Thursday, July 28, 2011

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು?




31 comments:

  1. 1. ಗೃಹಮಂಡಳಿ ಹಗರಣ ಮತ್ತು ನೀರಾರಾಡಿಯಾ ಹಗರಣದಲ್ಲಿ ಸಿಕ್ಕಿಬಿದ್ದವ
    2. ಹಿಂದೆ ಬಂದ್ರೆ ಹಾಯಲ್ಲ ಮುಂದೆ ಬಂದ್ರೆ ಒದೆಯಲ್ಲ ಅನ್ನೋ ಕ್ಯಾಂಡಿಡೇಟು
    3. ಕೆಲಸಕ್ಕೆ ಬಾರದ ಒಳ್ಳೆಯತನ, ನಗರಾಭಿವೃದ್ಧಿ ಇಲಾಖೆಯ ಚಪ್ರಾಸಿಯೂ ಇವರಿಗೆ ಬೆಲೆ ಕೊಡ್ತಾ ಇಲ್ಲ
    4. ಎಂಥಾ ಬ್ರಹ್ಮಾಂಡ ಭ್ರಷ್ಟಾಚಾರವಾದರೂ ಸಮರ್ಥಿಸುತ್ತ ಹಲ್ಲು ಗಿಂಜೋ ವೀರುಡು
    5. ಅಲ್ಪಸಂಖ್ಯಾತರ ಮೇಲೆ ಕನಸಲ್ಲೂ ಕೆಂಡ ಕಾರೋ ಎಳಸು ಮನಸ್ಥಿತಿಯವರು
    6. ಬಸ್ಸು ರೇಟು ಆಕಾಶಕ್ಕೇರಿಸಿ ಸರ್ಕಾರಿ ಖರ್ಚಲ್ಲಿ ಹುಟ್ಟಿದ ಹಬ್ಬ ಆಚರಿಸಿಕೊಂಡವ
    7. ಈಯಮ್ಮನ ಬಗ್ಗೆ ಸುದ್ದೀಗಿಂತ ರೂಮರ್ರೇ ಹೆಚ್ಚು. ಕೆಲಸ ನಾಸ್ತಿ ಮಿಕ್ಕಿದ್ದು ಜಾಸ್ತಿ.
    8. ನಾಲಿಗೆ ಕತ್ತರಿಸೋ ವಿದ್ಯೆಯಲ್ಲಿ ಪಳಗಿದವ, ಗ್ರಾಮಪಂಚಾಯತಿ ಸದಸ್ಯನಾಗಲೂ ನಾಲಾಯಕ್ಕು.

    ಇಂಥಾ ಘನಂದಾರಿ ಮುಸುಡಿಗಳನ್ನು ಬಿಟ್ಟು ನಮಗೆ ಬೇರೆ ಯಾವ ಆಯ್ಕೆಯೂ ಇಲ್ಲವೇ?

    ReplyDelete
  2. nanna hesaru melin list nalilla. . .yake1,?nanna hesaru melin list nalilla. . .yake1,?

    ReplyDelete
  3. its better to go for bi election this time kannagadigas will not make the mistake
    -Mohan Yadravi

    ReplyDelete
  4. All BJP members are corrupt.. There are no such right people left in this party who can take state in right direction.. As said by above friend let us go for bi-election... We need to really spred and search for right candidate..
    -Suprith Kodagi

    ReplyDelete
  5. Suresh Kumar.. he is the best person.. but hope he wnt get CM seat..
    -Hmp Kumar

    ReplyDelete
  6. santhosh hegde ????
    -Soumya Murthy

    ReplyDelete
  7. ರೀ ಸಂಪಾದಕರೆ ಹೊಟ್ಟೆ ಕಿಚ್ಚು ಇರ್ಬೇಕು ಆದ್ರೆ ಇಷ್ಟೊಂದ್ ಇರಬಾರದು...ನಮ್ ರೇಣುಕಾಚಾರ್ಯ, ಹರತಾಳು ಹಾಲಪ್ಪನವರ ಹೆಸರು ಜೊತೆಗೆ ಸೇರಿಸಿದ್ರೆ ನಿಮ್ ಗಂಟೆನ್ ಹೋಗ್ತಿತ್ತೋ

    ReplyDelete
  8. ಎಲ್ಲರೂ ಯಡ್ಡಿಯ ಪರಾವತರಗಳೇ ಅನಂತ್ ಆದರೆ ಸ್ಥಾನದ ಗೌರವವಾದರೂ ಊಲಿಯಬಹುದೇನೋ.....?

    ReplyDelete
  9. ಮೊದಲನೇ ಕಾಮೆಂಟ್ಗೆ ಸಂಪಾದಕೀಯದ ಉತ್ತರ ಬರಲಿಲ್ಲ.

    ReplyDelete
  10. ಅಂದರೆ, ಯಡ್ಡಿ ನೆ ವಾಸಿ ಅಂತಿದೀರಾ ಸಂಪಾದಕೀಯ ದವರೆ?!

    ReplyDelete
  11. ನೀವ್ ಮೊದಮೊದಲೇ ಎಲ್ಲರ ಜಾತಕನಾ ಈ ರೀತಿ ಒದರಿಬಿಟ್ರೆ ವೋಟ್ ಮಾಡೋದ್ ಯಾರ್ರಿ ಸರ

    ReplyDelete
  12. ಕೋಲೇ ಬಸವರೇ.."ಚುಂಬನ ರಾಜ್ಯ" ಅಂತ ಇದಿದ್ದರೆ ಅದಕ್ಕೆ ರೇಣುಕನನ್ನೂ "ಅತ್ಯಾಚಾರ ರಾಜ್ಯ" ಅಂತ ಒಂದಿದ್ದರೆ ಹಾಲಪ್ಪನನ್ನೂ ಮುಖ್ಯಮಂತ್ರಿ ಮಾಡಬಹುದಿತ್ತು.

    ReplyDelete
  13. @ಕೋಲೆಬಸವ
    ಏನ್ ಸರ್ ರಸಿಕರ ಮೇಲೆ ಮಮತೆ

    ReplyDelete
  14. ರೆಡ್ಡಿಗಳಂಗೆ ಮಣ್ ತಿನ್ಲಿಲ್ಲ ನೋಡಿ, ಬರೀ ಕಚ್ಹೆಯಷ್ಟೇ ಅಂತೆ ಗಲೀಜು ಮಾಡಿಕೊಂಡಿದ್ದು ಅದು ಕೂಡಾ ಕೋರ್ಟಲ್ಲಿ ಬಿದ್ದೊಯ್ತಂತೆ?

    ReplyDelete
  15. yaaree aadroove adu yadiyoorappa, renukaacharya, santatiya munduvarike annuvadarlli yaavude anumaanavilla... better to rethink of present system

    ReplyDelete
  16. @ladia
    ಚನ್ನಾಗೇಳಿದ್ರಿ....

    ReplyDelete
  17. ಹೌದು ಬಸೂ ಸಾರ್......ಯಾರೇ ಬರಲಿ ಅಳಿದುಳಿದ ಸಂಪತನ್ನ ದೋಚಿ ಬೆತ್ತಲು ಮಾಡಿ ನಿಲ್ಲಿಸದಿದ್ರೆ ಸಾಕು?

    ReplyDelete
  18. ಇವ್ರು ರಾಡಿಯ ಸಂಬಂಧಿ ಲಾಡಿಯ ಅಲ್ರಿ....ಇವ್ರೇ ಬೇರೆ

    ReplyDelete
  19. ಇಷ್ಟೆಲ್ಲ ವಿವರ ಕೊಟ್ಮೇಲೆ ಆಯ್ಕೆಯಂತೂ ಮಾಡ್ಲೇಬೇಕಲ್ವಾ.. ಯಾಕೆಂದರೆ ನಮ್ಮ ದರಿದ್ರ ವ್ಯವಸ್ಥೆನಲ್ಲಿ ಪರ್ಯಾಯ ಅಂತಂದ್ರೆ "ಕುರುಡು ಕಣ್ಣಿಗಿಂತ ಮೆಳ್ಳೆ ಕಣ್ಣು ಲೇಸು" ಅನ್ನೋ ಹಾಗೆ ಇವಿಷ್ಟು ಜನರಲ್ಲಿ ಕನಿಷ್ಟ ಉತ್ತಮರನ್ನು ಆಯ್ಕೆ ಮಾಡಬೇಕಿದೆ. ಪ್ರಮೀಳಾ ರಾಷ್ಟ್ರವಾಗಿರೋ ನಮ್ ದೇಶದಲ್ಲಿ ಪ್ರತಿಭಾ ಪಾಟೀಲ್,ಸೋನಿಯಾ, ಸುಷ್ಮಾ, ಮೀರಾಕುಮಾರ, ಶೀಲಾದೀಕ್ಷಿತ್, ಜಯಲಲಿತಾ, ಮಾಯಾ, ಮಮತಾರನ್ನು ನೋಡಿದ್ರೆ ಈ ಹೆಣ್ಮಕ್ಳು ಎಷ್ಟೋ ವಾಸಿ ಅನ್ಸುತ್ತೆ ಹೀಗಾಗಿ ಗ್ರಾಮೀಣಾಭಿವೃದ್ಧಿ ಖಾತೆಗೆ ರಾಷ್ಟ್ರೀಯ ಪ್ರಶಸ್ತಿ ಕೊಡಿಸಿದ, (ಈ ಖಾತೆ ಬಿಟ್ಟನಂತರ ಅದು ಈ ವರ್ಷ 2ನೇ ರಾಜ್ಯದ ಸ್ಥಾನಕ್ಕಿಳಿದಿದೆ) ಈದೀಗ ವಿದ್ಯುತ್ ಖಾತೆಗೆ ಇಂಧನ ತುಂಬುವಲ್ಲಿ ಯಶಸ್ವಿಯಾಗಿ ಇದೇ ಮೊದಲ ಬಾರಿಗೆ ಲೋಡ್ ಶೆಡ್ಡಿಂಗ್ ಇಲ್ಲದೇ ಬೇಸಿಗೆ ದಾಟಿಸಿದ ಪ್ರಭಲ ಇಚ್ಛಾಶಕ್ತಿ ಇರುವ ಮಹಿಳೆ ಅಧಿಕಾರ ಹಿಡಿಯುವುದು ಸೂಕ್ತ.ಕರ್ನಾಟಕಕ್ಕೆ ಮೊದಲ ಮಹಿಳಾ ಸಿಎಂ.ಆಗಬಹುದಾ (ವ್ಯಕ್ತಿಗತ ಟೀಕೆ ಕೈಬಿಟ್ಟು ಸಾಧನೆಗಳು ಮಾತ್ರ ನೋಡುವುದಾದರೆ? ರಾಜ್ಯ 'ಶೋಭಾ'ಯಮಾನವಾಗಬಹುದು...

    ReplyDelete
  20. ಕತ್ತಲಿನಿಂದ ಬೆಳಕಿನೆಡೆಗೆ ದಾರಿ ತೋರಿದ ಅಕ್ಕನ ಮೇಲೆ ನಿಮ್ಮ ಕನಿಕರ ಜಯವಾಗಲಿ....ಜೈ ಹೋ

    ReplyDelete
  21. ಸಂಪಾದಕರೆ, ನೀವು ವಿಧಾನಸಭೆಯ ಅಂಗಳದಲ್ಲಿರುವ ವ್ಯಕ್ತಿಗಳನ್ನು ಮಾತ್ರ ಆಯ್ಕೆ ಮಾಡಬೇಕಿತ್ತು ಯಾಕೆಂದರೆ ಅನಗತ್ಯ ಸಂಸತ್ ಸದಸ್ಯರು ಅನ್ಯರನ್ನು ಕ್ರೀಡಾಂಗಣಕ್ಕ ಎಳೆದು ತರುವುದು ತರವಲ್ಲ. ಹೀಗಾದರೆ 224ರಲ್ಲಿ ಆಡಳಿತ ಪಕ್ಷದ 120ರಷ್ಟು ಶಾಸಕರು ನಾಲಾಯಕ್ ಗಳೇ ಹೇಗೆ? ಮೀಡಿಯಾದವರು/ಮಾಧ್ಯಮದವರು ಸೃಷ್ಟಿಸುವ ಈ ವಿಚಿತ್ರ ಸನ್ನಿವೇಶ ನಿರ್ಮಾಣ ನಿಲ್ಲದಿದ್ದಲ್ಲಿ ಕೆಟ್ಟ ಸಂಪ್ರದಾಯ ಮುಂದುವರೆಯಲು ಮಾಧ್ಯಮಗ ಳ ಅಡ್ಡದಾರಿಯೂ ಕಾರಣವಾಗುತ್ತದೆ ಎನ್ನುವ ಪರಿಜ್ಞಾನ ರಾಜಕೀಯ ಮಾಡುವುವರಿಗೂ ಇರಬೇಕು..." ವಿಧಾನಸಭೆಗೆ ಆಯ್ಕೆಯಾದವರು ಶಾಸಕಾಂಗ ಪಕ್ಷ ದನಾಯಕರಾಗಬೇಕೇ ಹೊರತು ಅನ್ಯರಿಗೆ ಅವಕಾಶ ಕೊಡಬಾರದು. ಈ ಕುರಿತು ವ್ಯಾಪಕ ಚರ್ಚೆ ನಡೆಯಬೇಕಾದ ಅನಿವಾರ್ಯ ಇಂದು ನಿರ್ಮಾಣವಾಗಿದೆ. ಚುನಾವಣೆ ಗೆದ್ದು ಬಂದವರಿಗೆ ಆದ್ಯತೆ ಇರಬೇಕು ಅದನ್ನು ಬಿಟ್ಟು ಅಲ್ಲಿರುವವರು ರಾಜೀನಾನೆ ಕೊಟ್ಟು ಇಲ್ಲಿರುವವರು ತೆರವು ಮಾಡಿ... ಇದೇನಿದು ಸರ್ಕಾರದ ಜನಸಾಮಾನ್ಯರ ದುಡ್ಡು ಯಲ್ಲಮ್ಮನ ಜಾತ್ರೆ ಮಾಡೋದು ಸಲ್ಲದು..

    ReplyDelete
  22. EDEE SAMAAJAAVE KETTU KILUBEDDU HOGIDE YELLU YAAVA KATTUPAADU ILLA YAAVUDAKKU ILLA MAANA MARYAADE ANJIKE ANNODU ILLA YAARIGOO ILLA ANDMELE YAARAADRENU? YAAAR BANDROOO ISTENE YAAKENDRE YELLAAROOO ISTENE SUMNE OLLE JANARU BARTAARENTA KANASU KAANBEDI SUMNE TIME WAST ASTE

    ReplyDelete
  23. ಕೋಲೆ ಬಸವನಿಗೂ ಜೈ ಹೋ...?!;-)

    ReplyDelete
  24. you are selective and clever. you want what you prempt. why my comments were not posted? what was wrong in it was it not true also. I thought you are impartial but proved other wise-pradyumna

    ReplyDelete
  25. A Fox goes to GUINNESS book office to check,
    If He's Still amost cunning animal on the EARTH or not.???
    He came out angrily shouting----
    "Who is YEDIYURAPPA...!!!!!

    ReplyDelete
  26. ಶೋಭಾ ಸಾಕಿಕೊಂಡಿರುವ ಪತ್ರಕರ್ತರ ದೊಡ್ಡ ಗುಂಪೇ ಇದೆ. ಶೋಭಾರವರ ಕೊಡಗು ಎಸ್ಟೇಟ್ ಹಗರಣವನ್ನೇ ತೆಗೆದುಕೊಳ್ಳಿ. ಕೇವಲ ಲಕ್ಷಗಟ್ಟಳೆ ಆದಾಯ ಇರುವ ಶೋಭಾ ಕೋಟ್ಯಾಂತರ ರೂಪಾಯಿಯ ಜಮೀನನ್ನು ಖರೀದಿ ಮಾಡಿದ್ದು ಈ ಮಾಧ್ಯಮಗಳಿಗೆ ಕೇವಲ ಒಂದು ದಿನದ ಸುದ್ದಿ!

    ಶೋಭಾ ಕಚೇರಿಯಲ್ಲಿ ತುಂಬಿಕೊಂಡಿರುವುದು ಎಂದಿನ ಹೆಗ್ಗಣಗಳೇ. ಸಾಲದಕ್ಕೆ ಈಗ ಗ್ಯಾಸ್ ಗೋಜಲು! ಯಾವ ಮಾನದಂಡದಲ್ಲೂ ನೋಡಿದರೂ ಶೋಭಾಗೆ administrative experience ಏನೂ ಇಲ್ಲವೆಂದು ಸಾಬೀತಾಗುತ್ತದೆ. ಕೇವಲ smile ಕೊಟ್ಟರೆ, ಪತ್ರಕರ್ತರಿಗೆ ತಿಂಗಳ ಸಂದಾಯ ಮಾಡಿದಕ್ಕೆ ಶೋಭಾಯಮಾನ ಎಂದೆಲ್ಲಾ ಬರಿಯುವ ಪತ್ರಕರ್ತರಿಗೆ ಧಿಕ್ಕಾರವಿರಲಿ.

    ReplyDelete
  27. ಅಲ್ಲ ಸಂಪಾದಕೀಯ ದವರೆ,
    ನಮ್ಮ ಯೆಡ್ಡಿ ರಾಜಿನಾಮೆ ಕೊಡ್ತಾನ? ಇದೆ ಇನ್ನೂ ಗ್ಯಾರಂಟೀ ಆಗಿಲ್ಲ. ಇನ್ನು ಬೇರೆಯವರ ಆಯ್ಕೆ ದೂರದ ಮಾತು.
    ಆದರು ನೀವು ಕೆಲವು ಉನ್ನತ ವ್ಯಕ್ತಿಗಳ ಹೆಸರು ಬಿಟ್ಟು ಬಿಟ್ಟಿದ್ದಿರ. ನಮ್ಮ ಹರತಾಳು ಹಾಲಪ್ಪ ಮತ್ತೆ ಕಿಸ್ಸಿಂಗ್ ಕಿಂಗ್ ರೇಣುಕಾಚಾರ್ಯ ಯಾರಿಗೇನು ಕಡಿಮೆ ಇದ್ದಾರೆ?

    ReplyDelete
  28. dear sampadakeeya,
    y yeddi is reluctant to leave his seat? he may be a leader for BJP and he worked to unite the party in Karnataka... but he did it for his party. When it comes to Karnataka he has done nothing than looting the state. He must leave his seat. His contributions are for BJP not for us. Tell something that we can do as a common people to give respect for Lokayuktha and his report. How we can we being a citizen of Karnataka actively participate ? naithika hone hottu rajeename kodlebeku haage naavu madbeku enu madbahudu heli. we have to do something

    ReplyDelete
  29. ಯಾರು ಮುಂದಿನ ಸಿಎಂ ಅಂತಾ ಕೇಳಿರೋದೇನೋ ಸರಿ ಆದರೆ ಸಂಸದರನ್ನೂ ಸೇರಿಸಿರೊ ನಿಮ್ಮ ವರಾತವೇ ಆರ್ಥ ಆಗ್ತಿಲ್ಲ? ರಾಜಕಾರಣಿಗಳು ಅದರಲ್ಲೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈಥರದ ಗಿಮಿಕ್ ಮಾಡೋದು ಸಹಜ. ಅಲ್ಲಿ ಯಾರು ಸ್ಟ್ರಾಂಗ್ ಲಾಬಿ ಮಾಡ್ತಾರೋ ಅವರಿಗೆ ಸಿಎಂ ಪದವಿ ಕೊಡ್ತಾರೆ ಆದರೆ ಇಲ್ಲಿ ಆ ಥರ ಇಲ್ವಲ್ಲಾ ಹೀಗಾಗಿ ಎಂಎಲ್ಎಗಳಲ್ಲೇ ಕೆಲವರ ಹೆಸರು ಕೊಡಬೇಕು ಅಂತಾ ಅನ್ನಿಸೊಲ್ವೇ ಬಿಜೆಪಿನಲ್ಲೂ ಹೈಕಮಾಂಡ್ ಹೊರಿಸಿದ ವ್ಯಕ್ತಿಗಳೇ ಆಗಬೇಕೆ ಈ ಪಾರ್ಟಿ ಎಂಎಲ್ ಎಗಳಿಗೆ/ರಾಜ್ಯದ ಜನತೆಗೆ ಆಯ್ಕೆ ಮಾಡೋ ಯೋಗ್ಯತೆ ಇಲ್ಲವಾ ಹೇಗೆ..?

    ReplyDelete
  30. I think Suresh Kumar is the right person for next c.m post.

    ReplyDelete
  31. ಅಯ್ಯಯ್ಯೋ ಬಾಲೂ ಜೀ, ನಮ್ಮ ಹರತಾಳು ಹಾಲಪ್ನೋರು ಸೀಯೆಮ್ಮು ಆಗ್ಬಿಟ್ರೆ, ಗ್ರಾಮ ವಾಸ್ತವ್ಯಕ್ಕೆ ಯಾವೂರಿಗೆ ಕಳಿಸ್ಲಪ್ಪಾ??? ಶಿವನೇ..!! ನಮ್ಮೂರ ಅಡ್ರೆಸ್ಸು ಹೇಳ್ಬಿಡ್ಬೇಡ್ರಪ್ಪೋ.........!!!!

    ReplyDelete