tag:blogger.com,1999:blog-3901985173139732142.post2607714911669055058..comments2024-03-10T23:03:15.504+05:30Comments on ಸಂಪಾದಕೀಯ: ಕೋಳಿ-ಕುರಿ ಕಡಿಯುವುದು ಸಹಜ ಬದುಕಿನ ಭಾಗ: ಹರ್ಷ ಕುಗ್ವೆsampadakeeyahttp://www.blogger.com/profile/10834139994439066030noreply@blogger.comBlogger40125tag:blogger.com,1999:blog-3901985173139732142.post-63470597729454418062011-08-17T11:08:03.058+05:302011-08-17T11:08:03.058+05:30ಹೌದು.ಕೆಲವು ದೈವಿಕ ಆಚರಣೆಗಳು ಅತಿರೇಕವಾಗಿದ್ದು ಭೀಕರ ಎನ...ಹೌದು.ಕೆಲವು ದೈವಿಕ ಆಚರಣೆಗಳು ಅತಿರೇಕವಾಗಿದ್ದು ಭೀಕರ ಎನ್ನಿಸುತ್ತವೆ. ಮೈನಡುಗುತ್ತದೆ. ಜಾತ್ರೆಗಳಲ್ಲಿ ಸಿಡಿ ಆಚರಿಸುವುದಂತೂ ಹಿಂಸೆ ಎನಿಸುತ್ತದೆ. ಬೆನ್ನಿಗೆ ಕಬ್ಬಿಣದ ಸರಳನ್ನು ಚುಚ್ಚಿಕೊಂಡು ರಥವನ್ನು ಎಳೆಯುತ್ತಾರೆ. ನೋಡುಗರಿಗೋ ಅದೊಂದು ದೈವಿಕ ಶಕ್ತಿಯ ಪ್ರತೀಕ. ಇದನ್ನೆಲ್ಲಾ ಸಾಮಾಜಿಕ, ಮನೋವೈಜ್ಞಾನಿಕವಗಿ ಮಾತ್ರ ಅರಿಯಬಹುದೇನೋ? ಪ್ರಾಣಿಬಲಿ ಮಾಡುವಾಗ ಸಹಜ ಮನಸ್ಥಿತಿಯಲ್ಲಿ ಇಂತಹ ಅತಿರೇಕಗಳು ನಡೆಯುವುದಿಲ್ಲ. ಬಲಿ ಪ್ರಾಣಿಗೆ ಹೆಚ್ಚು ಹಿಂಸೆಯಾಗಬಾರದೆನ್ನುವ ಕಾರಣಕ್ಕಾಗಿಯೇ ಒಂದು ನಿಯಮ ಇದೆ ಹಳ್ಳಿಗಳಲ್ಲಿ. ಅದನ್ನು ಕಡಿಯುವಾತ ಅದು ಹೆಚ್ಚು ಹಿಂಸೆ ಅನುಭವಿಸದಂತೆ ಒಂದೇ ಏಟಿಗೆ ಹೊಡೆಯಬೇಕು. ಇಲ್ಲವಾದಲ್ಲಿ ಆತ ಭಾರೀ ದಂಡವನ್ನು ದೇವರಿಗೆ ಕಟ್ಟಬೇಕಾಗುತ್ತದೆ. <br />ಶೇಷೇಗೌಡ, ಮಾಳೂರು.Anonymousnoreply@blogger.comtag:blogger.com,1999:blog-3901985173139732142.post-32046396045884363382011-08-15T20:12:43.344+05:302011-08-15T20:12:43.344+05:30ಕುರಿ,ಕೋಳಿ,ಹಂದಿ ಮುಂತಾದ ಪ್ರಾಣಿಗಳನ್ನು ಜನ ಮಾಂಸಕ್ಕಾಗಿಯೇ...ಕುರಿ,ಕೋಳಿ,ಹಂದಿ ಮುಂತಾದ ಪ್ರಾಣಿಗಳನ್ನು ಜನ ಮಾಂಸಕ್ಕಾಗಿಯೇ ಸಾಕುತ್ತಾರೆ.ಉತ್ತಮ ಫಸಲು ಪಡೆಯಬೇಕಾದರೆ ಹೇಗೆ ಬೆಳೆ ಗಿಡಗಳಿಗೆ ಗೊಬ್ಬರ ನೀರು ಪೂರೈಸಬೇಕೋ ಹಾಗೆಯೇ ಒಳ್ಳೆ ಆಹಾರ,ಕಾಳಜಿಯಿಂದ ಸಾಕಿ ಇಂತಹ ಪ್ರಾಣಿಗಳ ತೂಕ ಹೆಚ್ಚುವಂತೆ ನೋಡಿಕೊಳ್ಳುತ್ತಾರೆ..ಮಾಂಸಾಹಾರಿಗಳು ಅಂದರೆ ಕ್ರೂರಿಗಳಲ್ಲ..ಮಾಂಸಕ್ಕಾಗಿ ಸಾಕುವ ಜೀವಗಳನ್ನು ಹರಕೆ ರೂಪದಲ್ಲಿ ಬಲಿ ನೀಡುವ ಸಂಪ್ರದಾಯವೂ ಹಿಂದಿನ ಕಾಲದಿಂದಲೇ ನಡೆದುಕೊಂಡು ಬಂದದ್ದು.ಇದು ಅವರವರ ಭಕುತಿ ನಂಬಿಕೆಗಳಿಗೆ ಬಿಟ್ಟದ್ದು..ಆದರೆ ಪ್ರಾಣಿ ಬಲಿಯ ಹೆಸರಲ್ಲಿ ನಡೆಯುವ, ಜೀವ ತೆಗೆಯುವ ಆ ಸಂದರ್ಭ ನೋಡಿದರೆ ಕರುಳು ಕಿತ್ತಂತಹ ಅನುಭವವಾಗುವುದಂತೂ ನಿಜ..ಅಮಾನುಷಿಕವಾಗಿ ಜೀವಂತ ಕೋಳಿಯ ಕತ್ತು ಕಚ್ಚಿ ಎಳೆದು ರಕ್ತ ಕುಡಿಯುವ ದೈವಗಳನ್ನು ಆವಾಹಿಸಿಕೊಂಡ ಮನುಷ್ಯನಿಗೆ ಕೈ ಮುಗಿಯುತ್ತ ನಿಂತವರಲ್ಲಿ ಭಯವೇ ಭಕ್ತಿ..ಇದು ಜಾತಿ ಬಗ್ಗೆ ಇರುವ ಮೇಲು ಕೀಳು ಹೇಳಿಕೆಗಳಲ್ಲ.ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಗಿರಲಿ ..ವಿಷಯ ಇಷ್ಟೆ..ಪ್ರಾಣಿಗಳನ್ನು ಕೊಲ್ಲುವಾಗ ಅತಿಯಾಗಿ ಹಿಂಸಿಸದೆ,ತುಂಬ ಹೊತ್ತು ನರಕ ಯಾತನೆ ನೀಡದೆ ಇದ್ದರೆ ಸಾಕು....rashmihttps://www.blogger.com/profile/03338939668576712944noreply@blogger.comtag:blogger.com,1999:blog-3901985173139732142.post-76517481720419826202011-08-14T22:36:45.928+05:302011-08-14T22:36:45.928+05:30This comment has been removed by the author.ಕೃಷ್ಣಪ್ರಕಾಶ ಬೊಳುಂಬುhttps://www.blogger.com/profile/00307257530462722883noreply@blogger.comtag:blogger.com,1999:blog-3901985173139732142.post-67736041822780771892011-08-13T12:25:27.948+05:302011-08-13T12:25:27.948+05:30@ರಾಘು ಅವರೆ, ನೀವು ಹೇಳಿದ ಮೊದಲೆರಡು ಸಾಲುಗಳು ನಿಮ್ಮ ಈ ಹಿ...@ರಾಘು ಅವರೆ, ನೀವು ಹೇಳಿದ ಮೊದಲೆರಡು ಸಾಲುಗಳು ನಿಮ್ಮ ಈ ಹಿಂದಿನ ಪ್ರತಿಕ್ರೆಯೆಯ ವಿಷಯದಲ್ಲೂ ಅಷ್ಟೇ ಸತ್ಯ. ಅಲ್ಲವೇ? ಚರ್ಚೆಯ ದಾಟಿಯ ಬಗ್ಗೆ ನೀವು ಆಗಲೇ ಯೋಚಿಸಿದ್ದರೆ ಇದು ಹೀಗಾಗುತ್ತಿರಲಿಲ್ಲ ಬಿಡಿ.<br />ನನ್ನನ್ನು ಗೋಜಲು ಮನಸ್ಥಿತಿಯಿಂದ ಹೊರತರಲು ಅವಿರತ ಪ್ರಯತ್ನಕ್ಕೆ ಹೇಗೆ ಕೃತಜ್ಞತೆ ಹೇಳಬೇಕೋ ತಿಳಿಯುತ್ತಿಲ್ಲ.<br />೧. ನಿಮ್ಮ ಶೋಧನೆಯ ಯೂಟ್ಯೂಬ್ ಲಿಂಕ್ನ್ನು ನಿಧಾನಕ್ಕೆ ನೋಡುತ್ತೇನೆ. ಆದರೆ ತಮ್ಮ ಸ್ವಂತ ಏಳಿಗೆಗಾಗಿ ಜಾತಿಯನ್ನು ಬಳಸಿಕೊಳ್ಳುವ ರಾಜಕಾರಣಿಗಳ ಮಾತುಗಳಿಗೆ ನಾನು ಅಷ್ಟಾಗಿ ಬೆಲೆ ಕೊಡಬಾರದು ಎಂದುಕೊಂಡಿದ್ದೇನೆ. ಬ್ರಾಹ್ಮಣ ದ್ವೇಷದ ಉದಾಹರಣೆಗಳು ನಿಮಗೆ ಸಿಕ್ಕಿರಬಹುದು. ಆದರೆ ನನ್ನ ದೃಷ್ಟಿಯಲ್ಲಿರುವುದು ಎಂದೂ ಬ್ರಾಹ್ಮಣ - ದೀವರಲ್ಲಿ ಜಗಳ ದೊಂಬಿಯಾಗಲೀ ದ್ವೇಷವಾಗಲೀ ಇರದ ನಮ್ಮ ಊರು ಹಾಗೂ ಅಂತಹ ಅನೇಕ ಊರುಗಳು. ನೀವು ಹೇಳಿರುವುದು ನಿಜ ಸಂಗತಿಯಾದರೆ ಅದು ಕಾಳಜಿಯ ವಿಷಯ. ಜಾತಿ - ಜಾತಿಗಳ ಹಾಗೂ ಧರ್ಮ - ಧರ್ಮಗಳ ನಡುವೆ ಅದು ಯಾವುದೇ ಕಾರಣಕ್ಕಿರಲಿ ದ್ವೇಷ, ಕಲಹ, ಸಂಘರ್ಷಗಳೇರ್ಪಡುವುದು ಈ ಬಹುಸಂಸ್ಕೃತೀಯ ಭಾರತದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಏನಂತೀರಿ?. ಅಭಿಪ್ರಾಯ ಬೇಧಗಳು ಮಾತುಕತೆಯಿಂದ ಬಗೆಹರಿಯಬೇಕು.<br />೨. ನಿಮ್ಮ ಸಲಹೆಯಂತೆ ಕೊಸಾಂಬಿ ಬಗ್ಗೆ ತಿಳಿಯಲು ವಿಕಿಪಿಡಿಯಾ ನೋಡಿದೆ. ಅದರಲ್ಲಿ ಹೀಗಿತ್ತು. He is well-known for his work in numismatics and for compiling critical editions of ancient Sanskrit texts. His father, Dharmananda Damodar Kosambi, had studied ancient Indian texts with a particular emphasis on Buddhism and its literature in the Pali language. Damodar Kosambi emulated him by developing a keen interest in his country's ancient history. Kosambi was also a Marxist[1] historian specializing in ancient India who employed the historical materialist approach in his work. He is described as "the patriarch of the Marxist school of Indian historiography".[1].......<br />ನೀವು ಹೇಳಿದ್ದು ಸರಿ ರಾಘು. ಅವರು ಮಾರ್ಕ್ಸ್ವಾದಿ ಕೂಡಾ ಹೌದಂತೆ!. ಆದರೆ ಏನು ಮಾಡೋಣ. ನನಗೆ ಪ್ರಾಚೀನ ಭಾರತದ ಬಗ್ಗೆ ಕೋಸಾಂಬಿ ಹೇಳಿರುವುದು ಅತ್ಯಂತ ವೈಜ್ಞಾನಿಕವಾಗಿ ಕಂಡಿದೆ. ಯಾರಾದರೂ ಬಲಪಂಥೀಯ ಬರೆದಿದ್ದು ಅಷ್ಟೇ ವೈಜ್ಞಾನಿಕವಾಗಿ ಕಂಡರೆ ನಾನು ಮರುಮಾತಿಲ್ಲದೇ ಒಪ್ಪಿಕೊಳ್ಳುತ್ತೇನೆ. ಸರೀನಾ?. ಕಮ್ಯುನಿಷ್ಟರ ಬಗ್ಗೆ ನಿಮಗೆ ಏನಿದೆಯೋ ಗೊತ್ತಿಲ್ಲ. ನನಗೂ ಸಾವಿರ ಭಿನ್ನಾಭಿಪ್ರಾಯಗಳಿವೆ. ಅದಕ್ಕಿಂತಲೂ ಹೆಚ್ಚು ಬಲಪಂಥೀಯರ ಬಗ್ಗೆ ಇವೆ. ಇವುಗಳ ಬಗ್ಗೆ ಚರ್ಚಿಸಲು ಬೇರೆ ವೇದಿಕೆ ಕಲ್ಪಿಸಲು ಸಂಪಾದಕೀಯದವರನ್ನೇ ಕೇಳೋಣ. ಇದು ವೇದಿಕೆಯಲ್ಲ. ಓಕೆನಾ? <br />೩. ಡಾ. ಬಿ.ಆರ್.ಅಂಬೇಡ್ಕರ್ ಹೆಸರು ಕೇಳಿದೀರೋ?. ಮಾಂಸಾಹಾರಕ್ಕೂ ಕೆಲವು ಸಮುದಾಯಕ್ಕೂ (ವಿಶೇಷವಾಗಿ ಗೋ ಮಾಂಸಕ್ಕೂ) ಇರುವ ಸಂಬಂಧಕ್ಕೂ ಚಾರಿತ್ರಿಕ ಹಿನ್ನೆಲೆ ಇದೆ. ಸಂಶೋಧನೆ ಬೇಡ. ಶೋಧನೆ ಮಾಡಿ. ಲಿಂಕನ್ನೂ ನಾನೇ ಕೊಡುತ್ತೇನೆ. ನೋಡಿ.1. http://www.ambedkar.org/ambcd/39B.Untouchables%20who%20were%20they_why%20they%20became%20PART%20II.htm<br />೪. ನೋಡಿ. ನಿಮ್ಮ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ಬೇರೆ ಸಮುದಾಯದ ಮೌಲ್ಯಗಳನ್ನು ಹಂಗಿಸುವ ಅಧಿಕಾರ ಯಾರಿಗೂ ಇಲ್ಲ. ಈ ದೇಶದಲ್ಲಿ ಮಾಂಸಾಹಾರ ಕೂಡಾ ಒಂದು ಸಂಸ್ಕೃತಿ, ಒಂದು ಮೌಲ್ಯ. ಅದರ ಬಗ್ಗೆ ಅಭಿಪ್ರಾಯಬೇಧ ಮಾತ್ರ ಸಾಧ್ಯ. ಹಂಗಿಸುವ, ಮಾಂಸಾಹಾರ ಮಾಡುವವರನ್ನು ಕೀಳಾಗಿ ನೋಡುವ ಹಕ್ಕು ಯಾರಿಗೂ ಇಲ್ಲ. ಇದು ಶತಃಸಿದ್ಧ.<br /> ಸಂಘಪರಿವಾರದ ಅಪ್ರಾಮಾಣಿಕತೆ, ಮಾಂಸಾಹಾರದ ವಿಚಾರದಲ್ಲಿ ಡೋಂಗಿತನವನ್ನು ಪ್ರಶ್ನಿಸಿದ ಮಾತ್ರಕ್ಕೆ ಕಸಿವಿಸಿಗೊಂಡ ನಿಮ್ಮ ಒಲವೂ ಅರ್ಥವಾಗಿದೆ. ನೀವೇನೂ ಸಹನೆಯಿಂದ ಪ್ರತಿಕ್ರಿಯಿಸಲಿಲ್ಲವಲ್ಲ.<br /> <br /> <br />ನಿಮ್ಮ ಹಿನ್ನೆಲೆ ಹೇಳಿದ್ದೀರಿ ಸಂತೋಷ. ನನ್ನ ಗೊಡ್ಡುಬೆದರಿಕೆ ವರ್ಕೌಟ್ ಆಗಿದೆ. ಡೋಂಟ್ ವರಿ. ನನ್ನ ಮನಸ್ಸು ಬದಲಾಯಿಸಿದ್ದೇನೆ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆಯಿಲ್ಲ!. be happpy.. <br />-ಹರ್ಷ ಕುಗ್ವೆ.Anonymousnoreply@blogger.comtag:blogger.com,1999:blog-3901985173139732142.post-5351395726607801922011-08-13T07:26:23.678+05:302011-08-13T07:26:23.678+05:30charche asahya huttisuttide. vikruta vitandavadaga...charche asahya huttisuttide. vikruta vitandavadagalu hesige tarisuttive.sampadakeeya geleyare dayamadi idannu nillisi.<br />chandrashekarAnonymousnoreply@blogger.comtag:blogger.com,1999:blog-3901985173139732142.post-56178899768226206092011-08-12T16:14:16.560+05:302011-08-12T16:14:16.560+05:30"With great power comes great responsibility&..."With great power comes great responsibility" ಎನ್ನುವಂತೆ ಒಂದು ಗಂಭೀರವಾದ ವಿಷಯದ ಬಗ್ಗೆ ಲೇಖನ ಬರೆದರೆ ಅದರ ಬಗ್ಗೆ ಜವಾಬ್ದಾರಿಯ ಅಷ್ಟೇ ಗಂಭೀರವಾಗಿ ಹೊರಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಅಧ್ಯಯನ ಅಗತ್ಯ. <br />ಹಿಟ್ಲರ್ ಸಸ್ಯಹಾರಿಯಾಗಿದ್ದನೆಂದು ಸಸ್ಯಹಾರಿಗಳನ್ನೆಲ್ಲಾ ಹಿಟ್ಲರ್ಗೆ ಹೋಲಿಸುವುದು, ಯಾರೋ ಕೆಲಸದವರ ಮೇಲೆ ದಬ್ಬಾಳಿಕೆ ನೆಡೆಸಿದವ ಜೈನನಾಗಿದ್ದನೆಂದು ಜೈನರನ್ನೆಲ್ಲಾ ದಬ್ಬಾಳಿಕೆ ನೆಡೆಸುವವರೆಂದು ಬಿಂಬಿಸುವುದು. ಕೊಳೆತ ಮಾವುತಿಂದು ಜಗದ ಮಾವೆಲ್ಲಾ ಕೊಳೆತಿದೆ ಎನ್ನುವಂತಿರುವ ಲೇಖಕರ ವಾದ ಸರಣಿ ಈ ಲೇಖನದ Comments ಮೂಲಕ ದೃಢಪಡುತ್ತದೆ. <br /><br />ಸಂಪಾದಕೀಯದ ಗುಣಮಟ್ಟ ಹೀಗಿರಬಾರದಿತ್ತು. <br /><br />ನಿಮಗೆ ಪ್ರಕಟಿಸಲು ಲೇಖನಗಳಿಲ್ಲದಿದ್ದಲ್ಲಿ ಸುಮ್ಮನಿದ್ದುಬಿಡಿ.offcourse, ನಿಮ್ಮ ಜನಪ್ರಿಯತೆಗೆ ಇದರಿಂದೇನು ಕುಂದಿಲ್ಲ. ಆದರೆ ಈ ರೀತಿಯ 3 ನೇ ದರ್ಜೆಯ ಲೇಖನಗಳನ್ನು ಪ್ರಕಸಿಸಬೇಡಿ. <br /><br />ನಮಸ್ಕಾರಗಳು,<br />ಶ್ರುತದೇವAnonymousnoreply@blogger.comtag:blogger.com,1999:blog-3901985173139732142.post-75085190315735153662011-08-12T09:45:30.484+05:302011-08-12T09:45:30.484+05:30@ಹರ್ಷ ಅವರೆ ವಿಷಯವನ್ನು ವಸ್ತುನಿಷ್ಟವಾಗಿ ಚರ್ಚಿಸದೇ ಘಾಸಿಗ...@ಹರ್ಷ ಅವರೆ ವಿಷಯವನ್ನು ವಸ್ತುನಿಷ್ಟವಾಗಿ ಚರ್ಚಿಸದೇ ಘಾಸಿಗೊ೦ಡವರ೦ತೆ ಪ್ರತಿಕ್ರಿಯಿಸಿದ್ದೀರಿ. ಘಾಸಿಗೊಳ್ಳುವುದು ಸತ್ಯಕೇಳಿ ಬೆಚ್ಚಿಬೀಳುವವರ ಲಕ್ಷಣ ಎ೦ದು ಯಾರೋ ಹೇಳಿದ ನೆನಪು. ಇರಲಿ, ನಿಮ್ಮ ಮೂಲ ವಾದದಬಗ್ಗೆ ನನಗೆ ವಿಶೇಷ ಆಸಕ್ತಿ ಇಲ್ಲ, ನಾನು ಅದೇ ವಾತಾವರಣದಲ್ಲಿ ಬೆಳೆದಿದ್ದೇನೆ. ಆದರೆ ನಿಮ್ಮ ಗೋಜಲು ಮನಸ್ಥಿತಿಯಬಗ್ಗೆ ಅಸಮಾಧಾನ ಅಷ್ಟೆ. <br /><br />೧) ಸ೦ಶೋಧನೆ ಬಹಳ ದೂರದಮಾತು. ಶೋಧನೆ ನಮಗೆ ನಿಮಗೆ ಸಧ್ಯ ಸಾಕು. ಈ ವೀಡಿಯೋ ನೋಡಿ: http://www.youtube.com/watch?v=r9quEOYqsuI <br />ಕಾಗೋಡು ತಿಮ್ಮಪ್ಪನವರು, ಪಾಪ, ಇನ್ನೇನು ಎದುರಿಗಿದ್ದವರನ್ನು ಹೊಡೆದೇಬಿಡುವಷ್ಟು ಬ್ರಾಹ್ಮಣದ್ವೇಷ ಕಕ್ಕಿಕೊಳ್ಳುತಿದ್ದಾರೆ. ಮಾಲ್ವೆ ಊರಿನ ಹೆಸರು ಕೇಳಿದ್ದೀರೋ? ಬಲ್ಲವರಲ್ಲಿ ಕೇಳಿ ನಿಮಗೆ ಕಥೆಹೇಳಿಯಾರು. ಹಲವು ಉದಾಹರಣೆ ಸಮರ್ಥನೆ ಕೊಡಬಹುದು ಆದರೆ ನನಗೆ ನಿಮ್ಮೆದುರು ಅದನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಕಾಣುವುದಿಲ್ಲ.<br /><br />೨) ಕೋಸಾ೦ಬಿ ಒಬ್ಬ ಮಾರ್ಕ್ಸಿಸ್ಟ್ ಇತಿಹಾಸಕಾರರು ಎನ್ನುವುದು ಜನಜನಿತವಾದದ್ದು. ಕನಿಷ್ಟ ವೀಕಿಪೀಡಿಯಾವನ್ನಾದರು ಓದಿ. ಅವರು ಸ೦ಪೂರ್ಣ ಬಲಪ೦ಥೀಯವಾದದ ವಿರೋಧಿ! ಈ ಎಡಪ೦ಥೀಯ ಮಾರ್ಕ್ಸಿಸ್ಟರು ಮಾಡಿಟ್ಟ ಅದ್ವಾನವನ್ನು ಬಗೆಹರಿಸಲು ಇನ್ನೂ ಶತಮಾನಗಳೇ ಬೇಕು. ನಿಮಗೆ ಪ್ರಾಮಾಣಿಕವಾಗಿ ಅದರಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಅನೇಕ ಅವಕಾಶವಿದೆ.<br />೩) ಶ೦ಕರಾಚಾರ್ಯರ ಹೆಸರು ಕೇಳಿದ್ದೀರೋ ? ಸಸ್ಯಾಹಾರಕ್ಕೂ ಕೆಲವು ಸಮುದಾಯಗಳಿಗೂ ಇರುವ ಸ೦ಬ೦ಧಕ್ಕೂ ಚಾರಿತ್ರಿಕ ಹಿನ್ನೆಲೆ ಇದೆ. ಸ೦ಶೋಧನೆ ಬೇಡ, ಸ್ವಲ್ಪ ಶೋಧನೆ ಮಾಡಿ! <br />೪) ನೀವು ನಿಮ್ಮ ಪ್ರತಿಕ್ರಿಯೆಗಳಲ್ಲೂ ಲೇಖನದಲ್ಲೂ ಅನಗತ್ಯವಾಗಿ ನಿಮ್ಮ ಸಸ್ಯಾಹಾರಿ ವಿರೋಧೀ ಮತ್ತು ಬಲಪ೦ಥೀಯ ವಿರೋಧೀ ಭಾವೆನೆಗಳನ್ನು ಸ್ಪಷ್ಟವಾಗಿ ತೋರ್ಪಡಿಸಿದ್ದೀರಿ. ಅಲ್ಲದೇ ಹ೦ಗಿಸಿ ನುಡಿದಿದ್ದೀರಿ. ಅವನ್ನಾಧರಿಸಿ ನಿಮ್ಮ ಒಲವಿನ ಬಗ್ಗೆ ಊಹೆಮಾಡಬಹುದು. ಇದಕ್ಕೆ ಅಸಹನೆ ಎ೦ಬ ಪದಬಳಸುತ್ತಾರೆ (intolerance). ಎಲ್ಲವನ್ನೂ ಒಪ್ಪದಿರುವ ಸ್ವಾತ೦ತ್ರ್ಯ ಹಕ್ಕು ನಮಗಿದ್ದರೂ ಬೇರೆ ಸಮುದಾಯದ ಮೌಲ್ಯಗಳನ್ನು ಹ೦ಗಿಸುವ ಅಧಿಕಾರ ಯಾರಿಗೂ ಇಲ್ಲ.<br /><br />ನಮ್ಮಿಬ್ಬರ ಸ೦ಭಾಷಣೆಯ ಧಾಟಿಯಬಗ್ಗೆ ನನಗೇನು ಸಮಾಧಾನವಿಲ್ಲ. ಏಕೆ೦ದರೆ ನಾನೂ ಬ್ರಾಹ್ಮಣ, ಈಡಿಗ, ವಕ್ಕಲಿಗ, ಮಡಿವಾಳ, ಹೊಲೆಯ, ಮಾದಿಗಾದಿಗಳೊಡನೆ ಆಡಿ ಬೆಳೆದವನೆ. ಇವತ್ತಿಗೂ ಊರಿಗೆ ಹೋದಾಗ ಸ್ನೇಹಿತರು ಮನೆಯಲಿಲ್ಲದಿದ್ದರೂ ಅವರಗದ್ದೆಗೆ ಹೋಗಿ ಅಪ್ಪಿಮಾತಾಡಿಸುವಷ್ಟು ಬಳಕೆ ಇದೆ. ಆದರೆ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎನ್ನುವಮೂಲಕ ಸ್ವಲ್ಪ ಅತಿಮಾಡಿದ್ದೀರಿ. ನನ್ನ ಜಾತಕವೇ ಅ೦ತರ್ಜಾಲದಲ್ಲಿದೆ. ನಿಮ್ಮ೦ತೆ ನನ್ನ ಹೆಸರಿನಲ್ಲೂ ನನ್ನ ಊರಿದೆ! ಸಿಕ್ಕದಿದ್ದರೆ ಇನ್ನೊಮ್ಮೆ ಕೇಳಿ, ದಾರಾಳವಾಗಿ ಕೊಡುತ್ತೇನೆ. ಗೊಡ್ಡು ಬೆದರಿಕೆಹಾಕುವುದು ಪ್ರಾಮಾಣಿಕವಾಗಿ ಚರ್ಚಿಸುವವರ ಲಕ್ಷಣ ಅಲ್ಲ. ಅದಕ್ಕೆ ಹೆದರುವನಾಗಿದ್ದರೆ ಈ ರೀತಿ ಪ್ರತಿಕ್ರಿಯಿಸುತ್ತಲೂ ಇರಲಿಲ್ಲ. ನಮ್ಮನಿಮ್ಮ೦ಥವರು ವಿನಾಕಾರಣ ನಮ್ಮ ಶಕ್ತಿಯನ್ನು ಅನುಪಯೋಗೀ ಕಾರ್ಯಗಳಲ್ಲಿ ವಿನಿಯೋಗಿಸಬಾರದು ಎ೦ದು ಬಲ್ಲವರು ಹೇಳಿದ್ದಾರೆ. ನಮಸ್ಕಾರ. <br /><br />ರಾಗು ಕಟ್ಟಿನಕೆರೆRagu Kattinakerehttps://www.blogger.com/profile/17043138095700145552noreply@blogger.comtag:blogger.com,1999:blog-3901985173139732142.post-60290570731466093062011-08-11T12:33:34.992+05:302011-08-11T12:33:34.992+05:30@~rAGU
ರಾಘು ಅವರೆ, ಎಂಥಾ ಸಂಶೋಧನೇರೀ ನಿಮ್ದು! ಸಾಗರ ಪ್ರಾ...@~rAGU<br />ರಾಘು ಅವರೆ, ಎಂಥಾ ಸಂಶೋಧನೇರೀ ನಿಮ್ದು! ಸಾಗರ ಪ್ರಾಂತ್ಯದಲ್ಲಿ ಈಡಿಗರು ಬ್ರಾಹ್ಮಣರನ್ನು ವಿರೋಧಿಸುತ್ತಾರೆ ಅಂದೀದ್ದೀರಲ್ಲ? ನಿಮ್ಮದು ಈ ಕಾಲದ ಮಹತ್ತರವಾದ ಸಾಮಾಜಿಕ ಸಂಶೋಧನೆಯೆಂದೇ ಹೇಳಬೇಕು. ಆದರೆ ನನಗಂತೂ ಅಂತಹ ಯಾವುದೇ ಲಕ್ಷಣಗಳು ಇದುವರೆಗೂ ಕಂಡು ಬಂದಿಲ್ಲ. ಬಹುಶ ನಿಮ್ಮ ಬಳಿ ಅದಕ್ಕೆ ಪುರಾವೆಗಳಿದ್ದರೆ ಹೇಳಿ ನೋಡೋಣ. <br />ಇರಲಿ ಈ ಮೂಲಕ ನಾನೂ ಈಡಿಗನೆಂದೂ, ಇಲ್ಲಿ ಮಾಂಸಾಹಾರ ಸಮರ್ಥಿಸುವ ಮೂಲಕ ಬ್ರಾಹ್ಮಣರನ್ನು ವಿರೋಧಿಸುತ್ತಿದ್ದೇನೆಂದೂ ತೀರ್ಪುನೀಡುವಂತಿದೆ ನಿಮ್ಮ ಪ್ರತಿಕ್ರಿಯೆ. ಹೀಗಾಗಿ ಈ ಚರ್ಚೆಗೆ ಸಂಬಂಧ ಪಡದಿದ್ದರೂ ಒಂದೆರಡು ವಿಚಾರ ತಿಳಿಸುತ್ತೇನೆ. ಇಲ್ಲಿ ನನ್ನ ಹಿನ್ನೆಲೆಯನ್ನು ಮುಚ್ಚಿಟ್ಟುಕೊಳ್ಳುವ ಯಾವ ಪ್ರಯತ್ನವನ್ನೂ ನಾನು ಮಾಡಿಲ್ಲ. ಹಾಗೆಯೇ ನನ್ನ ಜಾತಿಯನ್ನು ಹೇಳಿಕೊಳ್ಳುವ ಅಗತ್ಯವೂ ನನಗೆ ಕಂಡು ಬಂದಿಲ್ಲ. ನೀವು ತಿಳಿಸಿರುವಂತೆ ಸಾಗರ ಪ್ರಾಂತ್ಯದ ಈಡಿಗ ಸಂಸ್ಕೃತಿಯ ಭಾಗವಾಗಿಯೇ ನಾನು ಬೆಳೆದಿದ್ದು. ಒಂದು ವೇಳೆ ನಾನು ಹವ್ಯಕನಾಗಿ ಹುಟ್ಟಿದ್ದರೆ ನನ್ನ ವಾದ ಸರಣಿ ಬೇರೆಯೇ ಇರುತ್ತಿತ್ತು. ದಲಿತನಾಗಿದ್ದರೆ ಇನ್ನೂ ಬೇರೆಯದಾಗಿರುತ್ತಿತ್ತು. ನಮ್ಮ ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಅವರ ಜಾತಿ ಹಿನ್ನೆಲೆ ಕೆಲಸ ಮಾಡಿಯೇ ತೀರುತ್ತದೆ. ಆದರೆ, ನಮ್ಮ ಕಡೆಯ ಈಡಿಗರು ಹೊಲೆಯರನ್ನು, ಮಾದಿಗರನ್ನು ನಡೆಸಿಕೊಳ್ಳುವುದು ಎಂತಹಾ ಅಮಾನವೀಯತೆ ಎನ್ನುವುದು ನನ್ನ ಅರಿವಿಗೆ ಬಂದಿದೆ. ಬೆಕ್ಕು, ಕೋಳಿ, ನಾಯಿಗಳನ್ನು ಮನೆಯೊಳಕ್ಕೆ ಕರೆದುಕೊಳ್ಳುವ ನಾವು ದಲಿತರನ್ನು ಒಳಕ್ಕೆ ಸೇರಿಸಿಕೊಳ್ಳುವುದಿಲ್ಲ. ನನ್ನ ವೈಯುಕ್ತಿಕ ಮಟ್ಟದಲ್ಲಿ ಅದನ್ನು ಮೀರುವ ಪ್ರಯತ್ನ ನನಗೆ ಬುದ್ದಿ ಬಂದಾಗಿನಿಂದ ನಡೆದಿದೆ. ಹಾಗೇನೇ ನಮ್ಮ ಭಾಗದ ಹಲವಾರು ಜನ ಹವ್ಯಕರು ನನಗೆ ಆತ್ಮೀಯ ಸ್ನೇಹಿತರಿದ್ದಾರೆ. ಅವರೂ ತಮ್ಮ ಜಾತಿಯ ಕಟ್ಟಳೆಗಳನ್ನು ಮೀರಿ ಬದುಕಲು ಇಚ್ಚಿಸುತ್ತಿದ್ದಾರೆ. ಇವರಾರೂ ಕಮ್ಯುನಿಷ್ಟರಲ್ಲ. ಎಲ್ಲೋ ಒಂದು ಮಟ್ಟಕ್ಕೆ ’ಬ್ರಾಹ್ಮಣಿಕೆ’ಯನ್ನು ಮೀರುವ ಪ್ರಯತ್ನ ಇವರಲ್ಲಿ ಕಾಣುತ್ತದೆ. ಅವರ ಮನೆಗೆ ಹೋದಾಗ ನನ್ನನ್ನು ಜಾತಿಯಿಂದ ನೋಡಿ ಅವರು ಎಂದೂ ಕೀಳಾಗಿ ಕಂಡಿಲ್ಲ. ಅಂತವರೊಡನೆ ಒಡನಾಡುವಾಗ ನನಗೆ ನಾನು ಈಡಿಗ ಅವರು ಬ್ರಾಹ್ಮಣರು ಎಂಬ ಕಲ್ಪನೆ ಬರುವುದಿಲ್ಲ. ಅದಕ್ಕೆ ಅವಕಾಶವೂ ಇರುವುದಿಲ್ಲ. ಮನುಷ್ಯರನ್ನು ಮನುಷ್ಯರ ಹಾಗೆ ನೋಡುವವರು ಅವರು. ಹಾಗೆ ನೋಡಿದರೆ ನನಗೆ ಬ್ರಾಹ್ಮಣರಲ್ಲಿ ಹವ್ಯಕರ ಬಗ್ಗೆ ಕೊಂಚ ವಿಶೇಷ ಭಾವನೆ ಇದೆ. ಏಕೆಂದರೆ ಬಹುತೇಕ ಹವ್ಯಕರು ಶ್ರಮಜೀವಿಗಳು. ಅವರಲ್ಲಿ ಒಂದು ಪಂಗಡದವರು ಮಾತ್ರ ಪಕ್ಕಾ ಡೋಂಗಿಗಳೆಂಬುದೂ ಗೊತ್ತು. ಅವರು ಹೇಳುವುದೊಂದು ಮಾಡುವುದೊಂದು. ಇಂತಹವರು ಪಕ್ಕಾ ಜಾತಿವಾದಿಗಳು. ಇಂತಹವರನ್ನು ಕಿಂಡರೆ ನನಗೆ ಅಷ್ಟಕ್ಕಷ್ಟೆ. ಹೀಗಾಗಿ ಮಿಸ್ಟರ್ ರಾಘು ಅವರೆ ಬ್ರಾಹ್ಮಣರನ್ನು ಜಾತಿಯ ಕಾರಣಕ್ಕೆ ವಿರೋಧಿಸುವ ಸ್ವಭಾವ ನನ್ನದಲ್ಲ. ಹಾಗೆ ಮಾಡುವ ಬಗ್ಗೆ ನನಗೆ ವಿರೋಧವಿದೆ. <br />ನನ್ನ ಜಾತಿ ಹಿನ್ನೆಲೆಯನ್ನು ಹೇಳಿ ಅನಗತ್ಯ ಗೊಂದಲ ಸೃಷ್ಟಿಸಿದ್ದಕ್ಕಾಗಿ ಈ ಸ್ಪಷ್ಟನೆ ನೀಡಬೇಕಾಯ್ತು. <br />ಇನ್ನು ಕೋಸಾಂಬಿ, ಆರ್. ಎಸ್. ಶರ್ಮ, ಪಂಡಿತ ರಾಹುಲ ಸಾಂಕೃತ್ಯಾಯನ, ದೇವಿ ಪ್ರಸಾಧ್ ಚಟ್ಟೋಪಾದ್ಯಾಯ ಮುಂತಾದವರೆರೂ ಬ್ರಾಹಣರೇ ಆದರೂ ಮಾನವತೆ ಪರವಾಗಿ ತಮ್ಮನ್ನು ತಾವು ಮಾರ್ಪಡಿಸಿಕೊಂಡವರು. ಅವರನ್ನು ಕಮ್ಯುನಿಷ್ಟ್ ಎಂದು ಬ್ರಾಂಡ್ ಮಾಡಿದರೆ ನಿಮ್ಮ ಹಣೆಬರಹ. ಇಂತಹವರ ವಿಚಾರಗಳನ್ನು ನನಗೆ ಒಪ್ಪಿಕೊಳ್ಳಲು ನನಗೆ ಅವರು ಬ್ರಾಹ್ಮಣರು ಎನ್ನುವುದಾಗಲೀ, ಅವರು ಕಮ್ಯುನಿಷ್ಟರೆನ್ನುವುದಾಗಲೀ ಕಾರಣವಾಗಿಲ್ಲ. ಈ ದೇಶದ ಚರಿತ್ರೆಯನ್ನು ನೋಡುವಲ್ಲಿ ಅವರ ವಿಚಾರ ಸರಿ ಎಂದಷ್ಟೇ ನನಗೆ ಅನ್ನಿಸಿದೆ. ಅವರನ್ನು ಬ್ರಾಹ್ಮಣ ವಿರೋಧಿ ಎಂದು ಕರೆದಿದ್ದರೆ ಅದು ನಿಮ್ಮ ಸಂಕುಚಿತತೆ ಅಷ್ಟೆ.<br />ನೀವು ಹೇಳಿದಂತೆ ನನಗೆ ಯಾವುದೇ ಗೊಂದಲಗಳಿಲ್ಲ. ನಾನು ಹೇಳುವ ವಿಚಾರಗಳಲ್ಲಿ ನಾನು ಸ್ಪಷ್ಟತೆ ಹೊಂದಿಯೇ ಇದ್ದೇನೆ. ಕೆಲವೊಮ್ಮೆ ನಮ್ಮ ವಿಚಾರಗಳು ತಪ್ಪಾಗಬಹುದು. ಅವು ಅರ್ಥವಾದಾಗ ಸರಿ ಮಾಡಿಕೊಳ್ಳುವುದಿದ್ದೇ ಇರುತ್ತೆ. ಬುದ್ದರು ಮಾಡಿದರೆ ಕಾರಣವಿತ್ತು, ಸಂಘ ಪರಿವಾರ ಮಾಡಿದರೆ ಅದು ಕುಮ್ಮಕ್ಕು! ಇದು ಇಬ್ಬಂದಿತನವಲ್ಲವೇ ಅಮತ ಕೇಳಿದ್ದೀರಿ. ಇದಕ್ಕೆ ನನ್ನ ಉತ್ತರ ಖಂಡಿತಾ ಅಲ್ಲ. ಯಾಕೆ ಕೇಳಿ. ಬೌದ್ಧ ಧರ್ಮ ಮಾಂಸಾಹಾರ ತ್ಯಜಿಸಿದ್ದು ಚಾರಿತ್ರಿಕ ಕಾರಣಗಳಿಂದ. ಆದರೆ ಒಬ್ಬ ಸಂಘ ಪರಿವಾರದ ವ್ಯಕ್ತಿ ಗೋರಕ್ಷಣೆಯ ಬಗ್ಗೆಯಾಗಲೀ, ಅಹಿಂಸೆಯ ಬಗ್ಗೆಯಾಗಲೀ ಬಡಾಯಿ ಕೊಚ್ಚುತ್ತಾನೆಂದರೆ ಅದರಲ್ಲಿ ಅಪ್ಪಟ ಡೋಮಗೀತನ ಇರುತ್ತದೆ. ನೋಡಿ ಈ ಚರ್ಚೆಯಲ್ಲಿ ಮಾಂಸಾಹಾರದ ವಿರುದ್ಧವಾಗಿ ಪ್ರತಿಪಾದಿಸಿದಂತಹ ಅಪೂರ್ವ ಅಂತಹವರೂ ಇದ್ದಾರೆ. ಅವರ ಪ್ರಾಮಾಣಿಕತೆ ಬಗ್ಗೆ ನನಗೆ ಗೌರವವಿದೆ. ಹೀಗಾಗಿ ಅವರ ವಿಚಾರವನ್ನೂ ಗೌರವಿಸುತ್ತೇನೆ. ಆದರೆ ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಪ್ರತಿಪಾದಿಸುವ ಒಬ್ಬ ಸಂಘಪರಿವಾರದ ವಕ್ತಿಗೆ ಮಾಂಸಾಹಾರವನ್ನು ಪ್ರಾಣಿ ಹಿಂಸೆ, ಅಹಿಂಸೆಗಳ ನೆಲೆಯಲ್ಲಿ ವಿರೋಧಿಸುವ ನೈತಿಕ ಹಕ್ಕಿರುವುದಿಲ್ಲ. ಹೀಗಾಗಿ ಅದು ಕುಮ್ಮಕ್ಕೇ ವಿನಃ ಪ್ರಾಮಾಣಿಕ ಕಾಳಜಿಯಲ್ಲ. <br />ಕೊನೆಯದಾಗಿ, ನಾನು ’ಬುದ್ದಿಜೀವಿ’ಯಾಗಲು ಪ್ರಯತ್ನಿಸುತ್ತಿದ್ದೇನೆಂದು ಸುಖಾಸುಮ್ನೆ ಗಂಭೀರವಾದ ಆಪಾದನೆ ಮಾಡಿದ್ದೀರಿ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ತಯಾರಾಗಿದ್ದೇನೆ. ನಿಮ್ಮ ಹೆಸರು, ಊರು ತಿಳಿಸಿ. <br /><br />-- <br />Regards,<br /><br />Harsha KugweAnonymousnoreply@blogger.comtag:blogger.com,1999:blog-3901985173139732142.post-41011313651835311082011-08-10T15:33:34.479+05:302011-08-10T15:33:34.479+05:30May I be dear to all animals (Atharva 16.71.4)
Ma...May I be dear to all animals (Atharva 16.71.4)<br /><br />May you eat rice (Vrihi); may you eat barley (Yava), also black beans (Mdsa) and Sesamum (Tila). This is the share aloted to both of you for happy results, 0 you two teeth (dantau), may you not injure the father and mother. (Atharva - 6-140-2)<br /><br />Do not kill any of the Creatures. (Yaju. L 1)<br /><br />Do not kill the horse. (Yaju. 13.42)<br /><br />Do not kill quadrupeds. (Yak. 13.44)<br /><br />Do not kill wool-giving animals. (Yak. 13.47)<br /><br /><br />May you be illumined by the mighty rags of knowledge and may you not kill the cow, the aditi (Yaju.13.43)<br /><br />Do not kill a cow but treat her as Mother. (Yaju.12.32)<br /><br />Protect both our species, two-legged and four-legged. Both food and water for their needs supply. May they with us increase in stature and strength. Save us from hurt all our days, O Powers!<br />Rig Veda Samhita 10.37.11. VE, 319 <br /><br />One who partakes of human flesh, the flesh of a horse or of another animal, and deprives others of milk by slaughtering cows, O King, if such a fiend does not desist by other means, then you should not hesitate to punish such a person.<br />Rig Veda Samhita, 10.87.16, FS 90 <br /><br />Peaceful be the earth, peaceful the ether, peaceful heaven, peaceful the waters, peaceful the herbs, peaceful the trees. May all Gods bring me peace. May there be peace through these invocations of peace. With these invocations of peace which appease everything, I render peaceful whatever here is terrible, whatever here is cruel, whatever here is sinful. Let it become auspicious, let everything be beneficial to us.<br />Atharva Veda Samhita 10. 191. 4 <br /><br />Those noble souls who practice meditation and other yogic ways, who are ever careful about all beings, who protect all animals, are the ones who are actually serious about spiritual practices.<br />Atharva Veda Samhita 19.48.5. FS, 90Anonymousnoreply@blogger.comtag:blogger.com,1999:blog-3901985173139732142.post-37135573893449782902011-08-09T20:44:50.331+05:302011-08-09T20:44:50.331+05:30ಮನುಷ್ಯ ಪ್ರಾಣಿಗಳನ್ನು ತಿನ್ನುವುದು ಸರಿಯಾದರೆ.. ಹುಲಿ ಮನು...ಮನುಷ್ಯ ಪ್ರಾಣಿಗಳನ್ನು ತಿನ್ನುವುದು ಸರಿಯಾದರೆ.. ಹುಲಿ ಮನುಷ್ಯನನ್ನು ತಿನ್ನುವುದೂ ಸಹಜವೇ ತಾನೆ? ಪಾಪ ಅವುಗಳನ್ನು ಯಾಕೆ ನರಹಂತಕ ಹುಲಿ ಎಂದು ಸಾಯಿಸ್ತಾರೋ ಅರ್ಥ ಆಗ್ತಾ ಇಲ್ಲ ??? :)Anonymousnoreply@blogger.comtag:blogger.com,1999:blog-3901985173139732142.post-15265906524488783042011-08-09T14:01:56.071+05:302011-08-09T14:01:56.071+05:30ಹರ್ಷ, ನಿಮ್ಮ ಒಳನೋಟದ,ನಿರ್ಭಿಡೆಯ ಬರಹ ನಿಜಕ್ಕೂ ಪ್ರಸ್ತುತ....ಹರ್ಷ, ನಿಮ್ಮ ಒಳನೋಟದ,ನಿರ್ಭಿಡೆಯ ಬರಹ ನಿಜಕ್ಕೂ ಪ್ರಸ್ತುತ. ಅದಕ್ಕಾಗಿ ನಿಮಗೆ ಅಭಿನಂದನೆಗಳು.<br />'ಮಾಂಸಾಹಾರ' ಎಂಬುದನ್ನು ವೈದಿಕರು ರಾಜಕೀಯದ ಒಂದು ಬಹುದೊಡ್ಡ 'ಅಸ್ತ್ರ'ವಾಗಿ ಬಳಸುತ್ತ ಬಂದಿದ್ದಾರೆ.<br /><br />ಕೆಳವರ್ಗದ, ಗ್ರಾಮೀಣ ಸಮುದಾಯದ ಭಕ್ತಿ, ಶ್ರದ್ಧೆ ಮತ್ತು ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವಾದ ಆಹಾರ ಪದ್ಧತಿಗೆ ತನ್ನದೆ ಆದ ಘನತೆ ಇದೆ.ಭಕ್ತ ಪರಂಪರೆಯೇ ಇದರ ಹಿಂದಿದೆ.<br /><br />ಪ್ರಾಣಿಬಲಿಯನ್ನು 'ಅಮಾನವೀಯ' ಎಂದು ಕರೆಯುವ 'ಮನುಷ್ಯರು' ಮೊದಲು ತಮ್ಮ 'ಮಾನವಕುಲದ' ಕುರಿತು,ಮನುಷ್ಯಜಾತಿಯ ಕುರಿತು ಸಹನೆ ಮತ್ತು ಪ್ರೀತಿಯನ್ನು ಕಲಿಯಲಿ. ಮನುಷ್ಯರ ನಡುವೆ ರಕ್ತಕಾರುತ್ತಿರುವ ಹಿಂಸೆಯ ಕುರಿತು ಯೋಚಿಸಲಿ.<br /><br />ಮಾಂಸಾಹಾರ, ಪ್ರಾಣಿಬಲಿಯನ್ನು ಹೀಯಾಳಿಸುವ ಮೂಲಕ ಜನರಲ್ಲಿ ಕೀಳರಿಮೆಯನ್ನು ಉದ್ದೀಪಿಸುವ ಕೀಳು ರಾಜಕೀಯ ನಿಲ್ಲಿಸಿ, ಮನುಷ್ಯರನ್ನು ಪ್ರೀತಿಸುವ ಮಾನವರಾಗಲಿ.charithahttp://nannapaadigenaanu.blogspot.com/noreply@blogger.comtag:blogger.com,1999:blog-3901985173139732142.post-26856371679544105502011-08-09T01:05:47.809+05:302011-08-09T01:05:47.809+05:30ಇಲ್ಲಿ ಒಬ್ಬರು ಹೇಳಿದ್ದು:
"ನೀವು ನಿಮ್ಮ ಅಭಿಪ್ರಾಯದ...ಇಲ್ಲಿ ಒಬ್ಬರು ಹೇಳಿದ್ದು:<br /><br />"ನೀವು ನಿಮ್ಮ ಅಭಿಪ್ರಾಯದಲ್ಲಿ ನಾವು ತಿನ್ನುವ ಆಹಾರಕ್ಕೂ ನಮ್ಮ ಒಳ್ಳೆಯತನ ಹಾಗೂ ಕೆಟ್ಟತನಗಳಿಗೂ ಸಂಬಂಧ ಕಲಿಸಲು ಪ್ರಯತ್ನಿಸಿದಾಗ ನಾವು ಮೇಲಿನ ಉತ್ತರ ನೀಡದೇ ವಿಧಿಯಿಲ್ಲ.ನಾವು ನಮ್ಮ ಬರೆಹಗಳ ಮೂಲಕ ನಿಮಗೆ ಅರ್ಥ ಮಾಡಿಸಲು ಯತ್ನಿಸಲು ಪ್ರಯತ್ನಿಸುತ್ತಿರುವ ಒಂದೇ ವಿಷಯವೆಂದರೆ ಮೊದಲು ಮನುಷ್ಯರನ್ನು ಪ್ರೀತಿಸುವುದನ್ನು ಕಲಿಯೋಣ."<br /><br />ಇದು ಒಪ್ಪುವಂತಹ ಮಾತೇ.<br /><br />"ಹಾಗಿದ್ದರೆ, ಮಾಂಸಾಹಾರ ಮಾಡುವವರು ಅಪ್ಪಟ ಸಸ್ಯಾಹಾರಿ ಹಿಟ್ಲರ್ ನಂತೆ ಚೂರಿಯನ್ನು ಬಗಲಲ್ಲಿ ಇಟ್ಟುಕೊಂಡು ತಿರುಗುವುದಿಲ್ಲ."<br /><br /><br />ಇಂತಹ ಮಾತುಗಳೇಕೆ ಬರಬೇಕು? ಅಪ್ಪಟ ಸಸ್ಯಾಹಾರಿಗಳನ್ನು ಹಿಟ್ಲರ್ ಗೆ ಹೋಲಿಸಬೇಕೇಕೆ? ಹಿಟ್ಲರ್ ಸಸ್ಯಾಹಾರಿಯಾಗಿದ್ದು ನಿಜ. ಆದರೆ ಎಲ್ಲ ಸಸ್ಯಾಹಾರಿಗಳೂ ಹಿಟ್ಲರ್ ರೀತಿ ಇಲ್ಲವಲ್ಲ!<br /><br />ಇಂತಹ ದ್ರಾವಿಡ ಪ್ರಾಣಾಯಾಮ ಅಸಂಬದ್ಧ ಎನಿಸದಿರದು.hamsanandihttps://www.blogger.com/profile/15560853535208005782noreply@blogger.comtag:blogger.com,1999:blog-3901985173139732142.post-86906957258507436572011-08-07T19:07:47.343+05:302011-08-07T19:07:47.343+05:30roopa hassan avaru barediruvante namma samvidanada...roopa hassan avaru barediruvante namma samvidanada 51 a column pranidayeya kuritu prasthapiside. neevu tappagi bhavisidante pranibaliya kuritalla. ambedkar avaru halavaru kadegalalli pranibaliyannu virodisi matanadiruvudu dhakalagide. 50 varshagala hindeye pranibali nishedada kanunugalu jariyagive. hegagi ega pranibali kuritu samarthisikollalu nadeuttiruva charcheye samvidana bahira. kanunina virudda. mamsahara-pranibali eradu bereyade vishayagalu. summane charche dikku tapputtide.- venkatesh gowda a.vAnonymousnoreply@blogger.comtag:blogger.com,1999:blog-3901985173139732142.post-31330828958478779962011-08-07T15:02:09.485+05:302011-08-07T15:02:09.485+05:30ಮಾನ್ಯ ಅನಾಮಧೇಯರೇ, ಮಾಂಸಾಹಾರಿಗಳು ಚೂರಿಯನ್ನು ಇಟ್ಟುಕೊಳ್ಳ...ಮಾನ್ಯ ಅನಾಮಧೇಯರೇ, ಮಾಂಸಾಹಾರಿಗಳು ಚೂರಿಯನ್ನು ಇಟ್ಟುಕೊಳ್ಳುವದೇ ಇಲ್ಲವೇ.. ಅಥವಾ ಚೂರಿಯನ್ನು ಬಗಲು ಬಿಟ್ಟು ಬೇರೆ ಕಡೆ ಇಟ್ಟುಕೊಂಡು ತಿರುಗುತ್ತಾರೋ??? ಅಪ್ಪಟ ಸಸ್ಯಹಾರಿಗಳಾದ ಮಹಾತ್ಮಾ ಗಾಂಧಿ, ಬಸವಣ್ಣ ಮುಂತಾದವರ ಬಗಲಲ್ಲೂ ಚೂರಿ ಇತ್ತಾ??ಮಹೇಶ ಭಟ್ಟhttps://www.blogger.com/profile/05755194531925269015noreply@blogger.comtag:blogger.com,1999:blog-3901985173139732142.post-17274908928927416702011-08-07T12:53:24.730+05:302011-08-07T12:53:24.730+05:30ಒಕ್ಸಿಜನ್ ಕೊಡುವ ಸಸ್ಯಗಳನ್ನು ಕೊಂದು ಚಟ್ನಿ ಮಾಡಿ ತಿನ್ನು...ಒಕ್ಸಿಜನ್ ಕೊಡುವ ಸಸ್ಯಗಳನ್ನು ಕೊಂದು ಚಟ್ನಿ ಮಾಡಿ ತಿನ್ನುವುದು ಎಷ್ಟು ಸರಿ.<br />ಬೂದು ಕುಂಬಳ ಕಾಯಿ ಒಡೆದು ಹಾಲು ಮಾಡಿದಾಗ ನಿಮಗೇನು ಅನಿಸುವುದಿಲ್ಲ ಯಾಕೆ ?<br />ಮಾಂಸಾಹಾರ ಭಾರತದ ಬಹುಜನ ಹಿಂದೂಗಳ ಬದುಕಿನ ಭಾಗ. ಮಾಂಸಾಹಾರ ಮಾಡುವವರು ಅಪ್ಪಟ ಸಸ್ಯಾಹಾರಿ ಹಿಟ್ಲರ್ ನಂತೆ ಚೂರಿಯನ್ನು ಬಗಲಲ್ಲಿ ಇಟ್ಟುಕೊಂಡು ತಿರುಗುವುದಿಲ್ಲ.Anonymousnoreply@blogger.comtag:blogger.com,1999:blog-3901985173139732142.post-78550655842639023552011-08-06T23:53:28.759+05:302011-08-06T23:53:28.759+05:30ನನ್ನ ಅಭಿಪ್ರಾಯದಲ್ಲಿ, ಆಹಾರಕ್ಕಾಗಿ ನಡೆದ ಪ್ರಾಣಿ ಹತ್ಯೆ ಸ...ನನ್ನ ಅಭಿಪ್ರಾಯದಲ್ಲಿ, ಆಹಾರಕ್ಕಾಗಿ ನಡೆದ ಪ್ರಾಣಿ ಹತ್ಯೆ ಸಮರ್ಥನೀಯವೇ. ಇನ್ನು ಸಂಸ್ಕೃತಿ-ವಿಕೃತಿ ಇತ್ಯಾದಿಗಳು ಕೇವಲ ಅಂದಾಜು ಪರಿಕಲ್ಪನೆಗಳೇ ಹೊರತೂ ನೇರ ನಿರ್ದಿಷ್ಟ, ಎಲ್ಲರೂ ಒಪ್ಪುವಂಥ ವ್ಯಾಖ್ಯಾನಗಳಿಗೆ ಒಳಪಡುವಂತವುಗಳಲ್ಲ. ಕುರಿ ಕಡಿಯುವವರಿಗೆ, ತಿನ್ನುವವರಿಗೆ ಅದು ಹಿಂಸೆ/ಸ್ಯಾಡಿಸಂ ಅಂತ ಅನ್ನಿಸದಿದ್ದರೆ ಅಷ್ಟೇ ಆಯಿತು. ಬಲಿ ನೀಡುವವರು, ಕಡಿಯುವವರು ಪ್ರಾಣಿಯು ಹೆಚ್ಛು ಹಿಂಸೆ ಇಲ್ಲದೇ-ಒದ್ದಾಟವಿಲ್ಲದೇ ಅರ್ಧ ಸತ್ತು ಅರ್ಧ ಬದುಕಿದಂತಾಗದೇ ಸರಿಯಾಗಿ ನೋವುರಹಿತವಾಗಿ ೫ರಿಂದ ೧೦ ಸೆಕೆಂದುಗಳಲ್ಲಿ (ಒಂದೇಟಿಗೇ) ಸಾಯುವಂತೆ ನೋಡಿಕೊಲ್ಲುದು ಮಾತ್ರಾ ಅಪೇಕ್ಷಣೀಯವಷ್ಟೇ. ದೇವರಿಗೆ ಹಲವು ಮಾನವ ಗುಣಗಳನ್ನು ಆರೋಪಿಸಿದ್ದು ಸರಿಯಾದರೆ, ದೇವರು ಸಂಸ್ಕೃತಿಯ ಭಾಗವೇ ಎಂದಾದರೆ, ಆ ದೇವರಿಗೆ ಮಾನವನು ತಿನ್ನುವ ಮಾಂಸಾಹಾರವೂ ಒದಗುವುದು ಸಂಸ್ಕೃತಿಯ ಭಾಗವೇ ಆಗುತ್ತದಲ್ಲವೇ?Anonymousnoreply@blogger.comtag:blogger.com,1999:blog-3901985173139732142.post-21277949457655596012011-08-06T21:39:25.022+05:302011-08-06T21:39:25.022+05:30Well defended article. More than 90 percent in our...Well defended article. More than 90 percent in our society are non-vegetarians. Does it mean our society is uncivilised?Anonymousnoreply@blogger.comtag:blogger.com,1999:blog-3901985173139732142.post-22958598479821884952011-08-06T21:33:31.622+05:302011-08-06T21:33:31.622+05:30ಹರ್ಷ ಅವರೇ, ನಮ್ಮ ದೇಶದಲ್ಲಿ ಶುದ್ಧ ಸಸ್ಯಾಹಾರಿ ವರ್ಗಗಳೇ ಅ...ಹರ್ಷ ಅವರೇ, ನಮ್ಮ ದೇಶದಲ್ಲಿ ಶುದ್ಧ ಸಸ್ಯಾಹಾರಿ ವರ್ಗಗಳೇ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿರುವುದು ಎಂಬ ನಿಮ್ಮ ಮಾತು ಸ್ವತಃ ಸಸ್ಯಹಾರಿಯಾದ ನನಗೆ ಅತ್ಯಂತ ನೋವು ಕೊಡುವ ಮಾತು. ಆದರೆ ನಿಮ್ಮಿಂದ ಅಂಥ ಮಾತು ಬಂತು ಅಂದರೆ ಅದಕ್ಕೆ ಕಾರಣ ಸಸ್ಯಹಾರಿಗಳಿಂದ ನೀವು ಅನುಭವಿಸಿದ ನೋವುಗಳೇ ಇರಬಹುದು.ಮಹೇಶ ಭಟ್ಟhttps://www.blogger.com/profile/05755194531925269015noreply@blogger.comtag:blogger.com,1999:blog-3901985173139732142.post-83903782964608560092011-08-06T19:16:22.552+05:302011-08-06T19:16:22.552+05:30ಹರ್ಷ, ಚರ್ಚೆಯನ್ನು ಎತ್ತೆತ್ತೆಲೋ ಎಳೆಯಬೇಡಿ. ಬಲಿಕೊಡುವುದನ...ಹರ್ಷ, ಚರ್ಚೆಯನ್ನು ಎತ್ತೆತ್ತೆಲೋ ಎಳೆಯಬೇಡಿ. ಬಲಿಕೊಡುವುದನ್ನು ನಾನು ವಿರೋಧಿಸಿದ ತಕ್ಷಣ ಮನುಷ್ಯರನ್ನು ಮನುಷ್ಯರಂತೆ ಕಾಣುವುದನ್ನು ವಿರೋಧಿಸುತ್ತೇನೆ ಎಂದು ಹೇಗೆ ಕಲ್ಪಿಸಿದಿರಿ? ನನ್ನ ಹೇಳಿಕೆಯಲ್ಲೆಲ್ಲೂ ಅಮಾನವೀಯ ನಡವಳಿಕೆಗಳಿಗೆ ಸಮರ್ಥನೆ ಇಲ್ಲ. ಅಥವಾ ಮನುಷ್ಯರು ಮನುಷ್ಯರನ್ನೇ ಹೀನಾಯವಾಗಿ ಕಾಣುವುದನ್ನೂ ನಾನು ಸಮರ್ಥಿಸಿಕೊಂಡಿಲ್ಲ. ಇದು ನಿಮ್ಮ ಕಲ್ಪನೆಯಷ್ಟೆ. ಮನುಷ್ಯರೊಂದಿಗೆ ಪ್ರಾಣಿಗಳನ್ನೂ ಮಾನವೀಯತೆಯ ದೃಷ್ಟಿಯಿಂದ ನೋಡಬೇಕೆಂಬುದು ನನ್ನ ವಾದದ ಅರ್ಥ. ಪ್ರಕೃತಿಯಲ್ಲಿ ಪ್ರಾಣಿ, ಸಸ್ಯಗಳು ಒಂದನ್ನೊಂದು ಅವಲಂಬಿಸಿ ಬದುಕುತ್ತವೆ ನಿಜ. ಮನುಷ್ಯನಿಗೆ ಪ್ರಾಣಿಗಳನ್ನೇ ಅವಲಂಬಿಸಿ ಬದುಕುವ ಅನಿವಾರ್ಯತೆಯೂ ಇಲ್ಲವೆಂದು ನನ್ನ ಅಭಿಪ್ರಾಯ. ನಾನು ಹೇಳುವುದಿಷ್ಟೇ. ಪ್ರಾಣಿ ಇರಲಿ, ಮನುಷ್ಯರೇ ಇರಲಿ ಅವರನ್ನು ಹೃದಯದಿಂದ ನೋಡಿ ಎಂದು. ಮನುಷ್ಯರ ಶೋಷಣೆಗೆ ನನ್ನದೂ ವಿರೋಧವಿದೆ. ಹರ್ಷ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು-ಅಪೂರ್ವAnonymousnoreply@blogger.comtag:blogger.com,1999:blog-3901985173139732142.post-76776107576547119642011-08-06T18:30:30.602+05:302011-08-06T18:30:30.602+05:30ಅಪೂರ್ವ ಅವರೆ, ನಿಮ್ಮ ವಾದದ ಪ್ರಕಾರ ನೋಡುವುದಾದರೆ ಮನುಷ್ಯನ...ಅಪೂರ್ವ ಅವರೆ, ನಿಮ್ಮ ವಾದದ ಪ್ರಕಾರ ನೋಡುವುದಾದರೆ ಮನುಷ್ಯನ ವಿಕಾಸ ಪ್ರಕ್ರಿಯೆಯಲ್ಲಿ ಶುದ್ಧ ಸಸ್ಯಾಹಾರ ಎನ್ನುವುದು ಮನುಷ್ಯನ ಪ್ರಜ್ಞೆಯಲ್ಲಿನ ವಿಕಾಸ. ಹೌದಲ್ವಾ? ಮಾಂಸಾಹಾರಿಯಾಗಿದ್ದ ಮನುಷ್ಯ ಕ್ರಮೇಣ ಶುದ್ಧ ಸಸ್ಯಾಹಾರಿಯಾಗಿ ಬೆಳವಣಿಗೆ ಹೊಂದಿದ್ದಾನೆ. ಅಥವಾ ನಿಮ್ಮ ತಿಳಿವಳಿಕೆಯ ಪ್ರಕಾರ ಹೀಗೆ ಬೆಳವಣಿಗೆ ಹೊಂದಿದವರು ಮಾತ್ರ ನಿಜಕ್ಕೂ ಮನುಷ್ಯರು ಎನ್ನಬಹುದು. ಅಂದರೆ ಅಲ್ಲಿಗೆ ನಿಮ್ಮ ವಾದದ ಪ್ರಕಾರ ನಮ್ಮ ದೇಶದ ಮುಕ್ಕಾಲು ವಾಸಿ ಜನರು ಇನ್ನೂ ಪರಿಪೂರ್ಣತೆ ಬೆಳವಣಿಗೆ ಹೊಂದಿಲ್ಲ. ಅಥವಾ ಅವರು ಕೆಟ್ಟವರು. ನಿಮ್ಮ ಮಾತು ಜಗತ್ತಿನ ಮುಕ್ಕಾಲು ವಾಸಿ ಜನರಿಗೂ ಅನ್ವಯವಾಗುತ್ತದೆ. ಇದೇ ನಿಮ್ಮ ವಾದವಾದರೆ ನಿಮಗೆ ನನ್ನ ಒಂದು ಸಣ್ಣ ಪ್ರಶ್ನೆ ಇದೆ. ನಮ್ಮ ದೇಶದಲ್ಲಿ ಇಂದು ಶುದ್ದ ಸಸ್ಯಾಹರವನ್ನು ಕಳೆದ ನೂರಾರು ಅಥವಾ ಸಾವಿರ ವರ್ಷದಿಂದ ಪಾಲಿಸುತ್ತಿರುವವರಲ್ಲಿರುವ ಮಾನವೀಯತೆಯ ಪ್ರಮಾಣ ಎಷ್ಟು? ಅದೇ ಶುದ್ಧ ಸಸ್ಯಾಹಾರಿ ಸಮುದಾಯದಿಂದ ಬಂದವರ ಪ್ರತಿಪಾದನೆ ಹಾಗೂ ಬರವಣಿಗೆಗಳಿಂದಲೇ ನಾನು ಅರ್ಥ ಮಾಡಿಕೊಂಡಿರುವುದು ಏನೆಂದರೆ ನಮ್ಮ ದೇಶದಲ್ಲಿ ಶುದ್ಧ ಸಸ್ಯಾಹಾರಿ ವರ್ಗಗಳೇ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿರುವುದು. ಇಂದೂ ಸಹ ಅದು ಮುಂದುವರೆದಿದೆ. ಒಂದು ಕಾಂಟೆಂಪರರಿ ಉದಾಹರಣೆ ಕೊಡಲೇಬೇಕು. ಜೈನರು ಅಪ್ಪಟ ಸಸ್ಯಾಹಾರಿಗಳು ಹಾಗೂ ಸೊಕಾಲ್ಡ್ ಅಹಿಂಸಾವಾದಿಗಳು. ಅವರು ಕಾಲಿನಲ್ಲಿ ಒಂದು ಇರುವೆಯನ್ನೂ ಸಾಯೊಸುವುದಿಲ್ಲ ಎನ್ನುವುದನ್ನು ಕೇಳಿದ್ದೇನೆ. ಆದರೆ, ನಾನು ನಮ್ಮ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಕಂಡಿದ್ದೇನೆ. ಅವರು ತಮ್ಮ ಮನೆಯಲ್ಲಿ, ತೋಟಗಳಲ್ಲಿ ದಿನವಿಡೀ ಕೂಲಿ ಕೆಲಸ ಮಾಡುವ ಕೆಳವರ್ಗದ ಹೆಣ್ಣಾಳುಗಳಿಗೆ ಕೊಡುವುದು ಬರೀ ೧೫ ರಿಂದ ೨೦ ರೂಪಾಯಿ ಕೂಲಿ. ಈ ಕಾರಣದಿಂದಾಗಿ ಎಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ. ಸಾಗರ ತಾಲ್ಲೂಕಿನ ತುಮರಿ ತಾಲ್ಲೂಕಿನಲ್ಲಿ ಈ ಹೆಣ್ಣು ಮಕ್ಕಳು ತಮ್ಮ ಬದುಕನ್ನು ಮೂರಾಬಟ್ಟೆ ಮಾಡುವ ಸಾರಾಯಿ ದೊರೆಗಳ ವಿರುದ್ಧ ಹೋರಾಟಕ್ಕಿಳಿದಾಗ ಿದೇ ಜೈನ ಭೂಮಾಲೀಕರು ಈ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿದರು. ಹಾಗಂತ ಎಲ್ಲಾ ಜೈನರೂ ಹಾಗೇ ಎಂದಲ್ಲ. ಆದರೆ ಬಹುತೇಕರು ಹಾಗೆ. ಅವರಿಗೆ ಇರುವೆಯ ನೋವು ಕೇಳುತ್ತದೆ. ಆದರೆ ತಮಗಾಗಿ ಬೆವರು ಹರಿಸುವವರ ನೋವು ಕೇಳುವುದಿಲ್ಲ. ಇದೇನಾ ಅಹಿಂಸಾವಾದ? ಇದೇನಾ ಮಾನತೆ?. <br />ನೀವು ನಿಮ್ಮ ಅಭಿಪ್ರಾಯದಲ್ಲಿ ನಾವು ತಿನ್ನುವ ಆಹಾರಕ್ಕೂ ನಮ್ಮ ಒಳ್ಳೆಯತನ ಹಾಗೂ ಕೆಟ್ಟತನಗಳಿಗೂ ಸಂಬಂಧ ಕಲಿಸಲು ಪ್ರಯತ್ನಿಸಿದಾಗ ನಾವು ಮೇಲಿನ ಉತ್ತರ ನೀಡದೇ ವಿಧಿಯಿಲ್ಲ.<br />ನಾವು ನಮ್ಮ ಬರೆಹಗಳ ಮೂಲಕ ನಿಮಗೆ ಅರ್ಥ ಮಾಡಿಸಲು ಯತ್ನಿಸಲು ಪ್ರಯತ್ನಿಸುತ್ತಿರುವ ಒಂದೇ ವಿಷಯವೆಂದರೆ ಮೊದಲು ಮನುಷ್ಯರನ್ನು ಪ್ರೀತಿಸುವುದನ್ನು ಕಲಿಯೋಣ. ಮಾನವ ಜನುಮ ಪ್ರಾಣಿಗಳ ಜನುಮಕಕ್ಇಂತ ದೊಡ್ಡದು. ಮಾಂಸಾಹಾರ ೆನ್ನುವುದು ಮನುಷ್ಯರನ್ನು ನಿಕೃಷ್ಟರಾಗಿ ಕಾಣಲು ಅಥವಾ ಧ್ವೇಷಿಸಲು ಕಾರಣವಾಗದಿರಲಿ. ಇದು ಅರುಣ್ , ನನ್ನ ಹಾಗೂ ನಮ್ಮಂಥವರ ಕಾಳಜಿ . ಇಲ್ಲಿ ಬಹಳ ಜನ ಕಮೆಂಟುಗಳಲ್ಲಿ ನಾವು ನರಬಲಿಯನ್ನೂ ಸಮರ್ಥಿಸುತ್ತೇವೆ ಎನ್ನುವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ನಾವು ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾದಾಗ ಅವರಿಗೆ ಇದು ಅನಿವಾರ್ಯವಾಗಿರಬಹುದು. ಇರಲಿ. ಆದರೂ ನಾನು ಲೇಖನದಲ್ಲೇ ಸ್ಪಷ್ಟ ಪಡಿಸಿದ್ದೇನೆ. ಪ್ರಕೃತಿಯಲ್ಲಿ ಸಸ್ಯಗಳಿರಲಿ ಪ್ರಾಣಿಗಳಿರಲಿ ಒಂದನ್ನೊಂದು ಅವಲಂಬಿಸಿ ಬದುಕುತ್ತವೆ. ಆದರೆ ಯಾವ ಪ್ರಾಣಿಯೂ ತನ್ನದೇ ಜಾತಿಯ ಪ್ರಾಣಿಯನ್ನು ತಿನ್ನುವುದಿಲ್ಲ ಎಂದು. ಮನುಷ್ಯನ ವಿಕಾಸದ ಯಾವ ಹಂತದಲ್ಲೂ ಅದು ಕಾಣಿಸುವುದಿಲ್ಲ.<br /> <br />ಪರಿಸರದಲ್ಲಿ ಸಹಜ ಯಾವುದು, ಅಸಹಜ ಯಾವುದು ಎನ್ನುವ ಕುರಿತು ತಪ್ಪು ಕಲ್ಪನೆಗಳಿದ್ದಾಗ ಮಾತ್ರ ನೀವು ಹೇಳುವಂತಹ ವಾದಗಳು ಉದ್ಭವಿಸಬಹುದು. ಹೀಗಾಗಿಯೇ ನಾವು ಮಾಂಸಾಹಾರವನ್ನು ಸರಿ ಎಂದಾಕ್ಷಣ ಚಿಂತಾಮಣಿಯ ಕೊಲೆಗಳನ್ನು ಸರಿ ಎಂದು ಹೇಳುತ್ತೇವೆ ಎನ್ನುವ ಮಟ್ಟಕ್ಕೆ ನಿಮ್ಮ ಕಲ್ಪನಾ ಶಕ್ತಿ ವಿಸ್ತಾರವಾಗುತ್ತದೆ. ಈ ಮಟ್ಟದ ವಿಕೃತ ಕಲ್ಪನೆ ಶುದ್ಧ ಸಸ್ಯಾಹಾರದಿಂದಲೇ ಬಂದದ್ದೋ ಏನೋ??<br />-ಹರ್ಷ ಕುಗ್ವೆAnonymousnoreply@blogger.comtag:blogger.com,1999:blog-3901985173139732142.post-35247858296684277472011-08-06T18:08:40.291+05:302011-08-06T18:08:40.291+05:30ಇನ್ನು ಪ್ರಾಣಿ ಪ್ರೀತಿಯ ಕುರಿತು ಮಾತನಾಡುವುದಾದರೆ ಹಳ್ಳಿಗಳ...ಇನ್ನು ಪ್ರಾಣಿ ಪ್ರೀತಿಯ ಕುರಿತು ಮಾತನಾಡುವುದಾದರೆ ಹಳ್ಳಿಗಳಲ್ಲಿ ಜನರು ಕುರಿಕೋಳಿಗಳನ್ನು ಸಾಕುವಾಗ ಅವುಗಳನ್ನು ಮುಂದೆ ತಿನ್ನುವುದೇ ಆದರೂ ಅವುಗಳನ್ನು ಸಾಕಷ್ಟು ಪ್ರೀತಿ, ಜತನದಿಂದಲೇ ಸಾಕುತ್ತಾರೆ. ಕೋಳಿ ಮರಿಯೊಂದನ್ನು ಹದ್ದು ಕಚ್ಚಿಕೊಂಡು ಹೋದರೆ ಮುಂದೆ ತಿನ್ನಲು ಒಂದು ಕೋಳಿ ಕಡಿಮೆಯಾಯಿತಲ್ಲಾ ಎಂದು ಯಾರೂ ಯೋಚಿಸುವುದಿಲ್ಲ. ಬದಲಾಗಿ ಅದರ ಮೇಲಿನ ಕಾಳಜಿಯಿಂದ ಮರುಗುತ್ತಾರೆ<br />ಆಹಾ... ಎಂತಹ ಜಾಣ್ಮೆಯಿಂದ ಕೂಡಿದ ಬರಹ !!!Anonymousnoreply@blogger.comtag:blogger.com,1999:blog-3901985173139732142.post-56103692904841426112011-08-06T16:20:37.813+05:302011-08-06T16:20:37.813+05:30ದುರಂತವೆಂದರೆ, ಇದೇ ಬ್ಲಾಗ್ ನಲ್ಲಿ ಪ್ರಕಟವಾಗಿರುವ ಚಿಂತಾಮಣ...ದುರಂತವೆಂದರೆ, ಇದೇ ಬ್ಲಾಗ್ ನಲ್ಲಿ ಪ್ರಕಟವಾಗಿರುವ ಚಿಂತಾಮಣಿಯ ನರಮೇಧ ಕುರಿತು ಯಾರೂ ತಲೆ ಕೆಂಡಿಸಿಕೊಂಡಂತಿಲ್ಲ. ಆದರೆ ಪ್ರಾಣಿಬಲಿ ಕುರಿತಾಗಿ ಪ್ರತಿಕ್ರಿಯೆಗಳ ಹೊಳೆ ಹರಿಯುತ್ತಿದೆ. ಅರುಣ್ ಅವರು ಹೇಳಿರುವಂತೆ ’ಆಚರಣೆಯನ್ನು ಹೊರಗಿನಿಂದ ನೋಡುವವರಿಗೆ ಕ್ರೌರ್ಯವಾಗಿ ಬಲಿಯಾಗಿ ಕಾಣುತ್ತದೆ’. ಖಂಡಿತವಾಗಿ ಚಿಂತಾಮಣಿಯ ನರಮೇಧ, ಬಲಿ ಎರಡೂ ನಮಗೆ ಕ್ರೌರ್ಯವಾಗಿಯೇ ಕಾಣುತ್ತವೆ. ಅರುಣ್ ಅವರು ಹಾಗೂ ಹರ್ಷ ಅವರು ಚಿಂತಾಮಣಿಯ ಪ್ರಕರಣವನ್ನೂ ಯಾವ ರೀತಿಯಲ್ಲಿ ಅಕಾಡೆಮಿಕ್ ಆಗಿ ನೋಡುವರೋ ಏನೋ. ಇದನ್ನೂ ಒಂದು ಪ್ರತಿಸಂಸ್ಕೃತಿ, ಸಾಮಾಜಿಕ ಜನಜೀನವನದ ಒಂದು ಅಂಗವೆಂದು ಸಾಧಿಸಲೂಬಹುದು. ಯಾಕೆಂದರೆ ಅಲ್ಲಿ ಕಳ್ಳರನ್ನು ಕೊಲ್ಲುತ್ತಿದ್ದೇವೆಂಬ ಸಮರ್ಥನೆಯಿದೆ. ವ್ಯವಸ್ಥೆಯ ವಿಫಲತೆಯಿಂದ ಆದ ಅನಾಹುತವೆಂಬ ವಾದವಿದೆ. ನಾನು ಹೀಗೆಂದಾಕ್ಷಣ ಸಂಘ ಪರಿವಾರದವರೆಂಬ ಕಾಮಾಲೆ ಕಣ್ಣಿಂದ ನೋಡಬಹುದು. ನಾನು ಯಾವ ಪರಿವಾರದವಳೂ ಅಲ್ಲ. ಅಹಿಂಸೆಯ ಪರವಾದಿ ಅಷ್ಟೆ. ಇಲ್ಲಿ ವಾದಿಸುವವರು ಸುಶಿಕ್ಷಿತರು, ನಾಗರಿಕರು ಎಂದು ಕೊಂಡಿದ್ದಾರೆಂದು(ಸಸ್ಯಾಹಾರಿಗಳು) ಅರುಣ್ ತಿಳಿಸಿದ್ದಾರೆ. ಆ ಭ್ರಮೆ ನಮಗಿಲ್ಲ. ಬಲಿ ಅನ್ನಿ ಅಥವಾ ಕಡಿಯುವುದು ಎಂದೇ ಹೇಳಿ ವ್ಯತ್ಯಾಸವೇನಿಲ್ಲ. ಅದನ್ನು ಮಾಡುವವರೆಲ್ಲ ಸುಶಿಕ್ಷಿತರು, ನಾಗರಿಕರು ಎಂದುಕೊಂಡರೆ ನಮ್ಮ ಅಭ್ಯಂತರವೇನಿಲ್ಲ. ನಮ್ಮ ಪೂರ್ವಜರು ಆದಿವಾಸಿಗಳು ಪ್ರಾಣಿಗಳನ್ನು ಬೇಟೆಯಾಡಿಯೇ ಕೊಂದು ತಿನ್ನುತ್ತಿದ್ದರು ಎಂದು ಹೇಳುವುದೂ ಸಮರ್ಥನೆಯೆಯಿಸದು. ಯಾಕೆಂದರೆ ಪೂರ್ವಜರಿಗೆ ಆಗಿನ್ನೂ ಬುದ್ಧಿ ಬೆಳವಣಿಗೆಯಾಗಿರಲಿಲ್ಲ. ಮುಂದಿನದು ತಮಗೆ ಬಿಟ್ಟದ್ದು.-ಅಪೂರ್ವAnonymousnoreply@blogger.comtag:blogger.com,1999:blog-3901985173139732142.post-9177730030429085892011-08-06T16:06:43.640+05:302011-08-06T16:06:43.640+05:30ಪಶ್ಚಿಮದ, ಪ್ರಮುಖವಾಗಿ ಯುರೋಪಿನ, ಜನರು ತಮ್ಮ ಸಂಸ್ಕೃತಿಯ ಚ...ಪಶ್ಚಿಮದ, ಪ್ರಮುಖವಾಗಿ ಯುರೋಪಿನ, ಜನರು ತಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಕಂಡುಕೊಂಡಂತಹ ರಾಜಕೀಯ, ಸಾಂಸ್ಕೃತಿಕ ಮೌಲ್ಯಗಳು ಜಗತ್ತಿನಾದ್ಯಂತ ಅನ್ವಯವಾಗುವ ಸಾರ್ವತ್ರಿಕ ಮೌಲ್ಯಗಳಾಗಿ ಹೇಗೆ ಪರಿವರ್ತನೆಗೊಂಡವು ಎನ್ನುವುದರ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆದಿದೆ ಹಾಗು ನಡೆಯುತ್ತಲೂ ಇದೆ ವಸಾಹತು ದೇಶಗಳಲ್ಲಿ ಈ ಪ್ರಭಾವ ಬೇರೆಲ್ಲಿಗಿಂತಲೂ ಹೆಚ್ಚಾಗಿ ಕಂಡುಬರುತ್ತದೆ. ಭಾರತದ ಮೇಲೂ ಈ ಪ್ರಭಾವ ಬಹಳ ದಟ್ಟವಾಗಿದೆ. ಅದ್ದರಿಂದ ಭಾರತದ ಆಚರಣೆಗಳ ಕುರಿತಾದ ನಮ್ಮ ಬಹುಪಾಲು ವಿವರಣೆಗಳು ಪಶ್ಚಿಮದ ಕಣ್ಣಿನಿಂದ ಗ್ರಹಿಸಿ ವಿವರಿಸುತ್ತಿದ್ದೇವೆ ಎಂದು ನಾನು ನನ್ನ ಬರಹದಲ್ಲಿ ವಿವರಿಸಿದ್ದೆ. ಮುಂದುವರಿದು ಅದು ಅಷ್ಟೆಯೇ? ಅ ನಂತರ ಅ ಜ್ಞಾನ ಭಾರತದ ಸಮಾಜದ ಮೇಲೆ ಬಿರಿದ ಪ್ರಭಾವ ಏನು ಎಂದು ಯೋಚಿಸಿದರೆ ಭಾರತದ ಸಮಾಜದ ಕುರಿತು ಪಶ್ಚಿಮ ವಿವರಿಸಿದ ಇ ಜ್ಞಾನವನ್ನೇ ಭಾರತದ ಮೇಲು ಜಾತಿಗಳು ಯಾವುದೇ ಮರು ಪರೀಕ್ಷೆಗೆ ಒಳಪಡಿಸದೆ ತಮ್ಮ ರಾಜಕೀಯದ ಭಾಗವಗಿಸಿಕೊಂಡವು. ಅದಕ್ಕೆ ಉದಾಹರಣೆಯಾಗಿ ಸಮಾಜದ ಬಹುಪಾಲು ಅವಕಾಶಗಳನ್ನು ಗಳಿಸಿರುವ/ಗಳಿಸಿಕೊಳ್ಳುತ್ತಿರುವ ಜಾತಿಗಳನ್ನೂ ಗುರುತಿಸಬಹುದು. ಅದರಿಂದ ನಮ್ಮ ಪ್ರಯತ್ನ ನಮ್ಮ ಸಮಾಜದ ಕುರಿತು ಪಶ್ಚಿಮ ಸೃಷ್ಟಿಸಿದ ಜ್ಞಾನದ ನಿರಾಕರಣೆ ಮಡಿ ನಮ್ಮದೇ ಜ್ಞಾನ ಶಾಕೆಗಳ ಸೃಷ್ಟಿ ಮಾತ್ರವಾಗಬಾರದು ಹೀಗಾದರೆ ಪಶ್ಚಿಮದ ಜ್ಞಾನದ ಆಧಾರದ ಮೇಲೆ ಇತರ ಸಮುದಾಯಗಳನ್ನು ಶೋಷಿಸುತ್ತ ಅವಮಾನಿಸುತ್ತ ಬಂದ ಜಾತಿಗಳು ಇದರಲ್ಲಿ ನಮ್ಮದೇನು ತಪ್ಪಿಲ್ಲ ಇದು ಪಶ್ಚಿಮ ಸೃಷ್ಟಿಸಿದ ಜ್ಞಾನದ ತೊಂದರೆ ಎಂದು ಜಾಣತನ ತೋರಿಸಿ ನಿರಪರಾಧಿ ಸ್ಥಾನಕ್ಕೆ ಸರಿದುಬಿಡುತ್ತವೆ.(ಇ ಪ್ರಕ್ರಿಯೆಯು ಅವರ ರಾಜಕಾರಣದ ಭಾಗವಾಗುವ ಸಾದ್ಯತೆ ಇದೆ ) ಅದರಿಂದ ಪಶ್ಚಿಮದ ನಿರಾಕರಣೆ ಎಂದರೆ ಮೇಲ್ವರ್ಗದವರ ರಾಜಕೀಯದ ನಿರಕರನೆಯು ಆಗಬೇಕು ಎಂಬುದು ನನ್ನ ಉದ್ದೇಶ.Kiran.m Gajanurhttps://www.blogger.com/profile/04813151391809171421noreply@blogger.comtag:blogger.com,1999:blog-3901985173139732142.post-44410402376411354392011-08-06T16:05:34.020+05:302011-08-06T16:05:34.020+05:30ಪಶ್ಚಿಮದ, ಪ್ರಮುಖವಾಗಿ ಯುರೋಪಿನ, ಜನರು ತಮ್ಮ ಸಂಸ್ಕೃತಿಯ ಚ...ಪಶ್ಚಿಮದ, ಪ್ರಮುಖವಾಗಿ ಯುರೋಪಿನ, ಜನರು ತಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಕಂಡುಕೊಂಡಂತಹ ರಾಜಕೀಯ, ಸಾಂಸ್ಕೃತಿಕ ಮೌಲ್ಯಗಳು ಜಗತ್ತಿನಾದ್ಯಂತ ಅನ್ವಯವಾಗುವ ಸಾರ್ವತ್ರಿಕ ಮೌಲ್ಯಗಳಾಗಿ ಹೇಗೆ ಪರಿವರ್ತನೆಗೊಂಡವು ಎನ್ನುವುದರ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆದಿದೆ ಹಾಗು ನಡೆಯುತ್ತಲೂ ಇದೆ ವಸಾಹತು ದೇಶಗಳಲ್ಲಿ ಈ ಪ್ರಭಾವ ಬೇರೆಲ್ಲಿಗಿಂತಲೂ ಹೆಚ್ಚಾಗಿ ಕಂಡುಬರುತ್ತದೆ. ಭಾರತದ ಮೇಲೂ ಈ ಪ್ರಭಾವ ಬಹಳ ದಟ್ಟವಾಗಿದೆ. ಅದ್ದರಿಂದ ಭಾರತದ ಆಚರಣೆಗಳ ಕುರಿತಾದ ನಮ್ಮ ಬಹುಪಾಲು ವಿವರಣೆಗಳು ಪಶ್ಚಿಮದ ಕಣ್ಣಿನಿಂದ ಗ್ರಹಿಸಿ ವಿವರಿಸುತ್ತಿದ್ದೇವೆ ಎಂದು ನಾನು ನನ್ನ ಬರಹದಲ್ಲಿ ವಿವರಿಸಿದ್ದೆ. ಮುಂದುವರಿದು ಅದು ಅಷ್ಟೆಯೇ? ಅ ನಂತರ ಅ ಜ್ಞಾನ ಭಾರತದ ಸಮಾಜದ ಮೇಲೆ ಬಿರಿದ ಪ್ರಭಾವ ಏನು ಎಂದು ಯೋಚಿಸಿದರೆ ಭಾರತದ ಸಮಾಜದ ಕುರಿತು ಪಶ್ಚಿಮ ವಿವರಿಸಿದ ಇ ಜ್ಞಾನವನ್ನೇ ಭಾರತದ ಮೇಲು ಜಾತಿಗಳು ಯಾವುದೇ ಮರು ಪರೀಕ್ಷೆಗೆ ಒಳಪಡಿಸದೆ ತಮ್ಮ ರಾಜಕೀಯದ ಭಾಗವಗಿಸಿಕೊಂಡವು. ಅದಕ್ಕೆ ಉದಾಹರಣೆಯಾಗಿ ಸಮಾಜದ ಬಹುಪಾಲು ಅವಕಾಶಗಳನ್ನು ಗಳಿಸಿರುವ/ಗಳಿಸಿಕೊಳ್ಳುತ್ತಿರುವ ಜಾತಿಗಳನ್ನೂ ಗುರುತಿಸಬಹುದು. ಅದರಿಂದ ನಮ್ಮ ಪ್ರಯತ್ನ ನಮ್ಮ ಸಮಾಜದ ಕುರಿತು ಪಶ್ಚಿಮ ಸೃಷ್ಟಿಸಿದ ಜ್ಞಾನದ ನಿರಾಕರಣೆ ಮಡಿ ನಮ್ಮದೇ ಜ್ಞಾನ ಶಾಕೆಗಳ ಸೃಷ್ಟಿ ಮಾತ್ರವಾಗಬಾರದು ಹೀಗಾದರೆ ಪಶ್ಚಿಮದ ಜ್ಞಾನದ ಆಧಾರದ ಮೇಲೆ ಇತರ ಸಮುದಾಯಗಳನ್ನು ಶೋಷಿಸುತ್ತ ಅವಮಾನಿಸುತ್ತ ಬಂದ ಜಾತಿಗಳು ಇದರಲ್ಲಿ ನಮ್ಮದೇನು ತಪ್ಪಿಲ್ಲ ಇದು ಪಶ್ಚಿಮ ಸೃಷ್ಟಿಸಿದ ಜ್ಞಾನದ ತೊಂದರೆ ಎಂದು ಜಾಣತನ ತೋರಿಸಿ ನಿರಪರಾಧಿ ಸ್ಥಾನಕ್ಕೆ ಸರಿದುಬಿಡುತ್ತವೆ.(ಇ ಪ್ರಕ್ರಿಯೆಯು ಅವರ ರಾಜಕಾರಣದ ಭಾಗವಾಗುವ ಸಾದ್ಯತೆ ಇದೆ ) ಅದರಿಂದ ಪಶ್ಚಿಮದ ನಿರಾಕರಣೆ ಎಂದರೆ ಮೇಲ್ವರ್ಗದವರ ರಾಜಕೀಯದ ನಿರಕರನೆಯು ಆಗಬೇಕು ಎಂಬುದು ನನ್ನ ಉದ್ದೇಶ.Kiran.m Gajanurhttps://www.blogger.com/profile/04813151391809171421noreply@blogger.comtag:blogger.com,1999:blog-3901985173139732142.post-81256754740761056072011-08-06T13:21:11.775+05:302011-08-06T13:21:11.775+05:30ಅರುಣ್ ಜೋಳದಕೂಡ್ಲಿಗಿಯವರೇ
(ನೀವು ಈ ಬರಹದಲ್ಲಿ ಹೇಳಿಕೊಂ...ಅರುಣ್ ಜೋಳದಕೂಡ್ಲಿಗಿಯವರೇ <br /><br />(ನೀವು ಈ ಬರಹದಲ್ಲಿ ಹೇಳಿಕೊಂಡ ಅನುಭವ ನನ್ನದೂ ಕೂಡ. ಕಾರಣ ನಾನು ಕೂಡ ಕೋಳಿ ಕುರಿ ಹರಕೆಕೊಡುವ ಸಹಜ ಸಂಸ್ಕೃತಿಯ ಭಾಗವೆ. ಈ ಆಚರಣೆಯನ್ನು ಹೊರಗಿನಿಂದ ನೋಡುವವರಿಗೆ ಮಾತ್ರ ಬಲಿಯಾಗಿ ಕಾಣುತ್ತದೆ. ಕ್ರೌರ್ಯವಾಗಿ ಕಾಣುತ್ತದೆ.)<br /><br />ಕೋಳಿ ಕುರಿಗಳಿರುವ ಜಾಗದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳಿ ! ... :)<br /><br />ಉಳಿದವರು ಆಗ ಕ್ರೌರ್ಯವಲ್ಲ ಎನ್ನುವುದಾದರೆ ನೀವು ಹೇಳಿರುವ ಮಾತು ಅಕ್ಷರಶ: ಸತ್ಯ ಎಂದು ಒಪ್ಪುತ್ತೇನೆ..Anonymousnoreply@blogger.com