ್ಟಿನವರು ಹೀಗೆಲ್ಲಾ ಹೆಸರುಗಳನ್ನು ಕೊಡಾಲಾಗುತ್ತಿದೆ. ಹಣದಾಸೆ ತೋರಿಸಿ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿರುವುದು.<br />
ಇದನ್ನು ಓದಿದಾಗ ಆರೆಸ್ಸೆಸ್ ಮೀಸಲಾತಿ ಬಗ್ಗೆ ಎಂತಹ ನಿಲುವನ್ನು ಹೊಂದಿದೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆಯೆನ್ನಲಾದ, ಇಂದಿಗೂ ಬಹುಸಂಖ್ಯಾತರನ್ನು ತಾರತಮ್ಯಕ್ಕೀಡುಮಾಡುತ್ತಿರುವ ಸಮಾಜಿಕ ಅಸಮಾನತೆಯೇ ಇರಲಿಲ್ಲ ಎನ್ನುವಂತಹ ಅನಿಸಿಕೆಯನ್ನು ಗುರೂಜಿ ಮಾತುಗಳು ಧ್ವನಿಸುತ್ತಿರುವುದು ಸಂಘ ಇಡೀ ಸಮಾಜದ ಸಮಸ್ಯೆಗಳನ್ನು ಸರಳೀಕರಿಸುತ್ತಿರುವುದನ್ನು ತೋರುತ್ತದೆ. ಜಾತೀಯತೆ ತೊಲಗಬೇಕು ಅನ್ನುವ ನಿಲುವು ಸಂಘಕ್ಕಿದೆ ಎನ್ನಲಾಗುತ್ತದೆ, ಆದರೆ ಜಾತಿಯ ಕಾರಣದಿಂದಲೇ ತುಳಿತಕ್ಕೊಳಗಾದವರನ್ನು ಮೇಲೆತ್ತುವುದಕ್ಕೆ ಸಂಘವು ದೇವಸ್ಥಾನಕ್ಕೆ ಪ್ರವೇಶ, ಬಾವಿನೀರು ಬಳಸಲು ಅನುಮತಿಯಂತಹ ಮೇಲ್ಮೇಲಿನ ಪರಿಹಾರಗಳಿಗಿಂತಲೂ ಮಿಗಿಲಾದ ಪರಿಹಾರವನ್ನು ನೀಡಲಾರದಾಗಿದೆ.<br />
<br />
<b>ಸಂಘದ ಧರ್ಮದೃಷ್ಟಿ!</b><br />
<br />
ಈ ನಾಡಿನಲ್ಲಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೋಭಾವವೇನು? ಅವರು ಈ ನಾಡಿನಲ್ಲಿ ಹುಟ್ಟಿದರು, ಸಂದೇಹವೇ ಇಲ್ಲ. ಆದರೆ ಈ ನೆಲದ ಉಪ್ಪಿಗೆ ನಿಷ್ಠೆಯಿಂದ ಇದ್ದಾರೆಯೇ ಅವರು!? ಅವರನ್ನು ಬೆಳೆಸಿದ ಈ ನಾಡಿಗೆ ಕೃತಜ್ಞರಾಗಿದ್ದಾರೆಯೇ? ಈ ನಾಡು ಮತ್ತು ಇಲ್ಲಿನ ಪರಂಪರೆಯ ಮಕ್ಕಳು ತಾವು ಮತ್ತು ಇದಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಮಹಾಭಾಗ್ಯ ಎಂದು ಅವರು ಭಾವಿಸಿದ್ದಾರೆಯೇ? ಖಂಡಿತಾ ಇಲ್ಲ! ಮತಾಂತರದೊಂದಿಗೇ ರಾಷ್ಟ್ರದಲ್ಲಿ ಅವರ ಪ್ರೇಮ ಮತ್ತು ನಿಷ್ಠೆಗಳು ಹೊರಟೇ ಹೋಗಿವೆ.<br />
<br />
ಇದು ಇಲ್ಲಿಗೇ ಮುಗಿಯಲಿಲ್ಲ. ಈ ನಾಡಿನ ಶತ್ರುಗಳೊಂದಿಗೆ ಅವರು ಮಾನಸಿಕವಾಗಿ ಏಕತೆಯನ್ನು ಬೆಳೆಸಿಕೊಂಡಿದ್ದಾರೆ.<br />
ಕೆಲವು ಸಮಾಜ ಬಂಧುಗಳು ನಮ್ಮ ಜೊತೆ ಬಿಟ್ಟು ಕಳೆದ ಕೆಲವು ಶತಮಾನಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಿದ್ದವರು ಈಗ ಮರಳಿ ನಮ್ಮ ಬಳಿಗೆ ಬಂದಲ್ಲಿ ಅವರಿಗೆ ನಮ್ಮ ಪ್ರೀತಿ ಗೌರವಗಳನ್ನು ತೋರಿಸದೆ, ಸಂತೋಷ ಪಡದೆ ಹೇಗಿದ್ದೇವು? ಇಲ್ಲಿ ಬಲಾತ್ಕಾರವೇನೂ ಇಲ್ಲ. ವಿಷಯವನ್ನು ಸರಿಯಾಗಿ ತಿಳಿದುಕೊಂಡು ಅವರು ಹಿಂದಕ್ಕೆ ಬರಲಿ. ಉಡುಪು, ಸಂಪ್ರದಾಯ, ವಿವಾಹ ಪದ್ಧತಿ, ಅಂತ್ಯಸಂಸ್ಕಾರ ಇಂತಹವುಗಳಲ್ಲೆಲ್ಲ ಅವರು ತಮ್ಮ ಪೂರ್ವಿಕರ ಹಿಂದುಜೀವನ ವಿಧಾನವನ್ನು ಸ್ವೀಕರಿಸಲಿ ಎಂಬುದಷ್ಟೇ ನಮ್ಮ ಕರೆ, ಪ್ರಾರ್ಥನೆ.<br />
<br />
ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!<br />
<br />
ಈ ನಾಡಿನ ಒಳಗಿನ ಅಪಾಯಗಳೆಂದು ಇವರು ಬಗೆದಿರುವುದು ಮೂರನ್ನು. ಮೊದಲನೆಯದು ಮುಸ್ಲಿಮರು, ಎರಡನೆಯದು ಕ್ರೈಸ್ತರು ಮತ್ತು ಮೂರನೆಯದು ಕಮ್ಯುನಿಸ್ಟರು! ಹೀಗೆಂಬ ಮೂರು ಬೇರೆಬೇರೆ ಅಧ್ಯಾಯಗಳೇ ಈ ಪುಸ್ತಕದಲ್ಲಿದೆ. ಇದೇ ಇಂದಿಗೂ ಸಂಘದ ನಿಲುವಾಗಿದೆಯೇ?<br />
<br />
<b>ಆರೆಸ್ಸೆಸ್ ಮತ್ತು ಕರ್ನಾಟಕ </b><br />
<br />
ಇಂತಹ ನಿಲುವುಗಳ ಸಂಘವು ಕರ್ನಾಟಕದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಷ್ಟೂ ಕನ್ನಡ ಕನ್ನಡಿಗ ಕರ್ನಾಟಕಗಳ ಅಸ್ತಿತ್ವಕ್ಕೇ ಎರವಾದೀತು. ಏಕೆಂದರೆ ನಾಡಿನ ಆಡಳಿತದಲ್ಲಿ ಭಾಷೆಯಾಗಿ ಕನ್ನಡಕ್ಕಿಂತಾ ಹಿಂದೀಗೆ ಪ್ರಾಮುಖ್ಯತೆ. ನಾಡಾಗಿ ಒಗ್ಗೂಡಿದ ಕರ್ನಾಟಕಕ್ಕಿಂತಾ ಕನ್ನಡನಾಡನ್ನು ಪುಟ್ಟ ಪುಟ್ಟ ರಾಜ್ಯಗಳಾಗಿ ಒಡೆಯುವುದಕ್ಕೇ ಪ್ರಾಮುಖ್ಯತೆ ಮತ್ತು ಕನ್ನಡಿಗನಿಗಿಂತಾ ಕನ್ನಡಿಗರ ನಿಷ್ಠೆಯನ್ನೆಲ್ಲಾ ಧರ್ಮದ ಹೆಸರಲ್ಲಿ ಪುಟಕ್ಕಿಟ್ಟು ನೋಡುವುದಕ್ಕೆ ಪ್ರಾಮುಖ್ಯತೆ. ಕನ್ನಡಿಗ ಮುಸಲ್ಮಾನ, ಕನ್ನಡಿಗ ಕ್ರೈಸ್ತನಿಗಿಂತಾ ನಮಗೆ ಸಂಬಂಧವೇ ಇರದ ಹೊರನಾಡಿನ ಹಿಂದುವಿಗೆ ಪ್ರಾಮುಖ್ಯತೆ!<br />
<br />
<b>ಸಂಘ ರಾಜಕೀಯಕ್ಕಿಳಿಯಲಿ!</b><br />
<br />
ಇದೇ ಸಂಘದವರಿಗೆ ಬಿಜೆಪಿಯೆನ್ನುವ ಇನ್ನೊಂದು ಮುಖವಿದೆ. ಬಿಜೆಪಿಯೂ ಆರೆಸ್ಸೆಸ್ಸೂ ಒಂದೇ ಎನ್ನುವುದಕ್ಕೆ ಗಣವೇಶ ಧರಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಫೋಟೋಗಳಿರುವುದೇ ಸಾಕು! ಈ ಮುಖವಾಡ ಧರಿಸಿದ ಪಕ್ಷದ ಸಿದ್ಧಾಂತ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತಾಡುತ್ತದೆ, ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತಾಡುತ್ತದೆ. ಮೀಸಲಾತಿಯ ಪರವಾಗಿ ಮಾತಾಡುತ್ತದೆ, ಚುನಾವಣೆ ಹತ್ತಿರ ಬಂದಾಗ, ಮುಸ್ಲಿಂರ ಮತಕ್ಕಾಗಿ ಗೆದ್ದ ಮೇಲೆ ಮುಸ್ಲಿಂವೊಬ್ಬರನ್ನು ಮಂತ್ರಿ ಮಾಡುತ್ತೇನೆ ಎನ್ನುತ್ತಾ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತದೆ... ಸಂಘವೇನೂ ಕಮ್ಮಿಯಿಲ್ಲ, ಬಿಜೆಪಿ ನಾಯಕರುಗಳಿಗೆ ಶಿಸ್ತಿನ ಪಾಠ ಹೇಳುತ್ತೆ, ಕೇಶವಶಿಲ್ಪಕ್ಕೆ ಕರೆಸಿ ಬುದ್ಧಿ ಹೇಳುತ್ತೆ. ತೆಪ್ಪಗಿರಲು ಆಜ್ಞೆ ಮಾಡುತ್ತದೆ...ವಿಪರ್ಯಾಸವೆಂದರೆ ಹೀಗೆ ಕೈಗೊಂಬೆಯಂತೆ ಆಡಾಡಿಸುತ್ತಲೇ ಸೋನಿಯಾ ಗಾಂಧಿಯ ಕೈಗೊಂಬೆ ಕಾಂಗ್ರೆಸ್ ಎನ್ನುವ ಆರೋಪವನ್ನೂ ಮಾಡುತ್ತದೆ. ಸಂಘ ಹೀಗೆ ಬಿಜೆಪಿಯ ಮೂಲಕ ತನ್ನ ಸಿದ್ಧಾಂತಗಳಿಗೆ ವಿರುದ್ಧವಾದುದನ್ನು ಹೇಳಿಸಿ, ಸೀಟು ಗೆಲ್ಲಿಸಿ, ಸರ್ಕಾರ ಮಾಡಿಸಿ, ಆಮೇಲೆ ತಮ್ಮ ಸಿದ್ಧಾಂತದ ಜಾರಿ ಮಾಡುವ ಮೋಸಗಾರಿಕೆಗಿಂತಾ ನೇರವಾಗಿ ತಾನೇ, ತನ್ನ ಸಿದ್ಧಾಂತಗಳನ್ನು ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ರಾಜಕಾರಣಕ್ಕೆ ಇಳಿಯುವುದು ಪ್ರಾಮಾಣಿಕತೆಯೆನ್ನಿಸುತ್ತದೆ!<br />
<br />
ಕೃಪೆ: <a href="http://www.enguru.blogspot.com/2012/01/rss-kannalli-bhaashaneeti-okkoota-mattu.html">ಏನ್ ಗುರು? ಕಾಫಿ ಆಯ್ತಾ?</a> (<a href="http://www.banavasibalaga.org/">ಬನವಾಸಿ ಬಳಗ</a>ದ ಬ್ಲಾಗ್)<br />
</div>sampadakeeyahttp://www.blogger.com/profile/10834139994439066030noreply@blogger.com42tag:blogger.com,1999:blog-3901985173139732142.post-39557666985784707792012-01-27T15:02:00.001+05:302012-01-27T15:19:33.598+05:30ವಿವೇಕಾನಂದ, ಅಮೀನ್ ಮಟ್ಟು ಮತ್ತು ಅವಿವೇಕಿಗಳು...<div dir="ltr" style="text-align: left;" trbidi="on"><br />
<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiWPaVglR0n8WVRkdRCgj7xO__azw048Z0hmiJRsLaabW3ibczV6yBn7DMqKeMWoFlfYnevJGIU8IWwiaJFvc5WqlNjqnFriYoUn9m1YiRHG6ayTYund7u5T0We8YUEA04-LS9TmbK1uaC9/s1600/vivek.jpg" imageanchor="1" style="margin-left: 1em; margin-right: 1em;"><img border="0" height="232" src="https://blogger.googleusercontent.com/img/b/R29vZ2xl/AVvXsEiWPaVglR0n8WVRkdRCgj7xO__azw048Z0hmiJRsLaabW3ibczV6yBn7DMqKeMWoFlfYnevJGIU8IWwiaJFvc5WqlNjqnFriYoUn9m1YiRHG6ayTYund7u5T0We8YUEA04-LS9TmbK1uaC9/s400/vivek.jpg" width="400" /></a></div>ಬಡಿಗೆ ಕೈಗೆ ಕೊಟ್ಟು ಬಡಿಸಿಕೊಂಡಂತಾಗಿದೆ ಕೆಲವು ಅವಿವೇಕಿಗಳಿಗೆ.<br />
<br />
ದಿನೇಶ್ ಅಮೀನ್ ಮಟ್ಟು ಪ್ರಜಾವಾಣಿಯ ತಮ್ಮ ಅನಾವರಣ ಅಂಕಣದಲ್ಲಿ ವಿವೇಕಾನಂದರನ್ನು ಕುರಿತು ಬರೆದ ಲೇಖನಕ್ಕೆ ಕೆಟ್ಟಾಕೊಳಕು ರೀತಿಯಲ್ಲಿ ಪ್ರತಿಕ್ರಿಯಿಸಿದ ಅವಿವೇಕಿಗಳು ಈಗ ಪ್ರಾಯಶ್ಚಿತ್ತ ಅನುಭವಿಸುವಂತಾಗಿದೆ.<br />
<br />
ವಿವೇಕಾನಂದರು ಹೇಗೆ ಒಬ್ಬ ಸಾಮಾನ್ಯ ಮನುಷ್ಯರಾಗಿದ್ದುಕೊಂಡೇ ಮಹಾನ್ ಚೇತನವಾಗಲು ಸಾಧ್ಯವಾಯಿತು ಎಂಬುದನ್ನಷ್ಟೇ ಅಮೀನ್ ಮಟ್ಟು ಬರೆದಿದ್ದರು. ತಿಳಿಗೇಡಿಗಳು ಶಿವಮೊಗ್ಗದ ಪ್ರಜಾವಾಣಿ ಕಚೇರಿಯಲ್ಲಿ ಗೂಂಡಾಗಿರಿ ನಡೆಸಿದರು. ಬೆಂಗಳೂರಿನ ಪ್ರಜಾವಾಣಿ ಕಚೇರಿ ಮುಂದೆಯೂ ಕೆಲವರು ಮೌನ ಮೆರವಣಿಗೆ ನಡೆಸಿದರು. ಅಸಹ್ಯವೆಂದರೆ ದಿನೇಶ್ ಅವರ ಮೊಬೈಲ್ ನಂಬರಿಗೆ ಪ್ರಾಣ ಬೆದರಿಕೆಯ ಮೆಸೇಜುಗಳ ರವಾನೆಯಾಯ್ತು, ಕೆಲವರು ಕರೆ ಮಾಡಿಯೂ ಬೆದರಿಕೆಯೊಡ್ಡಿದರು. ಫೇಸ್ ಬುಕ್ ಇತ್ಯಾದಿ ಸಾಮಾಜಿಕ ತಾಣಗಳಲ್ಲಿ ದಿನೇಶ್ ಅವರನ್ನು ನಿಂದಿಸುವ ಬರಹಗಳು ಪ್ರಕಟವಾದವು.<br />
<br />
ಇದೆಲ್ಲ ನಡೆಯುವಾಗ ಸ್ವಲ್ಪ ತಡವಾಗಿ ಪ್ರಗತಿಪರ ಸಂಘಟನೆಗಳು ಕಾರ್ಯಾಚರಣೆಗಿಳಿದವು.<a href="http://avadhimag.com/?p=45172"> ದಿನೇಶ್ ಅವರ ಬರಹವನ್ನು ಸಮರ್ಥಿಸಿಕೊಂಡು ಪ್ರಗತಿಪರರೂ ಚಳವಳಿಗೆ ಇಳಿದರು</a>. ಶಿವಮೊಗ್ಗದಲ್ಲಿ ಗೂಂಡಾಗಿರಿ ನಡೆಸಿದ್ದವರನ್ನು ಅಲ್ಲಿನ ಜನರೇ ಮನೆಮನೆಯಿಂದ ಎಳೆತಂದು ಪೊಲೀಸರಿಗೆ ಒಪ್ಪಿಸಿದರು. ಬೆಂಗಳೂರಿನಲ್ಲೂ ವಿವೇಕಾನಂದರ ಅಭಿಮಾನಿಗಳೆಂದು ಹೇಳಿಕೊಂಡವರು ನಡೆಸಿದ ಮೆರವಣಿಗೆಯನ್ನು ಮೀರಿಸುವ ದೊಡ್ಡ ಪ್ರತಿಭಟನೆಯೂ ನಡೆಯಿತು. <a href="http://www.prajavani.net/web/include/story.php?news=60943&section=2&menuid=10">ವಿವೇಕಾನಂದರ ಕುರಿತು ದಲಿತ ಸಂಘಟನೆಗಳು ಎರಡು ವಿಚಾರ ಸಂಕಿರಣಗಳನ್ನು ನಡೆಸಿದವು.</a> ಪ್ರಜಾವಾಣಿ ಪತ್ರಿಕೆ ಸ್ವಲ್ಪ ತಡವಾಗಿಯಾದರೂ ಶಿವಮೊಗ್ಗ ಘಟನೆಯನ್ನು ಖಂಡಿಸುವ ಕಟುವಾದ ಸಂಪಾದಕೀಯ ಬರೆದು ದಿನೇಶ್ ಅವರ ಬೆನ್ನಿಗೆ ನಿಂತಿತು.<a href="http://www.prajavani.net/web/include/story.php?news=3279&section=31&menuid=14"> ಪ್ರಜಾವಾಣಿಯ ವಾಚಕರ ವಾಣಿಯಲ್ಲೂ ಅವಿವೇಕಿಗಳನ್ನು ಖಂಡಿಸುವ ಪತ್ರಗಳು ಪ್ರಕಟಗೊಂಡವು.</a> ಬ್ಲಾಗು, ಫೇಸ್ ಬುಕ್ ಗಳಲ್ಲಿ ಅಸಲಿ ವಿವೇಕಾನಂದರನ್ನು ಪರಿಚಯಿಸುವ ಅಭಿಯಾನವೂ ನಡೆಯಿತು. ಎಲ್ಲಕ್ಕಿಂತ ಮುಖ್ಯವಾಗಿ ತಮಗೆ ಬೆದರಿಕೆ ಕರೆ, ಎಸ್ಎಂಎಸ್ಗಳನ್ನು ಹಾಕಿದ್ದವರ ದೂರವಾಣಿ ಸಂಖ್ಯೆಗಳನ್ನೆಲ್ಲ ಪಟ್ಟಿ ಮಾಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಿನೇಶ್ ಅವರು ದೂರೊಂದನ್ನು ದಾಖಲಿಸಿದ್ದಾರೆ ಎಂಬ ಮಾಹಿತಿ ಇದೆ.<br />
<br />
ವಿವೇಕಾನಂದರನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದವರಿಗೆ ಈ ಎಲ್ಲ ಬೆಳವಣಿಗೆಗಳು ದೊಡ್ಡ ಸೋಲು. ದಿನೇಶ್ ಅವರ ಲೇಖನದಲ್ಲಿ ಆಕ್ಷೇಪಾರ್ಹವಾದ ಅಂಶಗಳಿದ್ದರೆ ಅದನ್ನು ಪ್ರಶ್ನಿಸುವ, ದಾಖಲೆ ಆಧಾರವಾಗಿಟ್ಟುಕೊಂಡು ಪ್ರತಿವಾದ ಮಾಡುವ ಎಲ್ಲ ಅವಕಾಶವೂ ಇದ್ದರೂ ಕಚೇರಿಗೆ ನುಗ್ಗಿ ಧ್ವಂಸ ಮಾಡುವ, ಬೆದರಿಕೆ ಕರೆ ಮಾಡುವ ಕುಚೇಷ್ಟೆಗೆ ಇಳಿದವರು ತಕ್ಕ ಪಾಠವನ್ನೇ ಕಲಿತಿದ್ದಾರೆ.<br />
<br />
ನಿಮಗೆ ನೆನಪಿರಬಹುದು. ಸಂಪಾದಕೀಯದಲ್ಲಿ ಹಿಂದೆ ಧರ್ಮ-ಜಾತಿಯ ಜಿಜ್ಞಾಸೆ ಶುರುವಾಗಿದ್ದಾಗ ವಿವೇಕಾನಂದರ ನುಡಿಗಳನ್ನು ಬಳಸಿ ವಿವೇಕ ಮೂಡಿಸುವ ಪ್ರಯತ್ನವೊಂದನ್ನು ನಡೆಸಿದ್ದೆವು. ವಿವೇಕಾನಂದರು ನಿಸ್ಸಂಶಯವಾಗಿ ಭಾರತಕ್ಕೆ ಬೆಳಕು ಕೊಟ್ಟ ಮಹಾಪುರುಷರು. ಅವರನ್ನು ಕೆಲವರ ಕಪಿಮುಷ್ಠಿಯಿಂದ ಬಿಡಿಸುವ ಕೆಲಸವನ್ನು ಮಾಡಬೇಕಿದೆ. ದಿನೇಶ್ ಅವರು ಆ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸಬೇಕು.</div>sampadakeeyahttp://www.blogger.com/profile/10834139994439066030noreply@blogger.com12tag:blogger.com,1999:blog-3901985173139732142.post-26398399458559558602011-12-23T19:41:00.000+05:302011-12-23T19:41:15.816+05:30ನಿಮ್ಮ ನೆರವು ಅವರನ್ನು ತಲುಪಿದೆ...<div dir="ltr" style="text-align: left;" trbidi="on"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEh3rB4cJvAyW9x-fFdFzj8k7tbiO8s3tfs_k3Zofp-HINCDySa_ZzkPQVYpjnW31nOOi2Nq4png0dMGsgMCaNEuoWv4DyT-V2AvBLiVgXa-NnKEWEXTqR3rsnQe_nDD1AGo7w7hT17JaUXk/s1600/DSC01179.JPG" imageanchor="1" style="margin-left: 1em; margin-right: 1em;"><img border="0" height="300" src="https://blogger.googleusercontent.com/img/b/R29vZ2xl/AVvXsEh3rB4cJvAyW9x-fFdFzj8k7tbiO8s3tfs_k3Zofp-HINCDySa_ZzkPQVYpjnW31nOOi2Nq4png0dMGsgMCaNEuoWv4DyT-V2AvBLiVgXa-NnKEWEXTqR3rsnQe_nDD1AGo7w7hT17JaUXk/s400/DSC01179.JPG" width="400" /></a></div><b>ಕೆಜಿಎಫ್ ನ ಮಲಸಂತ್ರಸ್ಥರಿಗಾಗಿ <a href="http://vartamaana.com/2011/12/20/kgf-%E0%B2%B8%E0%B2%82%E0%B2%A4%E0%B3%8D%E0%B2%B0%E0%B2%B8%E0%B3%8D%E0%B2%A4%E0%B2%B0%E0%B2%BF%E0%B2%97%E0%B3%86-%E0%B2%A4%E0%B2%B2%E0%B3%81%E0%B2%AA%E0%B2%BF%E0%B2%A6-%E0%B2%A8%E0%B3%86%E0%B2%B0/">ವರ್ತಮಾನ ಬಳಗ </a>ನಡೆಸಿದ ಮಾನವೀಯ ಯತ್ನಕ್ಕೆ ಅಭಿನಂದನೆಗಳು. ವರ್ತಮಾನದ ಅಪೀಲನ್ನು ಸಂಪಾದಕೀಯದಲ್ಲೂ ಪ್ರಕಟಿಸಿದ್ದೆವು. ಸಾಕಷ್ಟು ಓದುಗರು ಸ್ಪಂದಿಸಿದ್ದಾರೆ. ಆ ಎಲ್ಲರಿಗೂ ಧನ್ಯವಾದಗಳು. ಕೆಲವು ಫೊಟೋಗಳು ಮತ್ತು ದಯಾನಂದ್ ಬರೆದ ಒಂದು ಟಿಪ್ಪಣಿ ಇಲ್ಲಿದೆ.</b><br />
<b> -ಸಂಪಾದಕೀಯ</b><br />
<br />
<br />
ವರ್ತಮಾನದ ಕರೆಗೆ ಓಗೊಟ್ಟ ಸಹೃದಯ ಜೀವಪರ ಬಂಧುಗಳಿಗೆ ಕೆಜಿಎಫ್ನ ಮಲಸಂತ್ರಸ್ಥರ ನೆನಕೆಗಳು ಸಲ್ಲುತ್ತಿವೆ. ವ್ಯವಸ್ಥೆ, ಅಧಿಕಾರ ಮತ್ತು ಸಮಕಾಲೀನ ನ್ಯಾಯ ನಿರಾಕರಣೆಯ ಅಡಕತ್ತರಿಗೆ ಸಿಕ್ಕಿಬಿದ್ದಿದ್ದ ಈ ಸಂತ್ರಸ್ಥರ ಹಸಿವಿನ ಸಂಕಷ್ಟವನ್ನು ನೀಗಲು ಜೊತೆ ನಿಲ್ಲೋಣ ಎಂಬ ವರ್ತಮಾನದ ಕರೆಗೆ ಅದೆಷ್ಟೋ ಮಂದಿ ಮುಂದೆ ಬಂದರು. ನಾವು ಒಂದು ಕ್ವಿಂಟೋಲ್, ಎರಡು ಕ್ವಿಂಟೋಲ್ ಅಕ್ಕಿ ಕೊಡಿಸುತ್ತೇವೆ ಅಂದವರು ಸುಮಾರು ಮಂದಿ. ಬ್ಯಾಂಕ್ ಅಕೌಂಟಿಗೆ ಒಬ್ಬರ ನಂತರ ಒಬ್ಬರಂತೆ ಹಣವನ್ನು ಸಂದಾಯ ಮಾಡಿದರು. ಕೆಲವರು ಚೆಕ್ ಕಳಿಸಿಕೊಟ್ಟರು, ಇನ್ನು ಹಲವು ಗೆಳೆಯರು/ಗೆಳತಿಯರು ನೇರವಾಗಿಯೇ ಬಂದು ನಮ್ಮ ಪಾಲಿದು ಎಂದು ಧನಸಹಾಯ ಮಾಡಿದರು. ಹೀಗೆ ಒಟ್ಟು ಸಂಗ್ರಹವಾದ ಹಣ ೩೫ ಸಾವಿರ ರೂಪಾಯಿಗಳು. ಕ್ವಿಂಟೋಲ್ ಲೆಕ್ಕದ ಅಕ್ಕಿ ಮೂಟೆಗಳನ್ನು ಕೆಜಿಎಫ್ ಗೆ ಸಾಗಿಸುವುದು ತಾರ್ಕಿಕವಾಗಿ ಅಸಾಧ್ಯವಾದ ಕೆಲಸವೆಂಬ ಕಾರಣಕ್ಕೆ ಸಂಗ್ರಹಗೊಂಡ ಹಣದಲ್ಲಿಯೇ ಕೆಜಿಎಫ್ನಲ್ಲಿಯೇ ಒಂದಷ್ಟು ಆಹಾರ ಸಾಮಗ್ರಿಯನ್ನು ಖರೀದಿಸಿ ನೀಡುವುದೆಂದು ತೀರ್ಮಾನವಾಯಿತು.<br />
<br />
<a href="https://blogger.googleusercontent.com/img/b/R29vZ2xl/AVvXsEjHXJGrxuPrjcNpu9CSxsBgpdF3l1ijg2rFA7asSrMbpADz3Iya8pNQKsvlTZFrvFFXIA6C2rnFfPXNW7DyxHG1pKZgL7nwVQf2XAil97k7-GbJaIumFDnQOxGLVtMhc4_AnkDh4guAPWop/s1600/KGF-3.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="239" src="https://blogger.googleusercontent.com/img/b/R29vZ2xl/AVvXsEjHXJGrxuPrjcNpu9CSxsBgpdF3l1ijg2rFA7asSrMbpADz3Iya8pNQKsvlTZFrvFFXIA6C2rnFfPXNW7DyxHG1pKZgL7nwVQf2XAil97k7-GbJaIumFDnQOxGLVtMhc4_AnkDh4guAPWop/s320/KGF-3.jpg" width="320" /></a>ಜೀವಪರ ನಿಲುಮೆಯ ಗೆಳೆಯ ಗೆಳತಿಯರು ಹೊಂದಿಸಿಕೊಟ್ಟ ಈ ಹಣವನ್ನು ತೆಗೆದುಕೊಂಡು ಕಳೆದ ಭಾನುವಾರ ಕೆಜಿಎಫ್ಗೆ ಭೇಟಿ ನೀಡಲಾಯಿತು. ಪತ್ರಕರ್ತ ಗೆಳೆಯರಾದ ದಿನೇಶ್, ಪ್ರವೀಣ್ ಸೂಡರೊಟ್ಟಿಗೆ ಮಧ್ಯಾಹ್ನದ ಹೊತ್ತಿಗೆ ಕೆಜಿಎಫ್ ತಲುಪಿದಾಗ ಅಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿ ಕೆಜಿಎಫ್ನ ಮಾಜಿ ಗಣಿ ಕಾರ್ಮಿಕರೂ, ಪ್ರಸ್ತುತ ಮಲ ಹೊರುವ ವೃತ್ತಿಗೆ ಬಿದ್ದು ಜೀವಗಳನ್ನು ಅಡವಿಟ್ಟು ಬದುಕುತ್ತಿದ್ದ ಕಾರ್ಮಿಕರೂ ಆದ ವೈ.ಜೆ. ರಾಜೇಂದ್ರ, ವಕೀಲ ಪುರುಷೋತ್ತಮ್, ಸಾಮಾಜಿಕ ಕಾರ್ಯಕರ್ತೆ ಪದ್ಮ ಮತ್ತು ಕೋಲಾರದ ಎಡಪಂಥದ ಸಂಘಟನೆಗಳ ಸಮ್ಮುಖದಲ್ಲಿ ಸಭೆ ಸೇರಿದ್ದರು. ಅವರೊಟ್ಟಿಗೆಯೇ ಕುಳಿತು ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸುವಲ್ಲಿ ಭಾಗಿಯಾಗಿ ಸಭೆ ಮುಗಿಯುವಷ್ಟರಲ್ಲಿ ಕತ್ತಲಾಗತೊಡಗಿತ್ತು.<br />
<br />
ಸಭೆ ಮುಗಿಸಿ ಬಂದ ಪದ್ಮಾ ಮತ್ತು ಪ್ರಭುರವರೊಟ್ಟಿಗೆ ಕೆಜಿಎಫ್ನ ಮಾರುಕಟ್ಟೆಗೆ ತೆರಳಿ ಅಲ್ಲಿನ ೫೦ ಕುಟುಂಬಗಳಿಗೆ ನಮ್ಮ ಬಳಿ ಸಂಗ್ರಹವಾದ ೩೫ ಸಾವಿರದ ಮಿತಿಯಲ್ಲಿ ಯಾವ ಬಗೆಯಲ್ಲಿ ನೆರವು ನೀಡಬಹುದೆಂದು ಕೂಡಿ ಕಳೆದು ಲೆಕ್ಕಾಚಾರ ಮಾಡಿದಾಗ ಒಟ್ಟು ೫೦ ಕುಟುಂಬಗಳಿಗೂ ಪ್ರತೀ ಕುಟುಂಬಕ್ಕೂ ೨೫ ಕೇಜಿ ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ನೀಡಬಹುದೆಂದು ನಿಷ್ಕರ್ಷೆಯಾಯಿತು. ಅದರಂತೆ ೧೨೫೦ ಕಿಲೋ ಅಕ್ಕಿಯನ್ನು ೨೫ ಕೇಜಿ ಚೀಲದಂತೆ ಖರೀದಿಸಿ ಅಲ್ಲಿಂದ ಒಂದು ಸರಕುಸಾಗಣೆಯ ವಾಹನದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರು ವಾಸಿಸುವ ಪ್ರದೇಶವಾದ ಕೆನಡೀಸ್ ಲೈನ್ಗೆ ಕೊಂಡೊಯ್ದೆವು.<br />
<br />
<a href="https://blogger.googleusercontent.com/img/b/R29vZ2xl/AVvXsEjiZPCnCKTXXLl1IGL_yTqm6w628nhZf82HxlkYqIl-s9UHg5wm_yfbj1kQAztjPy6IZCPyFl3Syttd7Y1XUmdAP5bfMkUCqFCcES69wQS7CFGzZxCY2kUtF0br6tOlyfLmX5M86y0CDWUz/s1600/KGF-2.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="240" src="https://blogger.googleusercontent.com/img/b/R29vZ2xl/AVvXsEjiZPCnCKTXXLl1IGL_yTqm6w628nhZf82HxlkYqIl-s9UHg5wm_yfbj1kQAztjPy6IZCPyFl3Syttd7Y1XUmdAP5bfMkUCqFCcES69wQS7CFGzZxCY2kUtF0br6tOlyfLmX5M86y0CDWUz/s320/KGF-2.jpg" width="320" /></a>ಅಲ್ಲಿ ಒಟ್ಟು ೫೦ ಕುಟುಂಬಗಳ ಮುಖ್ಯಸ್ಥರ ಹೆಸರನ್ನು ಪಟ್ಟಿಮಾಡಿ ಒಬ್ಬೊಬ್ಬರ ಹೆಸರನ್ನೂ ಕರೆದು ಅವರಿಗೆ ಪ್ರತೀ ಮನೆಗೆ ೨೫ ಕೇಜಿ ಅಕ್ಕಿಯಂತೆ ವಿತರಣೆ ಮಾಡಲಾಯಿತು. ತಕ್ಷಣಕ್ಕೆ ದೊರೆತ ಈ ಬಗೆಯ ನೆರವಿನಿಂದ ಕಾರ್ಮಿಕರಲ್ಲಿ ಕೆಲವರು ಭಾವುಕರಾಗಿದ್ದರು, ಕೊಟ್ಟವರು ಯಾರೋ ಏನೋ ಗೊತ್ತಿಲ್ಲ ಅವರ ಜೀವಕ್ಕೆ ಒಳ್ಳೆಯದಾಗಲೆಂಬ ಹರಕೆ ಸಂತ್ರಸ್ಥ ಕಾರ್ಮಿಕರದ್ದಾಗಿತ್ತು. ಎಲ್ಲರ ಮುಖದಲ್ಲೂ ಹಸಿವಿನಿಂದ ತಾತ್ಕಾಲಿಕವಾಗಿಯಾದರೂ ತಪ್ಪಿಸಿಕೊಂಡೆವಲ್ಲ ಎಂಬ ಸಮಾಧಾನವಿತ್ತು. ಅಕ್ಕಿ ಖರೀದಿಗೆ ೩೦ ಸಾವಿರ ರೂಗಳನ್ನು ವ್ಯಯಿಸಿ ಊಟ, ಕಾರಿನ ಪೆಟ್ರೋಲು, ಸರಕುಸಾಗಣೆ ವಾಹನದ ಬಾಡಿಗೆ ಎಲ್ಲವೂ ಕಳೆದು ಇನ್ನೂ ಮೂರೂವರೆ ಸಾವಿರದಷ್ಟು ಹಣ ಹಾಗೆಯೇ ಉಳಿದಿತ್ತು. ಅದರಲ್ಲಿ ಎಣ್ಣೆ ಖರೀದಿಸಿ ವಿತರಿಸುವ ಯೋಜನೆ ಹಾಕಿಕೊಂಡೆವಾದರೂ ಅದಕ್ಕೆ ಮೂರೂವರೆ ಸಾವಿರ ಕಡಿಮೆ ಬೀಳುತ್ತದೆಂಬ ಕಾರಣಕ್ಕೆ ಸುಮ್ಮನಾದೆವು.<br />
<br />
ಉಳಿದಿರುವ ಮೂರೂವರೆ ಸಾವಿರ ರೂಗಳ ಜೊತೆಗೆ ಬೆಂಗಳೂರಿನ ಕೆಲವರು ಅಕ್ಕಿ ಕೊಡಿಸುವ ಭರವಸೆ ನೀಡಿದ್ದರು, ಅದನ್ನು ಮತ್ತೆ ತೆಗೆದುಕೊಂಡು ಇದೇ ಬಗೆಯ ಸಂಕಷ್ಟಕ್ಕೆ ಸಿಲುಕಿರುವ ಕೆಜಿಎಫ್ನ ಬಿ. ಬ್ಲಾಕ್ ಮತ್ತು, ಬೇರ್ಶಾಪ್ ಪ್ರದೇಶಗಳಿಗೆ ತಲುಪಿಸುವ ಯೋಜನೆಯನ್ನು ಯೋಜಿಸಿದೆವು. ರಾತ್ರಿ ಹತ್ತರವರೆಗೂ ಅಕ್ಕಿ ವಿತರಣೆಯ ಕೆಲಸದಲ್ಲಿ ಮಗ್ನವಾಗಿದ್ದ ನಮ್ಮ ತಂಡ ವಿತರಣೆಯ ಜವಾಬ್ದಾರಿ ನಿರ್ವಹಿಸಿದ ಮೇಲೆ, ನಿಮ್ಮೊಟ್ಟಿಗೆ ನಾವಿದ್ದೇವೆ, ನೀವು ಒಂಟಿಯಲ್ಲ, ಬೆಂಗಳೂರಿನ ಒಂದು ಪಡೆಯೇ ನಿಮ್ಮೊಟ್ಟಿಗೆ ಇರುತ್ತದೆ, ನಿಮ್ಮ ಹೋರಾಟವನ್ನು ಮುಂದುವರೆಸಿ, ಯಶಸ್ಸು ಸಿಗಲಿ ಎಂದು ಹಾರೈಸಿ ಅಲ್ಲಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ರಾತ್ರಿ ೨ ಗಂಟೆಯಾಗಿತ್ತು. ವರ್ತಮಾನದೊಟ್ಟಿಗೆ ಕೈ ಜೋಡಿಸಿದ ಎಲ್ಲರ ನೆರವಿಗೂ ಸಾರ್ಥಕತೆ ಮೂಡಿದ ಸಮಾಧಾನ ನಮಗಿತ್ತು.<br />
<br />
ಮಾನವೀಯ ನೆರವು ನೀಡಿದವರ ಪಟ್ಟಿ ಇಲ್ಲಿದೆ.<br />
ವರ್ತಮಾನ ಬಳಗ-<span class="Apple-tab-span" style="white-space: pre;"> </span>೫೦೦೦<br />
ರಾಮಕೃಷ್ಣ ಎಂ.<span class="Apple-tab-span" style="white-space: pre;"> </span>-೧೦೦೦೦<br />
ಮಾನಸ ನಾಗರಾಜ್-<span class="Apple-tab-span" style="white-space: pre;"> </span>೫೦೦<br />
ಅನಾಮಧೇಯ-೧<span class="Apple-tab-span" style="white-space: pre;"> </span>-೧೦೦೦<br />
ಎಸ್.ವಿಜಯ, ಮೈಸೂರು<span class="Apple-tab-span" style="white-space: pre;"> </span>-೧೦೦೦<br />
ಸ್ವರ್ಣಕುಮಾರ್ ಬಿ.ಎ.<span class="Apple-tab-span" style="white-space: pre;"> </span>-೧೫೦೦<br />
ಬಿ. ಶ್ರೀಪಾದ ಭಟ್<span class="Apple-tab-span" style="white-space: pre;"> </span>-೨೦೦೦<br />
ಅನಾಮಧೇಯ -೨<span class="Apple-tab-span" style="white-space: pre;"> </span>-೫೦೦<br />
ಅಕ್ಷತಾ, ಶಿವಮೊಗ್ಗ<span class="Apple-tab-span" style="white-space: pre;"> </span>-೧೦೦೦<br />
ಸಂದೀಪ್ / ರಾಘವೇಂದ್ರ ಸಿ.ವಿ.-<span class="Apple-tab-span" style="white-space: pre;"> </span>೨೦೦೦<br />
ಪಿ.ರಂಗನಾಥ<span class="Apple-tab-span" style="white-space: pre;"> </span>-೨೦೦೦<br />
ತ್ರಿವೇಣಿ ಟಿ.ಸಿ.<span class="Apple-tab-span" style="white-space: pre;"> </span>-೧೦೦೦<br />
ಅವಿನಾಶ ಕನ್ನಮ್ಮನವರ<span class="Apple-tab-span" style="white-space: pre;"> </span>-೫೦೦<br />
ಸತೀಶ್ ಗೌಡ ಬಿ.ಎಚ್.<span class="Apple-tab-span" style="white-space: pre;"> </span>-೫೦೦<br />
ಆರ್.ಕೆ.ಕೀರ್ತಿ<span class="Apple-tab-span" style="white-space: pre;"> </span>-೧೦೦೦<br />
ಬಿ. ಸಣ್ಣೀರಪ್ಪ (ಕ.ರ.ವೇ.)<span class="Apple-tab-span" style="white-space: pre;"> </span>-೫೦೦<br />
ಸಿ.ವಿ. ದೇವರಾಜ್ (ಕ.ರ.ವೇ.)<span class="Apple-tab-span" style="white-space: pre;"> </span>-೧೦೦೦<br />
ನಂದಿನಿ ಎ.ಡಿ.<span class="Apple-tab-span" style="white-space: pre;"> </span>-೫೦೦<br />
ಕಾರ್ತಿಕ್ ಡಿ.ಪಿ.- ೧೫೦೦<br />
ಶಿವಕುಮಾರ್ ದಂಡಿಗೆ ಹಳ್ಳಿ -೨೦೦೦<br />
ಮಹೇಶ್ ಕೆ. -೧೦೦ ಕೆಜಿ ಅಕ್ಕಿ<br />
<br />
<b>-ಟಿ.ಕೆ.ದಯಾನಂದ್</b><br />
<b><br />
</b><br />
<b>ಹೆಚ್ಚಿನ ವಿವರಗಳಿಗಾಗಿ <a href="http://vartamaana.com/2011/12/20/kgf-%E0%B2%B8%E0%B2%82%E0%B2%A4%E0%B3%8D%E0%B2%B0%E0%B2%B8%E0%B3%8D%E0%B2%A4%E0%B2%B0%E0%B2%BF%E0%B2%97%E0%B3%86-%E0%B2%A4%E0%B2%B2%E0%B3%81%E0%B2%AA%E0%B2%BF%E0%B2%A6-%E0%B2%A8%E0%B3%86%E0%B2%B0/">ವರ್ತಮಾನ </a>ವೆಬ್ ಸೈಟ್ ಗೆ ಭೇಟಿ ನೀಡಿ.</b><br />
</div>sampadakeeyahttp://www.blogger.com/profile/10834139994439066030noreply@blogger.com0tag:blogger.com,1999:blog-3901985173139732142.post-89124642099228397572011-12-22T12:30:00.000+05:302011-12-22T12:30:28.038+05:30ಸಂಪಾದಕೀಯಕ್ಕೆ ಒಂದು ವರ್ಷ: ಎಲ್ಲರಿಗೂ ನಮ್ಮ ಪ್ರೀತಿ ಸಲ್ಲುತ್ತದೆ<div dir="ltr" style="text-align: left;" trbidi="on"><br />
<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgLNtmuiLl-9M1O28ZkpAcYCx0Tjiijcn0mcIPAeICTpPu1VxrmcaQzz7zGya2uCN8mDSIOgO_Hg79YmYDhMvvrJqXn40S59Znm0bp91Fw2Aep9wWQAXlfLqUVeABCZQheVM28y17F5lrrS/s1600/anv.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEgLNtmuiLl-9M1O28ZkpAcYCx0Tjiijcn0mcIPAeICTpPu1VxrmcaQzz7zGya2uCN8mDSIOgO_Hg79YmYDhMvvrJqXn40S59Znm0bp91Fw2Aep9wWQAXlfLqUVeABCZQheVM28y17F5lrrS/s320/anv.jpg" width="264" /></a></div><b><i>ಸಂಪಾದಕೀಯ</i></b>ಕ್ಕೆ ಇವತ್ತಿಗೆ ಸರಿಯಾಗಿ ಒಂದು ವರ್ಷ ತುಂಬಿತು. ಒಂದು ಕ್ಷಣ ತಿರುಗಿ ಒಮ್ಮೆ ನೋಡಿದಾಗ ಒಂದು ವರ್ಷ ಆಗೇ ಹೋಯ್ತಾ ಅನಿಸುವುದುಂಟು. ಹೀಗೊಂದು ಬ್ಲಾಗ್ ಮಾಡುವ ಯೋಚನೆ ಹುಟ್ಟಿದ್ದು ಅಚಾನಕ್ಕಾಗಿ. ಇಷ್ಟು ಗಂಭೀರವಾಗಿ ಮುಂದುವರೆಸಿಕೊಂಡು ಹೋಗುತ್ತೀವೆಂಬ ಖಚಿತ ವಿಶ್ವಾಸವೂ ಆಗ ಇರಲಿಲ್ಲ. ಆದರೆ ಇದು ತನ್ನ ಪಾಡಿಗೆ ತಾನು ಬೆಳೆದುಕೊಂಡು ಬಂತು.<br />
<br />
ತನ್ನ ಪಾಡಿಗೆ ತಾನು ಬೆಳೆಯುತ್ತ ಬಂತು ಎನ್ನುವುದಕ್ಕಿಂತ ಇದನ್ನು ಬೆಳೆಸಿದ್ದೇ ನೀವು ಎಂದರೆ ತಪ್ಪಾಗಲಿಕ್ಕಿಲ್ಲ. ಇದೊಂದು <i><b>ಸಂಪಾದಕೀಯ</b></i>ಕ್ಕಾಗಿ ತುಂಬಾ ಜನರು ಕಾದು ಕುಳಿತಿದ್ದರೇನೋ ಎಂಬಂತೆ ಇದ್ದವು ಪ್ರತಿಕ್ರಿಯೆಗಳು. ನಿಮ್ಮ ಪ್ರತಿಕ್ರಿಯೆಗಳೇ ನಮ್ಮನ್ನು ಬೆಳೆಸುತ್ತಾ ಬಂದವು. ನಮ್ಮಿಂದ ಅಸಾಧ್ಯವಾದದ್ದು ಎಂದು ಭಾವಿಸಿದ್ದನ್ನೆಲ್ಲ ನೀವು ನಿರೀಕ್ಷಿಸಿದಿರಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಇದನ್ನು ರೂಪಿಸಲು ನಾವು ನಮ್ಮ ವ್ಯಾಪ್ತಿಯನ್ನೂ ಮೀರಿ ಹೆಣಗುತ್ತ ಬಂದೆವು. ಈಗ ನಿಂತು ಯೋಚಿಸಿದರೆ ಒಂದು ಧನ್ಯತಾ ಭಾವ, ಒಂದು ಸುದೀರ್ಘ ನಿಟ್ಟುಸಿರು.<br />
<br />
ಸಾರ್ವಜನಿಕ ವಿಮರ್ಶೆ, ಟೀಕೆ, ಟಿಪ್ಪಣಿಗಳಿಂದ ಮೀಡಿಯಾ ಕ್ಷೇತ್ರವೊಂದು ಹೊರಗೆ ಉಳಿಯಬಾರದು ಎಂಬುದು ನಮ್ಮ ಕಾಳಜಿಯಾಗಿತ್ತು. ಆತ್ಮವಿಮರ್ಶೆ-ವಿಮರ್ಶೆಗಳಿಲ್ಲದ ಕ್ಷೇತ್ರಗಳು ಸರ್ವಾಧಿಕಾರದ ರೋಗವನ್ನು, ಮೂಲಭೂತವಾದಿ ಗುಣಗಳನ್ನು ಆವಾಹಿಸಿಕೊಂಡುಬಿಡುತ್ತವೆ. ಅದು ಸಮಾಜಕ್ಕೆ ಯಾವತ್ತೂ ಅಪಾಯಕಾರಿ. ಮೀಡಿಯಾವನ್ನು ಮೀಡಿಯಾಗಳೇ ವಿಮರ್ಶಿಸುವ ಆರೋಗ್ಯಕರ ಪರಿಪಾಠವೂ ಎಲ್ಲೂ ಕಾಣದ ಹಿನ್ನೆಲೆಯಲ್ಲಿ ನಾವು ಒಂದು ಸಣ್ಣ ಪ್ರಯತ್ನ ಶುರು ಮಾಡಿದೆವು.<br />
<br />
ಒಂದು ಸಮಾಧಾನದ ಸಂಗತಿಯೆಂದರೆ ಎಷ್ಟೋ ಸಂದರ್ಭಗಳಲ್ಲಿ ನಾವು ಬರೆದದ್ದು, ನೀವು ಬರೆದದ್ದು ಸಂಬಂಧಪಟ್ಟವರನ್ನು ನೇರವಾಗಿ ತಲುಪಿದವು. ಕ್ರಿಯೆಗೆ ಪ್ರತಿಕ್ರಿಯೆಗಳು ಆರಂಭಗೊಂಡವು. ಸಣ್ಣಪುಟ್ಟ ಬದಲಾವಣೆಗಳು ನಮ್ಮ ಕಣ್ಣೆದುರಿಗೇ ಘಟಿಸಿದವು. <b><i>ಸಂಪಾದಕೀಯ</i></b>ದ ಚರ್ಚೆಗಳು ಮೀಡಿಯಾ ಸಂಸ್ಥೆಗಳ ಮ್ಯಾನೇಜ್ ಮೆಂಟ್ ಸಭೆಗಳಲ್ಲೂ ಚರ್ಚೆಯಾಗತೊಡಗಿದವು.<br />
<br />
ಇದೆಲ್ಲ ನಡೆಯುತ್ತಿದ್ದಂತೆ ನಮ್ಮ ಜವಾಬ್ದಾರಿಗಳೂ ಹೆಚ್ಚುತ್ತ ಹೋದವು. ಈ ಒಂದು ವರ್ಷದಲ್ಲಿ ನಾವು ಬರೆದ ಒಂದೇ ಒಂದು ಲೇಖನವನ್ನೂ ಡಿಲೀಟ್ ಮಾಡಿಲ್ಲ. ವೈಯಕ್ತಿಕ ತೇಜೋವಧೆ, ಕಪೋಲ ಕಲ್ಪಿತ ಆರೋಪಗಳು, ಪೂರ್ವಾಗ್ರಹ ಪೀಡಿತ ನಿಲುವುಗಳಿಂದ ಮುಕ್ತವಾಗಿಯೇ ಬರೆದ ಪರಿಣಾಮ ನಾವು ಬರೆದ ಯಾವುದನ್ನೂ ಹಿಂದಕ್ಕೆ ಪಡೆದುಕೊಳ್ಳುವಂಥ ಸಂದರ್ಭವೇ ಸೃಷ್ಟಿಯಾಗಲಿಲ್ಲ. ಈ ಎಚ್ಚರ ಮತ್ತು ಪ್ರಜ್ಞೆ ಇದ್ದ ಪರಿಣಾಮವಾಗಿಯೇ ಇದನ್ನು ನೀವು ನಿಮ್ಮದೆಂದು ಭಾವಿಸಿದಿರಿ. ಸದಾ ನಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರಿ.<br />
<br />
ಮೀಡಿಯಾ ವಿಶ್ಲೇಷಣೆ ಒಮ್ಮೊಮ್ಮೆ ಮಗ್ಗುಲು ಬದಲಿಸಿ ಸಾಮಾಜಿಕ ಸಮಸ್ಯೆಗಳ ಕುರಿತ ಸಾಕಷ್ಟು ಚರ್ಚೆಗಳೂ ಇಲ್ಲಿ ನಡೆದಿವೆ. ಒಮ್ಮೊಮ್ಮೆ ಇದು ಪ್ರಜ್ಞಾಪೂರ್ವಕವಾಗಿಯೂ, ಮತ್ತೆ ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿಯೂ ನಡೆದಿದೆ. ಒಟ್ಟು ಫಲಿತ ಸಮಾಧಾನ ತಂದಿದೆ. ಕಪಟ ಜ್ಯೋತಿಷಿಗಳ ವಿರುದ್ಧ ನಡೆದ ಅಭಿಯಾನ, ಮಲ ಹೊರುವ ಪದ್ಧತಿ ವಿರುದ್ಧ ನಡೆದ ಜಾಗೃತಿ ಕಾರ್ಯ, ಮಡೆಸ್ನಾನ-ಪಂಕ್ತಿಬೇಧ-ಪ್ರಾಣಿಬಲಿ-ಭ್ರಷ್ಟಾಚಾರ ಇತ್ಯಾದಿ ವಿಷಯಗಳ ಕುರಿತ ಚರ್ಚೆಯೂ ಆರೋಗ್ಯಕರವಾಗಿ ನಡೆಯಿತು. ಕೆಲವೊಮ್ಮೆ ನಾವು ಬರೆದದ್ದನ್ನು ಆ ಕ್ಷಣಕ್ಕೆ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಓದುಗರು ಕ್ರಮೇಣ ಹೌದು, ನೀವು ಬರೆದಿದ್ದು ಸರಿಯಾಗಿತ್ತು ಎಂದು ಒಪ್ಪಿಕೊಂಡದ್ದನ್ನು ನಾವು ಗಮನಿಸಿದ್ದೇವೆ.<br />
<br />
ಈ ಒಂದು ವರ್ಷದಲ್ಲಿ ಸಾವಿರಾರು ಮಂದಿ <b><i>ಸಂಪಾದಕೀಯ</i></b>ದ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ, ನಮ್ಮೊಂದಿಗೆ ಒಡನಾಡಿದ್ದಾರೆ. ಬಹುತೇಕರು ಮೀಡಿಯಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಲವಾರು ಮಂದಿ <b><i>ಸಂಪಾದಕೀಯ</i></b>ದಲ್ಲಿ ಬರೆದಿದ್ದಾರೆ. ಸಾಕಷ್ಟು ಮಂದಿ ಜಗಳವಾಡಿದ್ದಾರೆ. ಮುನಿಸಿಕೊಂಡು ಹೋದವರೂ ಇದ್ದಾರೆ. ಎಲ್ಲರ ಮೇಲೂ ನಮಗೆ ಪ್ರೀತಿ ಮತ್ತು ಪ್ರೀತಿಯಷ್ಟೇ ಇದೆ ಎಂದು ಪ್ರೀತಿಯಿಂದಲೇ ಹೇಳಲು ಬಯಸುತ್ತೇವೆ.<br />
<br />
ಇಲ್ಲಿನ ಲೇಖನಗಳಲ್ಲಿ ಒಂದಕ್ಷರವೂ ತಪ್ಪಾಗಿರಬಾರದು ಎಂದು ನಿರೀಕ್ಷಿಸುವವರಿದ್ದಾರೆ. ಸಣ್ಣ ತಪ್ಪಾದರೂ ಕಾಲಕಾಲಕ್ಕೆ ತಿದ್ದುತ್ತಾ ಬಂದವರೂ ಇದ್ದಾರೆ. ಬ್ಲಾಗ್ ಶುರು ಮಾಡಿದ ಸಂದರ್ಭದಿಂದ ಇದುವರೆಗೆ ನಮ್ಮನ್ನು ಹುರಿದುಂಬಿಸುತ್ತ ಬಂದ ಕನ್ನಡದ ವೆಬ್ ಸೈಟ್ಗಳು, ಬ್ಲಾಗರ್ಗಳ ಪ್ರೀತಿಯೂ ದೊಡ್ಡದು. ಅವರನ್ನು ನೆನೆಯದೇ ಇದ್ದರೆ ಅಪಚಾರವಾದೀತು.<br />
<br />
ಬಹುಶಃ ಮೀಡಿಯಾ ಕುರಿತು ಈ ಒಂದು ವರ್ಷದಲ್ಲಿ ಸಾಕಷ್ಟು ಮಾತನಾಡಿದ್ದೇವೆ. ಪದೇಪದೇ ಹೇಳಿದ್ದನ್ನೇ ಹೇಳುವುದರಲ್ಲಿ ಅರ್ಥವೂ ಇರುವುದಿಲ್ಲ. ಇನ್ನು ಇತರ ಕ್ಷೇತ್ರಗಳ ಕುರಿತೂ ಇಲ್ಲಿ ಬರೆಯುತ್ತಾ ಹೋಗಬೇಕು ಎಂದು ಯೋಜಿಸುತ್ತಿದ್ದೇವೆ. ಆದರೆ ನಮ್ಮ ಮುಖ್ಯ ಆದ್ಯತೆ ಮೀಡಿಯಾ ಆಗಿರುತ್ತದೆ ಎಂಬುದಂತೂ ಸ್ಪಷ್ಟ.<br />
<br />
<b><i>ಸಂಪಾದಕೀಯ</i></b>ದ ಗಂಭೀರ ಲೇಖನಗಳನ್ನು ಪುಸ್ತಕರೂಪದಲ್ಲಿ ತರುವ ಯೋಜನೆಯೂ ಇದೆ. ಇದಕ್ಕಾಗಿ ಪ್ರಕಾಶಕರ ಬೆಂಬಲವನ್ನು ಯಾಚಿಸುತ್ತಿದ್ದೇವೆ. ಪ್ರಕಾಶಕರು ಮುಂದೆ ಬಂದಲ್ಲಿ ಈ ಕಾರ್ಯವೂ ನಡೆಯಲಿದೆ.<br />
<br />
ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಿ ವಿರಮಿಸುತ್ತಿದ್ದೇವೆ. ಒಳ್ಳೆಯದಿರಲಿ, ಕೆಟ್ಟದ್ದಿರಲಿ, ನಮ್ಮ ಬಗ್ಗೆ ನಾವೇ ಹೇಳಿಕೊಳ್ಳುವುದು ಮುಜುಗರದ ವಿಷಯ. ನಿಮಗೇನನ್ನಿಸುತಿದೆ? ಮರೆಯದೇ ಹೇಳಿ ಹೋಗಿ. ಒಂದು ಸಾಲಾದರೂ ಬರೆದು ಹೋಗಿ. ಈ ಬಾಂಧವ್ಯ ಹೀಗೇ ಮುಂದುವರೆಯಲಿ ಎಂದು ಮತ್ತೆ ಮತ್ತೆ ಕೋರುತ್ತೇವೆ.<br />
<br />
ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು.<br />
</div>sampadakeeyahttp://www.blogger.com/profile/10834139994439066030noreply@blogger.com44tag:blogger.com,1999:blog-3901985173139732142.post-38887902448712521002011-12-09T15:18:00.000+05:302011-12-09T15:18:04.602+05:30ನಾನೇ ಮುಖ್ಯಮಂತ್ರಿ: ದಿನೇಶ್ ಕುಕ್ಕುಜಡ್ಕ ಕಾರ್ಟೂನ್<div dir="ltr" style="text-align: left;" trbidi="on"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg0C2DEOOhSh-c85tS1Emcfopisa7JWa-0ATaYS-CX0uTD6v5Q1gm33lZsT9LeUCUknIiVxrSQOoGlUo5zNzfN4qiqUAyNruGpEFdqUUvfOLHYOMb9Yz2NTC97V1wMbCQb6eOrgHG355kGX/s1600/cm.jpg" imageanchor="1" style="margin-left: 1em; margin-right: 1em;"><img border="0" height="640" src="https://blogger.googleusercontent.com/img/b/R29vZ2xl/AVvXsEg0C2DEOOhSh-c85tS1Emcfopisa7JWa-0ATaYS-CX0uTD6v5Q1gm33lZsT9LeUCUknIiVxrSQOoGlUo5zNzfN4qiqUAyNruGpEFdqUUvfOLHYOMb9Yz2NTC97V1wMbCQb6eOrgHG355kGX/s640/cm.jpg" width="472" /></a></div><br />
</div>sampadakeeyahttp://www.blogger.com/profile/10834139994439066030noreply@blogger.com3tag:blogger.com,1999:blog-3901985173139732142.post-48415324281737376622011-12-06T18:16:00.000+05:302011-12-06T18:16:28.192+05:30ಕೆಜಿಎಫ್ನ ಮಲಸಂತ್ರಸ್ಥರು: ದಯಾನಂದ್ ಬರೆದ ಕರಳು ಹಿಂಡುವ ವಾಸ್ತವಗಳು...<div dir="ltr" style="text-align: left;" trbidi="on"><br />
<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjT45jDKonb1t5k7KRQNw-KaFdo4TdHYgTGQ_9iKNOxw4cqPhI0bynPCn4uNXjOz1ErxhS_9yJ-VZwFij-eAdmb87rLu9KltkhpZnsSHBRPKlduGt_9vy74AkxDJqmB_mo1oqZlU1Zp6BxL/s1600/Manual_scavanging11.jpg" imageanchor="1" style="margin-left: 1em; margin-right: 1em;"><img border="0" height="261" src="https://blogger.googleusercontent.com/img/b/R29vZ2xl/AVvXsEjT45jDKonb1t5k7KRQNw-KaFdo4TdHYgTGQ_9iKNOxw4cqPhI0bynPCn4uNXjOz1ErxhS_9yJ-VZwFij-eAdmb87rLu9KltkhpZnsSHBRPKlduGt_9vy74AkxDJqmB_mo1oqZlU1Zp6BxL/s400/Manual_scavanging11.jpg" width="400" /></a></div>ಈ ನೆಲದ ಹಿರಿಮೆ ಮತ್ತು ಔನ್ನತ್ಯವನ್ನು ಹಾಡಿಹೊಗಳುವಾಗಲೆಲ್ಲ ಮೈಸೂರು ಪೇಟ, ಕೊಡವರ ದಿರಿಸು ಮತ್ತು ಕೋಲಾರದ ಕೆಜಿಎಫ್ನ ಚಿನ್ನದ ಗಣಿಯ ಪ್ರಸ್ತಾಪವಿಲ್ಲದೆ ಆ ಸಾಲು ಕೊನೆಯಾಗುವುದೇ ಇಲ್ಲ. ಒಂದನೇ ತರಗತಿಯಿಂದ ನಾವೆಲ್ಲರೂ ಓದಿಕೊಂಡ ಒಟ್ಟು ರಾಜ್ಯದ ಬೋಪರಾಕು ಗೀತೆಗಳು ಕನ್ನಡನಾಡು ಚಿನ್ನದ ಬೀಡು ಎಂಬ ಮೂರುಪದಗಳನ್ನು ನಮ್ಮ ನಾಲಿಗೆಯ ಮೇಲೆ ಮುದ್ರಿತವಾದಂತೆ ಇನ್ನೂ ಹಾಗೆಯೇ ಉಳಿಸಿಕೊಂಡಿರುವ ನಾಡಪ್ರೀತಿಯುಳ್ಳ ಜನ ನಾವು.<br />
<br />
ಜನಸಾಮಾನ್ಯರು, ಸಾಹಿತಿಗಳು, ಪದ್ಯಗಾರರು, ಸಿನಿಮಾದವರು, ಸಾಂಸ್ಕೃತಿಕ ಕಲಾವಿದರು, ಹಾಡುಗಾರರು, ಹೋರಾಟಗಾರರು, ಭಾಷಾಪ್ರೇಮಿಗಳು, ಪತ್ರಕರ್ತರು, ಅಧ್ಯಾಪಕರು, ವಿದ್ಯಾರ್ಥಿಗಳು ಇನ್ನಿತರ ಕ್ಷೇತ್ರಗಳ ಎಲ್ಲರೆಂದರೆ ಎಲ್ಲರಿಗೂ ಚಿನ್ನದಗಣಿಯೂರು ನಮ್ಮ ಪಕ್ಕದ್ದೇ ಊರು ಎಂಬಷ್ಟು ಪರಿಚಿತ. ಕಣ್ಣಿಂದ ನೋಡದಿದ್ದರೂ ಯಾರಿಗೂ ಈ ನಗರ ಅಪರಿಚಿತವೇನಲ್ಲ. ಅದು ಅಂಥ ಮಟ್ಟಿಗೆ ನಮ್ಮ ಸ್ಮೃತಿಯೊಳಗೆ ನುಗ್ಗಿರುವ ಚಿನ್ನದೂರು. ಹೆಸರು ಕೋಲಾರ ಗೋಲ್ಡ್ ಫೀಲ್ಡ್ ಎನ್ನುವ ಕೆಜಿಎಫ್ ಎಂಬ ಪುಟ್ಟ ಊರು. ಅಲ್ಲಿ ಟನ್ನುಗಟ್ಟಲೆ ಚಿನ್ನ ಸಿಗುತ್ತದೆ, ಅದು ರಾಜ್ಯದ ಪ್ರಾಕೃತಿಕ ಸಂಪತ್ತಿನ ಹಿರಿಮೆಗೆ ಕಿರೀಟಗಳನ್ನು ಜೋಡಿಸಿದೆ, ಅಂತರರಾಷ್ಟ್ರೀಯಮಟ್ಟದಲ್ಲಿ ನಮ್ಮ ನಾಡಿಗೆ ಖ್ಯಾತಿ ತಂದುಕೊಟ್ಟಿದೆ.. ಎಲ್ಲವೂ ಗೊತ್ತು ಸರಿ, ಇಷ್ಟೆಲ್ಲ ಖ್ಯಾತಿಗಳನ್ನು ತಂದುಕೊಟ್ಟ ಈ ಊರಿನಲ್ಲಿರುವ ಚಿನ್ನ ಬಗೆದವರು, ಸುರಂಗಗಳೊಳಗೆ ನುಗ್ಗಿ ಜೀವ ಅಡವಿಟ್ಟು ಮಿರುಗುವ ಲೋಹವನ್ನು ಲಾರಿಗಳಲ್ಲಿ ತಂದು ಸುರಿದವರು, ಎಣಿಸಲಾಗದಷ್ಟು ಹನಿ ಬೆವರನ್ನು ಬಸಿದವರು ಈ ಊರಿನ ಚಿನ್ನದಗಣಿಯಲ್ಲಿ ಕಾರ್ಮಿಕರಾಗಿ ದುಡಿದ ಶ್ರಮಿಕರು. ಈ ಬೆವರಿನೊಡೆಯರ ದುಮ್ಮಾನಗಳನ್ನು ನಾವೂ ಸೇರಿದಂತೆ ಯಾರೂ ತಲೆಗೆ ತಂದುಕೊಳ್ಳಲಿಲ್ಲ. ಸಾವಿರಾರು ಅಡಿಗಳ ಆಳದಿಂದ ಈ ಶ್ರಮಿಕರು ತಂದು ಸುರಿದ ಚಿನ್ನವಷ್ಟೇ ನಮಗೆಲ್ಲರಿಗೂ ಹಿರಿಮೆಯ ದ್ಯೋತಕವಾಯಿಯಿತೇ ವಿನಃ, ಚಿನ್ನತಂದವರು ಎಲ್ಲಿಯೂ ನಮಗೆ ನೆನಪಾಗಲೇ ಇಲ್ಲ. ಯಾವ ಪುಸ್ತಕವೂ, ಯಾವ ಹಾಡೂ, ಯಾವ ಬರಹವೂ ನೆನಪಿಸಿಕೊಳ್ಳಲೇ ಇಲ್ಲ.<br />
<br />
ಈಗಲಾದರೂ ಅವರನ್ನು ನೆನಪಿಸಿಕೊಳ್ಳಲೇಬೇಕಾದ ಬರ್ಬರತೆಯ ಪ್ರಸಂಗವೊಂದರಲ್ಲಿ ಅವರನ್ನಿಂದು ಮುಖಾಮುಖಿಯಾಗಬೇಗಾದ ಸಂದರ್ಭವೊಂದು ನಮ್ಮೆದುರು ಕೋರೆಹಲ್ಲು ಝಳಪಿಸುತ್ತ ಇವತ್ತು ನಿಂತಿದೆ. ಈ ಶ್ರಮಿಕರಿಂದು ಹೊಟ್ಟೆಗೆ ಎರಡು ಹನಿಯ ಗಂಜಿಯೂ ಸಿಗದೆ, ಹಸಿವಿನ ಕಾರಣಕ್ಕೆ ಯಾವತ್ತೋ ಒಂದು ದಿನ ಬರಬಹುದಾದ ಸಾವನ್ನು ನಿಟ್ಟಿಸುತ್ತ ನೆಲಕಚ್ಚಿಹೋಗಿದ್ದಾರೆ.<br />
<br />
ಕೆಜಿಎಫ್ ನ ಮಲಹೊರುವ ಜನಗಳ ವಿಷಯ ಎಲ್ಲರಿಗೂ ಗೊತ್ತಿರುವ ಕಾರಣಕ್ಕೆ ಅದನ್ನು ಮತ್ತೆ ಮತ್ತೆ ನೆನಪಿಸಬೇಕಾದ ಪ್ರಮೇಯದಿಂದ ತಪ್ಪಿಸಿಕೊಂಡು ಅವರಿಂದು ತಲುಪಿರುವ ಹಸಿವಿನ ಪ್ರಪಾತದೊಳಗೆಯೇ ಅವರನ್ನು ಮಾತಾನಾಡಿಸಬೇಕಾದ ಬರ್ಬರತೆಯ ಪರಿಸ್ಥಿತಿಗೆ ಯಾರನ್ನು ದೂರುವುದು? ಸರ್ಕಾರವನ್ನು ದೂರಿದ್ದಾಯಿತು, ಅಧಿಕಾರಿಗಳನ್ನು ದೂರಿದ್ದಾಯಿತು, ವ್ಯವಸ್ಥೆಯನ್ನು ದೂರಿದ್ದಾಯಿತು, ಇದೆಲ್ಲ ಇದಾದ ಮೇಲೂ ಅಲ್ಲಿ ೩ ಹೆಣಗಳು ಮಲದಗುಂಡಿಯೊಳಗೆ ಅನ್ನ ಹುಡುಕಲೋಸುಗ ಇಳಿದು ಜೀವ ತೆತ್ತಿದ್ದೂ ಆಯಿತು.<br />
<br />
ಸಾಮಾಜಿಕ ನ್ಯಾಯವೆಂಬ ಹಸಿದ ಹುಲಿಯನ್ನು ಅವಕಾಶವಾದಿಗಳು ಸಾಕುಪ್ರಾಣಿಯನ್ನಾಗಿ ಪರಿವರ್ತಿಸಿದ ಮೇಲೆ ಹುಲಿಯೂ ಮಿಸುಕಾಡುತ್ತಿಲ್ಲ. ನೆತ್ತಿ ಸವರುವ ಯಜಮಾನರೆದುರು ಅದೀಗ ತಲೆಯಾಡಿಸಿಕೊಂಡು ಕೂರುವ ಪೆಟ್ ಅನಿಮಲ್ ನಂತೆ ನ್ಯಾಯದ ಪರಿಕಲ್ಪನೆಯನ್ನೇ ಕೆಜಿಎಫ್ನಲ್ಲಿ ಅಣಕಿಸಲಾಯಿತು. ಚಿನ್ನದಗಣಿ ಕಾರ್ಮಿಕರ ಕೆಜಿಎಫ್ ನಲ್ಲಿ ಇವತ್ತು ಪ್ರಜಾಪ್ರಭುತ್ವ, ನ್ಯಾಯ, ಸಮಾನತೆ, ಬಡವರೆಡೆಗಿನ ಬದ್ದತೆಗಳು ಎಂಬ ವಿಷಯಗಳಿಗೆ ಆಸ್ಪದವೇ ಇಲ್ಲವೆಂಬ ಮಟ್ಟಿಗೆ ಅಲ್ಲಿ ನರಕವೂ, ಪಿಶಾಚಿಗಳಂತಹ ಪ್ರತಿನಿಧಿಗಳೂ ಒಟ್ಟಿಗೆ ಕೈಜೋಡಿಸಿದ್ದಾರೆ. ಸತ್ತವರ ಪರವಾಗಿ ಪ್ರಶ್ನೆ ಕೇಳಿದವರ ಮೇಲೆ ಲಾಠಿಚಾರ್ಜು ಮಾಡಿಸುವ ಜಿಲ್ಲಾಧಿಕಾರಿ, ನ್ಯಾಯ ಕೇಳಿದ ಹೋರಾಟಗಾರರ ಮೇಲೆ ಕೇಸು ಜಡಿಯುವ ಎಸ್.ಪಿ, ಪರಿಹಾರದ ಚೆಕ್ ವಿತರಿಸಲು ಬಂದು ನೊಂದವರ ಮೇಲೆಯೇ ಬೀದಿಗೂಂಡಾಗಳೂ ನಾಚುವಂತೆ ಹಲ್ಲೆ ಮಾಡುವ ಮಾಜಿ ಸಚಿವ, ಬಾಯ್ ಬಿಟ್ಟರೆ ಸುಳ್ಳು ಹೇಳುವ ಮುನಿಸಿಪಾಲಿಟಿಯ ಆಯುಕ್ತ, ಮಾಧ್ಯಮಗಳ ಜೊತೆ ಮಾತನಾಡಿದರೆ ಕೈಕಾಲು ಮುರಿಯುತ್ತೇವೆ ಎಂದು ರೌಡಿಗಳನ್ನು ಛೂ ಬಿಡುವ ಲೂಟಿಕೋರರು, ಇವೆಲ್ಲವುಗಳನ್ನೂ ಬಡವರ ಪ್ರಶ್ನೆಗಳನ್ನು ದಮನಿಸಲು ಬಳಸಿದ ಜಿಲ್ಲಾಡಳಿತವು ಈಗ ಬೀದಿಬೀದಿಗಳಲ್ಲಿ ಮಲಹೊರುವುದು ನಿಷಿದ್ಧ ಎಂಬ ಬೋರ್ಡು ಜಡಿದು ತನ್ನ ಮಾನ ಮರ್ಯಾದೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.<br />
<br />
ಮಲಹೊರುವುದು ನಿಷೇಧವಾಯಿತು, ಸಂತೋಷ. ಆದರೆ ಮಲ ಹೊರುವವರ ಮುಂದಿನ ಬದುಕೇನು, ಅವರ ಪುನರ್ವಸತಿಗೆ ತೆಗೆದುಕೊಳ್ಳುವ ಕ್ರಮಗಳೇನು ಎಂಬ ಬಗ್ಗೆ ಬೋರ್ಡು ಜಡಿದು ಮಾನ ಉಳಿಸಿಕೊಂಡವರ ಬಳಿ ಯಾವ ಉತ್ತರವೂ ಇಲ್ಲ. ೫-೧೦ ಸಾವಿರದ ಸಾಲ ಕೊಡುತ್ತೇವೆ, ಅದನ್ನು ತೀರಿಸಿ ಎಂಬ ಬೆದರಿಕೆಯಂತಹ ಪುನರ್ವಸತಿಗೆ ಮಲಹೊರುವ ಬಡಜನರು ಇನ್ನಷ್ಟು ಗಾಬರಿ ಬಿದ್ದಿದ್ದಾರೆ. ಏಕೆಂದರೆ ಇವರು ತೆಗೆದುಕೊಂಡೇ ಇರದ ಸಾಲ ತೀರಿಸಲು ಈ ಬಡವರ ಮನೆಗಳಿಗೆ ನೋಟೀಸುಗಳು ಬರುತ್ತಿವೆ. ಖೋಟಾ ದಾಖಲೆ ಸೃಷ್ಟಿಸಿ ಇವರ ಹೆಸರಿನಲ್ಲಿ ಮಜಾ ಉಡಾಯಿಸಿದವರು ಈಗ ನಾಪತ್ತೆ.<br />
<br />
ಪರಿಣಾಮ ಊಹೆಗೆ ಸಿಲುಕದಷ್ಟು ಕ್ರೂರ ಪರಿಸ್ತಿತಿಯಾಗಿ ಕೆಜಿಎಫ್ ನಲ್ಲಿ ಹಸಿವು ಪ್ರತ್ಯಕ್ಷವಾಗಿದೆ. ದಿನಬೆಳಗಾದರೆ ಅನ್ನ ಕೇಳುವ ಹೊಟ್ಟೆಗೆ ಉತ್ತರಿಸಲು ಹಣ, ಕೆಲಸ ಎರಡೂ ಇಲ್ಲದ ಕೆನಡೀಸ್ ಲೈನ್ ನ ಕುಟುಂಬಗಳು ಮನೆಯಲ್ಲಿದ್ದ ಒಂದಷ್ಟು ಪಾತ್ರೆ ಪಗಡೆಗಳನ್ನು ಮಾರಿ ಒಂದಷ್ಟು ದಿನ ಅನ್ನದ ಬಣ್ಣವನ್ನು ಕಂಡಿವೆ. ಪಾತ್ರೆಗಳು ಇಳಿಮುಖವಾಗುತ್ತ ಈಗ ಮಾರಲಿಕ್ಕೂ ಮತ್ತೇನೂ ಉಳಿಯದೆ ಮತ್ತದೇ ಹಸಿವಿನ ಭೂತದ ಬಾಯಿಗೆ ಮಕ್ಕಳುಮರಿಗಳು, ವೃದ್ಧರು, ಅಸಹಾಯಕರು, ರೋಗಪೀಡಿತರು ಬಿದ್ದಿದ್ದಾರೆ. ಹಸಿವು ಮತ್ತು ರೋಗ್ ಹೊಡೆತಕ್ಕೆ ಪಾಲ್ ರಾಜ್ ಎಂಬ ಮಧ್ಯವಯಸ್ಕ ಶ್ರಮಿಕರೊಬ್ಬರು ಕಳೆದ ಹತ್ತು ದಿನಗಳ ಹಿಂದೆ ಜೀವವನ್ನೂ ತೆತ್ತಾಗಿದೆ. ಪ್ರಸ್ತುತ ಈ ಜನರಿಗೆ ಗೊತ್ತಿರುವುದು ಮೂರೇ ವಿಷಯ. ಹಸಿವು ಹಸಿವು ಮತ್ತು ಹಸಿವು.<br />
<br />
ಗೆಳೆಯರೇ ಒಂದು ರಾಜ್ಯ, ಒಂದು ಸರ್ಕಾರ, ಒಂದು ವ್ಯವಸ್ಥೆ ಎಷ್ಟೆಲ್ಲ ಪೈಶಾಚಿಕವಾಗಿ ವರ್ತಿಸಬೇಕೋ ಅಷ್ಟೆಲ್ಲ ವರ್ತನೆಗಳೂ ಈ ಮಲಹೊರುವ ಬಡವರ ಮೇಲೆ ಪ್ರಯೋಗವಾಗಿ ಹೋದ ಮೇಲೆ ಇಷ್ಟರಲ್ಲೇ ಒಬ್ಬೊಬ್ಬರಾಗಿ ಈ ಊರಿನಿಂದ ಒಂದೊಂದೇ ಜೀವಗಳು ಮಣ್ಣುಸೇರಲು ಸಿದ್ದಗೊಂಡ ಮೇಲೆ ನಮ್ಮೆದುರು ಒಂದು ಪ್ರಶ್ನೆಯನ್ನು ಇಟ್ಟುಕೊಳ್ಳಬಹುದೇ? ಅಲ್ಲೆಲ್ಲೋ ಸುನಾಮಿ ಹೊಡೆದರೆ ಇಲ್ಲಿಂದ ಅಕ್ಕಿಧಾನ್ಯಗಳನ್ನು ಕಳಿಸಿದವರು ನಾವು, ಪ್ರವಾಹ ಬಂದಿದ್ದು ನಮ್ಮೂರಿಗೇ ಎಂಬಂತೆ ಸಿಕ್ಕ ಬಸ್ಸು ಹತ್ತಿಕೊಂಡು ನೊಂದವರಿಗೆ ಕೈಲಾದ ನೆರವು ಕೊಟ್ಟವರು ನಾವು, ಕಛ್, ಗುಜರಾತು ಭೂಕಂಪಗಳ ಸಂತ್ರಸ್ತರಿಗೆ ಬೀದಿಬೀದಿ ಸುತ್ತಿ ಬಟ್ಟೆ ಬರೆ ಸಂಗ್ರಹಿಸಿಕೊಟ್ಟವರು ನಾವು. ಇವತ್ತು ನಮ್ಮ ಸರ್ಕಾರವೇ, ನಮ್ಮ ತೆರಿಗೆಯ ಹಣದಲ್ಲೇ ಮೋಜು ಉಡಾಯಿಸುತ್ತಿರುವ ಅಧಿಕಾರಿಗಳು ನಾಡಿಗೆ ಚಿನ್ನ ಬಗೆದುಕೊಟ್ಟ ಈ ಶ್ರಮಿಕರನ್ನು ಮಲ ಹೊರಲು ಬಿಟ್ಟದ್ದೇ ಅಲ್ಲದೇ, ಅವರೆಲ್ಲರೂ ಸತ್ತರೆ ಮಲಹೊರುವವರ ಸಮಸ್ಯೆ ಇಲ್ಲವಾಗಿಬಿಡುತ್ತದೆ ಎಂಬ ಉದ್ದೇಶಿತ ಪಿತೂರಿಯ ಕಾರಣಕ್ಕೆ ಸಾಮೂಹಿಕವಾಗಿ ಇವರನ್ನು ಹಸಿವಿನ ಪ್ರಪಾತಕ್ಕೆ ದೂಡಿ ತಮಾಷೆ ನೋಡುತ್ತ ಕೈ ಬಿಟ್ಟಿದೆ.<br />
<br />
ದೂರದಲ್ಲಿದ್ದವರಿಗೆ ನೊಂದ ನಮ್ಮ ಎದೆಗೂಡು ನಮ್ಮದೇ ಜನರು, ಮಕ್ಕಳು ವೃದ್ಧರು, ನಿಸ್ಸಹಾಯಕರ ಹಸಿವನ್ನು ನೋಡುತ್ತ ಕೂರುವುದು ನಮ್ಮ ಮನುಷ್ಯತ್ವದ ಕೆನ್ನೆಗೆ ಬಿದ್ದ ಏಟೆಂದು ಅನಿಸವುದಿಲ್ಲವೇ. ಎಲ್ಲರೂ ಕೈ ಬಿಟ್ಟ ಈ ಬಡವರ ಹಸಿವಿಗೆ ಹೆಗಲು ಕೊಡುವುದು ನಮ್ಮ ಜವಾಬ್ದಾರಿಯಲ್ಲವೇ, ಸಮಾಜವೊಂದರ ತಳಸ್ಥರದಲ್ಲಿದ್ದೂ ಈ ನಾಡಿಗೆ ಚಿನ್ನದ ನಾಡೆಂದು ಹೆಸರು ತಂದುಕೊಟ್ಟ ಕಷ್ಟಜೀವಿಗಳ ಹಸಿವಿಗೆ ಇಷ್ಟಾದರೂ ಉತ್ತರಿಸುವುದು ನಮ್ಮ ಕರ್ತವ್ಯವಲ್ಲವೆ? ಒಟ್ಟು ವ್ಯವಸ್ಥೆಯೇ ಕೈಬಿಟ್ಟ ಈ ಬಡಜನರ ಜೊತೆಗೆ ಹೆಗಲು ಕೊಡುವುದು ನಮ್ಮ ಕರ್ತವ್ಯವೆಂದು ಅಂದುಕೊಂಡ ಸಮಾನಮನಸ್ಕರ ಗೆಳೆಯ ಗುಂಪೊಂದು ಕೆಜಿಫ್ ನಲ್ಲಿನ ಹಸಿವುಪೀಡಿತರ ಪ್ರದೇಶದಲ್ಲಿ ಪರ್ಯಾಯ ವ್ಯವಸ್ಥೆಗಳು ಆಗುವವರೆಗೆ ಗಂಜಿಕೇಂದ್ರವನ್ನು ನಡೆಸುವ ಮೂಲಕ ನಮ್ಮ ಜವಾಬ್ದಾರಿ ನಿರ್ವಹಣೆಗೆ ಮುಂದಾಗಿದ್ದೇವೆ. ಎಲ್ಲರೂ ಕೈಲಾದಷ್ಟು ಹಣಕಾಸನ್ನು ಒಟ್ಟುಗೂಡಿಸಿಕೊಂಡು ಕೆಜಿಎಫ್ಗೆ ತೆರಳಲು ನಿರ್ಧಾರವಾಗಿದೆ.<a href="http://vartamaana.com/2011/12/05/%E0%B2%B5%E0%B2%B0%E0%B3%8D%E0%B2%A4%E0%B2%AE%E0%B2%BE%E0%B2%A8%E0%B2%A6-%E0%B2%85%E0%B2%AA%E0%B3%80%E0%B2%B2%E0%B3%81-%E0%B2%87%E0%B2%A6%E0%B3%81-%E0%B2%A8%E0%B2%AE%E0%B3%8D%E0%B2%AE-%E0%B2%9C/"> ಇದರ ಜವಾಬ್ದಾರಿಯನ್ನು ವೃತ್ತಿಯಿಂದ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ, ಜನಪರ ಕಾಳಜಿಯ ಚಿಂತಕ ರವಿಕೃಷ್ಣಾರೆಡ್ಡಿ ತಮ್ಮ ವರ್ತಮಾನ ಬಳಗದ ಮೂಲಕ ಆರಂಭಿಸಿದ್ದಾರೆ.</a><br />
<br />
ಜೀವಪರತೆಯ ಆಶಯವನ್ನು ಬೆಂಬಲಿಸುವ ಸಹೃದಯರು, ಹಸಿವುರಹಿತ ನಾಡಿನ ನಿರ್ಮಾಣದಲ್ಲಿ ಹೆಗಲು ಜೋಡಿಸುವ ಸಮಾನ ಮನಸ್ಕರ ನೆರವೂ ಇದಕ್ಕೆ ಬೇಕಿದೆ. ಇಚ್ಛೆಯುಳ್ಳವರು ನಮ್ಮೊಡನೆ ಬರಹುದು. ಬರಲಾಗದ ಜೀವಪರರು ತಮ್ಮಿಂದ ಆದಷ್ಟು ಮಟ್ಟಿಗೆ ಧನಸಹಾಯವನ್ನು ಮಾಡಬೇಕೆಂದು ವಿನಂತಿಸುತ್ತೇವೆ. ಸಂಗ್ರಹಗೊಂಡ ಪ್ರತಿಯೊಂದು ಪೈಸೆಯ ಲೆಕ್ಕವನ್ನೂ ಪಾರದರ್ಶಕವಾಗಿ ಜನರ ಮುಂದೆ ಇಡುವ ಮೂಲಕ ನೆರವಾದವರನ್ನು ಸ್ಮರಿಸುವುದು ನಮ್ಮ ಉದ್ದೇಶವೂ ಆಗಿದೆ. ಮುಂದೊಂದು ದಿನ ಚಿನ್ನದನಾಡು ಎಂಬ ಪದ ಕೇಳಿದಾಗ ಈ ಶ್ರಮಿಕರಿಗೆ ಒಂದು ಕಾಲದಲ್ಲಿ ಹೆಗಲು ಕೊಟ್ಟಿದ್ದೆವು, ಹಸಿವು ನೀಗಿದ ಕೂಸೊಂದರ ನಗೆಯಲ್ಲಿ ನಮ್ಮದೂ ಒಂದು ಬೆಂಬಲವಿತ್ತು ಎಂಬ ಸಮಾಧಾನವನ್ನಷ್ಟೇ ನಿಮ್ಮ ಬೆಂಬಲ ಮತ್ತು ನೆರವು ನೀಡಬಲ್ಲುದು. ಹೆಗಲು ಕೊಡಿ ಗೆಳೆಯರೇ/ಗೆಳತಿಯರೇ. ಇದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ.<br />
<br />
<b>-ಟಿ.ಕೆ. ದಯಾನಂದ</b><br />
<b><br />
</b><br />
<b></b><br />
<b>ನೀವು ಹಣ ಕಳುಹಿಸಬೇಕಾದ ಬ್ಯಾಂಕ್ ಖಾತೆ: ೬೪೦೪೬೦೯೬೯೭೪ (ಟಿ.ಕೆ.ದಯಾನಂದ) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು. ಇದೇ ಡಿಸೆಂಬರ್ ೧೫ ರ ಒಳಗೆ ತಾವು ಹಣ ಕಳುಹಿಸಬೇಕಾಗಿ ವಿನಂತಿ. ಚೆಕ್ ಕಳುಹಿಸುವವರು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಚೆಕ್ ಟಿ.ಕೆ.ದಯಾನಂದ ರ ಹೆಸರಿನಲ್ಲಿರಲಿ.</b><br />
<b><br />
</b><br />
<b>ವರ್ತಮಾನ</b><br />
<b>ನಂ. ೪೦೦, ೨೩ನೇ ಮುಖ್ಯ ರಸ್ತೆ,</b><br />
<b>ಕುವೆಂಪು ನಗರ, ಎರಡನೇ ಹಂತ</b><br />
<b>ಬೆಂಗಳೂರು - ೫೬೦೦೭೬</b><br />
<b>ದೂ: ೦೮೦-೨೬೭೮೩೩೨೯</b><br />
<br />
</div>sampadakeeyahttp://www.blogger.com/profile/10834139994439066030noreply@blogger.com2tag:blogger.com,1999:blog-3901985173139732142.post-15877846359526548832011-12-05T20:20:00.001+05:302011-12-05T20:25:57.455+05:30ವರ್ತಮಾನದ ಕರೆಗೆ ಓಗೊಡೋಣ ಬನ್ನಿ, ಮಲಸಂತ್ರಸ್ಥರಿಗೆ ನೆರವಾಗೋಣ...<div dir="ltr" style="text-align: left;" trbidi="on"><br />
<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEi9vKhXJRHOgX9jTXbb5hwx5yll9CXx2UuKibPqqmLNFJFXgmiFmgD8nrhhzscgSfkxFIDv010701qZeCU5vE9pbCQrFUk8t1Zp8H_EMPiAB6aMghOqMQzE4Hs6kuNzjaFlZGeu8n0JWqOL/s1600/malada+gundi.jpg" imageanchor="1" style="margin-left: 1em; margin-right: 1em;"><img border="0" height="256" src="https://blogger.googleusercontent.com/img/b/R29vZ2xl/AVvXsEi9vKhXJRHOgX9jTXbb5hwx5yll9CXx2UuKibPqqmLNFJFXgmiFmgD8nrhhzscgSfkxFIDv010701qZeCU5vE9pbCQrFUk8t1Zp8H_EMPiAB6aMghOqMQzE4Hs6kuNzjaFlZGeu8n0JWqOL/s400/malada+gundi.jpg" width="400" /></a></div><b>ನೆರೆ ಸಂತ್ರಸ್ಥರು ನಿಮಗೆ ಗೊತ್ತು, ಬರ ಸಂತ್ರಸ್ಥರು, ಮಲ ಸಂತ್ರಸ್ಥರು ನಿಮಗೆ ಗೊತ್ತೆ? ಕೆಜಿಎಫ್ಗೆ ಹೋಗಿದರೆ ಈ ಮಲಸಂತ್ರಸ್ಥರು ನಿಮಗೆ ಕಾಣಬಹುದು. ಬದುಕಿನುದ್ದಕ್ಕೂ ಊರಿನ ಮಲದ ಗುಂಡಿಯೊಳಗೆ ಇಳಿದು ಶುದ್ಧಗೊಳಿಸಿದವರು ಇವರು. ಸಾಮಾಜಿಕ ಸಂಘಟನೆಗಳ ಸತತ ಹೋರಾಟದಿಂದ ಈಗ ಮಲಹೊರುವ ಕಾಯಕವನ್ನು ನಿಷೇಧಿಸಲಾಗಿದೆ. ಆದರೆ ಅದೇ ಸಮಯಕ್ಕೆ ಈ ಕುಟುಂಬಗಳ ಹೊಣೆ ಹೊರಬೇಕಾದವರು ಸುಮ್ಮನಿದ್ದಾರೆ. ಈ ಕುಟುಂಬಗಳಿಗೆ ಅಗತ್ಯವಿರುವ ತಕ್ಷಣದ ನೆರವನ್ನು ನೀಡಲು <a href="http://vartamaana.com/">ವರ್ತಮಾನ</a> ಬಳಗ ಮುಂದೆ ಬಂದಿದೆ. <a href="http://vartamaana.com/2011/12/05/%E0%B2%B5%E0%B2%B0%E0%B3%8D%E0%B2%A4%E0%B2%AE%E0%B2%BE%E0%B2%A8%E0%B2%A6-%E0%B2%85%E0%B2%AA%E0%B3%80%E0%B2%B2%E0%B3%81-%E0%B2%87%E0%B2%A6%E0%B3%81-%E0%B2%A8%E0%B2%AE%E0%B3%8D%E0%B2%AE-%E0%B2%9C/">ವರ್ತಮಾನದ ಈ ಕರೆಗೆ ನಾವೆಲ್ಲ ಸ್ಪಂದಿಸಬೇಕಿದೆ.</a> ಹಿಂದೆ ಹಾನಗಲ್ನ ಪೌರಕಾರ್ಮಿಕಳೊಬ್ಬಳ ಮಗನ ಕಷ್ಟಕ್ಕೆ ಕರಗಿ <i>ಸಂಪಾದಕೀಯ</i>ದ ಮನವಿಗೆ ಸ್ಪಂದಿಸಿದವರು ನೀವು. ಈಗಲೂ ನಿಮ್ಮಿಂದ ಅದೇ ನಿರೀಕ್ಷೆ ನಮ್ಮದು. </b><br />
<b> -ಸಂಪಾದಕೀಯ</b><br />
<br />
<b><a href="http://vartamaana.com/">ವರ್ತಮಾನ</a> ಬಳಗದ ಮನವಿಯ ಸಾರಾಂಶ ಈ ಕೆಳಗಿನಂತಿದೆ.</b><br />
<br />
<br />
<blockquote class="tr_bq">ಕೆಜಿಎಫ್ ದಲಿತ ಕಾಲೋನಿಗಳಲ್ಲಿ ಇತ್ತೀಚೆಗೆ ಘಟಿಸಿದ ಸಾವುಗಳು ನಿಮಗೆ ನೆನಪಿರಬಹುದು. ಕಕ್ಕಸ್ಸು ಗುಂಡಿ ಶುಚಿಗೊಳಿಸಲು ಹೋದ ಐವರು ಅಸುನೀಗಿದ್ದಾರೆ. ಇದೇ ಕೆಲಸದಿಂದಾಗಿ ಅಂಟಿಸಿಕೊಂಡ ನಾನಾ ರೋಗಗಳಿಂದ ಸತ್ತವರೆಷ್ಟೋ, ಲೆಕ್ಕ ಇಟ್ಟವರಾರು? ಇನ್ನು ಕೆಲವರು ರೋಗಗಳಿಂದ ಬಳಲುತ್ತಿದ್ದಾರೆ.<br />
<br />
ದುಡಿವವರನ್ನು ಕಳೆದುಕೊಂಡ ಅವರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಸಾಲು ಸಾಲು ಸಾವುಗಳ ನಂತರ ಸ್ಥಳೀಯ ಸಂಸ್ಥೆ ಎಚ್ಚರಗೊಂಡು ಮಲಹೊರುವ ಪದ್ಧತಿ ನಿರ್ಮೂಲನೆಗೆ ಶತಪ್ರಯತ್ನ ಮಾಡುತ್ತಿದೆ. ಮಲದ ಗುಂಡಿಗಳನ್ನು ಶುಚಿ ಮಾಡಲು ಯಾರೂ ಇವರನ್ನು ಕರೆಯಬಾರದು ಎಂದು ಅರಿವು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಅದೇ ಆಡಳಿತದ ಜವಾಬ್ದಾರಿಯಾಗಿದ್ದು ದುಡಿಯುವ ಕೈಗಳನ್ನು ಮತ್ತು ದುಡಿಮೆಯನ್ನು ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಕೊಡಿಸಬೇಕಾದ್ದು. ಇದುವರೆಗೂ ಅದು ಈಡೇರಿಲ್ಲ. ಭರವಸೆ ನೀಡಿದ್ದಾರೆ. ಈಡೇರುವುದು ಎಂದೋ?<br />
ಆದರೆ ಅಲ್ಲಿಯವರೆಗೆ??<br />
<br />
ಪಿಯುಸಿಎಲ್ ಮತ್ತಿತರ ಸಂಘಟನೆಗಳ ಸತತ ಒತ್ತಡದ ಫಲವಾಗಿ, ವೈ.ಜೆ.ರಾಜೇಂದ್ರ, ದಯಾನಂದ್, ಚಂದ್ರಶೇಖರ್, ಪದ್ಮ ಮೊದಲಾದ ಸಾಮಾಜಿಕ ಹೋರಾಟಗಾರರ ಪ್ರಯತ್ನದಿಂದಾಗಿ ಕೆಜಿಎಫ್ನಲ್ಲಿ ಈಗ ಮನುಷ್ಯರೇ ಮಲಹೊತ್ತುವ ಕಾರ್ಯಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿದೆ. ಇದರ ಜತೆಜತೆಗೆ ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದ ಜಿಲ್ಲಾಡಳಿತ ಮಾತ್ರ ನಿಧಾನಗತಿ ಅನುಸರಿಸುತ್ತಿದೆ. ಪರಿಣಾಮವಾಗಿ ಈ ಕುಟುಂಬಗಳ ಒಪ್ಪೊತ್ತಿನ ಊಟಕ್ಕೂ ಈಗ ತತ್ವಾರ.<br />
<br />
ಸದ್ಯಕ್ಕೆ ಅವರಿಗೆ ಆದಾಯದ ಮೂಲವೇ ಇಲ್ಲ. ಪರ್ಯಾಯ ಉದ್ಯೋಗ ಕಲ್ಪಿಸುವವರೆಗಾದರೂ ಆ ಕಾಲೋನಿಯಲ್ಲಿ ಗಂಜಿ ಕೇಂದ್ರ ಸ್ಥಾಪಿಸಿ ಅನ್ನ ನೀಡಬೇಕಾದ ಜವಾಬ್ದಾರಿ ಆಡಳಿತದದ್ದು. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ನಾಗರಿಕ ಸಮಾಜವೂ ಜವಾಬ್ದಾರಿ ಮರೆತರೆ? ನಮ್ಮ ಮನೆಯ ಮಲದ ಗುಂಡಿಗಳು ತುಂಬಿಕೊಂಡಾಗ, ನಗರಸಭೆ, ಪುರಸಭೆಗಳನ್ನು ನಂಬಿಕೊಳ್ಳದೆ ನಾವು ಇಂತಹವರ ಮೊರೆ ಹೋಗಿದ್ದೆವು, ಅವರನ್ನು ಗುಂಡಿಯೊಳಗೆ ಇಳಿಸಿ ಮೇಲೆ ಮೂಗು ಮುಚ್ಚಿ ನಿಂತಿದ್ದೆವು. ಅವರು ಅಂಟಿಸಿಕೊಂಡ ರೋಗಗಳಿಗೆ, ತೆತ್ತ ಜೀವಕ್ಕೆ ಸರಕಾರ ಅಷ್ಟೇ ಅಲ್ಲ, ನಾವೂ ಹೊಣೆ.<br />
<br />
ವರ್ತಮಾನ ಬಳಗ ಹೀಗೊಂದು ಆಲೋಚನೆ ಮಾಡಿದೆ. ಒಪ್ಪತ್ತಿನ ಅನ್ನಕ್ಕಾಗಿ ಕಷ್ಟಪಡಿಸುತ್ತಿರುವವರಿಗೆ ನಾವು, ನೀವು ನೆರವಾಗೋಣ ಎಂಬುದು ನಮ್ಮ ಆಲೋಚನೆ. ಅವರಿಗೆ ಮುಖ್ಯವಾಗಿ ಈಗ ಬೇಕಿರುವುದು, ಅಕ್ಕಿ, ಬೇಳೆ ಹಾಗೂ ಅಡಿಗೆಗೆ ಬೇಕಾದ ಇತರೆ ಅಗತ್ಯ ಸಾಮಾಗ್ರಿಗಳು. ಸಂಗ್ರಹವಾಗುವ ಹಣದಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ಅವರಿಗೆ ತಲುಪಿಸುವ ಹೊಣೆ ನಮ್ಮದು. ಸಂಗ್ರಹವಾಗುವ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ? ಅಂತೆಯೇ ನಮ್ಮ ಜೊತೆ ಕೈಜೋಡಿಸುವವರ ಹೆಸರನ್ನು ಪ್ರಕಟಿಸುತ್ತೇವೆ. ಜೊತೆಗೆ ಹಣ ನೀಡುತ್ತೇವೆ ಎಂದು ಭರವಸೆ ಕೊಡುವವರ ಹೆಸರನ್ನೂ ಮತ್ತೊಂದು ಪಟ್ಟಿಯಲ್ಲಿ ಪ್ರಕಟಿಸುತ್ತೇವೆ. ಅಂತಹವರು ತಮ್ಮ ಭರವಸೆಗಳನ್ನು ಮೇಲ್ ಮಾಡಬಹುದು <span class="Apple-style-span" style="font-family: Arial, Helvetica, sans-serif;">(editor@vartamaana.com)</span><br />
<br />
ವರ್ತಮಾನ ಬಳಗ ೫,೦೦೦ ರೂಗಳನ್ನು ಈ ಕೆಲಸಕ್ಕಾಗಿ ವಿನಿಯೋಗಿಸುತ್ತದೆ.<br />
<br />
<b>ನೀವು ಹಣ ಕಳುಹಿಸಬೇಕಾದ ಬ್ಯಾಂಕ್ ಖಾತೆ: ೬೪೦೪೬೦೯೬೯೭೪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು.</b> ಇದೇ ಡಿಸೆಂಬರ್ ೧೫ ರ ಒಳಗೆ ತಾವು ಹಣ ಕಳುಹಿಸಬೇಕಾಗಿ ವಿನಂತಿ.<br />
<br />
ನಮಸ್ಕಾರ<br />
<b>ವರ್ತಮಾನ ಬಳಗ.</b></blockquote><div style="font-weight: bold;"><br />
</div>ವರ್ತಮಾನದಲ್ಲಿ ಈ ಮೂಲ ಲೇಖನ ಓದಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:<br />
<div style="font-weight: bold;"><br />
</div><div style="font-weight: bold;"><a href="http://vartamaana.com/2011/12/05/%E0%B2%B5%E0%B2%B0%E0%B3%8D%E0%B2%A4%E0%B2%AE%E0%B2%BE%E0%B2%A8%E0%B2%A6-%E0%B2%85%E0%B2%AA%E0%B3%80%E0%B2%B2%E0%B3%81-%E0%B2%87%E0%B2%A6%E0%B3%81-%E0%B2%A8%E0%B2%AE%E0%B3%8D%E0%B2%AE-%E0%B2%9C/">ವರ್ತಮಾನದ ಅಪೀಲು: ಇದು ನಮ್ಮ ಜವಾಬ್ದಾರಿ, ನೀವೂ ಪಾಲ್ಗೊಳ್ಳಿ</a></div><br />
</div>sampadakeeyahttp://www.blogger.com/profile/10834139994439066030noreply@blogger.com0tag:blogger.com,1999:blog-3901985173139732142.post-17220983035428258802011-12-03T18:59:00.001+05:302011-12-03T19:00:45.547+05:30ಮಾನವಂತ ಬ್ರಾಹ್ಮಣರು, ಸ್ವಾಭಿಮಾನಿ ಶೂದ್ರರೂ ಒಟ್ಟಿಗೆ ನಿಲ್ಲಬೇಕಾದ ಕಾಲವಿದು...<div dir="ltr" style="text-align: left;" trbidi="on"><br />
<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg6mC2erZKi50FbzQsg2KTit1uvHakhyphenhyphentpnrsOIKS2U1UueUcfjovmuP6lkL9YfpZBzryDwKDP6MegoqTeXcs_lgK39ZpX11hympDGDGhu4KvQ6vesxNYlcOsCijOnHFbcikrXmWKmyGJxh/s1600/madesnana.jpg" imageanchor="1" style="margin-left: 1em; margin-right: 1em;"><img border="0" height="266" src="https://blogger.googleusercontent.com/img/b/R29vZ2xl/AVvXsEg6mC2erZKi50FbzQsg2KTit1uvHakhyphenhyphentpnrsOIKS2U1UueUcfjovmuP6lkL9YfpZBzryDwKDP6MegoqTeXcs_lgK39ZpX11hympDGDGhu4KvQ6vesxNYlcOsCijOnHFbcikrXmWKmyGJxh/s400/madesnana.jpg" width="400" /></a></div>೧೯೭೪ರಲ್ಲಿ ಆರಂಭಗೊಂಡ ಬರಹಗಾರರ ಒಕ್ಕೂಟದ ಕಾಲದ ಮಾತಿದು. ಬರಹಗಾರರ ಒಕ್ಕೂಟ ಬ್ರಾಹ್ಮಣೇತರ ಆಂದೋಲನವಾಗಿ ಹೊರಹೊಮ್ಮಿತ್ತು. ಬ್ರಾಹ್ಮಣರೆಂಬ ಕಾರಣಕ್ಕೆ ಯು.ಆರ್.ಅನಂತಮೂರ್ತಿ ಅವರನ್ನು ಮೈಸೂರಿನಲ್ಲಿ ನಡೆದ ಒಕ್ಕೂಟದ ಸಮಾವೇಶಕ್ಕೆ ಕರೆಯಲಾಗಿರಲಿಲ್ಲ. ಇದನ್ನು ಶ್ರೀಕೃಷ್ಣ ಆಲನಹಳ್ಳಿ ಪ್ರತಿಭಟಿಸಿದರು. ಆ ಘಟನೆಯ ಕುರಿತು ಅನಂತಮೂರ್ತಿ ಹೀಗೆ ನೆನಪಿಸಿಕೊಳ್ಳುತ್ತಾರೆ:<br />
<br />
<blockquote class="tr_bq">ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕೆ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು. ನನ್ನ ಜತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್ ಎಂಬೊಬ್ಬರ ಸ್ಕೂಟರ್ನಲ್ಲಿ ಸೀದಾ ಏಳನೇ ಮೈನಿನ ನನ್ನ ಸರಸ್ವತಿಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: ‘ಅನಂತಮೂರ್ತಿ, ನಾವೆಲ್ಲ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಧಿಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗುತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ...'<br />
<br />
ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯಿತರಿಗೆ ಶೇಕಡಾ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿ ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ.... ಸುಮಾರು ೧೯೬೭ರಲ್ಲಿ ಎಂದು ನೆನಪಾಗುತ್ತದೆ: ಗತಿಸಿದ ಶಿವರಾಮ ಐತಾಳ್ರಿಗೆ ಉತ್ತರವಾಗಿ ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯಾಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿ ಸ್ಕೂಲ್ ದಿನಗಳಿಂದಲೂ ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ್ಸ್ ಓದಿದ್ದು ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟೆಲ್ ಆದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ....*</blockquote><br />
****<br />
<br />
ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ? ಎಂಬ ಈ ಹಿಂದಿನ ಲೇಖನಕ್ಕೆ ಫೇಸ್ಬುಕ್ನಲ್ಲಿ ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಅವುಗಳಲ್ಲಿ ಅತಿಹೆಚ್ಚು ಗಮನಸೆಳೆದಿದ್ದು ವಸುಮತಿ ಭಾಸ್ಕರ್ ಅವರ ಪ್ರತಿಕ್ರಿಯೆ. <span class="Apple-style-span" style="font-family: Arial, Helvetica, sans-serif;"><b>Its very true, as a bramhin( though don't like to announce it) I protest this, for the same reason me and my husband stopped going to these kind of temples and that's what we could do, unfortunately.</b></span><br />
<br />
ಲೇಖನದಲ್ಲಿ ಮಾನವಂತ ಬ್ರಾಹ್ಮಣರೆಂದು ಪ್ರಸ್ತಾಪಿಸಿದ್ದು ವಸುಮತಿ ಅಂಥವರನ್ನೇ. ಇಂಥವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುವುದರಿಂದಲೇ ಸಮಾಜ ಇಷ್ಟಾದರೂ ಸ್ವಾಸ್ಥ್ಯವನ್ನು ಹೊಂದಿದೆ. ವಸುಮತಿಯವರನ್ನೂ ಅವರ ಪರಂಪರೆಯ ಎಲ್ಲರನ್ನೂ ಪ್ರೀತಿಯಿಂದ ಅಭಿನಂದಿಸೋಣ.<br />
<br />
ಬ್ರಾಹ್ಮಣ್ಯದ ವಿರುದ್ಧದ ಹೋರಾಟಗಳು, ಚಳವಳಿಗಳು ಸಾಕಷ್ಟು ಸಂದರ್ಭದಲ್ಲಿ ಬ್ರಾಹ್ಮಣದ್ವೇಷಿಯಂತಲೇ ಬಿಂಬಿಸಿಕೊಳ್ಳಲ್ಪಟ್ಟಿದ್ದು ನಿಜಕ್ಕೂ ದುರಂತ. ಹೀಗಾದಾಗ ಇನ್ನಷ್ಟು ಧ್ರುವೀಕರಣ ಆಗುವ ಅಪಾಯವೇ ಹೆಚ್ಚು. ಬರಹಗಾರರ ಒಕ್ಕೂಟದ ಸಂದರ್ಭದಲ್ಲಿ ಲಂಕೇಶರೇನೋ ಅನಂತಮೂರ್ತಿಯವರ ಬಳಿ ಖಾಸಗಿಯಾಗಿ ಬಂದು, ನಮ್ಮಿಂದ ಅತಿರೇಕವಾದರೂ ನೀವು ಬ್ರಾಹ್ಮಣವಾದಿಯಾಗಬೇಡಿ ಎಂದು ಹೇಳಿದರು. ಆದರೆ ಮಾನವೀಯವಾಗಿ ಯೋಚಿಸಬಲ್ಲ ಉಳಿದ ಬ್ರಾಹ್ಮಣರಿಗೆ ಯಾರೂ ಇದನ್ನು ಹೇಳಿರುವುದು ಅಸಾಧ್ಯ. ಬಹುಶಃ ಅನಂತಮೂರ್ತಿ ಹೇಳಬಯಸಿದ್ದ ಆತಂಕದ ಪ್ರಶ್ನೆಗಳಲ್ಲಿ ಇದೂ ಒಂದಿರಬಹುದು.<br />
<br />
ನಾವು ಯಾವುದನ್ನು ಪುರೋಹಿತಶಾಹಿ ಎಂದು ಕರೆಯುತ್ತಿದ್ದೇವೋ ಅದು ಬ್ರಾಹ್ಮಣ ಜಾತಿಗೆ ಸೀಮಿತವಾಗಿ ಹೇಳುವ ಕಾಲ ಎಂದೋ ಮುಗಿದುಹೋಯಿತು. ಎಲ್ಲ ಸಮುದಾಯಗಳಲ್ಲೂ ಒಂದೊಂದು ಪುರೋಹಿತ ವರ್ಗ ಎದ್ದು ನಿಂತಿದೆ. ಬ್ರಾಹ್ಮಣ ಪುರೋಹಿತಶಾಹಿಗಳಷ್ಟೆ ಅಥವಾ ಒಮ್ಮೊಮ್ಮೆ ಅದಕ್ಕಿಂತ ಹೆಚ್ಚಿನ ಪ್ರತಿಗಾಮಿತನಗಳನ್ನು ಶೂದ್ರ ಪುರೋಹಿತ ವರ್ಗ ಪ್ರದರ್ಶಿಸುತ್ತಿವೆ. ಮನುಗಳು ಈಗ ಬ್ರಾಹ್ಮಣರಲ್ಲಿ ಮಾತ್ರವಿಲ್ಲ, ಶೂದ್ರರಲ್ಲೂ ಇದ್ದಾರೆ. ಇವರು ಬ್ರಾಹ್ಮಣ ಮನುಗಳಿಗಿಂತ ಅಪಾಯಕಾರಿಯಾಗಿದ್ದಾರೆ.<br />
<br />
ಆಧುನಿಕ ಪುರೋಹಿತಶಾಹಿಗಳು ಮಠಾಧೀಶರು. ಜಾತಿಗಳನ್ನು ಇವತ್ತು ಮಠಗಳು ಬಲಪಡಿಸುತ್ತಿವೆ. ಅದಕ್ಕೆ ಸಾವಿರಾರು ಸಾಕ್ಷಿಗಳು ನಮ್ಮ ಮುಂದಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ೧೦೫ ವರ್ಷಗಳ ನಡೆದಾಡುವ ದೇವರು ಬಂದೇಬಿಟ್ಟರು. ಬೇರೆ ಬೇರೆ ಕಾರಣಗಳಿಗಾಗಿ ನಾಡು ಗೌರವಿಸುವ ಈ ಮಹಾತ್ಮರನ್ನು ಟೀಕಿಸುವುದು ನಮ್ಮ ಉದ್ದೇಶವಲ್ಲ. ಜಾತಿಯ ತಂತುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಹೇಳುವ ಪ್ರಯತ್ನವಷ್ಟೇ ನಮ್ಮದು.<br />
<br />
ಜಾತಿವಾದಿಗಳಾಗಲು ಗೌಡರಿಗೆ, ಕುರುಬರಿಗೆ, ಲಿಂಗಾಯಿತರಿಗೆ ಶೇಕಡಾ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು ಎಂದು ಅನಂತಮೂರ್ತಿ ಅಂದು ನುಡಿದಿದ್ದರು. ಆದರೆ ಇವತ್ತಿನ ಸಾಮಾಜಿಕ-ರಾಜಕೀಯ ಚಿತ್ರಣವನ್ನು ಗಮನಿಸಿದರೆ ಈ ಮಾತನ್ನು ಅವರು ಅಷ್ಟು ಧೈರ್ಯದಿಂದ ಹೇಳಲಾರರು ಎಂದೆನಿಸುತ್ತದೆ. ಕೊನೇಪಕ್ಷ ಶೇಕಡಾವಾರು ಪ್ರಮಾಣವನ್ನು 20-25ಕ್ಕೆ ಇಳಿಸಬಹುದೇನೋ?<br />
<br />
ಮಡೆಸ್ನಾನದ ವಿಷಯವನ್ನು ಜಾತಿಯ ಕಣ್ಣಿನಲ್ಲಿ ನೋಡದೆ ಒಟ್ಟು ಪುರೋಹಿತಶಾಹಿಯ ಕ್ರೌರ್ಯದ ರೂಪವನ್ನಾಗಿಯೇ ನಾವು ನೋಡಬೇಕು. ಇಲ್ಲವಾದಲ್ಲಿ ಮಡೆಸ್ನಾನ ವಿರೋಧಿ ಚಳವಳಿಯೂ ಬ್ರಾಹ್ಮಣ ವಿರೋಧಿ ಚಳವಳಿಯ ಹಾಗೆ ಕಾಣಿಸಿ, ತನ್ನಿಂತಾನೇ ದುರ್ಬಲಗೊಳ್ಳುವ ಸಾಧ್ಯತೆಗಳು ಇರುತ್ತವೆ. ನಿಜ, ಸುರೇಶ್ ಕುಮಾರ್, ಆಚಾರ್ಯರಂಥ ಬ್ರಾಹ್ಮಣರು ಮಡೆಸ್ನಾನವನ್ನು ಸಮರ್ಥಿಸಿಕೊಂಡು ಮಾತನಾಡಿರಬಹುದು, ಅದಕ್ಕೆ ಅವರದೇ ಆದ ರಾಜಕೀಯ ಕಾರಣಗಳೂ ಇರುತ್ತವೆ. ಪೇಜಾವರರಂಥವರು ತಟಸ್ಥ ನಿಲುವು ತಳೆಯುವುದರಲ್ಲೂ ಅಪ್ಪಟ ರಾಜಕೀಯ ತಂತ್ರಗಾರಿಕೆಯೇ ಇರಬಹುದು. ಹಾಗೆಂದ ಮಾತ್ರಕ್ಕೆ ಇಡೀ ಬ್ರಾಹ್ಮಣ ಸಮುದಾಯ ಇದನ್ನು ಬೆಂಬಲಿಸುತ್ತದೆ ಎಂದು ಕುರುಡಾಗಿ ನಂಬುವಂತೆ ಇಲ್ಲ. ಅದು ಸಮಂಜಸವೂ ಅಲ್ಲ.<br />
<br />
ಇವತ್ತು ಹಿಂದುಳಿದ ಸಮುದಾಯಗಳು ಸಾಮಾಜಿಕ ಮಾನ್ಯತೆಗಳಿಗಾಗಿ ಬ್ರಾಹ್ಮಣರನ್ನು ಅನುಸರಿಸಲು ಯತ್ನಿಸುತ್ತಿವೆ. ಹಿಂದಿನಿಂದಲೂ ಇದು ನಡೆದುಕೊಂಡುಬಂದಿದೆ. ತಮ್ಮ ತಮ್ಮ ಜಾತಿಗೆ ಸ್ಥಾನಮಾನ ತಂದುಕೊಳ್ಳಲು ಇವು ಸಾಹಸ ಪಡುತ್ತವೆ. ಸಹಜವಾಗಿಯೇ ಬ್ರಾಹ್ಮಣ್ಯದ ಕೊಳೆಯನ್ನೇ ಇವೂ ಕೂಡ ಹೊತ್ತುಕೊಂಡು ಸಾಗುತ್ತಿವೆ. ಹೀಗಾಗಿ ಮಡೆಸ್ನಾನ, ಪಂಕ್ತಿಭೇದದಂಥವು ಅವುಗಳಿಗೆ ಅವಮಾನದ, ಅನಾಗರಿಕ ಆಚರಣೆ ಅನಿಸದೆ ನಂಬಿಕೆಯ ಪ್ರಶ್ನೆಯಾಗಿ ಉಳಿದುಕೊಂದಿವೆ.<br />
<br />
ಜಾತಿ ಮೇಲ್ದರ್ಜೀಕರಣದ (ಪ್ರಮೋಷನ್) ಆಸೆಯನ್ನು ತೊರೆಯದ ಹೊರತು ಇವುಗಳಿಗೆ ಬಿಡುಗಡೆಯಂತೂ ಇಲ್ಲ. ಬಿಡುಗಡೆ ಪಡೆಯುವ ಹೊರತಾಗಿ ಇವು ವರ್ಣಾಶ್ರಮ ವ್ಯವಸ್ಥೆಯ ನರಕದಲ್ಲೇ ಕೊಳೆತು ಹೋಗುತ್ತವೆ. ಇದನ್ನು ಗೊತ್ತು ಮಾಡಿಸುವವರು ಯಾರು? ಜಾತಿ ಸಂಘಟನೆಗಳನ್ನು ಪೋಷಿಸಿಕೊಂಡು ಬಂದಿರುವ ಹಿಂದುಳಿದ ಸಮುದಾಯಗಳು ಕರ್ನಾಟಕದ ಸಂದರ್ಭದಲ್ಲಿ ಒಂದಾಗಿ ಹೋರಾಡಿದ ಉದಾಹರಣೆಯೇನಾದರೂ ಇದೆಯೇ? ದಲಿತರಿಗಾದರೋ ದಲಿತ ಸಂಘರ್ಷ ಸಮಿತಿ ಕೊಂಚಮಟ್ಟಿಗೆ ಬಿಡುಗಡೆಯ ಮಾರ್ಗವಾಯಿತು, ಹಿಂದುಳಿದವರಿಗೆ?<br />
<br />
ಇವತ್ತು ಅತ್ಯಗತ್ಯವಾಗಿ ಎರಡು ಹಂತದ ಚಟುವಟಿಕೆಗಳು ಏಕಕಾಲಕ್ಕೆ ಘಟಿಸಬೇಕಿದೆ. ಒಂದು, ಹಿಂದುಳಿದ ಸಮುದಾಯಗಳು ಜಾತಿ ಶ್ರೇಣೀಕರಣದ ಅಸಹ್ಯದಿಂದ ಹೊರಗೆ ಬಂದು ಮೌಢ್ಯಕ್ಕೆ ದಾಸರಾಗುವುದನ್ನು ಬಿಡಬೇಕಿದೆ. ಮೇಲ್ವರ್ಗದ ಜನರು ಜಾತಿಯನ್ನು ಬಿಟ್ಟುಕೊಟ್ಟು ಜೀವಪರರಾಗುವುದನ್ನು ಕಲಿಯಬೇಕಿದೆ.<br />
<br />
ಒಂದು ಘಟನೆಯನ್ನು ನೆನಪಿಸಿಕೊಳ್ಳೋಣ. ದಲಿತ ಸಂಘರ್ಷ ಸಮಿತಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಒಮ್ಮೆ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಗಿತ್ತು. ಅಂದು ಊರೂರುಗಳಲ್ಲಿ ದಲಿತಕೇರಿಯ ಪ್ರವೇಶದಲ್ಲಿ ಒಂದು ಗಡಿಗೆ ತುಂಬ ನೀರು ಇಟ್ಟುಕೊಂಡ ದಲಿತರು, ನಾವು ಇನ್ನೇನೂ ಕೊಡಲಾರೆವು. ನಮ್ಮದೊಂದು ಲೋಟ ನೀರು ಕುಡಿದು ಹೋಗಿ ಎಂದು ಊರಿನ ಎಲ್ಲ ಜಾತಿ ಸಮುದಾಯದವರನ್ನು ಆಹ್ವಾನಿಸಿದರು. ಹೊಸಬಗೆಯ ಈ ಚಳವಳಿ ಗಮನಾರ್ಹ ಯಶಸ್ಸನ್ನು ಕಂಡಿತ್ತು. ಆಗ ದೇವನೂರು ಮಹದೇವ ಹೇಳಿದ ಒಂದು ಮಾತು ನಮ್ಮ ಎಲ್ಲ ಪ್ರಗತಿಪರ ಚಳವಳಿಗಳಿಗೂ ಅಂತರಾತ್ಮದ ಧ್ವನಿಯಾಗಬೇಕಿತ್ತು. ದೇವನೂರು ಹೀಗೆಂದಿದ್ದರು: ‘ದಲಿತ ಚಳವಳಿ ಬ್ರಾಹ್ಮಣರಿಗೂ ಬಿಡುಗಡೆ ಕೊಡುವಂತಿರಬೇಕು.' **<br />
<br />
ಮಡೆಸ್ನಾನ-ಪಂಕ್ತಿಭೇದದ ವಿಷಯದಲ್ಲಿ ಬಿಡುಗಡೆ ಶೂದ್ರರಿಗೂ ಬೇಕಿದೆ, ಬ್ರಾಹ್ಮಣರಿಗೂ ಬೇಕಿದೆ. ಇದಕ್ಕಾಗಿ ಬ್ರಾಹ್ಮಣರಲ್ಲಿನ ಮಾನವಂತರು, ಇತರ ಶೂದ್ರರೊಳಗಿನ ಸ್ವಾಭಿಮಾನಿಗಳು ಎದ್ದುನಿಲ್ಲಬೇಕಿದೆ. ಎಲ್ಲರೂ ಒಟ್ಟಾಗಿಯೇ ಇದನ್ನು ಅಂತ್ಯಗೊಳಿಸಬೇಕಿದೆ. ಜಾತಿಗಳು ಸಂಘರ್ಷಕ್ಕೆ ಇಳಿದಾಗಲೆಲ್ಲ ಧ್ರುವೀಕರಣ ಬಲವಾಗಿಯೇ ನಡೆಯುತ್ತದೆ. ಇಂಥ ಧ್ರುವೀಕರಣದ ಸಂದರ್ಭದಲ್ಲಿ ಹೆಚ್ಚು ನಷ್ಟಕ್ಕೆ ಒಳಗಾಗುವವು ಹಿಂದುಳಿದ ಜಾತಿಗಳೇ ಎಂಬುದನ್ನು ಯಾರೂ ಮರೆಯುವಂತಿಲ್ಲ.<br />
<br />
ನಮ್ಮೊಳಗಿನ ಜೀವಚೈತನ್ಯದ ಮಾತು ಕೇಳಬೇಕಾದ ಕಾಲವಿದು. ಈ ಕರೆಗೆ ಓಗೊಡದಿದ್ದಲ್ಲಿ ಈ ಸಮಾಜ ಹೀಗೇ ಮುಂದುವರೆಯುತ್ತದೆ. ನಾವು ಎಂಜಲೆಲೆಗಳ ಮೇಲೆ ಉರುಳಾಡಿಕೊಂಡೇ ಸಾಯುತ್ತೇವೆ.<br />
<br />
<span class="Apple-style-span" style="font-size: x-small;">* ಪ್ರೊಫೆಸರ್ ಎಂಡಿಎನ್-ನೆನಪಿನ ಸಂಪುಟ</span><br />
<span class="Apple-style-span" style="font-size: x-small;">** ಈಗ ಅಳುವವರೂ ಇಲ್ಲ...! -ಲೇ: ಎನ್.ಎಸ್.ಶಂಕರ್</span></div>sampadakeeyahttp://www.blogger.com/profile/10834139994439066030noreply@blogger.com18tag:blogger.com,1999:blog-3901985173139732142.post-68044016255054595052011-12-02T22:32:00.000+05:302011-12-02T22:32:46.379+05:30ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ?<div dir="ltr" style="text-align: left;" trbidi="on"><br />
<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEga0a2DyFqrt1oOx3exVsguLV3PyJ4vw25u4Sm9nhE-0kQDqPaXq4Osvt8UDkYkZ1TcYfdUzAumddr2awD1BoOyCYjwQrTevVUgdn1OKl7Tms7lQIGF3G3t9jk67h6UZ5W48iObC65Inv0c/s1600/madesnana-new1.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEga0a2DyFqrt1oOx3exVsguLV3PyJ4vw25u4Sm9nhE-0kQDqPaXq4Osvt8UDkYkZ1TcYfdUzAumddr2awD1BoOyCYjwQrTevVUgdn1OKl7Tms7lQIGF3G3t9jk67h6UZ5W48iObC65Inv0c/s1600/madesnana-new1.jpg" /></a></div>ಮಡೆಸ್ನಾನದ ಬಗ್ಗೆ ಎದ್ದಿರುವ ವಿವಾದ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಮಡೆಸ್ನಾನ ವಿರೋಧಿಸಿ ಪ್ರತಿಭಟನೆಗೆ ತೆರಳಿದ್ದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಎಂಬ ಸಂಘಟನೆಯ ಶಿವರಾಮು ಮತ್ತು ಸಂಗಡಿಗರನ್ನು ಸುಬ್ರಹ್ಮಣ್ಯ ದೇವಸ್ಥಾನದ ಕೆಲವು ಗೂಂಡಾಗಳು ಹಿಡಿದು ಥಳಿಸಿದ್ದಾರೆ. ಈ ಅನಾಚಾರವನ್ನು ಖಂಡಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಮಡೆಸ್ನಾನವೆಂಬ ಅನಾಗರಿಕ ಆಚರಣೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಡಿ.೫ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಲವು ಸಂಘಟನೆಗಳು ಇಡೀ ದಿನದ ಪ್ರತಿಭಟನೆಯನ್ನು ನಡೆಸುತ್ತಿವೆ.<br />
<br />
ಮಡೆಸ್ನಾನದ ಬಗ್ಗೆ <i><b>ಸಂಪಾದಕೀಯ</b></i>ದಲ್ಲೂ ಬರೆಯಿರಿ ಎಂದು ಹಲವು ಗೆಳೆಯರು ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಜನವರಿ-ಫೆಬ್ರವರಿ ತಿಂಗಳಲ್ಲಿ ಇದೇ ಬ್ಲಾಗ್ನಲ್ಲಿ ಮಡೆಸ್ನಾನದ ಕುರಿತು ವಿಸ್ತ್ರತ ಚರ್ಚೆ ನಡೆದದ್ದನ್ನು ನೀವು ಗಮನಿಸಿರಬಹುದು. ಒಂದು ಪುಸ್ತಕಕ್ಕಾಗುವಷ್ಟು ಚರ್ಚೆ ಇಲ್ಲಿ ನಡೆದಿದೆ.<br />
<br />
ಹೊಸದಾಗಿ ಈಗ ಶುರುವಾಗಿರುವ ಚರ್ಚೆಯಲ್ಲೂ ಹೊಸ ವಿಷಯಗಳೇನೂ ಇಲ್ಲ. ಮಡೆಸ್ನಾನ ಎನ್ನುವುದು ನಂಬಿಕೆಯನ್ನು ಆಧರಿಸಿ ನಡೆಯುವ ಸಂಪ್ರದಾಯ. ಅದನ್ನು ಆಚರಿಸುವವರಿಗೆ ಇಲ್ಲದ ಸಮಸ್ಯೆ ವಿರೋಧಿಸುವವರಿಗೆ ಯಾಕೆ ಎಂಬುದು ಹಲವರ ಪ್ರಶ್ನೆ. ಇದಕ್ಕಾಗಿ ಯಥಾಪ್ರಕಾರ ತರ್ಕದ ಸಮರ್ಥನೆಗಳು.<br />
<br />
ಮಡೆಸ್ನಾನದ ವಿಷಯ ಜಾತಿಯನ್ನು ಮೀರಿದ್ದು. ಬ್ರಾಹ್ಮಣರು ತಿಂದ ಎಂಜಲೆಲೆಗಳ ಮೇಲೆ ಇತರ ಜಾತಿಗಳ ಜನರು ಹೊರಳಾಡುವುದು ನಡೆದುಕೊಂಡು ಬಂದಿರುವ ಕೊಳಕು ಸಂಪ್ರದಾಯ. ಹಾಗಂತ ಲಿಂಗಾಯತರು, ಒಕ್ಕಲಿಗರು ಅಥವಾ ಇನ್ಯಾವ ಜಾತಿಯವರು ಉಂಡ ಎಲೆಗಳ ಮೇಲೂ ಇತರ ಜಾತಿಗಳು ಹೊರಳಾಡುವಂತಾಗಬಾರದು. ಮಡೆಸ್ನಾನದಲ್ಲಿ ಭಾಗವಹಿಸುವವರು ಮಲೆಕುಡಿಯ ಎಂಬ ಜಾತಿಯವರೇ ಹೆಚ್ಚು ಎಂಬ ಮಾಹಿತಿ ಇದೆ. ಆದರೆ ಇತ್ತೀಚಿಗೆ ಎಲ್ಲ ಜಾತಿಯವರೂ ಈ ಹೀನ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ಸ್ವತಃ ಬ್ರಾಹ್ಮಣರೂ ಇದ್ದಾರೆ ಎಂಬ ಮಾತುಗಳೂ ಇವೆ.<br />
<br />
ತಾವು ಉಂಡೆದ್ದ ನಂತರ ತಮ್ಮ ಎಂಜಲೆಲೆಯ ಮೇಲೆ ಮನುಷ್ಯರು ಉರುಳಾಡುತ್ತಾರೆ ಎಂಬ ವಿಷಯ ಉಂಡವರಿಗೇ ಹೇವರಿಕೆ ಹುಟ್ಟಿಸಬೇಕು. ತಮ್ಮ ಎಂಜೆಲೆಲೆಯ ಮೇಲೆ ಕೆಳಜಾತಿಯವರು ಉರುಳಾಡಿದರೆ ಅದು ಯಾವ ಗೌರವವನ್ನೂ, ಹೆಮ್ಮೆಯನ್ನೂ ತರಲಾರದು ಎಂದು ಅವರಿಗೆ ಅನ್ನಿಸಬೇಕು. ತದನಂತರ ಉರುಳಾಡಿದವರಿಗೆ ಅದು ಅಸಹ್ಯ ಎನ್ನಿಸಬೇಕು. ಇಲ್ಲಿ ಉರುಳಾಡುತ್ತಿರುವವರಿಗೆ ಅದು ತಮಗೆ ಯಾವುದೋ ಸಮಸ್ಯೆಯನ್ನು ನಿವಾರಿಸುವ ಸಂಪ್ರದಾಯವಾಗಿ ಕಾಣಿಸಿರುವುದೇ ದುರಂತ.<br />
<br />
ಎಂಜಲೆಲೆಗಳಿಗೆ ಔಷಧೀಯ ಗುಣವಿರುತ್ತದೆ, ಖಾಯಿಲೆ ಗುಣಪಡಿಸುತ್ತದೆ ಎಂಬ ಮೌಢ್ಯವೂ ಇಲ್ಲಿನ ಜನರಲ್ಲಿದೆ. ಹಾಗೆ ಎಂಜಲೆಲೆಗಳಿಗೆ ಔಷಧೀಯ ಗುಣಗಳಿದ್ದರೆ ಕಲ್ಯಾಣಮಂಟಪಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ನಂತರ ಉಂಡ ಎಲೆಗಳ ಮೇಲೆ ಜನರೇಕೆ ಉರುಳಾಡುವುದಿಲ್ಲ? ಅಷ್ಟೇಕೆ ತಮ್ಮದೇ ಮನೆಯಲ್ಲಿ ಒಬ್ಬರು ತಿಂದುಂಡ ಎಲೆಯ ಮೇಲೆ ಇನ್ನೊಬ್ಬರು ಉರುಳಾಡಬಹುದಲ್ಲವೇ?<br />
<br />
ವಾದ-ವಿವಾದಗಳು ಏನೇ ಇರಲಿ, ಮಡೆಸ್ನಾನ ಹಿಂದೆ ದೇವಸ್ಥಾನಗಳ ಮುಂದೆ ನಡೆಯುತ್ತಿದ್ದ ಬೆತ್ತಲೆ ಸೇವೆಯಷ್ಟೆ ಅಸಹ್ಯ. ಬೆತ್ತಲೆ ಸೇವೆ ನಿಷೇಧವಾದ ಮೇಲೆ ಮಡೆಸ್ನಾನವೂ ನಿಷೇಧವಾಗಬೇಕು.<br />
<br />
ಅದಕ್ಕೂ ಮುನ್ನ ದೇವಸ್ಥಾನಗಳಲ್ಲಿ ನಡೆಯುವ ಪಂಕ್ತಿಭೇದ ನಿಷೇಧವಾಗಬೇಕು. ಬ್ರಾಹ್ಮಣರಿಗೊಂದು ಪಂಕ್ತಿ, ಬ್ರಾಹ್ಮಣೇತರರಿಗೆ ಒಂದು ಪಂಕ್ತಿಯಲ್ಲಿ ಊಟ ಬಡಿಸುವ ಸಂಪ್ರದಾಯ ಕರ್ನಾಟಕದ ಹಲವಾರು ದೇವಸ್ಥಾನಗಳಲ್ಲಿವೆ. ಸರ್ಕಾರದ ಅಧೀನದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲೂ ಈ ನೀಚ ಸಂಪ್ರದಾಯ ಜಾರಿಯಲ್ಲಿದೆ. ಇದು ಅನಾಗರಿಕ ಮಾತ್ರವಲ್ಲ, ಸಂವಿಧಾನ ವಿರೋಧಿಯೂ ಹೌದು. ಇದನ್ನು ಸಾಂಪ್ರದಾಯಿಕ ಪಂಕ್ತಿ, ಸಾರ್ವಜನಿಕ ಪಂಕ್ತಿ ಎಂದು ಪೇಜಾವರ ಸ್ವಾಮೀಜಿಯವಂಥವರು ಸಮರ್ಥಿಸಿಕೊಳ್ಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಷ್ಟು ಸಹಬಾಳ್ವೆ ನಮ್ಮಿಂದ ಸಾಧ್ಯವಾಗದಿದ್ದರೆ ಮನುಷ್ಯರಾಗಿದ್ದುಕೊಂಡು ಪ್ರಯೋಜನವೇನು?<br />
<br />
ಮಡೆಸ್ನಾನ-ಪಂಕ್ತಿಭೇದದಂಥ ಸಂಪ್ರದಾಯಗಳು ಇವತ್ತಿನ ದಿನಮಾನದಲ್ಲಿ ಸಾಕಷ್ಟು ಬ್ರಾಹ್ಮಣರಿಗೇ ಮುಜುಗರ ಹುಟ್ಟಿಸುವ ಆಚರಣೆಗಳು. ಇದನ್ನು ಮಾನವಂತ ಬ್ರಾಹ್ಮಣರು ಒಪ್ಪುವುದೂ ಇಲ್ಲ. ಪಂಕ್ತಿಭೇದದ ಕಾರಣಕ್ಕೆ ದೇವಸ್ಥಾನಗಳಲ್ಲಿ ಊಟ ಮಾಡದೇ ಹೊರಬರುವ ಜೀವಪರ ಬ್ರಾಹ್ಮಣರೂ ಇದ್ದಾರೆ. ಹಾಗೆಯೇ ಪಂಕ್ತಿಭೇದದ ಕಾರಣಕ್ಕೆ ಪ್ರತಿಭಟನಾರ್ಥವಾಗಿ ಈ ದೇವಸ್ಥಾನಗಳಲ್ಲಿ ಊಟ ಮಾಡದ ಶೂದ್ರರೂ ಇದ್ದಾರೆ.<br />
<br />
ಇದೆಲ್ಲವನ್ನೂ ಜಾತಿಯ ಚೌಕಟ್ಟಿನಿಂದ ಮೀರಿ ನೋಡಿದಾಗ ಮಾತ್ರ ನಮ್ಮೊಳಗಿನ ಮಾನವೀಯತೆ ಎದ್ದುನಿಲ್ಲಬಹುದು. ವರ್ಣಾಶ್ರಮದ ಕಾಲ ಆಗಿಹೋಗಿದೆ. ಇನ್ನೂ ಅದೇ ಅಸಹ್ಯದಲ್ಲಿ ಜೋತು ಬೀಳುವುದು ಬ್ರಾಹ್ಮಣರಿಗಾಗಲೀ, ಶೂದ್ರರಿಗಾಗಲೀ ಶ್ರೇಯಸ್ಕರವಲ್ಲ. ಅದು ಯಾವ ಜಾತಿ-ಜನಾಂಗವನ್ನೂ ಪುರೋಗಾಮಿಯಾಗಿ ಬೆಳೆಸುವುದಿಲ್ಲ.<br />
<br />
ಮನುಷ್ಯ-ಮನುಷ್ಯರಲ್ಲಿ ಕಂದಕ ಮೂಡಿಸುವ ನೀಚ ಆಚರಣೆಗಳನ್ನು ಸರ್ಕಾರ-ಸಮಾಜ ಕಿತ್ತುಹಾಕದ ಹೊರತು ಇಂಥವುಗಳಿಂದ ಬಿಡುಗಡೆಯೂ ಇಲ್ಲ. ಮಡೆಸ್ನಾನದ ಪ್ರಸ್ತಾಪ ಆಗುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಎಲ್ಲ ದೇವಸ್ಥಾನಗಳಿಂದ ಪಂಕ್ತಿಭೇದದ ಅನಿಷ್ಠವನ್ನೂ ಅಳಿಸುವ ಸಂಬಂಧ ಬ್ರಾಹ್ಮಣ-ಶೂದ್ರಾದಿ ಜಾತಿಗಳ ಜನರು ಚಿಂತಿಸಬೇಕಿದೆ. ಪಂಕ್ತಿಭೇದವೂ ಅಸ್ಪೃಶ್ಯತೆಯ ಪರೋಕ್ಷ ಆಚರಣೆಯಾದ್ದರಿಂದ ಅದಕ್ಕೆ ಸಂವಿಧಾನ ವಿರೋಧಿಯೂ ಆಗುತ್ತದೆ. ಹೀಗಾಗಿ ಅದನ್ನೂ ಕಿತ್ತುಹಾಕುವ ಕೆಲಸ ಶೀಘ್ರವೇ ಆಗಬೇಕಿದೆ.<br />
</div>sampadakeeyahttp://www.blogger.com/profile/10834139994439066030noreply@blogger.com18tag:blogger.com,1999:blog-3901985173139732142.post-47630915044715797712011-12-02T20:02:00.000+05:302011-12-02T20:02:24.634+05:30ಪ್ರಶಸ್ತಿ-ಪ್ರತಿಭಟನೆ: ಒಂದು ಪುಟ್ಟ ಪ್ರತಿಕ್ರಿಯೆ<div dir="ltr" style="text-align: left;" trbidi="on"><br />
ಮಾನ್ಯರೆ,<br />
<br />
ಇಂದು ಮುಂಜಾನೆ ಪತ್ರಿಕೆ ತೆರೆಯುತ್ತಿದ್ದಂತೆ ಗಮನ ಸೆಳೆದಿದ್ದು ಎರಡು ಸುದ್ದಿಗಳು. ಎರಡೂ ಕೂಡ ಪತ್ರಿಕೋದ್ಯಮಕ್ಕೆ ಕುರಿತಾದ, ಒಂದೇ ನಮೂನೆಯ ಅಂಶವನ್ನು ಪ್ರತಿಪಾದಿಸುತ್ತಿದ್ದವು. ಒಂದು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದ ಚಿತ್ರ ಸುದ್ದಿಯಾದರೆ ಮತ್ತೊಂದು ಶಿವಮೊಗ್ಗದಲ್ಲಿನ ನಕಲಿ ರೋಲ್ ಕಾಲ್ ಪತ್ರಕರ್ತರ ವಿರುದ್ಧ ಕಾರ್ಯನಿರತ ಪತ್ರಕರ್ತರ ಪ್ರತಿಭಟನೆ. ಇದಕ್ಕೆ ಕಾರ್ಯ ಮರೆತವರ ವಿರುದ್ಧ ಕಾರ್ಯನಿರತರ ಪ್ರತಿಭಟನೆ ಎಂದು ಹೆಡ್ಡಿಂಗ್ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ವಿಷಯ ಅದಲ್ಲ.<br />
<br />
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿ ಹೆಸರಿದ್ದ ಪ್ರಜಾವಾಣಿಯ ಅಂಕಣಕಾರ ದಿನೇಶ್ ಅಮೀನಮಟ್ಟು ಅವರು ಪ್ರಶಸ್ತಿ ಸ್ವೀಕರಿಸಲಿಲ್ಲ. ಅದಕ್ಕೆ ವೈಯುಕ್ತಿಕವಾಗಿ ಅವರು ನೀಡುತ್ತಿರುವ ಕಾರಣ ಅನಾರೋಗ್ಯ. ಅದು ಅವರ ಅನಾರೋಗ್ಯವೋ ಪತ್ರಿಕೋದ್ಯಮದ ಅನಾರೋಗ್ಯವೋ ತಿಳಿದಿಲ್ಲ. ಬಹುಶಃ ಅಮಿನಮಟ್ಟು ಬರವಣಿಗೆಯನ್ನು ಗಮನಿಸಿದ ಯಾರಿಗೇ ಆಗಲಿ ಈ ಕುರಿತು ಸಂದೇಹ ಬರುವುದು ಸಹಜ. ಹಾಗಾಗಿ ಅವರೇ ಈ ಕುರಿತು ತಮ್ಮ ಅಂತರಾಳದ ನಿರ್ಧಾರದ ಬಗ್ಗೆ ಅನಾವರಣ ಮಾಡಿದರೆ ಚೆನ್ನಾಗಿರುತ್ತಿತ್ತು. ಇವತ್ತಿನ ಯುವ ಪತ್ರಕರ್ತರಿಗೆ, ಭ್ರಷ್ಟರಾಗದೆ ತೊಳಲಾಡುತ್ತಿರುವವರಿಗೆ ಇದು ಜೀವನ ಪ್ರೀತಿ ಜೊತೆಗೆ ಪತ್ರಿಕೋದ್ಯಮದ ಬಗ್ಗೆ ಮಮಕಾರ ಬೆಳೆಸಬಲ್ಲದು ಎಂಬುದು ನಂಬಿಕೆ.<br />
<br />
ಉಳಿದಿದ್ದು ಶಿವಮೊಗ್ಗ ಪತ್ರಕರ್ತರ ಪ್ರತಿಭಟನೆ ಸುದ್ದಿ. <i>ಸಂಪಾದಕೀಯ</i>ದಲ್ಲಿ ಶಿವಮೊಗ್ಗ ಪತ್ರಕರ್ತರ ಸೈಟು ಹಗರಣದ ಬಗ್ಗೆ ಪತ್ರಿಕಾ ಮಿತ್ರ ಹರ್ಷ ಕುಗ್ವೆ ಪ್ರಸ್ತಾಪಿಸಿದ್ದು ನಿಮಗೆ ನನಪಿರಬಹುದು. ಈಗಿನ ಪ್ರತಿಭಟನೆಯ ಮೂಲಸೆಲೆ ಅಲ್ಲಿಂದ ಆರಂಭವಾಗುತ್ತದೆ. ಅದು ಮತ್ತೊಂದು ಕತೆ.<br />
<br />
ಸದ್ಯ ಕಾರ್ಯನಿರತ ಪತ್ರಕರ್ತ ಮಿತ್ರರು ಶಿವಮೊಗ್ಗದಲ್ಲಿ ಪತ್ರ್ರಕರ್ತರ ಹೆಸರಿನ ಬ್ಲಾಕ್ ಮೇಲ್ ವಸೂಲಿ ವೀರರ ಬಗ್ಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆದರ ಅದರ ನೇತ್ರೃತ್ವದಲ್ಲಿರುವ ಮುಂಚೂಣಿ ಪತ್ರಕರ್ತ ಮಿತ್ರರ ಹೆಸರೀಗ ಕೆಎಚ್ಬಿ ಸೈಟ್ ಹಂಚಿಕೆ ವಿವಾದದಲ್ಲಿ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿದ್ದು ಇತ್ತೀಚೆಗೆ ಒಂಭತ್ತು ಮಂದಿಯ ಮೇಲೆ ಎಫ್ಐಆರ್ ಕೂಡಾ ದಾಖಲಾಗಿದೆ. ಈ ಎಫ್ಐಆರ್ ದಾಖಲಿಸಲು ಕೋರ್ಟು ಒಂದು ವರ್ಷದ ಹಿಂದೆಯೇ ಆದೇಶಿಸಿತ್ತು ಎಂಬ ಸುದ್ದಿ ಇದೆ. ಎಲ್ಲಿಗೆ ಬಂತು ಜಿಲ್ಲಾ ಪತ್ರಿಕೋದ್ಯಮ..??<br />
<br />
ವಂದನೆಗಳೊಂದಿಗೆ<br />
ಒಬ್ಬ ಯುವ ಪತ್ರಕರ್ತ<br />
</div>sampadakeeyahttp://www.blogger.com/profile/10834139994439066030noreply@blogger.com0tag:blogger.com,1999:blog-3901985173139732142.post-32655528068581193602011-11-21T18:20:00.000+05:302011-11-21T18:20:33.667+05:30ದಿನೇಶ್ ಅಮೀನ್ ಮಟ್ಟು ಹೇಳಿದ್ದು ಮತ್ತು ಹೇಳದೆ ಉಳಿದದ್ದು...<div dir="ltr" style="text-align: left;" trbidi="on"><br />
<a href="http://www.prajavani.net/web/include/story.php?news=2712&section=144&menuid=14">ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರ ವಿವಾದಾತ್ಮಕ ಹೇಳಿಕೆಗಳನ್ನು ಕುರಿತು ಪ್ರಜಾವಾಣಿಯ ಇಂದಿನ ಅನಾವರಣ ಅಂಕಣದಲ್ಲಿ ದಿನೇಶ್ ಅಮೀನ್ ಮಟ್ಟು ಬರೆದಿದ್ದಾರೆ.</a> ದಿನೇಶ್ ಅವರು ಮೊದಲ ಬಾರಿಗೆ ಅತ್ಯಂತ ಡಿಪ್ಲಮ್ಯಾಟಿಕ್ ಆಗಿ ಇದನ್ನು ಬರೆದಿದ್ದಾರಾ ಅನ್ನುವ ಅನುಮಾನ ನಮಗೆ. ಅನುಮಾನ ಯಾಕೆ ಅನ್ನೋದನ್ನು ಹೇಳುವ ಪ್ರಯತ್ನ ಮಾಡುತ್ತೇವೆ.<br />
<br />
<table cellpadding="0" cellspacing="0" class="tr-caption-container" style="float: left; margin-right: 1em; text-align: left;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEjXnRqWDSQ820INpaQm1gqg98Utvl_jHjc9p7eYkha9lF8l4DPUOPG-pUpLaAL5iA2AHVCttf64XVTOFdmQ6bb2klgn_Z_UqPBsFNc0owiuZ2uvTejamSZUokUPvOqFNGrBOndDJtPCrvrK/s1600/Markandey_Katju_300.jpg" imageanchor="1" style="clear: left; margin-bottom: 1em; margin-left: auto; margin-right: auto;"><img border="0" height="320" src="https://blogger.googleusercontent.com/img/b/R29vZ2xl/AVvXsEjXnRqWDSQ820INpaQm1gqg98Utvl_jHjc9p7eYkha9lF8l4DPUOPG-pUpLaAL5iA2AHVCttf64XVTOFdmQ6bb2klgn_Z_UqPBsFNc0owiuZ2uvTejamSZUokUPvOqFNGrBOndDJtPCrvrK/s320/Markandey_Katju_300.jpg" width="266" /></a></td></tr>
<tr><td class="tr-caption" style="text-align: center;"><span class="Apple-style-span" style="font-size: small;"><b>ಮಾರ್ಕಂಡೇಯ ಖಟ್ಜು </b></span></td></tr>
</tbody></table><a href="http://ibnlive.in.com/news/media-deliberately-dividing-people-pci-chief/197593-3.html">ಮಾರ್ಕಂಡೇಯ ಖಟ್ಜು ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತರುವಾಯ ಸಿಎನ್ಎನ್ ಐಬಿಎನ್ನ ಕರಣ್ ಥಾಪರ್ಗೆ ನೀಡಿದ ಸಂದರ್ಶನದಲ್ಲಿ ದೇಶದ ಮಾಧ್ಯಮಗಳ ಕುರಿತು ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು.</a> ಈ ಸಂಬಂಧ ಅಮೀನ್ ಮಟ್ಟು ಬರೆಯುವುದು ಹೀಗೆ: ..... ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರಾಗಿ ನ್ಯಾ. ಖಟ್ಜು ಹೇಳಿರುವ ಮಾತುಗಳು ಪತ್ರಕರ್ತನ್ನು ಕೆರಳಿಸಿವೆ. ಕೈಯಲ್ಲಿದ್ದ ಲೇಖನಿ ನಿಜಕ್ಕೂ ಖಡ್ಗವೇ ಆಗಿದ್ದರೆ ಖಟ್ಜು ಅವರ ತಲೆ ಇಷ್ಟೊತ್ತಿಗೆ ಹೋಳು ಹೋಳಾಗುತ್ತಿತ್ತು. ಅವರೂ ಬದುಕಿಕೊಂಡಿದ್ದಾರೆ. ನ್ಯಾ. ಖಟ್ಜು ಬಗ್ಗೆ ಪತ್ರಕರ್ತರಿಗೆ ಇಷ್ಟೊಂದು ಕೋಪ ಯಾಕೆ? ಸುಳ್ಳು ಹೇಳಿದ್ದಕ್ಕೋ, ಅಪ್ರಿಯವಾದ ಸತ್ಯ ಹೇಳಿದ್ದಕ್ಕೋ?....<br />
<br />
ನಿಜವಾದ ಮಾತೇ ಇದು? ದೇಶದ ಪತ್ರಕರ್ತರೆಲ್ಲ ಖಡ್ಜು ಮಾತಿನಿಂದ ಕೆರಳಿದ್ದಾರೆಯೇ? ಖಟ್ಜು ಅವರ ವಿರುದ್ಧ ಇಡೀ ಪತ್ರಕರ್ತ ಸಮೂಹವೇ ಕೋಪ ಮಾಡಿಕೊಂಡಿದೆಯೇ? ಖಟ್ಜು ಹೇಳಿರುವುದು ಅಕ್ಷರಶಃ ನಿಜ ಎಂದು ಹೇಳಬಲ್ಲ ಪತ್ರಕರ್ತರೇ ಇಲ್ಲವೇನು? ಬೇರೇನೂ ಬೇಡ. ಕರ್ನಾಟಕದ ಉದಾಹರಣೆ ತೆಗೆದುಕೊಳ್ಳೋಣ. ಖಟ್ಜು ಸಂದರ್ಶನ ಟಿವಿಯಲ್ಲಿ ಪ್ರಸಾರವಾಗಿ ಎಷ್ಟೋ ದಿನ ಕಳೆದ ನಂತರ ಪ್ರಜಾವಾಣಿಯಲ್ಲಿ ಒಂದು ತೀವ್ರ ಖಂಡನೆಯ ಸಂಪಾದಕೀಯ ಹೊರಬಂದಿತ್ತು. ಮತ್ತೆ ಒಂದೆರಡು ಪತ್ರಿಕೆಗಳಲ್ಲಿ ಸಣ್ಣಪುಟ್ಟ ಲೇಖನಗಳು ಪ್ರಕಟವಾದವು. ಅದನ್ನು ಹೊರತುಪಡಿಸಿದರೆ ಕರ್ನಾಟಕದ ಮೀಡಿಯಾ ಲೋಕ ತಣ್ಣಗೆ ಇದೆ. ಯಾರೂ ಪೆನ್ನನ್ನು ಖಡ್ಗ ಮಾಡಿಕೊಂಡಿದ್ದನ್ನು ನಾವು ಕಾಣೆವು. ಕಡೇ ಪಕ್ಷ ಪತ್ರಕರ್ತರಿಗೆ ಸಂಬಂಧಿಸಿದ ಸಂಘಟನೆಗಳೂ ಬಾಯಿಬಿಚ್ಚಿದ್ದನ್ನು ನಾವು ನೋಡಲಿಲ್ಲ. (ಮಾಹಿತಿ ಕೊರತೆಯಿಂದ ಬಾಯಿಬಿಟ್ಟಿಲ್ಲದೆಯೂ ಇರಬಹುದು!) ಖಟ್ಜು ಮಾತುಗಳಿಗೆ ಇಡೀ ಪತ್ರಿಕಾ ಸಮೂಹ ಸಿಟ್ಟಿಗೆದ್ದಿದೆ ಎಂದು ಅಮೀನ್ಮಟ್ಟು ಯಾಕೆ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ?<br />
<br />
ಹಾಗೆ ನೋಡಿದರೆ ದಿನೇಶ್ ಅವರು ಖಟ್ಜು ಆಡಿರುವ ಎಲ್ಲ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ. ಖಟ್ಜು ಯಾವ ಆದರ್ಶಗಳನ್ನು ಪತ್ರಕರ್ತರಿಂದ ಬಯಸುತ್ತಿದ್ದಾರೋ ಆ ಆದರ್ಶಗಳನ್ನು ಹೊಂದಿರುವ ಅಪರೂಪದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು. ಹೀಗಾಗಿ ಖಟ್ಜು ಅವರು ಮಾಧ್ಯಮಗಳ ಕುರಿತು ಆಡಿರುವ ಅನೇಕ ಮಾತುಗಳಿಗೆ ಅವರ ಪರೋಕ್ಷ ಸಮ್ಮತಿ ಇದೆ. ಖಟ್ಜು ಹೇಳುವ ರೀತಿ ಸರಿಯಿಲ್ಲವೆಂಬುದು ಅವರ ಆಪಾದನೆ. ಖಟ್ಜು ಆರೋಪಗಳೆಲ್ಲವೂ ಹಳೆಯವು ಎಂಬುದು ಅವರ ಟೀಕೆ. (ಹಳೇ ಆರೋಪಗಳು ಅಪ್ರಸ್ತುತ ಯಾಕಾಗಬೇಕು? ಅಷ್ಟಕ್ಕೂ ಈ ಸಂದರ್ಶನದಲ್ಲಿ ಕರಣ್ ಎತ್ತಿದ ಪ್ರಶ್ನೆಗಳಿಗೆ ಖಟ್ಜು ಉತ್ತರಿಸುತ್ತಾ ಹೋಗಿದ್ದಾರಷ್ಟೆ.) ಆಡುವ ಮಾತುಗಳಲ್ಲಿ ಎಷ್ಟೇ ಸತ್ಯ-ಪ್ರಾಮಾಣಿಕತೆಗಳಿರಲಿ, ಹೇಳುವ ರೀತಿ ಸರಿ ಇಲ್ಲದೇ ಇದ್ದರೆ ಮಾತು ಸೋತುಹೋಗುತ್ತದೆ. ಅತಿರೇಕಕ್ಕೆ ಹೋದರೆ ಬಾಯಿಬಡುಕತನವಾಗುತ್ತದೆ ಎಂದು ದಿನೇಶ್ ಹೇಳುತ್ತಾರೆ.<br />
<br />
ನ್ಯಾಯಸ್ಥಾನದಲ್ಲಿ ಕುಳಿತುಕೊಂಡವರು ಪ್ರಾಮಾಣಿಕರಾಗಿದ್ದರೂ ಸಣ್ಣಪ್ರಮಾಣದ (ಕೆಲವೊಮ್ಮೆ ದೊಡ್ಡಪ್ರಮಾಣದ) ಬಾಯಿಬಡುಕುತನ ಪ್ರದರ್ಶನ ತೋರುತ್ತಿರುವುದು ದಿನೇಶ್ ಅವರಿಗೆ ಗೊತ್ತಿಲ್ಲದ ವಿದ್ಯಮಾನವೇನೂ ಅಲ್ಲ. ಕರ್ನಾಟಕದ ಉದಾಹರಣೆ ಕೊಡುವುದಾದರೆ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ನ್ಯಾ.ವೆಂಕಟಾಚಲ ಹಾಗು ನ್ಯಾ ಸಂತೋಷ್ ಹೆಗ್ಡೆ ಅವರಿಬ್ಬರೂ ಈ ಅಪವಾದದಿಂದ ಮುಕ್ತರಾಗಿರಲಿಲ್ಲ. ಆದರೆ ಮಾತು ಅತಿರೇಕವಾಯಿತು ಎನ್ನುವ ಕಾರಣಕ್ಕೂ ಮಾತಿನ ಹಿಂದಿನ ಆಶಯಗಳೆಲ್ಲವೂ ತಿರಸ್ಕಾರಕ್ಕೆ ಯೋಗ್ಯವಾಗುತ್ತವೆಯೇ?<br />
<br />
ದಿನೇಶ್ ಅವರೂ ಸೇರಿದಂತೆ ಖಟ್ಜು ಅವರನ್ನು ವಿರೋಧಿಸುತ್ತಿರುವುದು ಅವರು ಸಂದರ್ಶನದಲ್ಲಿ ಆಡಿದ ಕೆಲವು ಸಡಿಲ ಮಾತುಗಳನ್ನು ಮಾತ್ರ. ಪತ್ರಕರ್ತರಿಗೆ ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಾಹಿತ್ಯ, ಫಿಲಾಸಫಿ ಇತ್ಯಾದಿಗಳಲ್ಲಿ ಪರಿಣತಿ ಇಲ್ಲ ಎಂಬ ಅವರ ಮಾತುಗಳನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪದೇ ಪದೇ ದಾಳಿ ನಡೆಸಲಾಗುತ್ತಿದೆ. ಇಲ್ಲಿ ಪತ್ರಕರ್ತರಿಗೆ ಎಂಬ ಶಬ್ದದ ಹಿಂದೆ ಕೆಲವು ಅಂತಲೋ, ಬಹುತೇಕ ಅಂತಲೋ ಒಂದು ಪದಬಳಕೆಯಾಗಿದ್ದರೆ ಈ ವಿಷಯದ ಚರ್ಚೆಯೇ ಅಸಾಧ್ಯವಾಗುತ್ತಿತ್ತು. ಖಟ್ಜು ಆತುರದಲ್ಲಿ ಅದನ್ನು ಮರೆತಿದ್ದಾರೆ. ಹೀಗಾಗಿ ಪೆನ್ನುಗಳು ಖಡ್ಗಗಳಾಗುತ್ತಿವೆ.<br />
<br />
ಖಟ್ಜು ಹೇಳದೇ ಉಳಿದದ್ದನ್ನು ಹೇಳುವ ಆತುರದಲ್ಲಿ ದಿನೇಶ್ ಅವರು ಒಂದು ಸ್ಪಷ್ಟ ಲೋಪವನ್ನು ಉಳಿಸಿದ್ದಾರೆ. ಖಟ್ಜು ಮಾಧ್ಯಮ ಭ್ರಷ್ಟಾಚಾರ, ಕಾಸಿಗಾಗಿ ಸುದ್ದಿ ಕುರಿತು ಯಾಕೆ ಮಾತನಾಡಲಿಲ್ಲ ಎಂದು ಆಕ್ಷೇಪಣೆ ತೆಗೆದಿದ್ದಾರೆ. ಕರಣ್ ಜತೆಗಿನ ಸಂದರ್ಶನದಲ್ಲಿ ಖಟ್ಜು ಈ ವಿಷಯಯನ್ನು ಕಟುವಾಗಿಯೇ ಪ್ರಸ್ತಾಪಿಸಿದ್ದಾರೆ. ಹಿಂದೆಲ್ಲ ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರೇ ೧೦,೦೦೦ ರೂ. ಪಡೆದು ಅಭ್ಯರ್ಥಿಗಳ ಪರವಾಗಿ ಬರೆಯುತ್ತಿದ್ದರು. ಇದನ್ನು ಗಮನಿಸಿದ ಮ್ಯಾನೇಜ್ಮೆಂಟುಗಳು ತಾವೇ ಲಾಭ ಮಾಡಿಕೊಳ್ಳಲು ಕಾಸಿಗಾಗಿ ಸುದ್ದಿ ದಂಧೆಯನ್ನು ಆರಂಭಿಸಿದವು ಎಂದು ಖಟ್ಜು ಹೇಳಿರುವುದನ್ನು ದಿನೇಶ್ ಪ್ರಮಾದವಶಾತ್ ಮರೆತಿದ್ದಾರೆ. ಒಂದೇ ಪತ್ರಿಕೆಯಯಲ್ಲಿ ಇಬ್ಬರು ಅಭ್ಯರ್ಥಿಗಳ ಪರವಾಗಿ ಕಾಸಿಗಾಗಿ ಸುದ್ದಿಗಳು ಪ್ರಕಟವಾದಾಗ ಆದ ಅವಾಂತರಗಳನ್ನೂ ಖಟ್ಜು ನೆನಪಿಸಿಕೊಂಡಿದ್ದಾರೆ.<br />
<br />
ಬಹಳ ಮುಖ್ಯವಾಗಿ ಖಟ್ಜು ಅವರ ಸಿಟ್ಟು ಇರುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು. ಈ ಮಾಧ್ಯಮಗಳಲ್ಲಿ ನಡೆಯುತ್ತಿರುವ ಜ್ಯೋತಿಷಿಗಳ ವಿಜೃಂಭಣೆ, ಕ್ರಿಕೆಟ್-ಸಿನಿಮಾಗಳಿಗೆ ದಕ್ಕುವ ಪ್ರಾಶಸ್ತ್ಯ, ತೇಜೋವಧೆ, ಜನಗಳನ್ನು ಉದ್ದೇಶಪೂರ್ವಕವಾಗಿ ಒಡೆಯುವ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ಖಟ್ಜು ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿ ಪ್ರೆಸ್ ಕೌನ್ಸಿಲ್ನ ಅಡಿಯಲ್ಲೇ ಈ ಚಾನಲ್ಗಳನ್ನೂ ತರುವ ಪ್ರಸ್ತಾಪ ಮಾಡಿದ್ದಾರೆ. ಈ ಕುರಿತು ಪ್ರಧಾನಿಗೂ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ. ಪ್ರೆಸ್ ಕೌನ್ಸಿಲ್ ಅನ್ನು ಮೀಡಿಯಾ ಕೌನ್ಸಿಲ್ ಆಗಿ ಬದಲಾಯಿಸಬೇಕಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಷಯವೇ ಗಂಭೀರವಾಗಿ ಚರ್ಚೆಯಾಗಬೇಕಿತ್ತಲ್ಲವೇ? ಇದಕ್ಕೆ ಹೊರತಾಗಿ ಪತ್ರಕರ್ತರ ಕೌಶಲ್ಯದ ವಿಷಯವೇ ಚರ್ಚೆಯ ವಿಷಯವಾಗಿದ್ದು ಏಕೆ?<br />
<br />
<table cellpadding="0" cellspacing="0" class="tr-caption-container" style="float: right; margin-left: 1em; text-align: right;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhnRsKAa6Z6Xy2ai8dEEyvO7Ddd7iSVN_scuoxxaKUl81kCIcnKqElJJF8WAdEiZTZFn1fmPNJh_Jf1jS25HpJAwmy-VDSFZDUHIlZ9j6kwHAANX0CTxyb3K2ruGexCB_CwnvX3OTx2w7fp/s1600/mattu-1.jpg" imageanchor="1" style="clear: right; margin-bottom: 1em; margin-left: auto; margin-right: auto;"><img border="0" height="240" src="https://blogger.googleusercontent.com/img/b/R29vZ2xl/AVvXsEhnRsKAa6Z6Xy2ai8dEEyvO7Ddd7iSVN_scuoxxaKUl81kCIcnKqElJJF8WAdEiZTZFn1fmPNJh_Jf1jS25HpJAwmy-VDSFZDUHIlZ9j6kwHAANX0CTxyb3K2ruGexCB_CwnvX3OTx2w7fp/s320/mattu-1.jpg" width="320" /></a></td></tr>
<tr><td class="tr-caption" style="text-align: center;"><b><span class="Apple-style-span" style="font-size: small;">ದಿನೇಶ್ ಅಮೀನ್ ಮಟ್ಟು</span></b></td></tr>
</tbody></table>ಕಡೆಯದಾಗಿ ಪ್ರೆಸ್ ಕೌನ್ಸಿಲ್ಗೆ ಇನ್ನೊಂದಿಷ್ಟು ಅಧಿಕಾರ ಬೇಕು ಎಂದು ಖಟ್ಜು ಹೇಳಿದ್ದಾರೆ. ನಿಜವಾಗಿಯೂ ಪತ್ರಿಕೋದ್ಯಮಿಗಳನ್ನು (ಎಲ್ಲಾ ಪತ್ರಕರ್ತರನ್ನಲ್ಲ) ಕೆರಳಿಸಿರುವುದು ಇದೇ ವಿಷಯ. ಖಟ್ಜು ಒಂದು ಬಗೆಯ ಮೂಗುದಾರ ಬೇಕು ಎನ್ನುತ್ತಿದ್ದಾರೆ. ಮಾಧ್ಯಮಗಳು ಹಾದಿ ತಪ್ಪಿ ಹೋಗಿರುವುದರಿಂದಲೇ ಈ ಮೂಗುದಾರದ ಪ್ರಸ್ತಾಪ ಮಾಡುತ್ತಿದ್ದಾರೆ. ಪತ್ರಕರ್ತರು ಒಂದೇ ಸ್ವಯಂ ನಿಯಂತ್ರಣದ ಹಾದಿ ತುಳಿಯಬೇಕು, ಅಥವಾ ಇನ್ಯಾವುದೋ ಸಂಸ್ಥೆಯ-ನ್ಯಾಯಮಂಡಳಿಯ ಮೂಗುದಾರಕ್ಕೆ ಒಳಗಾಗಬೇಕು. ಹೀಗಾಗಿಯೇ ಖಟ್ಜು ಇದನ್ನು ಹೇಳಿದ್ದಾರೆ. ಒಂದು ವೇಳೆ ಹೆಚ್ಚು ಅಧಿಕಾರ ದೊರೆತರೂ, ತಪ್ಪು ಮಾಡಿದ ಮಾಧ್ಯಮ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವುದು ವಿರಳಾತಿವಿರಳ ಸಂದರ್ಭಗಳಲ್ಲಿ ಎಂದು ಅವರು ಪದೇಪದೇ ಸ್ಪಷ್ಟಪಡಿಸಿದ್ದಾರೆ. ಆದರೆ ಇಂಡಿಯಾದ ಮೀಡಿಯಾ ಯಾರ ಅಂಕೆಯಲ್ಲೂ ಇರಲು ಒಲ್ಲದು. ಹೀಗಾಗಿ ಸಕಾರಣವಾಗಿಯೇ ವಿರೋಧಗಳು ಎದ್ದಿವೆ. ರಾಷ್ಟ್ರಮಟ್ಟದ ಪತ್ರಿಕಾ ಸಂಘಟನೆಗಳು ಅಮೀನ್ ಮಟ್ಟು ಹೇಳಿದಂತೆ ಕತ್ತಿ ಝಳಪಿಸುತ್ತಿವೆ. ಹೀಗೆ ಬೇಕಾದವರ ಮೇಲೆ ಕತ್ತಿ ಝಳಪಿಸುವ ಸ್ವಾತಂತ್ರ್ಯ ಮಾಧ್ಯಮಗಳಿವೆ. ಅದನ್ನು ಅವು ಪರಿಪೂರ್ಣವಾಗಿ ಬಳಸಿಕೊಳ್ಳುತ್ತಿವೆ.<br />
<br />
ಅಷ್ಟಕ್ಕೂ ಖಟ್ಜು ಹೇಳಿದಂತೆ ಪರಿಪೂರ್ಣವಾದ ಸ್ವಾತಂತ್ರ್ಯ ಎಂಬುದು ಇರಬೇಕಾ? ಸಾರ್ವಜನಿಕ ಬದುಕಿನ ಪ್ರತಿಯೊಬ್ಬರೂ ಯಾರಿಗಾದರೂ ಉತ್ತರದಾಯಿ ಆಗಲೇಬೇಕಲ್ಲವೇ? ಮಾನನಷ್ಟ ಕಟ್ಲೆಗಳಂಥ ಬಹುತೇಕ ಸಂದರ್ಭದಲ್ಲಿ ನಿರುಪಯೋಗಿಯಾದ, ನ್ಯಾಯಕ್ಕಾಗಿ ವರ್ಷಗಟ್ಟಲೆ ಕಾಲ ಅಂಗಲಾಚಬೇಕಾದ ಮಾರ್ಗವನ್ನು ಹೊರತುಪಡಿಸಿದರೆ ಮಾಧ್ಯಮಗಳಿಂದ ನೊಂದವರಿಗೆ ನ್ಯಾಯ ದೊರೆಯುವುದಕ್ಕೆ ಮಾರ್ಗ ಬೇಡವೇ? ಮಾನನಷ್ಟ ಕಟ್ಲೆಯಂಥವು ವೈಯಕ್ತಿಕ ತೇಜೋವಧೆಯಂಥ ಪ್ರಕರಣಗಳಿಗೆ ಸಂಬಂಧಿಸಿದ್ದವು. ಇಡೀ ಸಮಾಜವನ್ನೇ ದಿಕ್ಕುಗೆಡಿಸುವ ಪತ್ರಿಕಾಸಂಸ್ಥೆಗಳನ್ನು ಯಾವ ಕಾನೂನಿನ ಅಡಿಯಲ್ಲಿ ತರುವುದು? ಸದಾ ಕತ್ತಿಯಂಥ ಪೆನ್ನನ್ನು ಹಿಡಿದುಕೊಂಡೇ ಓಡಾಡುವವರನ್ನು ಎದುರಿಸಿ ನಿಲ್ಲುವವರಾದರೂ ಯಾರು?<br />
<br />
ಜನಲೋಕಪಾಲದ ಮೂಲಕ ನಿಯಂತ್ರಣಕ್ಕೆ ಮಾಧ್ಯಮಗಳನ್ನು ಒಪ್ಪಿಸಿದರೆ ಹೇಗೆ ಎಂಬ ಪ್ರಶ್ನೆಯೊಂದನ್ನು ದಿನೇಶ್ ಅಮೀನ್ ಮಟ್ಟು ತಮ್ಮ ಅಂಕಣದ ಕೊನೆಯಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ವೇಳೆ ಮಾಧ್ಯಮ ಭ್ರಷ್ಟಾಚಾರವನ್ನು ಜನಲೋಕಪಾಲಕ್ಕೆ ವಹಿಸಿದರೆ, ಭ್ರಷ್ಟ ಪತ್ರಕರ್ತರಿಗೆ ಶಿಕ್ಷೆಯಾಗಬಹುದು ಎಂದು ಒಪ್ಪಿಕೊಳ್ಳೋಣ. ಆದರೆ ಮಾಧ್ಯಮಗಳ ಇತರ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕುವವರು ಯಾರು? ಧರ್ಮದ ಹೆಸರಲ್ಲಿ ದೇಶ ಒಡೆಯುವ ಪತ್ರಕರ್ತರನ್ನು ಏನು ಮಾಡುವುದು? ಮೌಢ್ಯವನ್ನು ಪ್ರಜ್ಞಾಪೂರ್ವಕವಾಗಿ ಹರಡಿ ಜನರನ್ನು ಪಾತಾಳಕ್ಕೆ ತಳ್ಳುವವರನ್ನೇನು ಮಾಡೋದು? ಖಟ್ಜು ಹೇಳಿದಂತೆ ಹಸಿವು, ದಾರಿದ್ರ್ಯ ದೇಶದ ತುಂಬೆಲ್ಲ ಹರಡಿರುವಾಗ ಕರೀನಾ ಕಪೂರ್, ಐಶ್ವರ್ಯ ರೈಗಳ ಸುತ್ತ ಸುತ್ತುತ್ತ ವಂಚನೆ ಎಸಗುತ್ತಿರುವ, ನಿಜ ಸಮಸ್ಯೆಗಳನ್ನು ಮರೆಮಾಚುತ್ತಿರುವ ಮಾಧ್ಯಮಗಳನ್ನು ಏನು ಮಾಡುವುದು?<br />
<br />
ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುವುದರಿಂದ, ಮಂಡಳಿಗೆ ಅಧಿಕಾರ ದೊರೆತರೆ ಸರ್ಕಾರ ಮೀಡಿಯಾ ವ್ಯವಹಾರದಲ್ಲಿ ಕೈಹಾಕಬಹುದು ಎಂಬುದು ದಿನೇಶ್ ಹಾಗು ಇದನ್ನು ವಿರೋಧಿಸುತ್ತಿರುವ ಎಲ್ಲರ ಕಾಳಜಿ. ಆದರೆ ಪ್ರಜಾತಂತ್ರದಲ್ಲಿ ನ್ಯಾಯಾಧೀಶರಿಂದ ಹಿಡಿದು ಪೊಲೀಸರವರೆಗೆ ಎಲ್ಲರನ್ನೂ ನೇಮಿಸುವುದು ಸರ್ಕಾರವೇ ಅಲ್ಲವೇ? ಸರ್ಕಾರ ನೇಮಿಸಿದ ಪೊಲೀಸರು ಎಂಬ ಕಾರಣಕ್ಕೆ ಪೊಲೀಸರ ಅಡಿಯಲ್ಲಿ ನಾವು ಬರುವುದಿಲ್ಲವೆಂದು ಸಾಮಾನ್ಯ ಪ್ರಜೆ ಹೇಳಲು ಸಾಧ್ಯವೇ? ಎಲ್ಲರೂ ಸರ್ಕಾರದ ನೀತಿ ನಿರೂಪಣೆಗಳಿಂದ ಹೊರಗಿರಲು ಬಯಸುವುದಾದರೆ ಪ್ರಜಾತಂತ್ರ ವ್ಯವಸ್ಥೆ ಉಳಿಯುವುದಾದರೂ ಹೇಗೆ?<br />
<br />
ಆಧುನಿಕ ಸಮಾಜವಾಗಿ ಬದಲಾಗುವ ಸಂಕ್ರಮಣದ ಕಾಲಘಟ್ಟದಲ್ಲಿ ಭಾರತದಲ್ಲಿ ಈ ಸಂಕ್ರಮಣದ ಸ್ಥಿತಿಗೆ ಮಾಧ್ಯಮಗಳು ಸ್ಪಂದಿಸುತ್ತಿಲ್ಲ ಎಂದು ಖಟ್ಜು ಯೂರೋಪ್ನ ಉದಾಹರಣೆ ನೀಡಿ ಆಕ್ಷೇಪವೆತ್ತಿದ್ದಾರೆ. ಪತ್ರಕರ್ತರು ಜನಪರವಾಗಿಲ್ಲ ಎಂಬುದು ಅವರ ಮುಖ್ಯ ಹೇಳಿಕೆ. ಇದಲ್ಲವೇ ಮುಖ್ಯವಾಗಿ ಚರ್ಚಿಸಬೇಕಾದ ವಿಷಯ?<br />
<br />
ಒಂದಂತೂ ನಿಜ, ನ್ಯಾಯಮಂಡಳಿ ಅಧ್ಯಕ್ಷರ ಹೇಳಿಕೆಗೆ ಈ ಪರಿಯಲ್ಲಿ ಮಾಧ್ಯಮಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ಹಿಡಿತದಲ್ಲಿರುವ ಪತ್ರಕರ್ತ ಸಂಘಟನೆಗಳು ವೀರಾವೇಶದಲ್ಲಿ ಹಾರಾಡುತ್ತಿರುವುದನ್ನು ನೋಡಿದರೆ, ಒಂದೊಮ್ಮೆ ಸರ್ಕಾರ ಪ್ರೆಸ್ ಕೌನ್ಸಿಲ್ಗೆ ಹೆಚ್ಚುವರಿ ಅಧಿಕಾರ ದೊರೆತರೆ ಯಾವ ಪ್ರಮಾಣದಲ್ಲಿ ಗಂಟಲು ಹರಿದುಕೊಳ್ಳಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಹೀಗಾಗಿ ಮಾಧ್ಯಮ ಸಂಸ್ಥೆಗಳು ನೆಮ್ಮದಿಯಾಗಿರಬಹುದು. ಅವುಗಳ ಸ್ವೇಚ್ಛೆಗೆ ಅಡ್ಡಿ ಬರುವವರನ್ನು ಅವುಗಳು ಎಂದಿಗೂ ಸಹಿಸಿಕೊಳ್ಳುವುದಿಲ್ಲ.<br />
<br />
ದಿನೇಶ್ ಅಮೀನ್ಮಟ್ಟು ಹೇಳಬೇಕಾಗಿದ್ದನ್ನು ಪೂರ್ತಿ ಹೇಳಲು ಸಾಧ್ಯವಾಗಿಲ್ಲವೇನೋ? ಹೀಗಾಗಿ ಅವರು ಹೇಳದೇ ಉಳಿದ ಮಾತುಗಳನ್ನು ಹೇಳಲು ಇಲ್ಲಿ ಯತ್ನಿಸಿದ್ದೇವೆ. ಅಷ್ಟಾಗಿಯೂ ಈ ಮಟ್ಟಿಗಿನ ನಿರ್ಭೀತ ಬರವಣಿಗೆಗಾಗಿ ಅವರಿಗೊಂದು ಥ್ಯಾಂಕ್ಸ್.<br />
<br />
<b>ಕೊನೆಕುಟುಕು:</b> ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಸಚಿವ ವಿ. ಸೋಮಣ್ಣ ಜತೆ ಹಮೀದ್ ಪಾಳ್ಯ ಸುವರ್ಣ ನ್ಯೂಸ್ನಲ್ಲಿ ಸಂದರ್ಶನ ನಡೆಸಿದರು. ಹಂಗಾದ್ರೆ ನೀವು ಯಾವುದೇ ಅಪರಾಧ ಎಸಗಿಲ್ಲ, ಅವ್ಯವಹಾರ ನಡೆಸಿಲ್ಲ, ನಿಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಅಂತ ನೀವು ಹೇಳ್ತೀರಾ.... ಎಂದು ಹಮೀದ್ ಪದೇ ಪದೇ ಸೋಮಣ್ಣಗೆ ಕೇಳುತ್ತಿದ್ದರು. ಸೋಮಣ್ಣ ಹೇಳಬೇಕಾದ ಮಾತುಗಳನ್ನು ಹಮೀದ್ ಯಾಕೆ ಸಜ್ಜೆಸ್ಟ್ ಮಾಡ್ತಾ ಇದ್ರು? ಸೋಮಣ್ಣ ವಿರುದ್ಧ ದೂರು ದಾಖಲಾದ ನಂತರ ಇದು ರಾಜಕೀಯ ಪ್ರೇರಿತ ದೂರು ಎಂಬ ಅರ್ಥದ ವರದಿಯೊಂದು ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಸುವರ್ಣದಲ್ಲಿ ಈಗ ಸೋಮಣ್ಣಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆದಿದೆ. ಹೀಗಿರುವಾಗ ಲೋಕಾಯುಕ್ತ ಕೋರ್ಟು ಯಾಕೆ ಬೇಕು ಅಲ್ಲವೇ?<br />
</div>sampadakeeyahttp://www.blogger.com/profile/10834139994439066030noreply@blogger.com10tag:blogger.com,1999:blog-3901985173139732142.post-48285687005981160532011-11-16T12:25:00.002+05:302011-11-16T13:17:06.732+05:30ವಿನೋದ್ ಮೆಹ್ತಾ ಆತ್ಮಕತೆ ಮತ್ತು ಅದರ ಅನುವಾದ<div dir="ltr" style="text-align: left;" trbidi="on"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEivemHf9IlUcms0g2y7SII8nfwpwL6b7OT9agSEawbkK5lGwHk7bsHecxS2xrx8B5eniGPtEqhGLOrwgr-FusKa3whgJhvQm_LroMCSan2p_8sZp7oELSr297h5wl_hRkQ8VJ4ExcD-0Ynl/s1600/mehta.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEivemHf9IlUcms0g2y7SII8nfwpwL6b7OT9agSEawbkK5lGwHk7bsHecxS2xrx8B5eniGPtEqhGLOrwgr-FusKa3whgJhvQm_LroMCSan2p_8sZp7oELSr297h5wl_hRkQ8VJ4ExcD-0Ynl/s1600/mehta.jpg" /></a></div><span style="font-family: Tunga; font-size: 10pt;">ನಲವತ್ತು ವರ್ಷಗಳ ಸುದೀರ್ಘ ಕೆಲಸದ ನಂತರವೂ ಒಂದೇ ಒಂದು ಪ್ರೊಮೋಷನ್ ಇಲ್ಲದೆ ಇರುವ ಪತ್ರಕರ್ತ ಬಹುಶಃ </span><span style="font-family: Tunga; font-size: 10pt;">ವಿನೋದ್ ಮೆಹ್ತಾ ಒಬ್ಬರೇ ಇರಬೇಕು. ಕಾರಣ ಇಷ್ಟೆ, ಅವರು ನಾಲ್ಕು ದಶಕಗಳ ಹಿಂದೆ ಪತ್ರಿಕೋದ್ಯಮಕ್ಕೆ ಕಾಲಿಟ್ಟದ್ದು ಸಂಪಾದಕರಾಗಿ. ಈಗಲೂ ಅದೇ ಸ್ಥಾನದಲ್ಲಿದ್ದಾರೆ. ಅವರು ಪತ್ರಿಕೆಗಳನ್ನು ಬೆಳೆಸಿದ ರೀತಿ, ಲಕ್ಷಾಂತರ ಓದುಗ ಸಮೂಹದ ಯೋಚನೆಗಳನ್ನು ಪ್ರಭಾವಿಸಿದ ಪರಿ ಮಾತ್ರ ರೋಚಕ.<o:p></o:p></span><br />
<span style="font-family: Tunga; font-size: 10pt;">ಅವರ ಆತ್ಮಕತೆ '</span><span style="font-family: Tunga; font-size: 12pt; mso-bidi-font-size: 10.0pt;">Lucknow Boy A Memoir'</span><span style="font-family: Tunga; font-size: 10pt;"> ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಒಮ್ಮೆ ಓದಲು ಶುರು ಹಚ್ಚಿದರೆ, ಪುಸ್ತಕ ಮುಗಿಸುವ ತನಕ ಅದನ್ನು ಬಿಡುವುದು ತೀರಾ ಕಷ್ಟ. ನೀವು ಪತ್ರಕರ್ತರಾಗಿದ್ದಲ್ಲಿ, ಓದುವ ಹವ್ಯಾಸ ಇದ್ದಲ್ಲಿ, ನೀವು ಓದಲೇಬೇಕಾದ ಪುಸ್ತಕ ಇದು. <o:p></o:p></span><br />
<span style="font-family: Tunga; font-size: 10pt;">ಇತ್ತೀಚೆಗೆ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ಪತ್ರಕರ್ತರೊಬ್ಬರು ಆ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತೇನೆಂದು ಹೆದರಿಸಿದ್ದಾರೆ. ಮೆಹ್ತಾ ಮತ್ತು ‘ಆ ಪತ್ರಕರ್ತ’ರಿಗೂ ಅಜಗಜಾಂತರ ವ್ಯತ್ಯಾಸ. ಯಾವ ಕೋನದಿಂದ ನೋಡಿದರೂ, ಇಬ್ಬರನ್ನು ಒಂದೇ ಕಡೆ ನೆನೆಸಿಕೊಳ್ಳಲೂ ಸಾಧ್ಯವಿಲ್ಲ.<o:p></o:p></span><br />
<span style="font-family: Tunga; font-size: 10pt;">ಅವರ ತರ್ಜುಮೆಗಾಗಿ ಕಾಯದೆ, ಮೂಲ ಪ್ರತಿಯನ್ನೇ ಓದಿದರೆ ಸೂಕ್ತ ಎನಿಸುತ್ತದೆ. ಕಾರಣ ಇಷ್ಟೆ. ಅನುವಾದದಲ್ಲಿ ಮೂಲ ಭಾಷೆಯ ಸೊಗಡು, ಪನ್ ಎಲ್ಲವೂ ಮಾಯವಾಗಿಬಿಡುವ ಆತಂಕವಿದೆ. ಏಕೆಂದರೆ, ಅನುವಾದಕ್ಕೆ ಅನುಮತಿ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಳ್ಳುವ ಪತ್ರಕರ್ತರ ಅನುವಾದ ಕಲೆಗಾರಿಕೆ ಅವರ ಕೈಗೆಳಗೆ ಕೆಲಸ ಮಾಡುವ ಅನೇಕರಿಗೆ ಗೊತ್ತಿರುವ ಸಂಗತಿ. ಹೋಗಲಿ, ಹಟಕ್ಕೆ ಬಿದ್ದು (ಕಚೇರಿಯ ಬೇರೆ ಸಿಬ್ಬಂದಿ ಸಹಾಯವಿಲ್ಲದೆ) ಆ ಮಹಾಶಯರೇ ಸಂಪೂರ್ಣ ಕೃತಿಯನ್ನು ಕನ್ನಡಕ್ಕೆ ತಂದರೂ ಅದು ಮೂಲ ಕೃತಿಗೆ ನ್ಯಾಯ ಒದಗಿಸುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಎರಡು ಮೂರು ದಿನಗಳ ಹಿಂದೆ, ಅವರು ತಮ್ಮ ಅಂಕಣವೊಂದರಲ್ಲಿ ಮೂಲ ಕೃತಿಯ ಒಂದೇ ಒಂದು ಪ್ಯಾರವನ್ನು ಅನುವಾದ ಮಾಡಲು ಹೋಗಿ ಎಡವಿದ್ದಾರೆ. ಹಸಿ ಹಸಿ ತಪ್ಪು ಮಾಡಿದ್ದಾರೆ.<o:p></o:p></span><br />
<span style="font-family: Tunga; font-size: 10pt;">ಇವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡದ್ದು, ಮೆಹ್ತಾ ಅವರು ಪತ್ರಕರ್ತರು ಉಡುಗೊರೆಗಳನ್ನು ಪಡೆಯಬೇಕೆ ಎನ್ನುವ ವಿಚಾರದ ಬಗ್ಗೆ ಬರೆದದ್ದನ್ನು. ಮೆಹ್ತಾ ಉಡುಗೊರೆಗಳನ್ನು ತಿರಸ್ಕರಿಸುತ್ತಾರೆ. ಇತರೆ ಪತ್ರಕರ್ತರೂ, ತಮ್ಮ ವೃತ್ತಿ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಹಾಗೇ ಮಾಡಬೇಕೆಂದು ಬಯಸುತ್ತಾರೆ. (ಈ ಪ್ರಸ್ತುತ ವಿಚಾರದ ಬಗ್ಗೆ ಮಾತನಾಡಲು ಅಥವಾ ಬರೆಯಲು ಈ ಅನುವಾದಕರು ಎಷ್ಟರ ಮಟ್ಟಿಗೆ ಅರ್ಹರು ಎಂಬುದು ಬೇರೆ ಮಾತು.)<o:p></o:p></span><br />
<span style="font-family: Tunga; font-size: 10pt;">ಈಗ ಮೂಲ ಕೃತಿ ಮತ್ತು ಅವರ ಅನುವಾದವನ್ನು ಗಮನಿಸೋಣ.<o:p></o:p></span><br />
<span style="font-family: Tunga; font-size: 11pt; mso-bidi-font-size: 10.0pt;">Should a journalist take freebies? No. Absolutely Not. Pay your way. For the four decades I’ve been editor, I can claim, hand on heart, that I have never visited a restaurant or stayed in a hotel or travelled in an airline without paying the full bill. <o:p></o:p></span><br />
<span style="font-family: Tunga; font-size: 10pt;">ಪತ್ರಕರ್ತರ ಅನುವಾದ: ಪತ್ರಕರ್ತರಾದವರು ಗಿಫ್ಟ್ ಗಳನ್ನು ಸ್ವೀಕರಿಸಬಹುದಾ? ಅದಕ್ಕೆ ಮೆಹ್ತಾ ಹೇಳೋದೇನೆಂದರೆ – ಬಿಲ್ ಕುಲ್ ಕೂಡದು. ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ನಾನು ಕಳೆದ ನಲವತ್ತು ವರ್ಷಗಳಿಂದ ಸಂಪಾಕನಾಗಿದ್ದೇನೆ, ಎದೆ ಮೇಲೆ ಕೈಯಿಟ್ಟು ಹೇಳುತ್ತೇನೆ, ಯಾವುದೇ ಹೋಟೇಲ್ ನಲ್ಲಾಗಲಿ, ನನ್ನ ಹಣ ಕೊಡದೇ ಉಳಿದಿಲ್ಲ. ಆಹಾರ ಸೇವಿಸಿಲ್ಲ. ಬಿಟ್ಟಿಯಾಗಿ ಯಾವ ವಿಮಾನದಲ್ಲೂ ಪಯಣಿಸಿಲ್ಲ.<o:p></o:p></span><br />
<span style="font-family: Tunga; font-size: 10pt;">(ಈ ಮೇಲಿನ ವಾಕ್ಯದಲ್ಲಿ ಅನುವಾದ ಲೋಪ ಇದೆ ಎಂದು ಹೇಳಲು ಇದನ್ನು ಉದಾಹರಿಸುತ್ತಿಲ್ಲ. ಆಫ್ ಕೋರ್ಸ್ ಮೆಹ್ತಾ ಹೃದಯ ಮುಟ್ಟಿ ಹೇಳಿದರೆ, ಅನುವಾದಕರು ಎದೆ ಮುಟ್ಟಿ ಹೇಳುತ್ತಾರೆ. ಅದರಲ್ಲಿ ಅಂತಹ ಪ್ರಮಾದವೇನಿಲ್ಲ ಬಿಡಿ. ಯಾರೂ ಲಿಟರಲಿ ಹೃದಯ ಮುಟ್ಟಿ ಹೇಳಲಾಗದು. ಆದರೆ ಈ ಅನುವಾದಕರು ಅದೇ ಎದೆಯನ್ನು ಮುಟ್ಟಿಕೊಂಡು ಈ ಮೇಲಿನ ಮಾತುಗಳನ್ನು ತಮ್ಮ ವಿಷಯದಲ್ಲಿ ಹೇಳಿಕೊಳ್ಳಲು ಸಾಧ್ಯವೆ?)<o:p></o:p></span><br />
<span style="font-family: Tunga; font-size: 10pt;">ಮುಂದುವರಿದು ಮೆಹ್ತಾ ಹೇಳುತ್ತಾರೆ. </span><span style="font-family: Tunga; font-size: 12pt; mso-bidi-font-size: 10.0pt;">Occasionally, the management makes a fuss and insists on waiving the charges. My escape from the crafty kindness is to joking protest, ‘This is an insult. If you are trying to bribe me, it has to be more than 6000 rupees’ (the usual bill at a five-star restaurant for two people) or ‘If you don’t let me pay I’ll never come again.”</span><span style="font-family: Tunga; font-size: 10pt;"><o:p></o:p></span><br />
<span style="font-family: Tunga; font-size: 10pt;">ಅನುವಾದ: “ಈ ವಿಷಯವಾಗಿ ನನ್ನ ಮ್ಯಾನೇಜ್ ಮೆಂಟ್ ಕಿರಿಕಿರಿ ಮಾಡಿದ್ದುಂಟು. ಆಗ ನಾನು ನಗುನಗುತ್ತಲೇ ಪ್ರತಿಭಟಿಸಿದ್ದಿದೆ. “ಇದು ನಿಜಕ್ಕೂ ಅವಮಾನಕರ. ನೀವು ನನಗೆ ಲಂಚ ಕೊಡಬೇಕೆಂದು ನಿರ್ಧರಿಸಿದರೆ, ಆರೇಳು ಸಾವಿರ ರೂಪಾಯಿಗಿಂತ ಹೆಚ್ಚು ಕೊಡಿ. (ಪಂಚತಾರಾ ಹೋಟೆಲ್ ನಲ್ಲಿ ಇಬ್ಬರ ಊಟ-ತಿಂಡಿಗೆ ಇಷ್ಟೇ ಬಿಲ್ ಆಗುತ್ತದೆ.) ನನಗೆ ಹಣ ಕೊಡಲು ಒಪ್ಪದಿದ್ದರೆ ಇನ್ನೆಂದೂ ನಾನು ಹೊಟೇಲ್ ಗೆ ಹೋಗಲಾರೆ”.<o:p></o:p></span><br />
<span style="font-family: Tunga; font-size: 10pt;">ಈಗ ಸೂಕ್ಷ್ಮವಾಗಿ ಮೂಲ ಹಾಗೂ ಅನುವಾದವನ್ನು ಗಮನಿಸಿ. ಮೆಹ್ತಾ ಹೇಳ ಹೊರಟಿರುವುದು, ಹೊಟೇಲ್ ಖರ್ಚುಗಳ ಮನ್ನಾ ವಿಚಾರವಾಗಿ ಒತ್ತಾಯ ಮಾಡಿದಾಗ ಅವರು ತೀರಾ ಸಹಜ ತಮಾಷೆಯಿಂದಲೇ ಪ್ರತಿಭಟಿಸುತ್ತಾರೆ. “ಇದು ಅವಮಾನ. ನೀವು ನನಗೆ ಲಂಚ ಕೊಡುವ ಪ್ರಯತ್ನ ಮಾಡುವುದಾದರೆ, ನೀವು 6,000 ಕ್ಕಿಂತ ಹೆಚ್ಚು ಕೊಡಬೇಕಾಗುತ್ತದೆ. ನೀವು ನನಗೆ ಹಣ ಕೊಡಲು ಅವಕಾಶ ಮಾಡಿಕೊಡದಿದ್ದರೆ, ಮತ್ತೆಂದೂ ಇಲ್ಲಿಗೆ ಬರುವುದಿಲ್ಲ”. <o:p></o:p></span><br />
<span style="font-family: Tunga; font-size: 10pt;">ಆದರೆ ಹತ್ತಾರು ಪುಸ್ತಕಗಳನ್ನು ಅನುವಾದ ಮಾಡಿರುವ ಮಹಾಶಯರು ಅಸಂಬದ್ಧವಾಗಿ ‘ನಾನು ಇನ್ನೆಂದೂ ಹೋಟೆಲ್ ಗೆ ಹೋಗಲಾರೆ’ ಎಂದು ಅನುವಾದಿಸಿದ್ದಾರೆ. ಕನಿಷ್ಟ ತಮ್ಮ ಅಂಕಣಕ್ಕೆ ಅಗತ್ಯವಾದ ಅನುವಾದವನ್ನು ಅವರೇ ಮಾಡುತ್ತಾರೆಂದು ತಿಳಿಯೋದೆ ಆದರೆ, ಇದು ಅವರಿಂದಲೇ ಆಗಿರುವ ತಪ್ಪು ಗ್ರಹಿಕೆ ಮತ್ತು ತಪ್ಪು ಅನುವಾದ. ಇಂತಹ ಅನುವಾದ ಬೇಕಾ? </span></div>sampadakeeyahttp://www.blogger.com/profile/10834139994439066030noreply@blogger.com13tag:blogger.com,1999:blog-3901985173139732142.post-65853788151138883272011-11-04T10:53:00.000+05:302011-11-04T10:53:14.696+05:30ಮಾಧ್ಯಮ ವೃತ್ತಿ ತೊರೆಯಲು ಹೊರಟ ಹುಡುಗನ ಅಂತರಾಳದ ಮಾತುಗಳು...<div dir="ltr" style="text-align: left;" trbidi="on"><br />
<b>ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಘೋಷಣೆಯಾಗಿವೆ. ಗೆಳೆಯರೊಬ್ಬರು ಮೇಲ್ ಮಾಡಿದ್ದಾರೆ. ಪ್ರಶಸ್ತಿ ಪಡೆದವರೊಬ್ಬರು ತಮ್ಮ ಸಂಪಾದಕರಿಗೆ ಕಾಲಿಗೆ ಬೀಳಲು ಪ್ರಯತ್ನಿಸುವ ದೃಶ್ಯವೊಂದು ಟಿವಿ ಚಾನಲ್ನಲ್ಲಿ ಪ್ರಸಾರವಾಗಿದೆ. ಪತ್ರಿಕೋದ್ಯಮವೂ ಮಠ-ಮಾನ್ಯವಾಗಿ ಹೋಯ್ತಾ? ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಏನುತ್ತರ ಕೊಡೋದು, ನೀವೇ ಹೇಳಿ.</b><br />
<b><br />
</b><br />
<table cellpadding="0" cellspacing="0" class="tr-caption-container" style="float: right; margin-left: 1em; text-align: right;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEiFIbJpOUW7XK0ORwVbGIhR3pTKvYO-R-dRLuAacbBcggH5X_BWs0KRLN9SBLM2x3aBKxlKiubqT8tHOftnLXFfEByVzzRMsHcctncl0WJ7xwDXdqsbOYrvMAEl9-KCDRa5n-VZ83115IAX/s1600/irshad.jpg" imageanchor="1" style="clear: right; margin-bottom: 1em; margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEiFIbJpOUW7XK0ORwVbGIhR3pTKvYO-R-dRLuAacbBcggH5X_BWs0KRLN9SBLM2x3aBKxlKiubqT8tHOftnLXFfEByVzzRMsHcctncl0WJ7xwDXdqsbOYrvMAEl9-KCDRa5n-VZ83115IAX/s1600/irshad.jpg" /></a></td></tr>
<tr><td class="tr-caption" style="text-align: center;"><b><span class="Apple-style-span" style="font-size: small;">ಇರ್ಷಾದ್</span></b></td></tr>
</tbody></table><b>ಮತ್ತೊಬ್ಬ ಗೆಳೆಯರು ಇರ್ಷಾದ್ ಎಂ. ವೇಣೂರು ಅವರ ಬ್ಲಾಗ್ ಲಿಂಕ್ ಕಳಿಸಿದ್ದಾರೆ. ಇರ್ಷಾದ್ ಹೆಸರು ನೀವು ಕೇಳಿರಬಹುದು. ಪತ್ರಿಕೋದ್ಯಮ ವಿದ್ಯಾರ್ಥಿ. <a href="http://inchara-inchara.blogspot.com/">ಇಂಚರ</a> ಎಂಬ ಬ್ಲಾಗ್ ಮೂಲಕ ಬ್ಲಾಗಿಗರಿಗೆ ಪರಿಚಿತರು. ಪತ್ರಿಕೋದ್ಯಮ ಕ್ಷೇತ್ರ ಬಿಡೋಣ ಅಂತಿದ್ದೀನಿ ಎಂದು ಅವರೊಂದು ಲೇಖನ ಬರೆದಿದ್ದಾರೆ. ಆದರ್ಶದ ಕನಸು ಹೊತ್ತ ಹೊಸ ಹುಡುಗ ಹುಡುಗಿಯರಿಗೆ ಮಾಧ್ಯಮ ಕ್ಷೇತ್ರ ಎಷ್ಟು ನಿರಾಶೆ ಮೂಡಿಸುತ್ತಿದೆ ಎನ್ನುವುದಕ್ಕೆ ಈ ಲೇಖನ ಸಾಕ್ಷಿ. ಇರ್ಷಾದ್ ತಮ್ಮ ನಿಲುವು ಬದಲಿಸಲಿ. ಅವರೇ ಹೇಳಿರುವಂತೆ ಮಾಧ್ಯಮಕ್ಷೇತ್ರ ಇಡಿಇಡಿಯಾಗೇನೂ ಕೆಟ್ಟಿಲ್ಲ. ನಿರಾಶೆ ಬೇಡ, ಹತಾಶೆ ಬೇಡ ಎಂಬುದು ನಮ್ಮ ಸಲಹೆ.</b><br />
<b><br />
</b><br />
<b>-ಸಂಪಾದಕೀಯ.</b><br />
<br />
ಬಹಳ ಬೇಸರದಿಂದ ಈ ಮಾತನ್ನು ಹೇಳುತ್ತಿದ್ದೇನೆ. ನನಗಿನ್ನೂ ನನ್ನ ಪ್ರೌಢ ಶಿಕ್ಷಣದ ದಿನಗಳು ನೆನಪಾಗುತ್ತವೆ. ನನ್ನ ಒಬ್ಬ ಪರ್ತಕರ್ತ ಸ್ನೇಹಿತನನ್ನು ಮೆಚ್ಚಿಕೊಂಡು ಈ ಬದುಕಿನಲ್ಲಿ ಏನಾದರೂ ಮಾಡಬೇಕೂಂತ ಮರುದಿನವೇ ನಾನೊಬ್ಬ ಪರ್ತಕರ್ತನಾಗುತ್ತೇನೆ ಎಂಬ ನಿರ್ಣಯ ಮಾಡಿದವನು ನಾನು. ಅಪ್ಪ ಅಮ್ಮನ ಬೈಗುಳಗಳ ಸುರಿಮಳೆ ಸಹಿಸಿಕೊಂಡು ಎಸ್ಎಸ್ಎಲ್ಸಿ ಬಳಿಕ ಸೈನ್ಸ್ ತೆಗೆದುಕೊಳ್ಳುವ ಅರ್ಹತೆ ಇದ್ದರೂ ಆರ್ಟ್ಸ್ ತೆಗೆದುಕೊಂಡೆ. ಬರವಣಿಗೆಯನ್ನೂ ಶುರು ಹಚ್ಚಿಕೊಂಡಿದ್ದೆ ಪ್ರಜಾವಾಣಿಯ ಮುಖಾಂತರ.<br />
<br />
ಪದವಿಗೆ ಬಂದಾಗ ಬರವಣಿಗೆಯ ಹಸಿವು ಹೆಚ್ಚಾಯಿತು. ನನ್ನ ಹೆಸರು ಎಲ್ಲೋ ಓದಿದ್ದೇನೆ ಎಂಬ ಪ್ರತಿಕ್ರಿಯೆ ಕಂಡವರಿಂದ ಬರುವ ಮಟ್ಟಿಗೆ ನನ್ನ ಗುರುತು ಸಿಕ್ಕಿತ್ತು. ನನ್ನ ಪತ್ರಿಕೋದ್ಯಮದ ತುಡಿತವೂ ಹೆಚ್ಚಾಯಿತು. ರಜೆ ದಿನವೂ ಫೀಲ್ಡ್ಗಿಳಿಯುತ್ತಿದ್ದೆ. ನನ್ನ ಕ್ಯಾಮರಾ ಹಿಡಿದುಕೊಂಡು ಬೈಕ್ ಏರಿ ಹೊರಟೆನೆಂದರೆ ಹೊತ್ತು - ಊಟ ಯಾವುದರ ಪರಿವೆ ಇಲ್ಲದೆ ಸಮಾಜದ ಜೊತೆ ಬೆರೀತಿದ್ದೆ. ಸ್ಪೆಷಲ್ ಫೀಚರ್ ಸ್ಟೋರಿಗಳನ್ನು ಮಾಡುತ್ತಿದ್ದೆ. ಮಾನವೀಯ ದೃಷ್ಟಿಯಲ್ಲಿ ಹಲವರ ನೋವಿಗೆ ಕಿವಿಯಾಗುತ್ತಿದ್ದೆ. ಪದವಿಯ ದಿನದಲ್ಲೇ ನನ್ನ ಕಿರಿಯ ವಿದ್ಯಾರ್ಥಿಗಳಿಗೆ ಬರವಣಿಗೆ - ಪತ್ರಿಕೋದ್ಯಮ - ಛಾಯಾಗ್ರಹಣ ಕುರಿತಾದ ಪಾಠ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಅಷ್ಟು ಹೊತ್ತಿಗಾಗಲೇ ನಾನು ಸುವರ್ಣಾವಕಾಶ ಎಂದು ಸ್ಟೂಡೆಂಟ್ ರಿಪೋರ್ಟರ್ ಆಗಿ ಎಲೆಕ್ಟ್ರಾನಿಕ್ ಮಾಧ್ಯಮ ಪ್ರವೇಶಿದ್ದೆ.<br />
<br />
ಪತ್ರಿಕೋದ್ಯಮ ಎಂದರೆ ಏನು ಎಂದು ನನಗೆ ೯೯% ತಿಳಿದದ್ದು ಅಲ್ಲೇ. ಇಂಥಾ ಕಚ್ಡಾ ಕ್ಷೇತ್ರಕ್ಕೆ ನಾನು ಬಂದೆನಾ ಎಂಬ ಪಾಪ ಪ್ರಜ್ಞೆ ಕಾಡಿದ ಮೊದಲ ದಿನವದು. ಬಕೆಟ್ ಹಿಡಿದವನೇ ಅಲ್ಲಿ ಬಾಸು. ನಿಯತ್ತಿಂದ ಕೆಲಸ ಮಾಡುವವನು ಕಾಲಡಿಯ ಕಸ. ಎಲ್ಲರನ್ನೂ ಚೆನ್ನಾಗಿಟ್ಟುಕೊಂಡರೆ ಮಾತ್ರ ಅಲ್ಲಿರಬಹುದು. ಎಲ್ಲರ ಸಹಕಾರವೂ ಇರುತ್ತದೆ. ನೀಯತ್ತು - ನೀತಿ ಎಂದೆಲ್ಲಾ ಒನ್ ಮ್ಯಾನ್ ಆರ್ಮಿ ಆಗಹೊರಟರೆ ನಮಗೇ ಗುಂಡಿ ತೋಡುವ ಜನ! ಎಲ್ಲಾ ಬಿಟ್ಟು ರಿಯಾಲಿಟೀ ಶೋ ಎಂದು ಮಾಡಿ, ಬಹುಮಾನದ ಹಣ ಇಂದು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಊರಿಗೆ ಬಸ್ ಹತ್ತಿಸುವ ಜನಾನೇ ಅಲ್ಲಿರುವವರು. ಎಲ್ಲಾ ತಿಳಿದಾಗ ನಾನು ಅಲ್ಲಿಂದ ಹೊರಬಂದಿದ್ದೆ. ಜಾಬ್ ಆಫರ್ ಕೊಡುತ್ತೇವೆ ಎಂಬ ಆಫರ್ ಬಿಟ್ಟು.<br />
<br />
ಮೊನ್ನೆ ಅಡ್ವಾಣಿಯವರ ರಥ ಯಾತ್ರೆಯ ಸಂದರ್ಭದಲ್ಲಿ ಭೂಪಾಲದಲ್ಲಿ ಯಾತ್ರೆಯ ಪ್ರಚಾರಕ್ಕೆ ಬಿಜೆಪಿ ಸಂಸದ ಆಯೋಜಿದ್ದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರಿಗೆ ನೋಟು ನೀಡಿದ ವಿಚಾರ ಕನ್ನಡದ ಯಾವುದೇ ಪತ್ರಿಕೆಗಳಲ್ಲಿ ಒಂದು ಕಾಲಂ ಸುದ್ದಿಯಾಗಿಯೂ ಪ್ರಚಾರವಾಗಲಿಲ್ಲ. ಅದೇ ವರದಿ ಹಿಂದೂ ಪತ್ರಿಕೆಯಲ್ಲಿ ಲೀಡ್ ನ್ಯೂಸ್ ಆಗಿ ಓದಲು ಸಹಕಾರಿಯಾಯ್ತು. ಹಾಗಾದರೆ ಸಾಮಾನ್ಯ ಜನರಿಗೆ ವರದಿ ಮುಟ್ಟಿಸಬೇಕಾದ ಪರ್ತಕರ್ತರು ಮುಚ್ಚಿಹಾಕುವ ಕೆಲಸಕ್ಕಿಳಿದರೆ ಯಾಕೆ ಬೇಕು ಈ ಕ್ಷೇತ್ರ?<br />
<br />
ಲಂಚಗುಳಿತನ ಪತ್ರಿಕೋದ್ಯಮಕ್ಕೂ ಆವರಿಸಿರುವಾಗ ಅಣ್ಣಾ ಹಜಾರೆಯನ್ನು ಬೆಂಬಲಿಸಿ ಬರೆಯುವ ಯಾವ ನೈತಿಕತೆ ನಮ್ಮಲ್ಲಿದೆ. ರಾಜಾ ಹಗರಣ ಬಯಲಿಗೆಳೆದಂತೆ ನಮ್ಮ ಪ್ರತಿಷ್ಠಿತ ಫಿಕ್ಸ್ ಆಗಿರುವ ಪರ್ತಕರ್ತರ ಹಗರಣ ಬಯಲುಗೊಂಡರೆ ಹೇಗಾಗಬಹುದು ನಮ್ಮ ಸ್ಥಿತಿ. ಬಹುಶಃ ರಸ್ತೆ ಮಧ್ಯ ನಿಲ್ಲಿಸಿ ಬೆತ್ತಲು ಜಗತ್ತು ತೋರಿಸಿದಂತಾಗಬಹುದು! ಹಲವು ವರ್ಷಗಳಿಂದ ನಾನು ವಸ್ತುನಿಷ್ಠ ಸುದ್ದಿ ಪತ್ರಿಕೆ ಎಂದು ಕನ್ನಡದ ಪತ್ರಿಕೆಯೊಂದನ್ನು ಓದುತ್ತಿದ್ದೆ. ಆದರೆ ಆ ಪತ್ರಿಕೆಗೆ ಪತ್ರಿಕಾವಲಯದ ಆಪರೇಷನ್ ಕಮಲ ಆದ ನಂತರ ಓದಿ ಓದಿ ಬೇಸತ್ತು ಹೋಗಿತ್ತು. ಮೊನ್ನೆ ಹೋಗಿ ಏಜಂಟನಿಗೆ ಒಂದೇ ಪತ್ರಿಕೆ ಸಾಕು. ಎರಡು ಬೇಡ ಎಂದು ಹೇಳಿ ಬಂದೆ.<br />
<br />
ರಾಜಕಾರಣಿ ಹೇಳಿದ್ದನ್ನು ಪರ್ತಕರ್ತ ಕೇಳುವುದಾದರೆ, ಅವರನ್ನು ಕೇಳಿ ಬರೆಯುವುದಾದರೆ ಯಾವ ಕರ್ಮಕ್ಕೆ ಈ ಪ್ರೆಸ್ ಕಾರ್ಡ್. ಪರ್ತಕರ್ತರ ಕ್ಷೇಮಾಭಿವೃದ್ಧಿ ಬಗ್ಗೆ ಯೋಚಿಸಬೇಕಾದ ಪ್ರೆಸ್ಕ್ಲಬ್ಗಳು ಪರ್ತಕರ್ತನಿಗೆ ಅನ್ಯಾಯವಾಗುವಾಗ ಬಾಯಿ ಮುಚ್ಚಿ ಬಾಗಿಲು ಹಾಕಿಕೊಳ್ಳುವುದಾದರೆ ಯಾಕೆ ಬೇಕು ಆ ಕ್ಲಬ್ಗಳು. ಕೇಳಲು ಪ್ರಶ್ನೆಗಳು ಬಹಳ ಇದೆ. ಆದರೆ ಉತ್ತರಿಸುವ ತಾಕತ್ತು ಯಾರಲ್ಲಿದೆ?<br />
<br />
ನನ್ನೂರಿನ ಹತ್ತಿರ ಒಂದು ಪ್ರತಿಷ್ಠಿತ ಖಾಸಗಿ ವಿದ್ಯಾ ಸಂಸ್ಥೆ ಇದೆ. ಆ ಸಂಸ್ಥೆಯ ಮುಖ್ಯಸ್ಥ ಮಾಡುತ್ತಿರುವು ಅನಾಚಾರಗಳನ್ನೇ. ಆ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗೆ ಏನೋ ಸಮಸ್ಯೆಯಿಂದ ಕಾಲೇಜು ಬದಲಾಯಿಸಬೇಕಾಗಿ ಬಂದರೆ ಟಿ.ಸಿ ಬೇಕಾದರೆ ಮುಂದಿನ ಎರಡೂ ವರ್ಷಗಳ ಫೀಸು ಭರಿಸಬೇಕು. ಹಾಗಾದರೆ ಮಾತ್ರ ಟಿ.ಸಿ. ಸಿಗುತ್ತದೆ. ಇಲ್ಲದಿದ್ದರೆ ಹಳೆ ಗಂಡನ ಪಾದವೇ ಗತಿ. ಎಷ್ಟೇ ಕಷ್ಟವಾದರೂ ಕೂಡ. ಮಂಗಳೂರಿನ ಎಸ್ಇಝೆಡ್ ಗೆ ಆ ಸಂಸ್ಥೆಯ ಮುಖ್ಯಸ್ಥ ಪರವಾಗಿದ್ದಾಗ ಸಂತ್ರಸ್ತ ಜನರು ಪತ್ರಿಕಾಗೋಷ್ಠಿ ಆಯೋಸಿದ್ದರು. ನಾನು ಇಂಟರ್ನ್ಶಿಪ್ ಮಾಡುತ್ತಿದ್ದಾಗಿನ ಘಟನೆ ಅದು. ನಾನು ಅದನ್ನು ವರದಿ ಮಾಡಿ ನನ್ನ ಚೀಫ್ಗೆ ನೀಡಿದಾಗ ಆತ ಅದನ್ನು ತೆಗೆದು ಕಸದ ಬುಟ್ಟಿಗೆ ಎಸೆದ. ಅವರ ಬಗ್ಗೆ ವರದಿ ಬರಿಬೇಡಿ, ಅದು ನಮ್ಮ ಜಾಹಿರಾತು ಪಾರ್ಟಿ ಎಂಬ ತಾಕೀತು ಬೇರೆ! ಅಷ್ಟೇ ಏಕೆ ಆ ಕಾಲೇಜಿನಲ್ಲಿ ದುರ್ಘಟನೆ ನಡೆದ ವರದಿಗಳು ತನ್ನನ್ನೇ ಮಾರಿಕೊಂಡ ಆ ಪತ್ರಿಕೆಯಲ್ಲಿ ಇಂದಿಗೂ ...... ಸಮೀಪದ ಖಾಸಗಿ ಕಾಲೇಜು ಎಂಬ ಲೀಡ್ನಲ್ಲಿ ಪ್ರಕಟಗೊಳ್ಳುತ್ತದೆ. ಪತ್ರಿಕೆಯ ಜೊತೆ ಹಾಗೆ ಬರೆಯಲಿಕ್ಕೆ ಅವನಿಗೂ ಜಾಹಿರಾತು ಸಿಗುತ್ತದೆ! ಇದು ವಸ್ತುನಿಷ್ಠ ಪತ್ರಿಕೋದ್ಯಮ!<br />
<br />
ಹಾಗಂತ ಪತ್ರಿಕೋದ್ಯಮ ಸಂಪೂರ್ಣ ಕೊಳೆತು ನಾರುತ್ತಿದೆ ಎಂದು ನಾನು ಹೇಳುತ್ತಿಲ್ಲ. ಕೆಲವೊಂದು ಪತ್ರಿಕೆಗಳು ಇಂದಿಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ಪತ್ರಕರ್ತರನ್ನು ದುಡಿಸಿಕೊಳ್ಳುತ್ತಿದೆ. ಅಷ್ಟೇ ಸಂತೃಪ್ತಿಯಿಂದ ಅವರ ಹೊಟ್ಟೆ ತುಂಬಿಸುತ್ತಿದೆ.<br />
<br />
ಒಮ್ಮೊಮ್ಮೆ ನನಗೆ ನನ್ನ ಮೇಲೆನೇ ಬೇಜಾರು ಬಂದು ಬಿಡುತ್ತೆ. ಇಷ್ಟೆಲ್ಲಾ ಗೊತ್ತಿದ್ದರೂ ನಾನು ನನ್ನ ಕಿರಿಯ ವಿದ್ಯಾರ್ಥಿಗಳಿಗೆ ಇಂದಿಗೂ ಇಲ್ಲಿ ನೀವು ಹಾಗೆ ಮಾಡಬಹುದು, ಹೀಗೆ ಮಾಡಬಹುದು ಎಂದೆಲ್ಲಾ ಭರವಸೆ ಆಸೆ ಆಂಕಾಂಕ್ಷೆ, ಕನಸುಗಳನ್ನು ತುಂಬುತ್ತಿದ್ದೇನೆ. ನನ್ನ ಕೆಲವೊಂದು ಅನುಭವಗಳನ್ನು ಅವರ ಮುಂದಿಡುತ್ತೇನೆ. ಅವರು ಅದನ್ನು ಚೆನ್ನಾಗಿ ನಂಬಿ ನನ್ನನ್ನೇ ರೋಲ್ ಮಾಡೆಲ್ ಎಂದು ಭಾವಿಸುತ್ತಿದ್ದಾರೆ. ಆದರೆ ಬಾಯಿಯ ಒಳಗಿರುವುದು ಹುಳುಕು ಎಂಬ ಸತ್ಯ ಅವರಿಗೆ ಹೇಳಬೇಕೆಂದು ಮನಸು ಬಯಸುತ್ತೆ. ಕೂಡಲೇ ಸುಮ್ಮನಾಗುತ್ತದೆ.<br />
<br />
ನನ್ನದೀಗ ಸ್ನಾತಕೋತ್ತರ ಪದವಿ ಶಿಕ್ಷಣ. ಅದೂ ಪತ್ರಿಕೋದ್ಯಮದಲ್ಲೇ. ಮಳೆ ನಿಂತು ಹೋದ ಮೇಲೆ ಎಂಬಂತೆ ಈಗ ನನಗಾಗಿರುವುದು ಜ್ಞಾನೋದಯಾನೋ ಅಥವಾ ವೈರಾಗ್ಯನೋ ಅಂತ ನನಗೆ ಮಾತ್ರ ಗೊತ್ತಿಲ್ಲ. ಹಾಗಂತ ಇನ್ನೇನೂ ಮಾಡೋಕಾಗಲ್ಲ ಅಂತಾನೂ ಗೊತ್ತು. ಹತ್ತರಲ್ಲಿ ಹನ್ನೊಂದು ಆಗುವ ಸಂದರ್ಭ ಬಂದರೆ ಎಲ್ಲದರಿಂದ ದೂರ ಇದ್ದು ಕ್ಯಾಮರಾ ಹಿಡಿದು ಬದುಕು ಸಾಗಿಸುವ ನಿರ್ಧಾರಕ್ಕೆ ಬಂದಿದ್ಡೇನೆ. ಫ್ರೀಲಾನ್ಸರ್ ಆಗುತ್ತೇನೆ. ಜೊತೆಗೆ ನಾಳೆ ಪಾಠ ಮಾಡುವ ಅವಕಾಶ ಬಂದರೆ ಮತ್ತೆ ನನ್ನ ವಿದ್ಯಾರ್ಥಿಗಳಲ್ಲಿ ಆಸೆಯ ಬೀಜ ಬಿತ್ತುತ್ತೇನೆ. ಎಷ್ಟಾದರೂ ಇದು ಮುಖವಾಡದ ಬದುಕು ಅಲ್ವಾ?<br />
</div>sampadakeeyahttp://www.blogger.com/profile/10834139994439066030noreply@blogger.com29tag:blogger.com,1999:blog-3901985173139732142.post-11040993192851198382011-11-01T12:26:00.000+05:302011-11-01T12:26:21.580+05:30ಕನ್ನಡ ರಾಜ್ಯೋತ್ಸವವೂ, ನಮ್ಮ ಸುದ್ದಿವಾಹಿನಿಗಳ ಕನ್ನಡಾಭಿಮಾನವೂ...<div dir="ltr" style="text-align: left;" trbidi="on"><br />
<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhNaq2OyDX6oxLBJeUx1Hf-DKRo_iKzRfZqwkqothdgFewuBHWJaQkqzAgEgMMm2Kj_YeHhbmtnrG42vJNdnlqgMm8i-8mSheeWhbEnpd1uuOlUHnwOyDW75KQ1GBM1j19g7b2bGGAYB5f8/s1600/kannada.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="210" src="https://blogger.googleusercontent.com/img/b/R29vZ2xl/AVvXsEhNaq2OyDX6oxLBJeUx1Hf-DKRo_iKzRfZqwkqothdgFewuBHWJaQkqzAgEgMMm2Kj_YeHhbmtnrG42vJNdnlqgMm8i-8mSheeWhbEnpd1uuOlUHnwOyDW75KQ1GBM1j19g7b2bGGAYB5f8/s320/kannada.jpg" width="320" /></a></div>ಇವತ್ತು ಕನ್ನಡ ರಾಜ್ಯೋತ್ಸವ. ಕನ್ನಡ ಮಾಧ್ಯಮಗಳಿಗೆ ನಾಡಪ್ರೇಮ ಉಕ್ಕಿ ಹರೀತಾ ಇದೆ. ತುಂಬಾ ಸಂತೋಷದ ವಿಷಯ. ಕನ್ನಡ ಪತ್ರಿಕೆಗಳ ಕನ್ನಡ ಪ್ರೀತಿಗೆ ಒಂದು ಅರ್ಥವಿದೆ. ಕನ್ನಡದ ವಿಷಯ ಬಂದಾಗ ಪತ್ರಿಕೆಗಳು ಸದಾ ಕಾಲಕ್ಕೂ ಧ್ವನಿ ಎತ್ತುತ್ತ ಬಂದಿವೆ. ಕನ್ನಡ ಭಾಷೆ-ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಪತ್ರಿಕೆಗಳ ಕೊಡುಗೆ ಮಹತ್ವದ್ದು. ಹೀಗಾಗಿ ಇವತ್ತು ಎಲ್ಲ ಕನ್ನಡ ಪತ್ರಿಕೆಗಳು ರಾಜ್ಯೋತ್ಸವದ ಅಂಗವಾಗಿ ರೂಪಿಸಿರುವ ಸಂಚಿಕೆಗಳು ಖುಷಿ ಕೊಡುತ್ತವೆ.<br />
<br />
ಕನ್ನಡ ಸುದ್ದಿವಾಹಿನಿಗಳಿಗೂ ಇವತ್ತು ಕನ್ನಡಾಭಿಮಾನ ಹುಚ್ಚು ಹೊಳೆಯಂತೆ ಹರಿಯುತ್ತಿದೆ. ಇದೂ ಕೂಡ ಸಂತೋಷದ ವಿಷಯವೇ ಹೌದು. ಆದರೆ ಸುದ್ದಿವಾಹಿನಿಗಳ ವಿಷಯದಲ್ಲಿ ಕೆಲವೊಂದು ಆಕ್ಷೇಪಣೆಗಳು ನಮಗಿವೆ. ಆಕ್ಷೇಪಣೆಗಳಿರುವುದರಿಂದಲೇ ಸುದ್ದಿವಾಹಿನಿಗಳ ಕನ್ನಡಪ್ರೇಮ ಅತ್ಯಂತ ಕೃತಕವಾಗಿಯೂ ಕಾಣುತ್ತದೆ.<br />
<br />
ಮೊದಲನೆಯದಾಗಿ ಕನ್ನಡ ಸುದ್ದಿವಾಹಿನಿಗಳಿಗೆ ಪರಭಾಷಾ ಚಿತ್ರಗಳ ಮೋಹ ಹದ್ದು ಮೀರಿ ಹೋಗಿದೆ. ನಿಜ, ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಇದೆ ಎಂಬುದು ವಾಸ್ತವ. ಗಣನೀಯ ಸಂಖ್ಯೆಯಲ್ಲಿ ಕನ್ನಡಿಗರೂ ಪರಭಾಷಾ ಚಿತ್ರಗಳನ್ನು ನೋಡುತ್ತಾರೆ ಎಂಬುದೂ ನಿಜ. ಕಲೆಗೆ ಭಾಷೆಯ ಗಡಿ ರೇಖೆ ಇರುವುದಿಲ್ಲ ಎನ್ನುವದನ್ನೂ ಒಪ್ಪಿಕೊಳ್ಳೋಣ.<br />
<br />
ಆದರೆ ಇವತ್ತು ಕರ್ನಾಟಕದ ಯಾವ ಮೂಲೆಯಲ್ಲಾದರೂ ಹೋಗಿ ನೋಡಿ. ಕನ್ನಡೇತರ ಟಿವಿ ಚಾನಲ್ಗಳು ಪ್ರಸಾರವಾಗುತ್ತವೆ. ಅವುಗಳಿಗೆ ಕೇಬಲ್ ಆಪರೇಟರ್ಗಳು ಯಾವ ಅಡೆತಡೆಯನ್ನೂ ಮಾಡಿಲ್ಲ. ಪರಭಾಷಾ ಚಿತ್ರಗಳ ಬಗ್ಗೆ ಗಂಟೆಗಟ್ಟಲೆ ಕಾರ್ಯಕ್ರಮಗಳು ಈ ಪರಭಾಷಾ ಚಾನಲ್ಗಳಲ್ಲೇ ಲಭ್ಯವಾಗಿರುವುದರಿಂದ ಕನ್ನಡ ಚಾನಲ್ಗಳಲ್ಲೂ ಅದೇ ಚರ್ವಿತ ಚರ್ವಣ ವರದಿಗಳು ಯಾಕೆ? ಪರಭಾಷಾ ಚಿತ್ರಗಳ ಬಗ್ಗೆ ಮಾಹಿತಿ ಬೇಕಿರುವವರು ಅದೇ ಭಾಷೆಯ ಚಾನಲ್ಗಳನ್ನು ನೋಡುತ್ತಾರೆ, ನೋಡಿಕೊಳ್ಳಲಿ. ಕನ್ನಡಿಗರ ಗಂಟಲಿಗೂ ಈ ಬಲವಂತದ ಅಡುಗೆಯನ್ನು ತುಂಬುವುದು ಯಾಕೆ?<br />
<br />
ಇದು ಆರಂಭವಾಗಿದ್ದು ಟಿವಿ೯ ಮೂಲಕ. ಟಿವಿ೯ ಆಂಧ್ರಪ್ರದೇಶ ಮೂಲದ ಚಾನಲ್. ಹೀಗಾಗಿ ಟಿವಿ೯ ತೆಲುಗು ಪ್ರಸಾರ ಮಾಡುವ ಕಾರ್ಯಕ್ರಮಗಳ ದೃಶ್ಯಗಳನ್ನೇ ಬಳಸಿ ಟಿವಿ೯ ಕನ್ನಡ ಕೂಡ ತೆಲುಗು ಚಿತ್ರಗಳನ್ನು ವೈಭವೀಕರಿಸುವ ಕೆಲಸ ಆರಂಭಿಸಿತು. ತೆಲುಗು ಚಿತ್ರನಟ-ನಟಿಯರ ಜನ್ಮದಿನಗಳಂದು ಗಂಟೆಗಟ್ಟಲೆ ಕಾಲ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗತೊಡಗಿದವು. ತೆಲುಗು ಸಿನಿಮಾಗಳು ಬಿಡುಗಡೆಯಾಗುವ ಸಂದರ್ಭದಲ್ಲಂತೂ ಅತಿರೇಕದ ಪ್ರಚಾರ ನೀಡಲಾಯಿತು. ಇದೊಂದು ರೀತಿಯಲ್ಲಿ ತೆಲುಗು ಚಿತ್ರಗಳಿಗೆ ಕರ್ನಾಟಕದಲ್ಲಿ ಪ್ರಚಾರ ಕೊಡುವ, ಆ ಚಿತ್ರಗಳ ಮಾರುಕಟ್ಟೆ ಹೆಚ್ಚಿಸುವ ಪ್ರಯತ್ನದ ಹಾಗೇ ಕಾಣಿಸಿತು.<br />
<br />
ಇದೇ ರೋಗ ಈಗ ಎಲ್ಲ ಚಾನಲ್ಗಳಿಗೂ ಅಂಟಿಕೊಂಡಿದೆ. ಸುವರ್ಣ ನ್ಯೂಸ್ ಮತ್ತು ಸಮಯ ಟಿವಿಯಲ್ಲೂ ಈಗ ಪರಭಾಷಾ ಸಿನಿಮಾಗಳ ಬಗ್ಗೆ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇದು ಯಾಕೆ ಬೇಕು ಎಂಬ ಪ್ರಶ್ನೆಗೆ ಸಮರ್ಥನೀಯ ಉತ್ತರ ಚಾನಲ್ ನಡೆಸುವವರಲ್ಲಿ ಇದೆಯೋ ಇಲ್ಲವೋ ನಮಗಂತೂ ಗೊತ್ತಿಲ್ಲ.<br />
<br />
ಎರಡನೆಯ ಆಕ್ಷೇಪಣೆ ಶೀರ್ಷಿಕೆಗಳಿಗೆ ಸಂಬಂಧಿಸಿದ್ದು. ನಮ್ಮ ಟಿವಿ ವಾಹಿನಿಗಳ ಕಾರ್ಯಕ್ರಮಗಳ ಶೀರ್ಷಿಕೆಗಳಂತೂ ಪೂರ್ಣ ಇಂಗ್ಲಿಷ್ಮಯವಾಗಿ ಹೋಗಿದೆ. ಒಂದೆರಡು ಶೀರ್ಷಿಕೆಗಳು ಇಂಗ್ಲಿಷ್ನಲ್ಲಿದ್ದರೆ ಅದನ್ನು ಒಪ್ಪಿಕೊಳ್ಳಬಹುದು. ಇಂಗ್ಲಿಷ್ನ ಸಾಕಷ್ಟು ಶಬ್ದಗಳು ಕನ್ನಡದೊಂದಿಗೆ ಬೆರೆತು ಹೋಗಿವೆ. ಅವುಗಳನ್ನು ಬಳಸುವುದು ತಪ್ಪಲ್ಲ. ಆದರೆ ಎಲ್ಲ ಶೀರ್ಷಿಕೆಗಳು ಇಂಗ್ಲಿಷಿನಲ್ಲೇ ಇರಬೇಕೆ? ಒಳ್ಳೆಯ ಕನ್ನಡ ಶೀರ್ಷಿಕೆಗಳನ್ನು ಇಡಲು ಸಾಧ್ಯವಿಲ್ಲವೇ?<br />
<br />
ಕನ್ನಡ ಚಾನಲ್ಗಳನ್ನು ನಡೆಸುವ ಪತ್ರಕರ್ತರಿಗೆ ಕನ್ನಡ ಶೀರ್ಷಿಕೆಗಳನ್ನು ಇಡುವುದಕ್ಕೆ ಒಂದು ಬಗೆಯ ಕೀಳರಿಮೆ. ಇಂಗ್ಲಿಷ್ ಶೀರ್ಷಿಕೆ ಇಟ್ಟರೆ ಕಾರ್ಯಕ್ರಮಗಳು ಜನಪ್ರಿಯವಾಗುತ್ತವೆ ಎಂಬ ಮೂಢನಂಬಿಕೆ. ಕನ್ನಡದ ಶೀರ್ಷಿಕೆ ಇಟ್ಟು, ಆ ಶೀರ್ಷಿಕೆಯನ್ನೇ ಜನಪ್ರಿಯಗೊಳಿಸುವ ಧೈರ್ಯ, ಸಾಮರ್ಥ್ಯ ಇವರುಗಳಿಗೆ ಇದ್ದಂತೆ ಇಲ್ಲ. ಹೀಗಾಗಿ ಇಂಗ್ಲಿಷ್ ಚಾನಲ್ಗಳ ಹಾಗೆ ನ್ಯೂಸ್ ಅಟ್ ನೈನ್, ೯ ಪಿಎಂ ನ್ಯೂಸ್, ಬ್ರೇಕ್ ಫಾಸ್ಟ್ ನ್ಯೂಸ್, ಮಾರ್ನಿಂಗ್ ಕಾಫಿ, ಲೇಡೀಸ್ ಕ್ಲಬ್, ವಾರಂಟ್, ಚಾರ್ಜ್ಶೀಟ್, ಫಿಲ್ಮಿ ಫಂಡಾ ಇತ್ಯಾದಿ ಹೆಸರುಗಳನ್ನೇ ಇಡುತ್ತಾರೆ. ಕನ್ನಡದ ಹೆಸರುಗಳನ್ನು ಇಟ್ಟು ಅವುಗಳನ್ನೇ ಜನರ ನಾಲಿಗೆ ತುದಿಗೆ ತರುವುದಕ್ಕೂ ಒಂದು ಯೋಗ್ಯತೆ ಬೇಕಲ್ಲವೇ?<br />
<br />
ಈ ಇಂಗ್ಲಿಷ್ ರೋಗವನ್ನು ಹರಡಲು ಶುರು ಮಾಡಿದ್ದು ಹಾಯ್ ಬೆಂಗಳೂರು ಪತ್ರಿಕೆ. ಹಲೋ, ಬಾಟಮ್ ಐಟಮ್, ಫೀಡ್ ಬ್ಯಾಕ್, ಸಾಫ್ಟ್ ಕಾರ್ನರ್, ಖಾಸ್ಬಾತ್ ಇತ್ಯಾದಿ ಶೀರ್ಷಿಕೆಗಳನ್ನು ಆರಂಭಿಸಿದ್ದು ರವಿ ಬೆಳಗೆರೆ. ನಂತರ ಇದು ಎಲ್ಲ ಕಡೆಗೂ ವಿಶೇಷವಾಗಿ ಕನ್ನಡ ಸುದ್ದಿವಾಹಿನಿಗಳಿಗೆ ಹಬ್ಬಿತು. ಕ್ರೈಮ್ ಡೈರಿ, ಕ್ರೈಮ್ ಸ್ಟೋರಿಗಳ ಅಬ್ಬರದ ನಂತರವಂತೂ ಇಂಗ್ಲಿಷ್ ಹೆಸರುಗಳಿದ್ದರೆ ಮಾತ್ರ ಕಾರ್ಯಕ್ರಮ ಓಡುತ್ತವೆ ಎಂಬ ದರಿದ್ರ ಮೌಢ್ಯಕ್ಕೆ ವಾಹಿನಿಗಳು ಅಂಟಿಕೊಂಡವು.<br />
<br />
ಮೂರನೆಯದಾಗಿ ಕನ್ನಡ ಸುದ್ದಿವಾಹಿನಿಗಳು ಬಳಸುವ ಭಾಷೆ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದೆ. ನಿರೂಪಕರು, ವರದಿಗಾರರು ಬಳಸುವ ಕನ್ನಡವನ್ನು ಗಮನಿಸಿದರೆ ನಿಜಕ್ಕೂ ಆಘಾತವಾಗುತ್ತದೆ. ಒಂದು ವಾಕ್ಯದಲ್ಲಿ ಕನಿಷ್ಠ ನಾಲ್ಕೈದಾದರೂ ಇಂಗ್ಲಿಷ್ ಪದಗಳನ್ನು ಬಳಸಲೇಬೇಕೆಂಬ ಹಠಕ್ಕೆ ಬಿದ್ದಂತೆ ಇವರುಗಳು ಮಾತನಾಡುತ್ತಾರೆ. ಕನ್ನಡ ಭಾಷೆಯ ಕುರಿತ ಪ್ರಾಥಮಿಕ ಜ್ಞಾನವೂ ಇಲ್ಲದವರೆಲ್ಲ ನಿರೂಪಕರು, ವರದಿಗಾರರಾಗಿರುವುದು ಇದಕ್ಕೆ ಕಾರಣ. ತಮಾಶೆಯೆಂದರೆ ಬಹುತೇಕ ಟಿವಿ ವರದಿಗಾರರು, ನಿರೂಪಕರಿಗೆ ತಪ್ಪಿಲ್ಲದಂತೆ ಒಂದು ಪ್ಯಾರಾ ಕನ್ನಡದಲ್ಲಿ ಬರೆಯಲೂ ಸಹ ಬರುವುದಿಲ್ಲ. ಚಾನಲ್ಗಳಲ್ಲಿ ಕೆಲಸ ಮಾಡುವವರಿಗೆ ಮಾತನಾಡುವುದಷ್ಟೇ ಗೊತ್ತಿದ್ದರೆ ಸಾಕು, ಬರೆಯಲು ಬರಬೇಕಿಲ್ಲ ಎಂಬ ವಾತಾವರಣ ಇದೆ. ಕನಿಷ್ಠ ತಮ್ಮ ಚಾನಲ್ ಕೆಲಸಗಾರರಿಗೆ ಕನ್ನಡ ಪ್ರಾಧ್ಯಾಪಕರಿಂದ ತರಬೇತಿ ಕೊಡುವ ಕೆಲಸವನ್ನೂ ಸಂಸ್ಥೆಗಳು ನಡೆಸುವುದಿಲ್ಲ. ಹೀಗಾಗಿ ಟಿವಿ ಚಾನಲ್ಗಳು ಮಾತಾಡಿದ್ದೇ ಕನ್ನಡ ಎನ್ನುವಂತಾಗಿದೆ.<br />
<br />
ಕನ್ನಡ ರಾಜ್ಯೋತ್ಸವದ ದಿನ ಮುಖಕ್ಕೆ ಚಿತ್ರವಿಚಿತ್ರವಾಗಿ ಹಳದಿ ಕೆಂಪು ಬಣ್ಣ ಮೆತ್ತಿಕೊಂಡು, ಚಾನಲ್ ಲೋಗೋ ಪಕ್ಕದಲ್ಲಿ ಕನ್ನಡ ಬಾವುಟವನ್ನು ಪಟಪಟಿಸುವಂತೆ ಮಾಡಿದರೆ ಸಾಲದು, ಕನ್ನಡದ ಹೆಸರಿನಲ್ಲಿ ಚಾನಲ್ ನಡೆಸುತ್ತಿರುವ ಕಾರಣಕ್ಕಾದರೂ ಕನ್ನಡದ ನಿಜ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೆಲಸವನ್ನು ಈ ವಾಹಿನಿಗಳು ಮಾಡುವಂತಾಗಲಿ. ಇದು ರಾಜ್ಯೋತ್ಸವ ಸಂದರ್ಭದಲ್ಲಿ ಈ ವಾಹಿನಿಗಳಿಗೆ ನಮ್ಮ ವಿನಮ್ರ ಮನವಿ.<br />
<br />
ಅಂದಹಾಗೆ, ಎಲ್ಲ ಸಂಪಾದಕೀಯದ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.<br />
</div>sampadakeeyahttp://www.blogger.com/profile/10834139994439066030noreply@blogger.com9