Saturday, March 5, 2011

ಸಂಪಾದಕೀಯ ಕುರಿತು ನಿಲುಮೆಯಲ್ಲಿ ಕಂಡಿದ್ದು....


ಸಂಪಾದಕೀಯ ಕುರಿತು ನಿಲುಮೆ ಬ್ಲಾಗ್‌ನಲ್ಲಿ ಕೃಷ್ಣ ಬಂಗೇರ ಬರೆದಿದ್ದಾರೆ. ಲೇಖನದ ಪೂರ್ಣಪಾಠ ಇಲ್ಲಿದೆ.


ಈ ಸುದ್ದಿ ಸಂಪಾದಕೀಯದ ಕಣ್ತಪ್ಪಿದ್ದು ಹೇಗೆ?

- ಕೃಷ್ಣ ಬಂಗೇರ
ಮೀಡಿಯಾ ಅಂದ್ರೆ ಹಾಗೆ. ಹೊರಗಿನ ಎಲ್ಲರ ವಿಷಯನ ಇವರು ಜಗತ್ತಿಗೆ ಸಾರುತ್ತಿದ್ರೂ ಹೊರಗಿನ ಜನಕ್ಕೆ ಸುದ್ದಿಮನೆಯೊಳಗಿನ ಕಥೆಗಳು ತಿಳಿಯೋದೆ ಇಲ್ಲ. ಅಲ್ಲೂ ಇರುವ ದ್ವೇಷ, ಕುಹಕ, ಸ್ವಜನಪಕ್ಷಪಾತ ಇಂಥ ವಿಷಯಗಳು ಸಾಮಾನ್ಯ ಜನರ ಪಾಲಿಗೆ ರಾಜರಹಸ್ಯಗಳು. ಅಂಥ ಮೀಡಿಯಾ ಎಂಬೋ ಮೀಡಿಯಾದ ನಡುಮನೆಯಿಂದಲೇ ಅಲ್ಲಿನ ಸುದ್ದಿಗಳನ್ನು ಹೊರಜಗತ್ತಿಗೆ ಹರಾಜಗೊಳಿಸಿದ್ದು ಸಂಪಾದಕೀಯ ಎಂಬ ಸುದ್ದಿಮನೆಯ ಒಳಗಿನ ಕಥೆಗಳನ್ನು ಹೇಳುವ ಬ್ಲಾಗು.ಹುಟ್ಟಿ ಅತಿ ಕಡಿಮೆ ಅವಧಿಯಲ್ಲೇ ಮಾಡಿದ ಮೋಡಿ ಕಡಿಮೆಯೇನಿಲ್ಲ. ಹತ್ತಿರಹತ್ತಿರ ಲಕ್ಷ ಹಿಟ್ಸ್ ಗಳ ಸಮೀಪದಲ್ಲಿರುವ ಈ ಬ್ಲಾಗು ಕೆಲವರ ಮುಖದಲ್ಲಿ ಬೆವರು ತರಿಸಿದಂತೂ ಹೌದು.ಈಗ ಸುದ್ದಿಮನೆಯ ಜನ ಪಿಟಿಐ ನ್ಯೂಸ್ ಆದ್ರೂ ಮರೆತರೂ ಆದ್ರೆ ದಿನಕ್ಕೊಮ್ಮೆಯಾದ್ರೂ ಈ ಬ್ಲಾಗ್ ನೊಳಗೆ ಇಣಕೋದು ತಪ್ಪಿಸೋದಿಲ್ಲ. ಇದೇ ಅಲ್ವೇನ್ರೀ ಜನಪ್ರಿಯತೆ ಅಂದ್ರೆ! ಇಂಥ ಎಷ್ಟೋ ಮಾಧ್ಯಮ ವಿಷಯಗಳನ್ನು ಚರ್ಚೆ ಮಾಡೋ ಬ್ಲಾಗುಗಳು ಬಂದು ಹೋಗಿವೆ. ಆದರೆ ಸಾಮಾಜಿಕ ಕಾಳಜಿಯ ಜೊತೆಗೆ ವಿಷಯದ ಆಳ ಅಗಲಗಳನ್ನು ಸಂಪಾದಕೀಯದಷ್ಟು ಚೆಂದದಲ್ಲಿ,ಸೆನ್ಸಿಬಲ್ ಆಗಿ ಹೇಳಿದ ಬ್ಲಾಗು ಮತ್ತೊಂದಿಲ್ಲ.

ವಿಶೇಷ ಅಂದ್ರೆ ಈ ಬ್ಲಾಗು ನಡೆಸೋರು ಯಾರು ಅಂತ ತಿಳಿಯೋಕೆ ಜನ್ರು ಮಾಡಿದ ತಿಣುಕಾಟ, ಹಾಕಿದ ಗೆಸ್ಸು ಕಡಿಮೆಯೇನಲ್ಲ. ಆದರೆ ಸಂಪಾದಕೀಯದ್ದು ಇದಕ್ಕೆಲ್ಲ ದಿವ್ಯಮೌನವೇ ಉತ್ತರ. ಇಂಥ ಮೌನವೇ ಜನರಿಗೆ ಈ ಬ್ಲಾಗಿನ ವಿಷಯಗಳಲ್ಲಿ ಓದುಗರಿಗೆ ಇನ್ನಷ್ಟು ಕುತೂಹಲ ಬೆಳೆಯುವಂತೆ ಮಾಡಿದೆ.ಸಂಪಾದಕೀಯ ಅಷ್ಟೇ ಮಾಡಿ ಸುಮ್ಮನಾಗಿದ್ರೆ ಅದರಲ್ಲಿ ಏನೂ ವಿಶೇಷ ಇರುತ್ತಿರಲ್ಲಿಲ್ಲ.ಟೀವಿ ಪೇಪರ್ ಹೀಗೆ ಎಲ್ಲ ಮಾಧ್ಯಮಗಳ ಆರೋಗ್ಯದ ಬಗ್ಗೆ ಆಗಾಗ ಮಾತಾಡ್ತಾ ಮೀಡಿಯಾಗಳ ಹಿಡನ್ ಅಜೆಂಡಾಗಳನ್ನು, ಹಿತಾಸಕ್ತಿಗಳನ್ನು ಜನರ ಎದುರಿಗೆ ಬೆತ್ತಲೆಗೊಳಿಸಿದ್ದು  ಸುಳ್ಳೇನಲ್ಲ.ಇದೊಂಥರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್ ಅನ್ನಿಸಿದ್ರೆ ವಿಶೇಷವೇನಿಲ್ಲ ಬಿಡಿ.

ಅದೆಲ್ಲ ಇರಲಿ ನಾನು ಹೇಳಹೊರಟ ವಿಷಯ ಮರೆತೆ ಬಿಟ್ಟೆ.ಮೊನ್ನೆಯೇ ಈ ವಿಷಯ ಬರೆಯಬೇಕು ಅಂತಿದ್ದೆ ಆದ್ರೆ ಏನೋನೋ ಕೆಲಸ ತಗುಲಿ ಹಾಕಿಕೊಂಡು ಬಿಡುವಾದದ್ದೇ ಈಗ ನೋಡಿ.ಹೀಗೆ ಸಂಪಾದಕೀಯದ ಹಳೆ ಪೋಸ್ಟ್ ಗಳಲ್ಲಿ ಕಣ್ಣಾಡಿಸುವಾಗ “ಒಂದು ಸುದ್ದಿಯನ್ನು ಬೇರೆಬೇರೆ ಪತ್ರಿಕೆಗಳು ಹೇಗೆ ನೋಡುತ್ತವೆ ಎಂಬುದೇ ಮಾಧ್ಯಮ ವೃತ್ತ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಧ್ಯಯನದ ಸರಕಾಗಬಹುದು.” ಅಂತ ಹೇಳುತ್ತಾ ಸಂಪಾದಕೀಯ ತಂಡ, ‘ಭಯೋತ್ಪಾದನಾ ಕೃತ್ಯ ನಡೆಸಿದ ಮುಸ್ಲಿಮರು ಮಾತ್ರ ಭಯೋತ್ಪಾದಕರು!’ ಅನ್ನೋ ವಿಷಯದ ಕುರಿತ ವಿಶ್ಲೇಷಣೆ ಪ್ರಕಟಿಸಿತ್ತು.ಮಾಲೆಗಾಂವ್ ಸ್ಪೋಟ ಪ್ರಕರಣದ ಆರೋಪಿ ಪ್ರವೀಣ್ ಮುತಾಲಿಕನ ಬಂಧನದ ಸುದ್ದಿಯನ್ನು ಕನ್ನಡ ಪತ್ರಿಕೆಗಳು ಪ್ರಕಟಿಸುವಾಗ ತೋರಿದ ವಿಶೇಷತೆಯನ್ನ ಬಿಮ್ಬಿಸುತಿತ್ತು ಆ ಲೇಖನ.

ವೆಲ್, ಮಾಧ್ಯಮಗಳೆಲ್ಲ ಹೀಗೆ ಒಮ್ಮಗ್ಗುಲಿಗೆ ನಿಂತಾಗ ಬೇರೆಯದ್ದೇ ಆದ ದೃಷ್ಟಿಕೋನದಿಂದ ಮಂಗಳೂರಿನಿಂದ ಪ್ರಕಟವಾಗುವ ವಾರ್ತಾಭಾರತಿ ಪತ್ರಿಕೆಯು ವಿಶೇಷ ಅಸ್ಥೆಯಿಂದ ಬರೆದ ಲೇಖನವನ್ನು ಸಂಪಾದಕೀಯ ಕೋಟ್ ಮಾಡಿ ಬೆಂಬಲಕ್ಕೆ ನಿಂತದ್ದು  ವಾ.ಭಾ  ವಿಶೇಷತೆಗೆ ಬೆಲೆ ತಂದ್ದಿತ್ತು. ಈ ಕುರಿತಾಗಿ ಸಂಪಾದಕೀಯದ ನಿರ್ಭಿಡೆಯ ವಿಶ್ಲೇಷಣೆಯಂತೂ ಅದ್ಭುತವಾಗಿತ್ತು. 
ಅದೇ ತರಹ ಸನ್ನಿವೇಶ ಮತ್ತೊಮ್ಮೆ ಕ್ರಿಯೇಟ್ ಆದದ್ದೂ ಗೋಧ್ರಾ ಹತ್ಯಾಕಾಂಡದ ತೀರ್ಪು ಬಂದಾಗ. ಇಲ್ಲೂ ವಾರ್ತಾಭಾರತಿ ತನ್ನ ವಿಶೇಷ ದೃಷ್ಟಿಕೋನದಿಂದ ಈ ಸುದ್ದಿಯನ್ನು ಬರೆಯಿತು.ಸಂಪಾದಕೀಯ ಈ ವಿಷಯವನ್ನು ತನ್ನ ಚರ್ಚೆಗೆ ಎತ್ತಿಕೊಳ್ಳಬಹುದೆಂದು ನಾನು ಕಾಯುತ್ತಿದ್ದೆ.ಆದರೆ ಸಂಪಾದಕೀಯದಿಂದ ಈ ಮುಖ್ಯ ಸಂಗತಿ ಕಣ್ತಪ್ಪಿದ್ದು ವಿಶೇಷ. ಇದರಿಂದ ನಷ್ಟವಾದದ್ದು ಸಂಪಾದಕೀಯದ ವಿಶ್ಲೇಷಣೆಗಾಗಿ ಕಾದುಕೂತ ನಮ್ಮಂಥ ಸಾಮಾನ್ಯ ಜನರಿಗೆ.
ಸಂಪಾದಕೀಯದ ಕಣ್ತಪ್ಪಿದ ವಿಶೇಷತೆ ಜನರ ಕಣ್ತಪ್ಪದಿರಲಿ ಅನ್ನುವ ಉದ್ದೇಶದಿಂದ ಇದನ್ನ ನಾನು ಬರೆಯುತಿದ್ದೇನೆ. ರೈಲಿಗೆ ಬೆಂಕಿ ಹಚ್ಚಿದ್ದು ಆಕಸ್ಮಿಕವಲ್ಲ,ಅದು ಪೂರ್ವಯೋಜಿತ.ಈ ಕೃತ್ಯದಲ್ಲಿ ಭಾಗಿಯಾದ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಮುಂದೆ ನಿರ್ಧರಿಸಲಾಗುವುದು ಎಂದು ಕೋರ್ಟ್ ತೀಪಿತ್ತಿದೆ ಎಂದು ವಿಜಯಕರ್ನಾಟಕ,ಪ್ರಜಾವಾಣಿ ಸೇರಿದಂತೆ ಕನ್ನಡದ ಬಹುತೇಕ ಎಲ್ಲ ಪತ್ರಿಕೆಗಳು ಮುಖಪುಟದಲ್ಲಿಯೇ ಬ್ಯಾನರ್ ಹೆಡ್ ಲೈನ್ ಜೊತೆಗೆ ಸುದ್ದಿ ಮಾಡಿದ್ದವು. ಆದರೆ ವಾರ್ತಾ ಭಾರತೀಯ ‘ಸಂಪಾದಕೀಯ’ ಪುಟದಲ್ಲಿ ‘ಗೋದ್ರಾ ರೈಲಿಗೆ ಬೆಂಕಿ ಬಿದ್ದಿದ್ದು ಆಕಸ್ಮಿಕವೋ,ಪೂರ್ವ ಯೋಜಿತವೋ ಇನ್ನೂ ಇತ್ಯರ್ಥವಾಗಿಲ್ಲ’ ಅಂತ ಬರೆದಿದ್ದಾರೆ!
ಉಳಿದೆಲ್ಲ ಪತ್ರಿಕೆಗಳು ಗೋದ್ರಾ ರೈಲಿಗೆ ಬೆoಕಿ ಹಚ್ಚಿದ್ದು ಪಿತೂರಿ ಅಂತ ಕೋರ್ಟ್ ತೀರ್ಪಿನಲ್ಲಿ ಹೇಳಿದೆ, ೩೧ ಜನರ ದೋಷಿಗಳೆಂದು ಪರಿಗಣಿಸಿ, ೬೩ ಜನರನ್ನ ಖುಲಾಸೆಗೊಳಿಸಿದೆ ಅಂತಲೇ ಬರೆದಿವೆ.ಈ ಸುದ್ದಿಗಳಲ್ಲಿ ಯಾವ ಸುದ್ದಿ ಸರಿ? ಉಳಿದ ಪತ್ರಿಕೆಗಳದ್ದೋ ಅಥವಾ ವಾರ್ತಾ ಭಾರತಿಯವರದ್ದೋ?

2 comments:

  1. ಸಂಪಾದಕೀಯದವರು ನಿಜವಾದ ಹಿಂದುಗಳು

    ReplyDelete
  2. It is clear that vartha bharathi agrees thing which is in it's favour only and points that are against it's policy it publish with doubt !!! this is the stand by Puttige sahebru !!!!
    vartha bharathi wastes it's many pages condemning BJP purpose fully...

    VITHALRAO KULKARNI

    ReplyDelete